ಕ್ರೈಂ

ಗೇರ್ ಬದಲಿಸುವ ಕೈಗೆ ತನ್ನ ಮನಸು ಕೊಟ್ಟ ಯುವತಿ| ಚಾಲನ ತರಬೇತಿಗೆ ತೆರಳಿದಾಕೆ ಚಾಲಕನ ವಿವಾಹವಾಗಿದ್ದೇ ರೋಚಕ!!

ಇಸ್ಲಾಮಾಬಾದ್: ಲವ್ ಸ್ಟೋರಿ ಎನ್ನುತ್ತಿದ್ದಂತೆ ಅನೇಕ ಸಿನಿಮಾ ಕಥೆಗಳು ಕಣ್ಣಮುಂದೆಯೇ ಹಾದುಹೋಗುತ್ತವೆ. ಅಲ್ಲಿ ಪ್ರತಿ ಹುಟ್ಟುವ ಕ್ಷಣಗಳು ಕಣ್ಣಿನಲ್ಲಿ ಸೆರೆಯಾಗುತ್ತವೆ. ಹಾಗೆಯೇ ಇಲ್ಲೊಬ್ಬಳು ಯುವತಿ ಕಾರು ಚಾಲಕ ಗೇರ್ ಬದಲಿಸುವ ಶೈಲಿಗೆ ಬೋಲ್ಡ್ ಆಗಿ, ಅವನನ್ನೇ ಮದುವೆಯಾಗಿದ್ದಾಳೆ. ಪಾಕಿಸ್ತಾನದ 17ರ ಯುವತಿ, ತನಗೆ ವಾಹನ ಚಾಲನೆ ಹೇಳಿಕೊಡುವ 21 ವರ್ಷದ ಚಾಲಕನನ್ನೇ ಮದುವೆಯಾಗಿದ್ದಾಳೆ. ಅದಕ್ಕೆ ಆತನ ಆಸ್ತಿ, ಜನಪ್ರಿಯತೆ, ದೇಹದಾರ್ಡ್ಯ, ಅಥವಾ ಆಕರ್ಷಕ ವ್ಯಕ್ತಿತ್ವ ಮುಂತಾದವು ಕಾರಣವಲ್ಲ. ಆತ ಕಾರಿನ ಗೇರ್ ಬದಲಿಸುವ ಶೈಲಿಗೆ ಪ್ರೀತಿಯಲ್ಲಿ ಬಿದ್ದು, […]

ಗೇರ್ ಬದಲಿಸುವ ಕೈಗೆ ತನ್ನ ಮನಸು ಕೊಟ್ಟ ಯುವತಿ| ಚಾಲನ ತರಬೇತಿಗೆ ತೆರಳಿದಾಕೆ ಚಾಲಕನ ವಿವಾಹವಾಗಿದ್ದೇ ರೋಚಕ!! Read More »

ಉದ್ಯಮಿ ಸೋಗಿನಲ್ಲಿ ಮಹಿಳೆಯರಿಗೆ ವಂಚನೆ|ಶ್ರೀಮಂತರೇ ಈತನ ಟಾರ್ಗೆಟ್

ಸಮಗ್ರ ನ್ಯೂಸ್: ಉದ್ಯಮಿ ಸೋಗಿನಲ್ಲಿ ಶ್ರೀಮಂತ ಮಹಿಳೆಯರನ್ನ ಪರಿಚಯಿಸಿಕೊಂಡು ಮದುವೆಯಾಗಿ ಹಣ ಚಿನ್ನಾಭರಣ ಪಡೆದು ಎಸ್ಕೇಪ್ ಆಗುವ ಯುವಕನ ವಿರುದ್ದ ಮೈಸೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡಿವೋರ್ಸ್ ಆದವರು ಮತ್ತು 40 ವರ್ಷ ಮೇಲ್ಪಟ್ಟ ಅವಿವಾಹಿತ ಮಹಿಳೆಯರನ್ನ ಟಾರ್ಗೆಟ್ ಮಾಡಿಕೊಳ್ಳುತ್ತಿದ್ದ ಖದೀಮ ಹಲವಾರು ಮಹಿಳೆಯರಿಗೆ ವಂಚಿಸಿ ಎಸ್ಕೇಪ್ ಆಗಿದ್ದಾನೆ. ಕೇರಳ ಮೂಲದ ನಿವಾಸಿ ಸುನೀಶ್ ಪಿಳ್ಳೆ(33)ವಿರುದ್ದ ಮೈಸೂರು ನಗರ ಮಹಿಳಾ ಪೊಲೀಸ್ ಠಾಣೆಯಲ್ಲಿ ಮಹಿಳೆಯೋಬ್ಬರು ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಮೈಸೂರಿನ ವಿಜಯ ನಗರ

ಉದ್ಯಮಿ ಸೋಗಿನಲ್ಲಿ ಮಹಿಳೆಯರಿಗೆ ವಂಚನೆ|ಶ್ರೀಮಂತರೇ ಈತನ ಟಾರ್ಗೆಟ್ Read More »

ಪಾಠಕ್ ಡೆವಲಪರ್ಸ್ ಮಾಲೀಕ ಶ್ರೀಹರಿ ಪಾಠಕ್ ಬಂಧನ| 17 ವಾರೆಂಟ್ ಜಾರಿಯಾಗಿದ್ದರೂ ತಲೆಮರೆಸಿಕೊಂಡಿದ್ದ ಆರೋಪಿ

ಸಮಗ್ರ ನ್ಯೂಸ್: ಮೈಸೂರಿನ ಪಾಠಕ್ ಡೆವಲಪರ್ಸ್ ನ ಮಾಲೀಕ ಶ್ರೀಹರಿ ಪಾಠಕ್ ರನ್ನ ಸಿಸಿಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಪಾರ್ಟ್ ಮೆಂಟ್ ನಲ್ಲಿ ಮನೆ ಕೊಡುವುದಾಗಿ ನಂಬಿಸಿ ಹಲವರಿಂದ ಮುಂಗಡ ಹಣ ಪಡೆದುಕೊಂಡು ವಂಚಿಸಿದ್ದ ಶ್ರೀಹರಿ ಫಾಠಕ್ ವಿರುದ್ದ ವಿವಿದ ಪೊಲೀಸ್ ಠಾಣೆಗಳಲ್ಲಿ ಹಾಗೂ ಗ್ರಾಹಕ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿತ್ತು. ಘನ ನ್ಯಾಯಾಲಯದಲ್ಲಿ ಜಾಮೀನು ಪಡೆದ ಆರೋಪಿ ನಂತರ ವಿಚಾರಣೆಗೆ ಹಾಜರಾಗಿರಲಿಲ್ಲ. ತಲೆ ಮರೆಸಿಕೊಂಡ ಆರೋಪಿಯನ್ನ ಬಂಧಿಸಿ ಹಾಜರುಪಡಿಸುವಂತೆ ಘನ ನ್ಯಾಯಾಲಯ ಪೊಲೀಸರಿಗೆ ಸೂಚನೆ ನೀಡಿತ್ತು. 17

ಪಾಠಕ್ ಡೆವಲಪರ್ಸ್ ಮಾಲೀಕ ಶ್ರೀಹರಿ ಪಾಠಕ್ ಬಂಧನ| 17 ವಾರೆಂಟ್ ಜಾರಿಯಾಗಿದ್ದರೂ ತಲೆಮರೆಸಿಕೊಂಡಿದ್ದ ಆರೋಪಿ Read More »

ಮುರುಘಾಮಠದ ಶ್ರೀಗಳು ಲೈಂಗಿಕವಾಗಿ ಸಮರ್ಥರಾ? ಇಲ್ಲಿದೆ ಪುರುಷತ್ವ ಪರೀಕ್ಷೆಯ ಡೀಟೈಲ್ಸ್…

ಸಮಗ್ರ ನ್ಯೂಸ್: ಚಿತ್ರದುರ್ಗದ ಮುರುಘಾ ಶ್ರೀಗಳ ವಿರುದ್ಧ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಮುರುಘಾ ಶ್ರೀಗಳ ಪುರುಷತ್ವ ಪರೀಕ್ಷೆ ನಿನ್ನೆ(ನ.4) ನಡೆಸಲಾಗಿದೆ. ಇಂದು(ನ.5)ಅದರ ವರದಿ ಬಂದಿದ್ದು, ಮುರುಘಾ ಶ್ರೀಗಳು ಪಾಸ್ ಆಗಿದ್ದಾರೆ ಎನ್ನಲಾಗಿದೆ. ಆದರೆ‌ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳಬೇಕಾಗಿದೆ. ನಿನ್ನೆ ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಮುರುಘಾ ಶ್ರೀಗಳ ಪುರುಷತ್ವ ಪರೀಕ್ಷೆ ನಡೆದಿದ್ದು, ಬಳಿಕ ಮುರುಘಾ ಶ್ರೀಗಳನ್ನು ಡಿವೈಎಸ್ಪಿ ಕಚೇರಿಗೆ ಹಾಜರುಪಡಿಸಲಾಗಿತ್ತು. ಇನ್ನೂ, ಮುರುಘಾ ಶ್ರೀ ವಿರುದ್ಧ 2 ನೇ ಪೋಕ್ಸೋ ಕೇಸ್ ಹಿನ್ನೆಲೆ ಮುರುಘಾ ಶರಣರ ನ್ಯಾಯಾಂಗ

ಮುರುಘಾಮಠದ ಶ್ರೀಗಳು ಲೈಂಗಿಕವಾಗಿ ಸಮರ್ಥರಾ? ಇಲ್ಲಿದೆ ಪುರುಷತ್ವ ಪರೀಕ್ಷೆಯ ಡೀಟೈಲ್ಸ್… Read More »

ಕಾಟಿಪಳ್ಳ: ಪೇರೆಂಟ್ಸ್ ಮೀಟಿಂಗ್ ನಲ್ಲಿ ಶಿಕ್ಷಕಿಗೆ ಹಲ್ಲೆಗೈದ ಯುವಕ!

ಸಮಗ್ರ ನ್ಯೂಸ್: ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕಾಟಿಪಳ್ಳ 2ನೇ ಬ್ಲಾಕ್ ಶಂಶುದ್ದೀನ್ ಸರ್ಕಲ್ ಬಳಿಯ ನೂರ್ ಹುದಾ ಶಿಕ್ಷಣ ಸಂಸ್ಥೆಯ ತರಗತಿ ಕೊಠಡಿಯೊಳಕ್ಕೆ ಪೇರೆಂಟ್ಸ್ ಮೀಟಿಂಗ್ ನಡೆಯುತ್ತಿದ್ದ ಸಂದರ್ಭ ಯುವಕನೋರ್ವ ಶಿಕ್ಷಕಿ ಮೇಲೆ ಹಲ್ಲೆಗೈದ ಘಟನೆ ಶುಕ್ರವಾರ ನಡೆದಿದೆ. ಕಾಟಿಪಳ್ಳ ನಾರಾಯಣಗುರು ಶಾಲೆಯ ಬಳಿ ನಿವಾಸಿ ಚಂದ್ರಕಲಾ ಗಾಯಗೊಂಡು ಸುರತ್ಕಲ್ ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಆರೋಪಿಮುಹಮ್ಮದ್ ಹನೀಫ್ ಪ್ರಕರಣದ ಆರೋಪಿಯಾಗಿದ್ದಾನೆ.ಚಂದ್ರಕಲಾ ಅವರು ಪರಿಚಯದ ನೆಲೆಯಲ್ಲಿ ಹನೀಫ್ ನ ಪತ್ನಿಗೆ ಸಾಲ ನೀಡಿದ್ದು ಅದನ್ನು

ಕಾಟಿಪಳ್ಳ: ಪೇರೆಂಟ್ಸ್ ಮೀಟಿಂಗ್ ನಲ್ಲಿ ಶಿಕ್ಷಕಿಗೆ ಹಲ್ಲೆಗೈದ ಯುವಕ! Read More »

ಅಂಬಾರಿ ಹೊರುವ ಆನೆ ಅಭಿಮನ್ಯುವನ್ನು ಕಾರ್ಯಾಚರಣೆಗೆ ಬಳಸುವುದು ಸರಿಯಲ್ಲ:ಪರಿಸರವಾದಿ ವಿಕ್ರಂ ಅಸಮಾಧಾನ

ಕೊಟ್ಟಿಗೆಹಾರ: ಅಂಬಾರಿ ಹೊರುವ ಆನೆ ಅಭಿಮನ್ಯುವನ್ನು ಕಾಡಾನೆ ಕಾರ್ಯಾಚರಣೆಗೆ ಬಳಸುವುದು ಸರಿಯಲ್ಲ ಎಂದು ಪರಿಸರವಾದಿ ಹಾಗೂ ಕರ್ನಾಟಕ ರಾಜ್ಯ ಕಾಡಾನೆಗಳ ಸಂರಕ್ಷಣಾ ಸಂಘದ ಅಧ್ಯಕ್ಷ ವಿಕ್ರಂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಹೇಳಿಕೆ ನೀಡಿರುವ ಅವರು,ಅಭಿಮನ್ಯು ಆನೆ ಈ ದೇಶದ ಆಸ್ತಿ. ಬುದ್ದಿವಂತ ಹಾಗೂ ವಿಶಿಷ್ಟ ಆನೆಯಾದ ಆನೆಯನ್ನು ಕಾರ್ಯಾಚರಣೆಗೆ ಬಳಸಿಕೊಳ್ಳುವುದು ಸರಿಯಲ್ಲ. ಊರುಬಗೆಯಲ್ಲಿ ಕಾಡಾನೆ ಸೆರೆಗೆ ಅಭಿಮನ್ಯು ವನ್ನು ಕರೆ ತಂದಿದ್ದು ಅಭಿಮನ್ಯು ವಿಗೆ ಜ್ವರ ಹಾಗೂ ನಿರ್ಜಲೀಕರಣ ಪ್ರಾರಂಭವಾಗಿದೆ. ಅರಣ್ಯ ಇಲಾಖೆ ಈ ಬಗ್ಗೆ

ಅಂಬಾರಿ ಹೊರುವ ಆನೆ ಅಭಿಮನ್ಯುವನ್ನು ಕಾರ್ಯಾಚರಣೆಗೆ ಬಳಸುವುದು ಸರಿಯಲ್ಲ:ಪರಿಸರವಾದಿ ವಿಕ್ರಂ ಅಸಮಾಧಾನ Read More »

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ| ಸುಳ್ಯದಲ್ಲಿ ಮತ್ತೊಬ್ಬನ ಮನೆಗೆ ಎನ್ಐಎ ದಾಳಿ

ಸಮಗ್ರ ನ್ಯೂಸ್: ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಯದ ಗೂನಡ್ಕದಲ್ಲಿ ಮತ್ತೊಬ್ಬ ವ್ಯಕ್ತಿಯ ಮನೆಗೆ ಎನ್ಐಎ ಪೊಲೀಸರು ನ.5ರಂದು ದಾಳಿ ನಡೆಸಿದ್ದಾರೆ. ದಾಳಿಯಿಂದ ಮನೆಯನ್ನು ಗೂನಡ್ಕದ ಸಾಜಿದ್ ಐ ಜಿ ಯವರದು ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆಗತ್ಯ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಇಂದು ಮುಂಜಾನೆಯಿಂದಲೇ ಹಲವರ ಬೇಟೆಗೆ ಇಳಿದ ಎನ್ಐಎ ಪೊಲೀಸರು ಎಸ್ಡಿಪಿಐ ಪ್ರಮುಖರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ| ಸುಳ್ಯದಲ್ಲಿ ಮತ್ತೊಬ್ಬನ ಮನೆಗೆ ಎನ್ಐಎ ದಾಳಿ Read More »

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ| ಎನ್ಐಎನಿಂದ ಶಾಫಿ ಬೆಳ್ಳಾರೆ ಸೇರಿ ಮೂವರ ಬಂಧನ

ಸಮಗ್ರ ನ್ಯೂಸ್: ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಸಂಬಂಧ ರಾಜ್ಯದ ಹಲವೆಡೆ ಬೆಳ್ಳಂಬೆಳಗ್ಗೆ ಎನ್ ಐಎ ಅಧಿಕಾರಿಗಳು ಮತ್ತೆ ದಾಳಿ ನಡೆಸಿದ್ದು ಮೂವರನ್ನು ಬಂಧಿಸಿದ್ದಾರೆ. ಎನ್ ಐಎ ಅಧಿಕಾರಿಗಳು ರಾಜ್ಯದ ಹಲವಡೆ ಮತ್ತೆ ದಾಳಿ ನಡೆಸಿದ್ದು, ದಕ್ಷಿಣ ಕನ್ನಡ, ಮೈಸೂರು, ಹುಬ್ಬಳ್ಳಿ ಸೇರಿದಂತೆ ಹಲವಡೆ ನಿಷೇಧಿತ ಪಿಎಫ್ ಐ ಸಂಘಟನೆಯ ಮುಖಂಡರ ಮನೆಗಳ ಮೇಲೆ ಎನ್ ಐಎ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಸಂಬಂಧ ಎನ್ ಐ

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ| ಎನ್ಐಎನಿಂದ ಶಾಫಿ ಬೆಳ್ಳಾರೆ ಸೇರಿ ಮೂವರ ಬಂಧನ Read More »

ಶಿವಮೊಗ್ಗದಲ್ಲಿ ಮತ್ತೆ ಗುಂಡಿನ ಮೊರೆತ| ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಆರೋಪಿಗೆ ಫೈರಿಂಗ್

ಸಮಗ್ರ ನ್ಯೂಸ್: ಪ್ರಕರಣವೊಂದರ ಆರೋಪಿಯನ್ನು ಬಂಧಿಸಲು ತೆರಳಿದ್ದ ವೇಳೆಯಲ್ಲಿ ಪೊಲೀಸರ ಮೇಲೆಯೇ ಚಾಕುವಿನಿಂದ ಹಲ್ಲೆಗೆ ಯತ್ನಿಸಿದ ಆರೋಪಿ ಮೇಲೆ ಪೊಲೀಸರು ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದಾರೆ. ಶಿವಮೊಗ್ಗ ಹೊರವಲಯದ ಪುರಲೆಯಲ್ಲಿ ಅಸ್ಲಾಂ ಎಂಬುವನ ಬಲಗಾಲಿಗೆ ಗುಂಡು ಹಾರಿಸಲಾಗಿದ್ದು ಆರೋಪಿ ಗಾಯಗೊಂಡಿದ್ದಾನೆ. ಅ. 30 ರಂದು ರಾತ್ರಿ ಶಿವಮೊಗ್ಗದ ಬಿಹೆಚ್ ರಸ್ತೆಯಲ್ಲಿ ಅಶೋಕ ಪ್ರಭು ಎಂಬುವರ ಮೇಲೆ ಹರಿತವಾದ ಆಯುಧದಿಂದ ಹಲ್ಲೆ ಮಾಡಲಾಗಿದ್ದು, ಗಾಯಾಳು ಅಶೋಕ್ ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಅಸ್ಲಾಂನನ್ನು ಬಂಧಿಸಲು

ಶಿವಮೊಗ್ಗದಲ್ಲಿ ಮತ್ತೆ ಗುಂಡಿನ ಮೊರೆತ| ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಆರೋಪಿಗೆ ಫೈರಿಂಗ್ Read More »

ಗಂಟಲಲ್ಲಿ ಆಮ್ಲೇಟ್ ಸಿಲುಕಿ ವ್ಯಕ್ತಿ ಸಾವು

ಸಮಗ್ರ ನ್ಯೂಸ್: ಕುಡಿಯಲು ಬಾರ್​​ಗೆ ಹೋದ ವ್ಯಕ್ತಿಯೊಬ್ಬ ಆಮ್ಲೆಟ್​​ ಗಂಟಲಿನಲ್ಲಿ ಸಿಕ್ಕಿಕೊಂಡ ಪರಿಣಾಮ ಮೃತಪಟ್ಟಿರುವ ದಾರುಣ ಘಟನೆ ಜನಗಾಮ ಜಿಲ್ಲೆಯ ಬಚನ್ನಪೇಟೆಯಲ್ಲಿ ನಡೆದಿದೆ. ಬಚ್ಚನ್ನಪೇಟೆಯ ಇದುಲಕಂತಿ ಭೂಪಾಲ್ ರೆಡ್ಡಿ (38) ಮೃತ ವ್ಯಕ್ತಿ. ಇವರು ಸ್ಥಳೀಯ ಮದ್ಯದ ಅಂಗಡಿಯೊಂದರಲ್ಲಿ ಕೊಠಡಿಯಲ್ಲಿ ಕುಳಿತು ಮದ್ಯ ಸೇವಿಸುತ್ತಿದ್ದರು. ಈ ವೇಳೆ, ತಿನ್ನುತ್ತಿದ್ದ ಆಮ್ಲೆಟ್ ಗಂಟಲಿನಲ್ಲಿ ಸಿಲುಕಿಕೊಂಡ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಗಂಟಲಲ್ಲಿ ಆಮ್ಲೇಟ್ ಸಿಲುಕಿ ವ್ಯಕ್ತಿ ಸಾವು Read More »