ಕ್ರೈಂ

ಪ್ರಿಯಕರನೊಂದಿಗೆ ಹಸೆಮಣೆ ಏರಿದ ಪತ್ನಿ| ನೇಣಿಗೆ ಕೊರಳೊಡ್ಡಿದ ಪತಿ

ಸಮಗ್ರ ನ್ಯೂಸ್: ಪ್ರಿಯಕರನೊಂದಿಗೆ ಪತ್ನಿ ವಿವಾಹವಾದ ಹಿನ್ನಲೆ ಮನನೊಂದ ಪತಿ ನೇಣಿಗೆ ಶರಣಾದ ಘಟನೆ ಹುಣಸೂರಿನ ಕೊಯಮತ್ತೂರು ಕಾಲೋನಿಯಲ್ಲಿ ನಡೆದಿದೆ. ಸುರೇಶ್ ಕುಮಾರ್(37) ಮೃತ ದುರ್ದೈವಿ. 7 ವರ್ಷದ ಹಿಂದೆ ನೇತ್ರಾ ಜೊತೆ ವಿವಾಹವಾಗಿದ್ದ ಸುರೇಶ್ ಕುಮಾರ್ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಅನ್ಯೋನ್ಯ ಸಂಸಾರ ತೂಗಿಸುತ್ತಿದ್ದ. ಮಾರಿಷಸ್ ಸ್ಪಿನ್ನಿಂಗ್ ಫ್ಯಾಕ್ಟರಿಗೆ ಕೆಲಸಕ್ಕೆ ಹೋಗುತ್ತಿದ್ದ ನೇತ್ರಾ ಒಂದೂವರೆ ತಿಂಗಳ ಹಿಂದೆ ನಾಪತ್ತೆಯಾಗಿದ್ದಳು. ಹುಣಸೂರು ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ದೂರು ದಾಖಲಿಸಲಾಗಿತ್ತು. ತನಿಖೆ ನಡೆಸಿದ ಹುಣಸೂರು ಪೊಲೀಸರಿಗೆ ನೇತ್ರಾ ಶಿವಮೊಗ್ಗದಲ್ಲಿ […]

ಪ್ರಿಯಕರನೊಂದಿಗೆ ಹಸೆಮಣೆ ಏರಿದ ಪತ್ನಿ| ನೇಣಿಗೆ ಕೊರಳೊಡ್ಡಿದ ಪತಿ Read More »

ಡಾ. ಡಿ ವೀರೇಂದ್ರ ಹೆಗ್ಗಡೆ ಬಗ್ಗೆ ಅಪಪ್ರಚಾರ ಪ್ರಕರಣ| ಜೈಲು ಸೇರಿದ ಕೆ.ಸೋಮನಾಥ ನಾಯಕ್

ಸಮಗ್ರ ನ್ಯೂಸ್: ಶ್ರೀಕ್ಷೇತ್ರ ಧರ್ಮಸ್ಥಳ ಮತ್ತು ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ವಿರುದ್ದ ಅಪಪ್ರಚಾರ ನಡೆಸಿದ ಹಿನ್ನೆಲೆಯಲ್ಲಿ ಬೆಳ್ತಂಗಡಿ ನ್ಯಾಯಾಲಯದ ತೀರ್ಪಿನಂತೆ ನಾಗರಿಕ ಸೇವಾ ಟ್ರಸ್ಟ್ ಅಧ್ಯಕ್ಷ ಕೆ.ಸೋಮನಾಥ ನಾಯಕ್ ಜೈಲು ಸೇರಿದ್ದಾರೆ. ಸುಧೀರ್ಘ ಕಾನೂನು ಹೋರಾಟದ ಬಳಿಕ ಸೋಮನಾಥ ನಾಯಕ್‌ಗೆ ಜೈಲು ಶಿಕ್ಷೆ ಖಾಯಂ ಆಗಿದೆ.‌ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ನಾಗರಿಕ ಸೇವಾ ಟ್ರಸ್ಟ್ ಅಧ್ಯಕ್ಷ ಕೆ.ಸೋಮನಾಥ ನಾಯಕ್, ಡಾ.ವೀರೇಂದ್ರ ಹೆಗ್ಗಡೆ ವಿರುದ್ಧ ಮಿತಿಗಿಂತ ಜಾಸ್ತಿ ಸ್ಥಿರಾಸ್ತಿ ಹೊಂದಿದ ಆರೋಪ ಮಾಡಿದ್ದರು. ಅಲ್ಲದೇ ಧರ್ಮಸ್ಥಳ ಮತ್ತು

ಡಾ. ಡಿ ವೀರೇಂದ್ರ ಹೆಗ್ಗಡೆ ಬಗ್ಗೆ ಅಪಪ್ರಚಾರ ಪ್ರಕರಣ| ಜೈಲು ಸೇರಿದ ಕೆ.ಸೋಮನಾಥ ನಾಯಕ್ Read More »

ಕಾಸರಗೋಡು: ವಿದ್ಯುತ್ ಕಂಬ ಏರಿದ ಮಾನಸಿಕ ಅಸ್ವಸ್ಥ|ಅವಾಂತರಕ್ಕೆ ಸುಸ್ತಾದ ಲೈನ್ ಮ್ಯಾನ್ ಗಳು…..!!

ಸಮಗ್ರ ನ್ಯೂಸ್: ಮಾನಸಿಕ ಅಸ್ವಸ್ಥನೊಬ್ಬ ವಿದ್ಯುತ್ ಕಂಬದ ಮೇಲೆ ಹತ್ತಿ ಕೇಬಲ್ ಮೇಲೆ ನಡೆದಾಡಿದ ಘಟನೆ ಕಾಞಂಗಾಡು ಸಮೀಪದ ಮಾವುಂಗಲ್‌ನಲ್ಲಿ ಎಂಬಲ್ಲಿ ನಡೆದಿದೆ. ಪುನರ್ವಸತಿ ಕೇಂದ್ರದಿಂದ ತಪ್ಪಿಸಿಕೊಂಡ ವ್ಯಕ್ತಿ ಶನಿವಾರ ಮಧ್ಯಾಹ್ನ ವಿದ್ಯುತ್ ಕಂಬ ಹತ್ತಲು ಪ್ರಾರಂಭಿಸಿದ್ದಾನೆ. ಈ ವೇಳೆ ನೋಡಿ ಸ್ಥಳೀಯರು ಕೂಡಲೇ ವಿದ್ಯುತ್ ಮಂಡಳಿಗೆ ತಿಳಿಸಿದ್ದಾರೆ, ಈ ಹಿನ್ನಲೆ ಆ ಲೈನ್ ನಿಂದ ಪವರ್ ತೆಗೆದಿದ್ದಾರೆ. ಮಾನಸಿಕ ಅಸ್ವಸ್ಥ ವಿದ್ಯುತ್ ಕಂಬ ಹತ್ತಿ ಬಳಿಕ ವಿದ್ಯುತ್‌ ಕೇಬಲ್‌ ಮೇಲೆ ನಡೆದುಕೊಂಡು ಸರ್ಕಸ್ ಮಾಡಿದ್ದಾನೆ. ಸ್ಥಳಕ್ಕ

ಕಾಸರಗೋಡು: ವಿದ್ಯುತ್ ಕಂಬ ಏರಿದ ಮಾನಸಿಕ ಅಸ್ವಸ್ಥ|ಅವಾಂತರಕ್ಕೆ ಸುಸ್ತಾದ ಲೈನ್ ಮ್ಯಾನ್ ಗಳು…..!! Read More »

ಸುಬ್ರಹ್ಮಣ್ಯ ಗ್ರಾ.ಪಂ. ಸದಸ್ಯೆ ನಾಪತ್ತೆ

ಸಮಗ್ರ ನ್ಯೂಸ್: ಕಡಬ ತಾಲೂಕಿನ ಸುಬ್ರಹ್ಮಣ್ಯ ಗ್ರಾ.ಪಂ. ಸದಸ್ಯೆ ಐನೆಕಿದು ಗ್ರಾಮದ ಮೂಕಮಲೆ ಮನೆಯ ಶಶಿಕಾಂತ್ ಎಂಬವರ ಪತ್ನಿ ಭಾರತಿ ಮೂಕಮಲೆ (33) ಎಂಬವರು ಅ.29 ರಂದು ಕಾಣೆಯಾಗಿರುವುದಾಗಿ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಭಾರತಿ ಅವರ ಪತಿ ದೂರು ನೀಡಿದ್ದು ಅ.29 ಮದ್ಯಾಹ್ನ ತನಕ ಕೆಲಸಕ್ಕೆ ಹೋಗಿ ಬಳಿಕ ಮರಳಿ ಮನೆಗೆ ಹೋಗಿ ಅವರ ತಾಯಿ ಸರಸ್ವತಿ ಹಾಗೂ ಅತ್ತೆ ಭವಾನಿ ಎಂಬವರ ಚಿಕಿತ್ಸೆಯ ಬಗ್ಗೆ ಕಾಣಿಯೂರು ಆಸ್ಪತ್ರೆಗೆ ಹೋಗಿದ್ದು, ಅಲ್ಲಿ ಪತಿಯ ತಾಯಿ

ಸುಬ್ರಹ್ಮಣ್ಯ ಗ್ರಾ.ಪಂ. ಸದಸ್ಯೆ ನಾಪತ್ತೆ Read More »

ಸ್ಯಾಂಡಲ್ ವುಡ್ ಗೆ ಮತ್ತೊಂದು ಆಘಾತ| ನಟ, ನಿರ್ದೇಶಕ ಸಯ್ಯದ್ ಅಶ್ರಫ್ ಹೃದಯಾಘಾತದಿಂದ ನಿಧನ

ಸಮಗ್ರ ನ್ಯೂಸ್: ಅಮ್ಮ ನಾಗಮ್ಮ ಸೇರಿದಂತೆ ಹಲವು ಧಾರಾವಾಹಿಗಳ ನಿರ್ದೇಶಕ, ನಟ ಸಯ್ಯದ್ ಅಶ್ರಫ್ (42) ಸೋಮವಾರ(ಅ.31) ರ ಮುಂಜಾನೆ 3 ಗಂಟೆಗೆ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಸಯ್ಯದ್ ಕನ್ನಡ ಕಿರುತೆರೆಯಲ್ಲಿ ನಟರಾಗಿ, ನಿರ್ದೇಶಕರಾಗಿ ಗುರುತಿಸಿಕೊಂಡಿದ್ದರು. ಅಮ್ಮ ನಾಗಮ್ಮ, ನಾಗಮಣಿ, ಪಾಂಡುರಂಗ, ಚಕ್ರವಾಕ, ತಕಧಿಮಿತಾ, ಅಳುಗುಳಿಮನೆ ಸೇರಿದಂತೆ ಹಲವು ಧಾರಾವಾಹಿಗಳಿಗೆ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಸಯ್ಯದ್ ಅಶ್ರಫ್ ನಿಧನಕ್ಕೆ ಬಿ.ಸುರೇಶ, ಶೈಲಜಾ ನಾಗ್ ಹಾಗೂ ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಅಧ್ಯಕ್ಷ ಎಸ್.ವಿ. ಶಿವಕುಮಾರ್ ಸೇರಿದಂತೆ ಹಲವರು ಸಂತಾಪ

ಸ್ಯಾಂಡಲ್ ವುಡ್ ಗೆ ಮತ್ತೊಂದು ಆಘಾತ| ನಟ, ನಿರ್ದೇಶಕ ಸಯ್ಯದ್ ಅಶ್ರಫ್ ಹೃದಯಾಘಾತದಿಂದ ನಿಧನ Read More »

ಗುಜರಾತ್ ತೂಗು ಸೇತುವೆ ದುರಂತ| 150 ರ ಸನಿಹಕ್ಕೆ ಸಾವಿನ ಸಂಖ್ಯೆ

ಸಮಗ್ರ ನ್ಯೂಸ್: ಜರಾತ್‌ನ ಮೊರ್ಬಿ ಪಟ್ಟಣದಲ್ಲಿ ಮಚು ನದಿಗೆ ಬ್ರಿಟಿಷರ ಕಾಲದ ಸೇತುವೆ ದುರಸ್ತಿಗೊಂಡ ವಾರಗಳಲ್ಲಿ ಕುಸಿದಿದ್ದು, ಮೃತರ ಸಂಖ್ಯೆ 137ಕ್ಕೆ ಏರಿದೆ. ಭಾನುವಾರ ಸಂಜೆ ಈ ಘಟನೆ ನಡೆದಿದ್ದು, ಛತ್ ಪೂಜೆಗೆ ಸಂಬಂಧಿಸಿದ ಕೆಲವು ಆಚರಣೆಗಳನ್ನು ಮಾಡಲು ಜನರು ಸಾಮೂಹಿಕವಾಗಿ ಸೇರಿದ್ದರು. ಅಪಘಾತದ ಸಮಯದಲ್ಲಿ ಸುಮಾರು 500 ಜನರು ಸೇತುವೆಯ ಮೇಲೆ ಇದ್ದರು ಎಂದು ವರದಿಯಾಗಿದೆ. ಸೋಮವಾರ ಬೆಳಗಿನ ಜಾವದವರೆಗೆ 137 ಜನರು ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಮೃತಪಟ್ಟವರಲ್ಲಿ ಹೆಚ್ಚಾಗಿ ಮಹಿಳೆಯರು ಮತ್ತು

ಗುಜರಾತ್ ತೂಗು ಸೇತುವೆ ದುರಂತ| 150 ರ ಸನಿಹಕ್ಕೆ ಸಾವಿನ ಸಂಖ್ಯೆ Read More »

ನಾಟಕ ಅಭ್ಯಾಸದ ವೇಳೆ ನೇಣಿಗೆ ಸಿಲುಕಿ ಬಾಲಕ ಸಾವು

ಸಮಗ್ರ ನ್ಯೂಸ್: ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ನ.1ರಂದು ಶಾಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಮನೆಯಲ್ಲಿ ಅಭ್ಯಾಸ ಮಾಡುವ ವೇಳೆ ಆಕಸ್ಮಿಕವಾಗಿ ನೇಣು ಬಿಗಿದುಕೊಂಡು 12 ವರ್ಷದ ಸಂಜಯ ಗೌಡ ಎಂಬ ವಿದ್ಯಾರ್ಥಿ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ನಡೆದಿದೆ. ನಗರದ ಕೆಳಗೋಟೆ ನಿವಾಸಿಗಳಾದ ನಾಗರಾಜ್ ಮತ್ತು ಭಾಗ್ಯಲಕ್ಷ್ಮಿ ದಂಪತಿಯ ಪುತ್ರ ಸಂಜಯ್ ಗೌಡ (12) ಖಾಸಗಿ ಶಾಲೆಯಲ್ಲಿ 7 ನೇ ತರಗತಿ ಓದುತ್ತಿದ್ದು, ಶಾಲೆಯಲ್ಲಿ ನವಂಬರ್ 1 ರಂದು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಗತ್ ಸಿಂಗ್ ಪಾತ್ರ ನಿರ್ವಹಿಸುವ

ನಾಟಕ ಅಭ್ಯಾಸದ ವೇಳೆ ನೇಣಿಗೆ ಸಿಲುಕಿ ಬಾಲಕ ಸಾವು Read More »

ಗುಜರಾತ್ ನಲ್ಲೊಂದು ಘೋರ ದುರಂತ| ಕೇಬಲ್ ಸೇತುವೆ ಕುಸಿದು 400 ಮಂದಿ ನದಿಪಾಲು!!

ಸಮಗ್ರ ನ್ಯೂಸ್: ಗುಜರಾತ್ ನ ಮೊರ್ಬಿ ಜಿಲ್ಲೆಯಲ್ಲಿ ಭಾರೀ ದೊಡ್ಡ ದುರಂತವೊಂದು ಸಂಭವಿಸಿದ್ದು, ಇಲ್ಲಿನ ಮಚ್ಚು ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಕೇಬಲ್ ಸೇತುವೆ ಕುಸಿದಿದ್ದರಿಂದ ಸುಮಾರು 400ರಷ್ಟು ಜನರು ನದಿಗೆ ಬಿದ್ದಿರುವ ಬಗ್ಗೆ ವರದಿಯಾಗಿದೆ. ಸ್ಥಳೀಯ ಮಾಹಿತಿಗಳ‌ ಪ್ರಕಾರ, ಮಚ್ಚು ನದಿಗೆ ನಿರ್ಮಿಸಲಾದ ಈ ಕೇಬಲ್ ಸೇತುವೆ ಸಾಕಷ್ಟು ಹಳೆಯದಾಗಿದ್ದು, ಇದನ್ನು ಪಾರಂಪರಿಕ ಸೇತುವೆಯಲ್ಲಿ ಸೇರಿಸಲಾಗಿತ್ತು. ದೀಪಾವಳಿಯ ನಂತರ, ಗುಜರಾತಿ ಹೊಸ ವರ್ಷದಂದು ರಿಪೇರಿ ಮಾಡಿದ ನಂತರ ಅದನ್ನ ಮತ್ತೆ ಸೇತುವೆಯನ್ನು ಜನರ ಉಪಯೋಗಕ್ಕೆ ತೆರೆಯಲಾಗಿತ್ತು. ಸದ್ಯ

ಗುಜರಾತ್ ನಲ್ಲೊಂದು ಘೋರ ದುರಂತ| ಕೇಬಲ್ ಸೇತುವೆ ಕುಸಿದು 400 ಮಂದಿ ನದಿಪಾಲು!! Read More »

ಕಡಬ: ಗಾಂಜಾ ನಶೆಯಲ್ಲಿದ್ದ ಇಬ್ಬರ ಬಂಧನ

ಸಮಗ್ರ ನ್ಯೂಸ್: ಗಾಂಜಾ ಅಮಲಿನಲ್ಲಿ ತೇಲಾಡುತ್ತಿದ್ದ ಇಬ್ಬರು ಯುವಕರನ್ನು ಬಂಧಿಸಿರುವ ಘಟನೆ ದ.ಕ ಜಿಲ್ಲೆಯ ಕಡಬ ತಾಲೂಕಿನಲ್ಲಿ ನಡೆದಿದೆ. ಕಡಬ ಪೊಲೀಸರು ಇಬ್ಬರನ್ನು ಬಂಧಿಸಿದ್ದು ಉಳಿದವರ ಪತ್ತೆಗೆ ತನಿಖೆ ಮುಂದುವರಿಸಿದ್ದಾರೆ. ಕಡಬ ಠಾಣಾ ವ್ಯಾಪ್ತಿಯಲ್ಲಿ ಠಾಣಾ ಎಸೈ ಆಂಜನೇಯ ರೆಡ್ಡಿ ಗಸ್ತಿನಲ್ಲಿದ್ದಾಗ ಕಳಾರ ಸಮೀಪದ ಮಸೀದಿ ಬಳಿಯ ಅಂಗಡಿಯ ಪಕ್ಕದಲ್ಲಿ ಓರ್ವ ಗಾಂಜಾ ಸೇವಿಸಿ ತೂರಾಟ ನಡೆಸುತ್ತಿದ್ದ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಸ್ಥಳಕ್ಕೆ ತೆರಳಿದ್ದು,ಮಾದಕ ಸೇವಿಸಿರುವುದು ಅನುಮಾನ ಬರುತ್ತಿದ್ದಂತೆ ವಶಕ್ಕೆ ಪಡೆದು ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ

ಕಡಬ: ಗಾಂಜಾ ನಶೆಯಲ್ಲಿದ್ದ ಇಬ್ಬರ ಬಂಧನ Read More »

ಇಬ್ಬರ ಪ್ರಾಣ ಕಸಿದ ಬೈಕ್ ಸ್ಟ್ಯಾಂಡ್| ಹೆಲ್ಮೆಟ್ ನಿಂದ ಉಳಿಯಿತು ಮತ್ತೊಬ್ಬನ ಪ್ರಾಣ| ಮೂವರ ತಪ್ಪಿನಿಂದ‌‌ ನಡೆಯಿತು ಭೀಕರ ಅಪಘಾತ

ಸಮಗ್ರ ನ್ಯೂಸ್: ಬೈಕೊಂದರಲ್ಲಿ ಹೋಗುವಾಗ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಸಾವಿಗೀಡಾಗಿ, ಇನ್ನೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ. ಈ ಅಪಘಾತದಲ್ಲಿ ಸೈಡ್​ಸ್ಟ್ಯಾಂಡ್​​ನಿಂದಾಗಿ ಇಬ್ಬರು ಸಾವಿಗೀಡಾದರೆ, ಇನ್ನೊಬ್ಬನ ಪ್ರಾಣ ಹೆಲ್ಮೆಟ್​ನಿಂದಾಗಿ ಉಳಿದಿದೆ. ಬೆಂಗಳೂರಿನ‌ ಯಲಹಂಕ ಸಂಚಾರಿ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಎಚ್‌ಎಸ್‌ಆರ್ ಲೇಔಟ್ ನಿವಾಸಿಗಳಾದ ಅಮಿತ್ ಸಿಂಗ್ (29) ಮತ್ತು ಅಮೋಲ್ ಪ್ರಮೋದ್ ಆಮ್ಟೆ (29) ಸಾವಿಗೀಡಾದ ಹಿಂಬದಿ ಸವಾರರು. ಸವಾರ ಸೌರವ್ ದೇ (29) ಎಂಬಾತನ ಎಡಗೈ ಹಾಗೂ ತಲೆಗೆ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇಬ್ಬರ ಪ್ರಾಣ ಕಸಿದ ಬೈಕ್ ಸ್ಟ್ಯಾಂಡ್| ಹೆಲ್ಮೆಟ್ ನಿಂದ ಉಳಿಯಿತು ಮತ್ತೊಬ್ಬನ ಪ್ರಾಣ| ಮೂವರ ತಪ್ಪಿನಿಂದ‌‌ ನಡೆಯಿತು ಭೀಕರ ಅಪಘಾತ Read More »