ಕ್ರೈಂ

ಸುಳ್ಯ: ಚಲಿಸುತ್ತಿರುವ ಲಾರಿಯಡಿಗೆ ಹಾರಿ ಆತ್ಮಹತ್ಯೆಗೆ ಯತ್ನ!?

ಸಮಗ್ರ ನ್ಯೂಸ್: ಚಲಿಸುತ್ತಿರುವ ಲಾರಿಯಡಿಗೆ ಹಾರಿ ವ್ಯಕ್ತಿಯೋರ್ವರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಗರದ ಗಾಂದಿನಗರ ಬಳಿ ಸಂಭವಿಸಿದೆ. ಗಂಭೀರವಾಗಿ ಗಾಯಗೊಂಡ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುವನ್ನು ಸುಳ್ಯದ ಗಾಂಧಿನಗರ ನಿವಾಸಿ ಉತ್ತರ ಕರ್ನಾಟಕ ಮೂಲದ‌ ಮಂಜುನಾಥ್ ಎಂದು ಗುರುತಿಸಲಾಗಿದೆ.

ಸುಳ್ಯ: ಚಲಿಸುತ್ತಿರುವ ಲಾರಿಯಡಿಗೆ ಹಾರಿ ಆತ್ಮಹತ್ಯೆಗೆ ಯತ್ನ!? Read More »

ಬಂಟ್ವಾಳ: ಮಹಿಳಾ ಪ್ರಾಧ್ಯಾಪಕಿ ವಿರುದ್ಧ ಮಾನಹಾನಿ ಪತ್ರ: ಪ್ರಾಧ್ಯಾಪಕರ ಬಂಧನ

ಸಮಗ್ರ ನ್ಯೂಸ್: ಕಾಲೇಜಿನ ಪ್ರಾಧ್ಯಾಪಕಿಯೊರ್ವರ ಬಗ್ಗೆ ಕೀಳುಮಟ್ಟದ ಭಾಷೆ ಹಾಗೂ ಮಾನಹಾನಿ ಪತ್ರವನ್ನು ಬರೆದು ಸಾರ್ವಜನಿಕ ಸ್ಥಳದಲ್ಲಿ ಪೋಸ್ಟರ್ ಅಂಟಿಸಿ ಕಿರುಕುಳ ನೀಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಲೇಜ್ ನ ಸಂಚಾಲಕ ಮತ್ತು ಇಬ್ಬರು ಪ್ರಾಧ್ಯಾಪಕ ರನ್ನು ಮಂಗಳೂರು ಪೋಲಿಸರು ಬಂಧಿಸಿದ್ದಾರೆ. ಬಂಟ್ವಾಳದ ಪ್ರತಿಷ್ಠಿತ ಕಾಲೇಜೊಂದರಲ್ಲಿ ಆಡಳಿತ ಮಂಡಳಿ ಮತ್ತು ಪ್ರಾಧ್ಯಾಪಕರ ನೇಮಕಾತಿಯಿಂದ ಗಲಾಟೆ ನಡೆದು ಮಹಿಳಾ ಪ್ರಾಧ್ಯಾಪಕಿ ವಿರುದ್ಧ ಮಾನಹಾನಿ ಪತ್ರವನ್ನು ತಯಾರಿಸಿ ಸಹೋದ್ಯೋಗಿ ಪ್ರಧ್ಯಾಪಕರಿಗೆ, ಮುಖ್ಯಸ್ಥರಿಗೆ, ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಕಳುಹಿಸಿ ಮಾನಹಾನಿ, ಜೀವಬೆದರಿಕೆ ನೀಡುತ್ತಿದ್ದ

ಬಂಟ್ವಾಳ: ಮಹಿಳಾ ಪ್ರಾಧ್ಯಾಪಕಿ ವಿರುದ್ಧ ಮಾನಹಾನಿ ಪತ್ರ: ಪ್ರಾಧ್ಯಾಪಕರ ಬಂಧನ Read More »

ಮೊಬೈಲ್ ಗೆ ಡೇಟಾ ಪ್ಯಾಕ್ ರೀಚಾರ್ಜ್ ಮಾಡದ ತಂದೆ; ಆತ್ಮಹತ್ಯೆ ಮಾಡಿಕೊಂಡ ಬಾಲಕ

ಸಮಗ್ರ ನ್ಯೂಸ್: ಗೇಮ್ ಆಡಲು ಮೊಬೈಲ್ ಗೆ ಡೇಟಾ ಪ್ಯಾಕ್ ರೀಚಾರ್ಜ್ ಮಾಡದ ತಂದೆಯಿಂದ ಬಾಲಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಧ್ಯಪ್ರದೇಶದ ಜಬಲ್‌ಪುರ್ ಜಿಲ್ಲೆಯಲ್ಲಿ ನಡೆದಿದೆ.ತನ್ನ ತಂದೆ ತನ್ನ ಮೊಬೈಲ್ ಫೋನ್ ಡೇಟಾ ಪ್ಯಾಕ್ ಅನ್ನು ರೀಚಾರ್ಜ್ ಮಾಡಲು ನಿರಾಕರಿಸಿದ ಕಾರಣ 14 ವರ್ಷದ ಬಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸೋಮವಾರ ಬಾಲಕ ತನ್ನ ಮನೆಯಲ್ಲಿ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ತನಿಖೆಯಲ್ಲಿ ಕುಟುಂಬ ಕೂಲಿ ಕೆಲಸ ಮಾಡುವ ಮತ್ತು ಆರ್ಥಿಕ ಸಮಸ್ಯೆ ಎದುರಿಸುತ್ತಿರುವವರಾಗಿದ್ದು ಆತನ ತಂದೆ

ಮೊಬೈಲ್ ಗೆ ಡೇಟಾ ಪ್ಯಾಕ್ ರೀಚಾರ್ಜ್ ಮಾಡದ ತಂದೆ; ಆತ್ಮಹತ್ಯೆ ಮಾಡಿಕೊಂಡ ಬಾಲಕ Read More »

ಉಡುಪಿ: ಶಾಂಭವಿ ಲಾಡ್ಜ್ ನಲ್ಲಿ ಯುವಕ ಆತ್ಮಹತ್ಯೆ; ಕಾರಣ?

ಸಮಗ್ರ ನ್ಯೂಸ್: ಕಳೆದ ವಾರ ಉಡುಪಿಯ ಶಾಂಭವಿ ಲಾಡ್ಜ್ ನಲ್ಲಿ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೇ ಅದೇ ಲಾಡ್ಜ್ ನಲ್ಲಿ ಮತ್ತೊಂದು ಆತ್ಮಹತ್ಯೆ ನಡೆದಿದೆ. ಮಂಗಳೂರು ಮೂಲದ ಮೆಡಿಕಲ್ ರೆಪ್ ಶರಣ್ ರಾಜ್(33) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಪ್ರೇಮ ವೈಫಲ್ಯವೇ ಆತ್ಮಹತ್ಯೆಗೆ ಕಾರಣ ಎಂದು ಹೇಳಲಾಗಿದೆ. ಸಂತೋಷ್ ಆತ್ಮಹತ್ಯೆ ಬಳಿಕ ಲಾಡ್ಜ್ ಹೆಸರು ಬದಲಿಸಿದ್ದರು. ಆದರೆ ಇದೀಗ ಮತ್ತೊಬ್ಬ ವ್ಯಕ್ತಿ ಲಾಡ್ಜ್‌ನಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಿದ್ದ

ಉಡುಪಿ: ಶಾಂಭವಿ ಲಾಡ್ಜ್ ನಲ್ಲಿ ಯುವಕ ಆತ್ಮಹತ್ಯೆ; ಕಾರಣ? Read More »

ಕೆಜಿಎಫ್-2 ಸಿನಿಮಾ ನೋಡುತ್ತಿದ್ದಾಗ ಹಾರಿದ ಗುಂಡು; ಯುವಕ ಗಂಭೀರ

ಹಾವೇರಿ: ಕೆಜಿಎಫ್-2 ಸಿನಿಮಾ ನೋಡುತ್ತಿದ್ದ ವೇಳೆ ಗುಂಡು ಹಾರಿದ ಪರಿಣಾಮ ಯುವಕನೊಬ್ಬನ ಹೊಟ್ಟೆಗೆ ಗಾಯವಾದ ಘಟನೆ ಹಾವೇರಿಯಲ್ಲಿ ನಡೆದಿದೆ. ಗಾಯಾಳುವನ್ನು ವಸಂತ ಕುಮಾರ್ ಎಂದು ಗುರುತಿಸಲಾಗಿದೆ. ಹಾವೇರಿ ಜಿಲ್ಲೆ ಶಿಗ್ಗಾಂವಿ ಪಟ್ಟಣದ ರಾಜೇಶ್ವರಿ ಚಿತ್ರಮಂದಿರದಲ್ಲಿ ಘಟನೆ ನಡೆದಿದೆ. ಕೆಜಿಎಫ್ 2 ಚಿತ್ರ ವೀಕ್ಷಣೆ ವೇಳೆ ಗುಂಡುಹಾರಿದೆ. ಈ ಗುಂಡು ವಸಂತ ಕುಮಾರ್ ಹೊಟ್ಟೆಗೆ ತಗುಲಿದೆ. ಕೂಡಲೇ ಗಾಯಾಳುವನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಕೆಜಿಎಫ್-2 ಸಿನಿಮಾ ನೋಡುತ್ತಿದ್ದಾಗ ಹಾರಿದ ಗುಂಡು; ಯುವಕ ಗಂಭೀರ Read More »

ಧರ್ಮಸಂಘರ್ಷಕ್ಕೆ ಹೊಸ ವಿಚಾರ ಎಂಟ್ರಿ| ಮನೆ ಬಾಡಿಗೆಗಿದೆ… ಆದರೆ ಹಿಂದೂಗಳಿಗೆ ಮಾತ್ರ!!

ಸಮಗ್ರ ನ್ಯೂಸ್: ರಾಜ್ಯದಲ್ಲಿ ಧರ್ಮ ಸಂಘರ್ಷ‌ ದಿನೇದಿನೇ ಹೊಸ ರೂಪ ಪಡೆಯುತ್ತಿದ್ದು, ಈ ವಿಚಾರಕ್ಕೆ ಮತ್ತೊಂದು ಹೊಸ ಭಾಗ ಎಂಟ್ರಿಯಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ”ಮುಸ್ಲಿಮರಿಗೆ ಮನೆ ಬಾಡಿಗೆ ಕೊಡಲ್ಲ” ಎಂಬ ವಿಚಿತ್ರ ಬೋರ್ಡ್‌ವೊಂದು ಎಲ್ಲರ ಗಮನ ಸೆಳೆದಿದ್ದು, ಧರ್ಮ ಸಂಘರ್ಷಕ್ಕೆ ನಾಂದಿ ಹಾಡಿದೆ. ದಯಾನಂದ್‌ ಎಂಬ ವ್ಯಕ್ತಿ ತನ್ನ ಮನೆಯ ಮುಂದೆ ‘ಮುಸ್ಲಿಮರಿಗೆ ಮನೆ ಬಾಡಿಗೆ ಕೊಡಲ್ಲ, ಅನಿವಾರ್ಯವಾದರೆ ಅಂಗಾಗ ಮಾರಾಟ ಮಾಡ್ತೀನಿ. ಆದರೆ ಮುಸ್ಲಿಮರಿಗೆ ಮಾತ್ರ ಮನೆಯನ್ನೂ ಬಾಡಿಗೆ ಕೊಡುವ ಪ್ರಶ್ನೆಯೇ ಇಲ್ಲ’ ಎಂಬ ವಿಚಿತ್ರ

ಧರ್ಮಸಂಘರ್ಷಕ್ಕೆ ಹೊಸ ವಿಚಾರ ಎಂಟ್ರಿ| ಮನೆ ಬಾಡಿಗೆಗಿದೆ… ಆದರೆ ಹಿಂದೂಗಳಿಗೆ ಮಾತ್ರ!! Read More »

ವಿಜಯಪುರ: ಕುರಿಕಾಯುತ್ತಿದ್ದ ಸಹೋದರರು ಸಿಡಿಲಿಗೆ ಬಲಿ

ಸಮಗ್ರ ನ್ಯೂಸ್::ಕುರಿ ಕಾಯುತ್ತಿದ್ದ ಸಹೋದರರಿಬ್ಬರು ಮೃತಪಟ್ಟ ಘಟನೆ ವಿಜಯಪುರ ಜಿಲ್ಲೆಯ ಕೊಲ್ಹಾರ ದಲ್ಲಿ ನಡೆದಿದೆ. ತಾಲೂಕಿನಲ್ಲಿ ಸೋಮವಾರ ಸಂಜೆ ಬಿರುಗಾಳಿ ಸಹಿತ ಮಳೆ ಆರಂಭವಾಗಿದ್ದು, ಜೊತೆಗೆ ಸಿಡಿಲಿನ ಅಬ್ಬರಕ್ಕೆ ಕೊಲ್ಹಾರ ತಾಲೂಕಿನ ಚಿರಲದಿನ್ನಿ ಗ್ರಾಮದಲ್ಲಿ ಜಮೀನೊಂದರಲ್ಲಿ ಕುರಿ ನಿಲ್ಲಿಸಿಕೊಂಡಿದ್ದ ಕುರಿಗಾಯಿ ಸಹೋದರರಿಬ್ಬರು ಸಿಡಿಲಿನ ಹೊಡೆತಕ್ಕೆ ದಾರುಣವಾಗಿ ಸಾವನ್ನಪ್ಪಿದ್ದಾರೆ. ಬೀರಪ್ಪ ಶಿವಪ್ಪ ಬಡೆಗೋಳ (20), ಮಹೇಶ ಸತ್ಯಪ್ಪ ಬಡೆಗೋಳ‌(14) ಸಾವನ್ನಪ್ಪಿದ್ದಾರೆ. ಸಹೋದರರ ಜೊತೆಗೆ ಇದ್ದ 9 ಕುರಿಗಳು ಸಹ ಸಿಡಿಲ ಬಡಿತಕ್ಕೆ ಸಾವನ್ನಪ್ಪಿವೆ. ಮೂಲತಃ ಬೆಳಗಾವಿ ಜಿಲ್ಲೆ ಚಿಕ್ಕೋಡಿ

ವಿಜಯಪುರ: ಕುರಿಕಾಯುತ್ತಿದ್ದ ಸಹೋದರರು ಸಿಡಿಲಿಗೆ ಬಲಿ Read More »

ಬೆಳ್ತಂಗಡಿ : ಮದ್ಯ ಎಂದು ಆ್ಯಸಿಡ್ ಕುಡಿದು ವ್ಯಕ್ತಿ ಮೃತ್ಯು

ಸಮಗ್ರ ನ್ಯೂಸ್ : ಮದ್ಯ ಕುಡಿಯುವ ಆತುರದಲ್ಲಿ ಆ್ಯಸಿಡ್ ಸೇವಿಸಿ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಉಜಿರೆ ಸಮೀಪದ ನೆರಿಯ ಗ್ರಾಮದಲ್ಲಿ ಏ. 18 ರಂದು ನಡೆದಿದೆ. ನೆರಿಯ ಗ್ರಾಮದ ಹೇರಾಳ್ ನಿವಾಸಿ ಬಾಬು ( 62) ಎಂಬುವರು ಮೃತಪಟ್ಟ ವ್ಯಕ್ತಿ. ಇವರು ರಬ್ಬರ್ ಶೀಟ್ ಹೊಡೆಯುವ ಶೆಡ್ ಗೆ ಕೆಲಸದ ಸಮಯದಲ್ಲಿ ಮದ್ಯದ ಬಾಟಲಿ ಹಾಗೂ ಆ್ಯಸಿಡ್ ಬಾಟಲಿ ತೆಗೆದುಕೊಂಡು ಹೋಗಿ ಇಟ್ಟಿದ್ದರು. ಇವರ ಕುಡಿತದ ಚಟ ಬಹುಶಃ ಮಕ್ಕಳಿಗೆ ಗೊತ್ತಿತ್ತೇನೋ. ಹಾಗಾಗಿ ಶೆಡ್ ಗೆ ಮಕ್ಕಳು

ಬೆಳ್ತಂಗಡಿ : ಮದ್ಯ ಎಂದು ಆ್ಯಸಿಡ್ ಕುಡಿದು ವ್ಯಕ್ತಿ ಮೃತ್ಯು Read More »

ಸುಳ್ಯ : ಮನೆ ಗೋಡೆ ಜರಿದು ಬಿದ್ದು ಯಜಮಾನ ಮೃತ್ಯು

ಸಮಗ್ರ ನ್ಯೂಸ್ : ಪೆರಾಜೆ ಗ್ರಾಮದ ನಿಡ್ಯಮಲೆ ಎಂಬಲ್ಲಿ ಹಳೆ ಮನೆಯ ಗೋಡೆ ಕೆಡವುತ್ತಿದ್ದಾಗ ಗೋಡೆ ಜರಿದು ಬಿದ್ದು ಮನೆಯ ಯಜಮಾನ ಮೃತಪಟ್ಟ ಘಟನೆ ಎ.17 ರಂದು ವರದಿಯಾಗಿದೆ. ಪೆರಾಜೆ ನಿಡ್ಯಮಲೆ ನಾಗಪ್ಪ ನಾಯ್ಕ ಮೃತ ದುರ್ದೈವಿ. ಎ.17 ರಂದು ಬೆಳಗ್ಗೆ ನಾಗಪ್ಪ ನಾಯ್ಕರು ಹಾಗೂ ಅವರ ಮಗ ದರ್ಶನ್ ತಮ್ಮ ಹಳೆ ಮನೆಯ ಗೋಡೆಯನ್ನು ತೆರವು ಮಾಡುವ ಕೆಲಸದಲ್ಲಿ ನಿರತರಾಗಿದ್ದಾರು. ಈ ವೇಳೆ ಕೆಡವುತ್ತಿದ್ದ ಗೋಡೆ ಜರಿದು ಬಿತ್ತೆನ್ನಲಾಗಿದೆ. ಅದರಡಿಯಲ್ಲಿ ಕೆಲಸ ಮಾಡುತ್ತಿದ್ದ ನಾಗಪ್ಪರು ಗೋಡೆ

ಸುಳ್ಯ : ಮನೆ ಗೋಡೆ ಜರಿದು ಬಿದ್ದು ಯಜಮಾನ ಮೃತ್ಯು Read More »

ಉಪ್ಪಿನಂಗಡಿ: ಬುಡೋಳಿ ಸಮೀಪ ಸರಣಿ ಅಪಘಾತ

ಸಮಗ್ರ ನ್ಯೂಸ್: ಮಂಗಳೂರು- ರಾಷ್ಟ್ರೀಯ ಹೆದ್ದಾರಿಯ ಬುಡೋಳಿ ಎಂಬಲ್ಲಿ ಕಾರು, ಬಸ್ ಮತ್ತು ಲಾರಿ ನಡುವೆ ಸರಣಿ ಅಪಘಾತ ಸಂಭವಿಸಿದೆ. ಬೆಂಗಳೂರು ಕಡೆಯಿಂದ ಮಂಗಳೂರಿಗೆ ಬರುತ್ತಿದ್ದ ಬಸ್ ಓವರ್ ಟೇಕ್ ಮಾಡುವ ಭರದಲ್ಲಿ ಮುಂಭಾಗದಲ್ಲಿ ತೆರಳುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಬಳಿಕ ಕಾರಿಗೂ ಡಿಕ್ಕಿ ಹೊಡೆದು ರಸ್ತೆ ಮಧ್ಯದಲ್ಲಿ ಹೋಗಿ ನಿಂತಿದೆ. ಘಟನೆಯಲ್ಲಿ ಬಸ್ಸಿಗೆ ಮತ್ತು ಲಾರಿಗೆ ಹಾನಿಯಾಗಿದೆ. 6 ಗಂಟೆಗೆ ಈ ಘಟನೆ ನಡೆದಿದ್ದು, ಘಟನೆಯಿಂದ ಹೆದ್ದಾರಿ ಸಂಪೂರ್ಣವಾಗಿ ಬ್ಲಾಕ್ ಆಗಿದೆ. ಹೆದ್ದಾರಿಯೂದ್ದಕ್ಕೂ ವಾಹನಗಳು ಸಾಲು

ಉಪ್ಪಿನಂಗಡಿ: ಬುಡೋಳಿ ಸಮೀಪ ಸರಣಿ ಅಪಘಾತ Read More »