ಕ್ರೈಂ

ಕಗ್ಗೋಡ್ಲುವಿನಲ್ಲಿ ಗೋವನ್ನು ಗುಂಡಿಕ್ಕಿ ಕೊಂದ ಕಟುಕರು | ಕೊಡಗಿನಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ ಗೋಮಾಂಸ ದಂದೆ

ಮಡಿಕೇರಿ: ತಾಲೂಕಿನ ಕಗ್ಗೋಡ್ಲುವಿನಲ್ಲಿ ಹಸುವೊಂದನ್ನು ಕಟುಕರು ಗುಂಡಿಕ್ಕಿ ಕೊಂದು ಮಾಂಸ ಮಾಡಿದ ಘಟನೆ ನಡೆದಿದೆ. ನಿನ್ನೆ ಸಂಜೆ 7 ಗಂಟೆ ಸುಮಾರಿಗೆ ಘಟನೆ ನಡೆದಿದ್ದು ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಗುಂಡಿಕ್ಕಿ ಗೋಹತ್ಯೆ ಮಾಡಿದ ವಿಷಯ ತಿಳಿಯುತ್ತಿದ್ದಂತೆ ಹಿಂದೂ ಸಂಘಟನೆಯ ಕಾರ್ಯಕರ್ತರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಈ ಸಂದರ್ಭ ದುಷ್ಕರ್ಮಿಯೊಬ್ಬ ಹಿಂದು ಸಂಘಟನೆ ಕಾರ್ಯಕರ್ತನೊಬ್ಬನಿಗೆ ಕೋವಿ ತೋರಿಸಿ ಬೆದರಿಸಿದ್ದಾನೆ. ನಂತರ ಹೆಚ್ಚಿನ ಸಂಖ್ಯೆಯ ಕಾರ್ಯಕರ್ತರು ಜಮಾಯಿಸುವುದನ್ನು ಕಂಡು ಎಲ್ಲರೂ ಕಾಡಿನೊಳಗೆ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು […]

ಕಗ್ಗೋಡ್ಲುವಿನಲ್ಲಿ ಗೋವನ್ನು ಗುಂಡಿಕ್ಕಿ ಕೊಂದ ಕಟುಕರು | ಕೊಡಗಿನಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ ಗೋಮಾಂಸ ದಂದೆ Read More »

ಕೊಲೆಯಾದನೇ ಮೈಮೇಲೆ ಕೆಜಿ ಗಟ್ಟಲೆ ಚಿನ್ನ ಧರಿಸಿಕೊಂಡಿದ್ದ ‘ಕೆಜಿ ಪಟೇಲ’….?

ಅಹಮದಬಾದ್: ಮೈಮೇಲೆ ಕೆಜಿಗಟ್ಟಲೆ ಬಂಗಾರ ಸುರಿದುಕೊಂಡು ಚಿನ್ನದ ಮನುಷ್ಯ ಎಂದೇ ಖ್ಯಾತಿ ಪಡೆದಿದ್ದ ಗುಜರಾತ್ನ ಕುಂಜಲ್ ಪಟೇಲ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಕುಟುಂಬಸ್ಥರ ಹೇಳಿಕೆ ಪ್ರಕಾರ ಆತ ಮನೆಯವರೊಂದಿಗೆ ಜಗಳವಾಡಿ ಕತ್ತು ಹಿಸುಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಕುಂಜಾಲ್ ಪಟೇಲ್ ಅಲಿಯಾಸ್ ಕೆ.ಜಿ. ಪಟೇಲ್ ಹಿಂದಿನ ಚುನಾವಣೆ ವೇಳೆ ಗುಜರಾತ್ ನ ದರಿಯಾಪುರ್ ಕ್ಷೇತ್ರದಿಂದ ಸ್ಪರ್ಧಿಸಿದ್ದ. ಆ ವೇಳೆ ಮೈಮೇಲೆ ಕೆಜಿ ಗಟ್ಟಲೆ ಚಿನ್ನ ಹಾಕಿಕೊಂಡು ದೇಶವ್ಯಾಪಿ ಪ್ರಚಾರ ಗಿಟ್ಟಿಸಿಕೊಂಡಿದ್ದ. ಈದೀಗ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ಕೊಲೆಯಾದನೇ ಮೈಮೇಲೆ ಕೆಜಿ ಗಟ್ಟಲೆ ಚಿನ್ನ ಧರಿಸಿಕೊಂಡಿದ್ದ ‘ಕೆಜಿ ಪಟೇಲ’….? Read More »

ಮಂಗಳೂರು: ಮಗನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ತಂದೆ

ಮಂಗಳೂರು: ಹಸು ಕಟ್ಟುವ ವಿಚಾರದಲ್ಲಿ ತಂದೆ ಮಗನ ನಡುವೆ ಜಗಳ ನಡೆದು ತಂದೆಯೇ ಮಗನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ನಗರದ ಜಪ್ಪಿನಮೊಗರು ಎಂಬಲ್ಲಿ ನಡೆದಿದೆ. ಬೆಂಕಿ ಹಚ್ಚಿದ ಆರೋಪಿಯನ್ನು ಜಪ್ಪಿನಮೊಗರು ಗ್ರಾಮದ ಕೊಪ್ಪರಿಗೆ ಗುತ್ತು ವಿಶ್ವನಾಥ ಶೆಟ್ಟಿ ಎಂದು ಗುರುತಿಸಲಾಗಿದೆ.ಹಸು ಕಟ್ಟುವ ವಿಚಾರದಲ್ಲಿ ತಂದೆ ಹಾಗು ಮಗ ಸ್ವಾಮೀತ್ ಶೆಟ್ಟಿ (೨೫) ನಡುವೆ ಜಗಳ ನಡೆದಿದೆ. ಬಳಿಕ ಅವಾಚ್ಯ ಶಬ್ದಗಳಿಂದ ಬೈದಿರುವ ವಿಶ್ವನಾಥ ಶೆಟ್ಟಿ ಮಗನನ್ನು ಮನೆಯ ಒಳಗೆ ಹಾಕಿ ಪೆಟೋಲ್ ಸುರಿದು

ಮಂಗಳೂರು: ಮಗನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ತಂದೆ Read More »

ಮಗುವಿಗೆ ಜ್ಚರವೆಂದು ಆಸ್ಪತ್ರೆ ಹೋಗುವ ಬದಲು ಸ್ವಾಮಿಜೀ ಬೇಟಿಯಾದ ತಾಯಿ | ಮುಂದೆ ನಡೆಯಿತು ಭಯಾನಕ ಘಟನೆ

ಚೆನ್ನೈ: ಮಗುವಿಗೆ ದೆವ್ವ ಹಿಡಿದಿರುವುದಾಗಿ ಸ್ವಾಮೀಜಿಯೊಬ್ಬ ಹೇಳಿದ ಕಾರಣಕ್ಕೆ ಜ್ವರದಿಂದ ಬಳಲುತ್ತಿರುವ ಏಳು ವರ್ಷದ ಮಗುವನ್ನು ತಾಯಿಯೇ ಹಿಗ್ಗಾಮುಗ್ಗ ಥಳಿಸಿ, ಅದಲ್ಲದೆ ಆತನಿಗೆ ನೀರು ಆಹಾರ ನೀಟದೆ ಕೊಲೆ ಮಾಡಿರುವ ಭಯಾನಕ ಘಟನೆ ತಮಿಳುನಾಡಿನ ತಿರುವಣ್ಣಾಮಲೈ ಜಿಲ್ಲೆಯ ಅರಾನಿಯಲ್ಲಿ ನಡೆದಿದೆ. ಬಾಲಕನಿಗೆ ಕೆಲವು ದಿನಗಳಿಂದ ಆರೋಗ್ಯ ಕೆಟ್ಟಿತ್ತು. ಮಾನಸಿಕವಾಗಿಯೂ ಆತನಿಗೆ ಏನೋ ಸಮಸ್ಯೆಯಾಗಿತ್ತು. ಆಸ್ಪತ್ರೆಗೆ ಹೋಗುವ ಬದಲು ಈ ತಾಯಿ ಸ್ವಾಮೀಜಿಯನ್ನು ಭೇಟಿಯಾಗಿದ್ದಾಳೆ. ಆತನಿಗೆ ದೆವ್ವ ಹಿಡಿದಿದೆ ಎಂದು ಆತ ಹೇಳಿದ್ದಾನೆ. ಮನೆಗೆ ಬಂದವಳೇ ಮಗನನ್ನು ಹಿಗ್ಗಾಮುಗ್ಗ

ಮಗುವಿಗೆ ಜ್ಚರವೆಂದು ಆಸ್ಪತ್ರೆ ಹೋಗುವ ಬದಲು ಸ್ವಾಮಿಜೀ ಬೇಟಿಯಾದ ತಾಯಿ | ಮುಂದೆ ನಡೆಯಿತು ಭಯಾನಕ ಘಟನೆ Read More »

ಗೋ ಸಾಗಾಟದ ಟೆಂಪೋ ಹರಿಸಿ ಗೋ ರಕ್ಷಕನ ಹತ್ಯೆ

ಗುಜರಾತ್: ಗೋ ರಕ್ಷಕನ ಮೇಲೆ ಗೋಸಾಗಾಟದ ಟೆಂಪೋ ಹರಿಸಿ ಹತ್ಯೆ ಮಾಡಿದ ಘಟನೆ ರಾಜ್ಯದ ಅಹಮದಬಾದ್ ನಲ್ಲಿ ನಡೆದಿದೆ. ಮೃತಪಟ್ಟವರನ್ನು ಹಾರ್ದಿಕ್ ಕನ್ಸರ್ (29) ಎಂದು ಗುರುತಿಸಲಾಗಿದೆ. ಕಳೆದ ಶುಕ್ರವಾರ ಧರಾಂಪುರ- ವಲ್ಸಾದ್ ಹೆದ್ದಾರಿಯಲ್ಲಿ ಟೆಂಪೋ ಒಂದರಲ್ಲಿ ಅಕ್ರಮವಾಗಿ ಗೋ ಸಾಗಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಹಾರ್ದಿಕ್ ಗೆ ಸಿಕ್ಕಿದೆ. ತಕ್ಷಣ ಕಾರ್ಯಪ್ರವ್ರತರದ ಹಾರ್ದಿಕ್ ಮತ್ತು ಆತನ ಇಬ್ಬರು ಸ್ನೇಹಿತರು ಬಾಮ್’ಕ್ರೀಕ್ ಸೇತುವೆವ ಮೇಲೆ ತಮ್ಮ ಲಾರಿಯೊಂದನ್ನು ಅಡ್ಡ ನಿಲ್ಲಿಸಿದ್ದರು. ಗೋಸಾಗಾಟದ ಲಾರಿ ಬರುತ್ತಿದ್ದಂತೆ ಹಾರ್ದಿಕ್ ಅದರ

ಗೋ ಸಾಗಾಟದ ಟೆಂಪೋ ಹರಿಸಿ ಗೋ ರಕ್ಷಕನ ಹತ್ಯೆ Read More »

ನಿಧಿಗಾಗಿ ದೇವಾಲಯದ ಗರ್ಭಗುಡಿಯನ್ನೇ ಅಗೆದರು | ಅರ್ಚಕ, ಜ್ಯೋತಿಷಿ, ಸರ್ಕಾರಿ ಉದ್ಯೋಗಿ ಸಹಿತ ಏಳು ಜನರ ಬಂಧನ

ಹಾಸನ: ನಿಧಿ ಸಿಗುತ್ತದೆ ಎಂಬ ಆಸೆಯಿಂದ ದೇವಾಲಯವನ್ನೇ ಅಗೆದ ಅರ್ಚಕ, ಜ್ಯೋತಿಷ್ಯ ಮತ್ತು ಸರ್ಕಾರಿ ನೌಕರ ಸೇರಿದಂತೆ 7 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಜಿಲ್ಲೆಯ ಆಲೂರು ತಾಲ್ಲೂಕಿನ ದೈತಾಪುರ ಹೊರವಲಯದ ಪಾರ್ವತಮ್ಮನ ಬೆಟ್ಟದ ಮೇಲಿರುವ ಪುರಾತನ ದೇವಾಲಯದಲ್ಲಿ ಈ ಘಟನೆ ನಡೆದಿದೆ. ಈ ಆರೋಪದ ಮೇಲೆ ಹಾಸನ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕ ನಾರಾಯಣ, ಗಣಪತಿ ದೇವಾಲಯದ ಅರ್ಚಕ ತಿಪ್ಪೇಸ್ವಾಮಿ, ಜೋತಿಷಿ ಮಂಜುನಾಥ್, ಚನ್ನರಾಯಪಟ್ಟಣ ತಾಲ್ಲೂಕಿನ ಜಯರಾಮ, ಚೇತನ್, ಮಂಜುನಾಥ, ಹಾಸನ ತಾಲ್ಲೂಕಿನ ಶಂಕರನಹಳ್ಳಿ ಗ್ರಾಮದ

ನಿಧಿಗಾಗಿ ದೇವಾಲಯದ ಗರ್ಭಗುಡಿಯನ್ನೇ ಅಗೆದರು | ಅರ್ಚಕ, ಜ್ಯೋತಿಷಿ, ಸರ್ಕಾರಿ ಉದ್ಯೋಗಿ ಸಹಿತ ಏಳು ಜನರ ಬಂಧನ Read More »

ಅಪ್ಪ, ಅಮ್ಮ, ಅಜ್ಜಿ ಮತ್ತು ತಂಗಿಯನ್ನು ಕೊಂದು ಟ್ಯಾಂಕ್’ನಲ್ಲಿ ಅಡಗಿಸಿಟ್ಟ | ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿದ್ದ ಯುವಕ ನಾಲ್ಕು ತಿಂಗಳ ಬಳಿಕ ಅಂದರ್

ಪಶ್ಚಿಮ ಬಂಗಾಳ: ಅಪ್ಪ, ಅಮ್ಮ, ಅಜ್ಜಿ ಮತ್ತು ತಂಗಿಯನ್ನು ಬರ್ಬರವಾಗಿ ಕೊಂದು ಹೆಣಗಳನ್ನು ನೀರಿನ ಟ್ಯಾಂಕ್ ಒಳಗೆ ಮುಚ್ಚಿಟ್ಟು 4 ತಿಂಗಳಿನಿಂದ ನಾಟಕವಾಡಿದ್ದ ಯುವಕನೊಬ್ಬ ಕೊನೆಗೆ ಪೊಲೀಸರ ಅತಿಥಿಯಾಗಿದ್ದಾನೆ. ರಾಜ್ಯದ ಮಾಲ್ಡ ಜಿಲ್ಲೆಯ ಕಲಿಯಚಲೀಕ್ ಗ್ರಾಮದ ಯುವಕ ಆಸೀಫ್ (19) ತನ್ನ ಮನೆಯವರನ್ನೇ ಕೊಂದ ಪಾಪಿ ಯುವಕ. ಈತ ತನ್ನ ತಂದೆ ಜವಾದ್ ಅಲಿ, ತಾಯಿ ಇರಾ ಬೀಬಿ, ತಂಗಿ ಆರಿಫಾ ಹಾಗೂ ಅಜ್ಜಿ ಅಲೆಕ್ಜಾನ್​ರನ್ನು ಕೊಲೆ ಮಾಡಿದ್ದಾನೆ. ಅವರ ದೇಹಗಳನ್ನು ವಾಟರ್​ ಟ್ಯಾಂಕ್​ನಲ್ಲಿ ಮುಚ್ಚಿಟ್ಟಿದ್ದಾನೆ. ಬಳಿಕ

ಅಪ್ಪ, ಅಮ್ಮ, ಅಜ್ಜಿ ಮತ್ತು ತಂಗಿಯನ್ನು ಕೊಂದು ಟ್ಯಾಂಕ್’ನಲ್ಲಿ ಅಡಗಿಸಿಟ್ಟ | ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿದ್ದ ಯುವಕ ನಾಲ್ಕು ತಿಂಗಳ ಬಳಿಕ ಅಂದರ್ Read More »

ಧರ್ಮಸ್ಥಳ:ಬಿ ಎಸ್ ವೈ ಚುನಾವಣೆ ವೇಳೆ ಹಣ ಹಂಚಲು ಈತನಲ್ಲೇ ನೀಡೋದಂತೆ….! | ಈತನ ಒಂದು ಕರೆಯಿಂದ ಸಿಎಂ ಏನ್ ಬೇಕಾದ್ರು ಮಾಡ್ತಾರಂತೆ | ನಂಬಿದ ಕೆಎಸ್ಆರ್ಟಿಸಿ ಚಾಲಕನಿಗೆ ಲಕ್ಷ ರೂ ಪಂಗನಾಮ

ಧರ್ಮಸ್ಥಳ: ನಾನು ಸಿಎಂ ಯಡಿಯೂರಪ್ಪ ಅವರ ಪಿಎ ಎಂದು ಹೇಳಿ ಯುವಕನೊಬ್ಬ ಕೆಎಸ್ಆರ್ಟಿಸಿ ಚಾಲಕರೊಬ್ಬರಿಗೆ ಲಕ್ಷ ರೂ. ವಂಚಿಸಿದ ಘಟನೆ ಧರ್ಮಸ್ಥಳದಲ್ಲಿ ನಡೆದಿದೆ. ಧರ್ಮಸ್ಥಳ ಡಿಪೋದ ಬಸ್ ಚಾಲಕ ಪುರುಷೋತ್ತಮ್ ವಂಚಗೊಳಗಾದವರು. ಅವರಿಗೆ ಧರ್ಮಸ್ಥಳದ ಹೋಟೆಲೊಂದರಲ್ಲಿ ಶೈಲೇಶ್ ಎಂಬ ಯುವಕನ ಪರಿಚಯವಾಗಿತ್ತು. ಆತ ಸಿಎಂ ಯಡಿಯೂರಪ್ಪ ನನಗೆ ತುಂಬಾ ಆತ್ಮೀಯರು ಎಂದು ನಂಬಿಸಿದ್ದಾನೆ. ಮೊಬೈಲ್ನಲ್ಲಿ ಹಲವಾರು ಫೋಟೋಗಳನ್ನು ತೋರಿಸಿದ್ದಾನೆ. ಚುನಾವಣೆ ಸಂದರ್ಭದಲ್ಲಿ ಯಡಿಯೂರಪ್ಪ ಅವರು ಹಣ ಹಂಚಲು ನನ್ನಲ್ಲಿ ನೀಡುತ್ತಾರೆ ಎಂದು ಸುಳ್ಳು ಬಿಟ್ಟಿದ್ದಾನೆ. ಯುವಕ ನಾನು

ಧರ್ಮಸ್ಥಳ:ಬಿ ಎಸ್ ವೈ ಚುನಾವಣೆ ವೇಳೆ ಹಣ ಹಂಚಲು ಈತನಲ್ಲೇ ನೀಡೋದಂತೆ….! | ಈತನ ಒಂದು ಕರೆಯಿಂದ ಸಿಎಂ ಏನ್ ಬೇಕಾದ್ರು ಮಾಡ್ತಾರಂತೆ | ನಂಬಿದ ಕೆಎಸ್ಆರ್ಟಿಸಿ ಚಾಲಕನಿಗೆ ಲಕ್ಷ ರೂ ಪಂಗನಾಮ Read More »

ಪಿರಿಯಾಪಟ್ಟಣ: ಮಗಳನ್ನು ಕಡಿದು ಕೊಂದು ಪೊಲೀಸರಿಗೆ ಶರಣಾದ ತಂದೆ

ಪಿರಿಯಾಪಟ್ಟಣ: ತನ್ನ ಸ್ವಂತ ಮಗಳನ್ನೇ ಕಡಿದು ಕೊಂದು ತಂದೆ ಪೊಲೀಸರಿಗೆ ಶರಣಾದ ಘಟನೆ ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ನಡೆದಿದೆ. ಮಹದೇಶ್ವರ ದೇವಸ್ಥಾನ ರಸ್ತೆ ಬಳಿಯ ನಿವಾಸಿ ಜಯರಾಮ್ ಮಗಳನ್ನು ಕೊಂದ ಆರೋಪಿ. ಆತ ತನ್ನ ಮಗಳು ಗಾಯತ್ರಿ ಎಂಬಾಕೆಯನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ಪೊಲೀಸ್ ಠಾಣೆಗೆ ತೆರಳಿ ತಪ್ಪೊಪ್ಪಿಕೊಂಡು ಶರಣಾಗಿದ್ದಾನೆ. ಗಾಯತ್ರಿ ಅನ್ಯಕೋಮಿನ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದಳು. ತಂದೆ ಮತ್ತು ಮನೆಯವರು ಆಕೆಗೆ ಬುದ್ದಿವಾದ ಹೇಳಿದ್ದರು. ಆದರೆ ಅವರ ಮಾತಿಗೆ ಬಗ್ಗದ ಆಕೆ ಇತ್ತೀಚೆಗೆ ಆತನನ್ನು ಮದುವೆಯಾಗುವುದಾಗಿ ಹಠ

ಪಿರಿಯಾಪಟ್ಟಣ: ಮಗಳನ್ನು ಕಡಿದು ಕೊಂದು ಪೊಲೀಸರಿಗೆ ಶರಣಾದ ತಂದೆ Read More »

ವಿಟ್ಲ: ಮಹಿಳೆಯ ಮಾನಭಂಗಕ್ಕೆ ಯತ್ನಿಸಿದ ಗ್ರಾಮ ಪಂಚಾಯತ್ ಅಧ್ಯಕ್ಷ

ಬಂಟ್ವಾಳ: ಗ್ರಾಮ ಪಂಚಾಯತ್ ಅಧ್ಯಕ್ಷ ಗ್ರಾಮದ ಮಹಿಳೆಯೊಬ್ಬರ ಮನೆಗೆ ನುಗ್ಗಿ ಆಕೆಯ ಮಾನಭಂಗಕ್ಕೆ ಯತ್ನಿಸಿದ ಘಟನೆ ಕನ್ಯಾನದಿಂದ ವರದಿಯಾಗಿದೆ. ಈ ಸಂಬಂಧ ಕನ್ಯಾನ ಗ್ರಾಮ ಪಂಚಾಯತ್ ಅಧ್ಯಕ್ಷ ರಹಿಮಾನ್ ಎಂಬವನ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗ್ರಾಮದ ಪಿಲಿಚಂಡಿ ಗುಡ್ಡೆ ಎಂಬಲ್ಲಿನ ಒಂದು ಮನೆಯವರು ನೀರಿನ ಬಿಲ್ ಪಾವತಿಸದ ಕಾರಣ ಗ್ರಾಮ ಪಂಚಾಯಿತಿ ಪಿಡಿಓ ಮತ್ತು ಸಿಬ್ಬಂದಿ ಬಂದಿದ್ದರು. ಬಿಲ್ ಪಾವತಿಸುವ ಭರವಸೆ ನೀಡಿದ ನಂತರ ಅವರು ತೆರಳಿದ್ದರು. ಇನ್ನು ಸಂಜೆ ವೇಳೆ ಗ್ರಾಮ

ವಿಟ್ಲ: ಮಹಿಳೆಯ ಮಾನಭಂಗಕ್ಕೆ ಯತ್ನಿಸಿದ ಗ್ರಾಮ ಪಂಚಾಯತ್ ಅಧ್ಯಕ್ಷ Read More »