ಕ್ರೈಂ

ತೇರಿನ ಚಕ್ರಕ್ಕೆ ಸಿಲುಕಿ ಭಕ್ತ ಸಾವು…

ಸಮಗ್ರ ನ್ಯೂಸ್: ರಥೋತ್ಸವ ನಡೆಯುತ್ತಿದ್ದ ಸಂದರ್ಭದಲ್ಲಿ ತೇರಿನ ಚಕ್ರಕ್ಕೆ ಸಿಲುಕಿ ಭಕ್ತರೊಬ್ಬರು ಸಾವನ್ನಪ್ಪಿರುವ ಘಟನೆ ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ಚಿಗಟೇರಿ ಗ್ರಾಮದಲ್ಲಿ ನಡೆದಿದೆ. ಗುರುವಾರ ಹರಪನಹಳ್ಳಿ ಗ್ರಾಮದಲ್ಲಿ ನಾರದಮುನಿ ರಥೋತ್ಸವ ನಡೆದಿದ್ದು, ಈ ವೇಳೆ ದಾವಣಗೆರೆಯ 45 ವರ್ಷದ ಸುರೇಶ್ ಬಸವನಗೌಡ ತೇರಿನ ಚಕ್ರಕ್ಕೆ ಸಿಲುಕಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಈ ವೇಳೆ ಭಕ್ತಾದಿಗಳು ಆತಂಕಕೊಳಗಾಗಿದ್ದು ಬಳಿಕ ಪೊಲೀಸರು ಶವ ಹೊರ ತೆಗೆದು ಆಸ್ಪತ್ರೆಗೆ ಸಾಗಿಸಿದ್ದಾರೆ. ನಂತರ ಗಾಲಿಯನ್ನು ನೀರಿನಿಂದ ತೊಳೆದು ತೇರನ್ನು ದೇವಸ್ಥಾನದವರೆಗೆ ಎಳೆದು ತರಲಾಗಿದೆ.

ತೇರಿನ ಚಕ್ರಕ್ಕೆ ಸಿಲುಕಿ ಭಕ್ತ ಸಾವು… Read More »

ಹುಬ್ಬಳ್ಳಿ ಗಲಭೆಯ ಮಾಸ್ಟರ್ ಮೈಂಡ್ ಅರೆಸ್ಟ್

ಸಮಗ್ರ ನ್ಯೂಸ್: ಹುಬ್ಬಳ್ಳಿ ಗಲಭೆ ಮಾಸ್ಟರ್​​​ ಮೈಂಡ್ ಅರೆಸ್ಟ್​ ಆಗಿದ್ದು, ಮತ್ತೊಬ್ಬ ಮಾಸ್ಟರ್​ ಮೈಂಡ್​ ಪೊಲೀಸರು ಬಂಧಿಸಿದ್ದಾರೆ.AIMIM ಮುಖಂಡ ಮಹ್ಮದ್​ ಆರೀಫ್​​​​ ಅರೆಸ್ಟ್​ ಆಗಿದ್ದು, ಕಳೆದ ರಾತ್ರಿ ಪೊಲೀಸರು ಬಂಧಿಸಿ ಕರೆತಂದಿದ್ದಾರೆ . ಆರೀಫ್​​​ ಹುಬ್ಬಳ್ಳಿ ಹೊರವಲಯದಲ್ಲಿ ಅವಿತು ಕುಳಿತಿದ್ದ, ಮೌಲ್ವಿ ವಸೀಂ ಪಠಾಣ್ ಜೊತೆ ಸೇರಿ ಗಲಭೆಗೆ ಪ್ರಚೋದನೆ ನೀಡಿದ್ದ. ಈ ಆರೋಪ ಹೊತ್ತಿರೋ ಆರೀಫ್,​​ ಕಳೆದ 4 ದಿನದಿಂದ ಪರಾರಿಯಾಗಿದ್ದ. ಹಳೇ ಹುಬ್ಬಳ್ಳಿ ಠಾಣೆ ಮುಂದೆ ಆರೀಫ್ ಯುವಕರ ಸೇರಿಸಿದ್ದ. ಸದ್ಯ ಆರೀಫ್​​ ಮೊಬೈಲ್​

ಹುಬ್ಬಳ್ಳಿ ಗಲಭೆಯ ಮಾಸ್ಟರ್ ಮೈಂಡ್ ಅರೆಸ್ಟ್ Read More »

ಸುಳ್ಯ – ಲಾರಿಗೆ ತಲೆ ಕೊಟ್ಟು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ಸಾವು

ಸಮಗ್ರ ನ್ಯೂಸ್: ಸುಳ್ಯದ ಗಾಂಧಿನಗರದಲ್ಲಿ ಎ‌.20ರಂದು ಲಾರಿಗೆ ತಲೆ ಕೊಟ್ಟು ಆತ್ಮಹತ್ಯೆಗೆ ಯತ್ನಿಸಿ ತೀವ್ರ ಗಾಯಗೊಂಡಿದ್ದ ವ್ಯಕ್ತಿಯನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತ ಚಿಕಿತ್ಸೆ ಫಲಿಸದೇ ಇಂದು ಬೆಳಿಗ್ಗಿನ ಜಾವ 6.30 ಕ್ಕೆ ಆತ ಕೊನೆಯುಸಿರೆಳೆದಿದ್ದಾನೆ. ಈತ ಉತ್ತರ ಕನ್ನಡ ಜಿಲ್ಲೆಯ ಮಂಜುನಾಥ್ ಎಂಬವನು ಕೆಲವು ಸಮಯಗಳಿಂದ ಸುಳ್ಯದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ, ಪತ್ನಿ, ಮಗನೊಂದಿಗೆ ಜೊತೆಗೆ ವಾಸವಿದ್ದ. ಆದರೆ ಇತ್ತೀಚೆಗೆ ಅವರನ್ನು ಊರಿಗೆ ಕಳುಹಿಸಿದ. ಈತ ಮಾನಸಿಕವಾಗಿ ನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಸುಳ್ಯ – ಲಾರಿಗೆ ತಲೆ ಕೊಟ್ಟು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ಸಾವು Read More »

ಸುಳ್ಯ: ಜಾಲ್ಸೂರು ಬಳಿ ಓಮಿನಿ ಕಾರುಗಳ ಮುಖಾಮುಖಿ ಡಿಕ್ಕಿ

ಸಮಗ್ರ ನ್ಯೂಸ್: ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಜಾಲ್ಸೂರು ಬಳಿ ಓಮಿನಿ ಕಾರು ಎರಡು ಮುಖಾಮುಖಿ ಡಿಕ್ಕಿಯಾದ ಘಟನೆ ನಡೆದಿದೆ. ಪುತ್ತೂರಿನಿಂದ ಸುಳ್ಯ ಕಡೆಗೆ ಪ್ರಯಾಣಿಸುತ್ತಿದ್ದ ಹಾಗು ಜಾಲ್ಸೂರಿನಲ್ಲಿ ರಸ್ತೆ ಟರ್ನ್ ಮಾಡುತ್ತಿದ್ದ ಓಮಿನಿ ಕಾರು ಡಿಕ್ಕಿ ಹೊಡೆದಿದು, ಅಪಘಾತದಲ್ಲಿ ಕಾರು ಜಖಂಗೊಂಡಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಸುಳ್ಯ: ಜಾಲ್ಸೂರು ಬಳಿ ಓಮಿನಿ ಕಾರುಗಳ ಮುಖಾಮುಖಿ ಡಿಕ್ಕಿ Read More »

ತಿರುವು ಪಡೆದುಕೊಂಡ ಸಂತೋಷ್ ಆತ್ಮಹತ್ಯೆ ಪ್ರಕರಣ| ಅನುದಾನ ಮಂಜೂರಾತಿಗೆ ಬರೆದ ಪತ್ರ ಬಹಿರಂಗ

ಸಮಗ್ರ ನ್ಯೂಸ್: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ತಿರುವು ಪಡೆದುಕೊಂಡಿದ್ದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಅಂದಿನ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬರೆದಿದ್ದ ಪೊಲೀಸರಿಗೆ ಲಭ್ಯವಾಗಿದೆ. 2021 ರ ಫೆಬ್ರವರಿ 15 ರಂದು ಆಗಿನ ಬೆಳಗಾವಿ ಜಿ.ಪಂ ಅಧ್ಯಕ್ಷೆ ಆಶಾ ಐಹೋಳೆ ಹಿಂಡಲಗಾ ಗ್ರಾಮದಲ್ಲಿ ರಸ್ತೆ ಚರಂಡಿ ಅಭಿವೃದ್ಧಿಗೆ ವಿಶೇಷ ಅನುದಾನ ಮಂಜೂರು ಮಾಡುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದರು. 2021 ರ ಫೆಬ್ರವರಿ

ತಿರುವು ಪಡೆದುಕೊಂಡ ಸಂತೋಷ್ ಆತ್ಮಹತ್ಯೆ ಪ್ರಕರಣ| ಅನುದಾನ ಮಂಜೂರಾತಿಗೆ ಬರೆದ ಪತ್ರ ಬಹಿರಂಗ Read More »

ಸುಳ್ಯ: ಜಾಗ ವಿವಾದದ ಹಿನ್ನೆಲೆಯಲ್ಲಿ ರಬ್ಬರ್ ಗಿಡ ಕಡಿದು ನಷ್ಟ: ಆರು ಆರೋಪಿಗಳಿಗೆ ದಂಡ ವಿಧಸಿದ ಸುಳ್ಯ ಕೋರ್ಟ್

ಸುಳ್ಯ: ರಬ್ಬರ್ ಗಿಡಗಳನ್ನು ಕಡಿದು ನಾಶಪಡಿಸಿ ನಷ್ಟ ಉಂಟು ಮಾಡಿದ 6 ಜನ ಆರೋಪಿಗಳಿಗೆ ತಲಾ ಹತ್ತು ಸಾವಿರ ರೂಪಾಯಿ ದಂಡ ವಿಧಿಸಿ ಸುಳ್ಯ ನ್ಯಾಯಾಲಯ ತೀರ್ಪು ನೀಡಿದೆ. ಜಮೀನು ಸಂಬಂಧ ಇರುವ ತಕರಾರಿನ ದ್ವೇಷದ ಹಿನ್ನೆಲೆಯಲ್ಲಿ ಬಾಳುಗೋಡು ಗ್ರಾಮದ ನಡುತೋಟ ಗುಡ್ಡೆ ಮನೆ ಎಂಬಲ್ಲಿನ ಪದ್ಮನಾಭ ಗೌಡ ಎಂಬವರು ತಾನು ಸ್ವಾಧೀನ ಹೊಂದಿರುವ ಸುಮಾರು 6 ವರ್ಷ ಪ್ರಾಯದ 41ರಬ್ಬರ್ ಮರಗಳನ್ನು ಆರೋಪಿಗಳಾದ ಜಯಮ್ಮ,ಅನಿತಾ,ಪುರುಷೋತ್ತಮ, ಮೋಹಿನಿ,ಜಯರಾಮ,ಸುಧಾಕರ, ಎಂಬವರು ಕಡಿದು ಹಾಕಿ ನಾಶಪಡಿಸಿರುವುದಾಗಿಯೂ ರಬ್ಬರ್ ತೋಟದಲ್ಲಿ ಕಾಡು

ಸುಳ್ಯ: ಜಾಗ ವಿವಾದದ ಹಿನ್ನೆಲೆಯಲ್ಲಿ ರಬ್ಬರ್ ಗಿಡ ಕಡಿದು ನಷ್ಟ: ಆರು ಆರೋಪಿಗಳಿಗೆ ದಂಡ ವಿಧಸಿದ ಸುಳ್ಯ ಕೋರ್ಟ್ Read More »

ಗೆಳೆಯನ‌ ಶವ ಊರಿಗೆ ಕೊಂಡೊಯ್ಯುತ್ತಿದ್ದವರೂ ಜವರಾಯನ ಬಳಿಗೆ| ಭೀಕರ ಅಪಘಾತದಲ್ಲಿ ಮೂವರು ಮಿತ್ರರು ದುರ್ಮರಣ

ಸಮಗ್ರ ನ್ಯೂಸ್: ಬೆಂಗಳೂರಿನಲ್ಲಿ ಮೃತಪಟ್ಟಿದ್ದ ಗೆಳೆಯನ ಶವವನ್ನು ಊರಿಗೆ ಕೊಂಡೊಯ್ಯುತ್ತಿದ್ದ ಮೂವರು ಮಿತ್ರರು ಮಾರ್ಗಮಧ್ಯೆ ಭೀಕರ ಅಪಘಾತಕ್ಕೆ ಒಳಗಾಗಿ ಸ್ಥಳದಲ್ಲೇ ಸಾವಿಗೀಡಾಗಿರುವ ಘಟನೆ ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಗೊಲ್ಲಪಲ್ಲಿ ಬಳಿ ನಡೆದಿದೆ. ಅಪಘಾತದಲ್ಲಿ ಅಂಬರೀಷ್ (30), ಗೋವಿಂದ್ (35) ದೇವರಾಜ್ (34) ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಕಾರು ಚಾಲಕ ಉಸ್ಮಾನ್ ಪಾಷಾ ಹಾಗೂ ಯಲ್ಲಾಲಿಂಗ ಎಂಬವರಿಗೆ ಗಂಭೀರ ಗಾಯಗಳಾಗಿವೆ. ಸಾವಿಗೀಡಾದವರು ಹಾಗೂ ಗಾಯಾಳುಗಳು ಬೆಂಗಳೂರಿನ ನಾಯಂಡಹಳ್ಳಿಯಲ್ಲಿ ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಇವರ ಸ್ನೇಹಿತ ಬಸಯ್ಯ ಎಂಬಾತ

ಗೆಳೆಯನ‌ ಶವ ಊರಿಗೆ ಕೊಂಡೊಯ್ಯುತ್ತಿದ್ದವರೂ ಜವರಾಯನ ಬಳಿಗೆ| ಭೀಕರ ಅಪಘಾತದಲ್ಲಿ ಮೂವರು ಮಿತ್ರರು ದುರ್ಮರಣ Read More »

ಮಂಗಳೂರಿನಲ್ಲಿ ಹೆಣ ಬೀಳಿಸುತ್ತೇನೆಂದು ಪೋಸ್ಟ್ ಹಾಕಿದವ ಈಗ ಪೊಲೀಸ್ ಅತಿಥಿ

ಸಮಗ್ರ ನ್ಯೂಸ್: ಹಿಜಾಬ್ ಸಂಘರ್ಷದಿಂದ ಕರ್ನಾಟಕದಲ್ಲಿ ಧರ್ಮ ದಂಗಲ್ ಶುರುವಾಗಿದ್ದು, ಹಿಂದೂ-ಮುಸ್ಲಿಂ ಮಧ್ಯೆ ಒಂದಲ್ಲ ಒಂದು ರೀತಿಯಲ್ಲಿ ವಿವಾದಗಳು ನಡೆಯುತ್ತಲೇ ಇವೆ. ಈ ನಡುವೆ ‘ಮಂಗಳೂರಿನಲ್ಲಿ ಬೀಳಲಿದೆ ಮತ್ತೊಂದು ಹೆಣ.” ಎಂದು ಸಾಮಾಜಿಕ ತಾಣಗಳಲ್ಲಿ ಪೋಸ್ಟ್ ವೈರಲ್ ಆಗಿತ್ತು. ‘ಮಾರಿಗುಡಿ’ ಎಂಬ ಪೇಜ್ ನಲ್ಲಿ ಮುಹಮ್ಮದ್ ಅಝ್ಮಲ್ ಎನ್ನುವಾತ ಪೋಸ್ಟ್ ಹಾಕಿದ್ದ. ಈ ಮೂಲಕ ಎಬಿವಿಪಿ ಸಂಘಟನೆಗೆ ಸೇರಿದ ವಿದ್ಯಾರ್ಥಿಯೊಬ್ಬನಿಗೆ ಕೊಲೆ ಬೆದರಿಕೆ ಒಡ್ಡಿದ್ದ. ಈ ಪೋಸ್ಟ್ ಬೆನ್ನತ್ತಿದ ಮಂಗಳೂರು ಪೊಲೀಸರು ಮುಹಮ್ಮದ್ ಅಝ್ಮಲ್ ನನ್ನು ಬಂಧಿಸಿ

ಮಂಗಳೂರಿನಲ್ಲಿ ಹೆಣ ಬೀಳಿಸುತ್ತೇನೆಂದು ಪೋಸ್ಟ್ ಹಾಕಿದವ ಈಗ ಪೊಲೀಸ್ ಅತಿಥಿ Read More »

ಮಂಗಳೂರು: ಟಿಪ್ಪರ್ ಡಿಕ್ಕಿ ಹೊಡೆದು ಬಾಲಕ ದುರ್ಮರಣ

ಸಮಗ್ರ ನ್ಯೂಸ್: ಟಿಪ್ಪರ್ ಢಿಕ್ಕಿ ಹೊಡೆದ ಪರಿಣಾಮ ಬಾಲಕ ಮೃತಪಟ್ಟ ಘಟನೆ ಮಂಗಳೂರು ನಗರದ ಬಜಾಲ್ ಕಟ್ಟೆಪುಣಿ ಕೋರ್ದಬ್ಬು ದೈವಸ್ಥಾನದ ಹಿಂಭಾಗ ಎ.೨೦ರ ಸಂಜೆ ಸಂಭವಿಸಿದೆ. ಬಜಾಲ್‌ನ ಹಿದಾಯತುಲ್ಲ ಅವರ ಪುತ್ರ ಮೊಹಮ್ಮದ್ ಜೀಶನ್ (6) ಮೃತಪಟ್ಟ ಬಾಲಕ. ಈತ ಸಂಜೆ 6 ಗಂಟೆಯ ಸುಮಾರಿಗೆ ದೈವಸ್ಥಾನದ ಹಿಂಭಾಗದ ರಸ್ತೆಯ ಕೆರೆಯ ಬಳಿ ಸೈಕಲ್‌ನಲ್ಲಿ ಆಡುತ್ತಿದ್ದಾಗ ಟಿಪ್ಪರ್ ಢಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಕ ಸೈಕಲ್ ನಲ್ಲಿ ಮನೆಯ ಬಳಿ ರಸ್ತೆಯಲ್ಲಿ ಆಟವಾಡುತ್ತಿದ್ದಾಗ ಅದೇ ಮಾರ್ಗದಲ್ಲಿ

ಮಂಗಳೂರು: ಟಿಪ್ಪರ್ ಡಿಕ್ಕಿ ಹೊಡೆದು ಬಾಲಕ ದುರ್ಮರಣ Read More »

ಹುಣಸೂರು: ಭೀಕರ ಅಪಘಾತದಲ್ಲಿ ಆರು ಜನ ಸ್ಥಳದಲ್ಲೇ ಸಾವು; ಮೂವರು ಗಂಭೀರ

ಸಮಗ್ರ ನ್ಯೂಸ್: ಮದುವೆ ಮುಗಿಸಿಕೊಂಡು ವಾಪಾಸ್ ತೆರಳುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಬುಲೆರೋ ವಾಹನವೊಂದು ಮರಕ್ಕೆ ಡಿಕ್ಕಿಯಾಗಿ ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮೈಸೂರಿನ ಹುಣಸೂರು ತಾಲೂಕಿನ ಅರಸು ಕಲ್ಲಹಳ್ಳಿ ಬಳಿ ನಡೆದಿದೆ. ಅಪಘಾತದಲ್ಲಿ ಆರು ಜನರು ಸ್ಥಳದಲ್ಲೇ ಸಾವನ್ನಪ್ಪಿದರೆ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕೊಡಗು ಜಿಲ್ಲೆಯ ಪಾಲಿಬೆಟ್ಟ ಗ್ರಾಮದವರು ಮೈಸೂರಿನಲ್ಲಿದ್ದ ಮದುವೆ ಕಾರ್ಯಕ್ರಮ ಮುಗುಸಿಕೊಂಡು ಬೊಲೆರೋ ವಾಹನದಲ್ಲಿ ವಾಪಾಸ್ ತಮ್ಮೂರಿಗೆ ತೆರಳುತ್ತಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ವಾಹನ ಮರಕ್ಕೆ ಡಿಕ್ಕಿಯಾಗಿ

ಹುಣಸೂರು: ಭೀಕರ ಅಪಘಾತದಲ್ಲಿ ಆರು ಜನ ಸ್ಥಳದಲ್ಲೇ ಸಾವು; ಮೂವರು ಗಂಭೀರ Read More »