ಕ್ರೈಂ

ಭೂಸೇನೆ ಯೋಧ ಮಂಡ್ಯ ಮೂಲದ ಜನಾರ್ಧನ ಗೌಡ ಸಾವು

ಸಮಗ್ರ ನ್ಯೂಸ್: ಭೂಸೇನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದ ಕರ್ನಾಟಕದ ಯೋಧರೊಬ್ಬರು ಚಿಕಿತ್ಸೆಗೆ ಫಲಿಸದೇ ಮೃತಪಟ್ಟ ಘಟನೆ ನಡೆದಿದೆ. ಭೂಸೇನೆಯಲ್ಲಿ ಯೋಧನಾಗಿದ್ದ ಜನಾರ್ಧನ ಗೌಡ ಮೃತಪಟ್ಟಿದ್ದಾರೆ. ಮೃತ ಯೋಧ ಮಂಡ್ಯ ಜಿಲ್ಲೆಯ ಕೆ.ಆರ್‌.ಪೇಟೆ ತಾಲೂಕಿನ ಕಿಕ್ಕೇರಿ ಗ್ರಾಮದವರು ಎಂದು ತಿಳಿದು ಬಂದಿದೆ. ಎಂದಿನಂತೆ ತಮ್ಮ ಕೆಲಸದಲ್ಲಿ ನಿರತಾಗಿದ್ದ ಯೋಧ ಜನಾರ್ಧನ ಗೌಡ ಅವರಿಗೆ ಕಳೆದೊಂದು ವಾರದಿಂದ ಆರೋಗ್ಯದಲ್ಲಿ ಏರು ಪೇರಾಗಿತ್ತು. ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದರಿಂದ ಅವರನ್ನು ಛತ್ತೀಸ್‌ಗಢದ ಆಸ್ಪತ್ರೆಗೆಗೆ ದಾಖಲಾಗಿತ್ತು. ಚಿಕಿತ್ಸೆ ನೀಡುವ ಹಂತದಲ್ಲಿಯೇ ಅವರು […]

ಭೂಸೇನೆ ಯೋಧ ಮಂಡ್ಯ ಮೂಲದ ಜನಾರ್ಧನ ಗೌಡ ಸಾವು Read More »

ಗ್ಯಾರಂಟಿ ಯೊಜನೆಗಳಿಗೆ ಆಧಾರ್ ಲಿಂಕ್| ಹೆಚ್ಚಿದ ಒತ್ತಡದಿಂದ ಕಣ್ಣೀರು ಹಾಕಿದ ಮಹಿಳಾ ಸಿಬ್ಬಂದಿ

ಸಮಗ್ರ ನ್ಯೂಸ್: ಕಾಂಗ್ರೆಸ್ ಸರ್ಕಾರ ಘೋಷಿಸಿದ್ದ ಗ್ಯಾರಂಟಿ ಯೋಜನೆಗಳಿಗೆ ಆಧಾರ್‌ ಕಡ್ಡಾಯ ಮಾಡಿದ್ದು, ರಾಯಚೂರಿನ ಆಧಾರ್‌ ಕೇಂದ್ರದಲ್ಲಿ ತೀವ್ರ ಒತ್ತಡ ಹೆಚ್ಚಾಗಿ ಮಹಿಳಾ ಸಿಬ್ಬಂದಿ ಸಾರ್ವಜನಿಕರ ಎದುರೇ ಕಣ್ಣೀರು ಹಾಕಿರುವ ಘಟನೆ ನಡೆದಿದೆ. ನಗರದ ಅಂಚೆ ಕಚೇರಿಯಲ್ಲಿ ತೆರೆಯಲಾಗಿದ್ದ ಆಧಾರ್‌ ಕೇಂದ್ರದಲ್ಲಿಯೇ ಸಿಬ್ಬಂದಿ ಕಣ್ಣೀರು ಸುರಿಸಿರುವ ಘಟನೆ ನಡೆದಿದೆ. ವರ್ಕ್‌ ಲೋಡ್‌ ನಿಂದಾಗಿ ಮಹಿಳಾ ಸಿಬ್ಬಂದಿ ಕಣ್ಣೀರಿಟ್ಟ ವೀಡಿಯೋ ವೈರಲ್ ಆಗಿದೆ. ಆಧಾರ್‌ ಕೇಂದ್ರದಲ್ಲಿ ಆಧಾರ್ ಲಿಂಕ್ ಸೇರಿದಂತೆ ಹಲವಾರು ತಿದ್ದುಪಡಿ ಮಾಡಿಸುವುದಕ್ಕಾಗಿ ಜನಸಂದಣಿ ಹೆಚ್ಚಾಗಿದೆ. ಆದರೆ

ಗ್ಯಾರಂಟಿ ಯೊಜನೆಗಳಿಗೆ ಆಧಾರ್ ಲಿಂಕ್| ಹೆಚ್ಚಿದ ಒತ್ತಡದಿಂದ ಕಣ್ಣೀರು ಹಾಕಿದ ಮಹಿಳಾ ಸಿಬ್ಬಂದಿ Read More »

ಪ್ರೀತಿಯ ಮಿತ್ರನ ಜೊತೆ ಪತ್ನಿಯ ರಾಸಲೀಲೆಯ ನೋಡಿದ ಪತಿ| ಮುಂದೆ ನಡೆದದ್ದು ಮಾತ್ರ ಭೀಕರ..!

ಸಮಗ್ರ ನ್ಯೂಸ್: ಆತ್ಮೀಯ ಗೆಳೆಯ ಮತ್ತು ತನ್ನ ಪತ್ನಿಯ ರಾಸಲೀಲೆಯನ್ನು ಕಣ್ಣಾರೆ ನೋಡಿದ ಪತಿ ಇವರಿಬ್ಬರ ಸರಸಕ್ಕೆ ಬಲಿಯಾದ ಘಟನೆ ನಡೆದಿದೆ. ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಚಟ್ಟರಕಿ ಗ್ರಾಮದಲ್ಲಿ ಘಟನೆ ನಡೆದಿದೆ.ಆತ್ಮೀಯ ಗೆಳಯ ಅಬ್ಬಾಸ್ ಅಲಿ ಮತ್ತು ಪತ್ನಿ ರಾಜ್ಮಾಳ ರಾಸಲೀಲೆಯನ್ನ ಕಣ್ಣಾರೆ ಕಂಡ ಪತಿ ಸೈಫನ್ ಹತ್ಯೆಗೀಡಾಗಿದ್ದಾನೆ. ಕಳೆದ ತಿಂಗಳ ವಿಧಾನಸಭೆ ಮತದಾನದ ದಿನ ಮೇ 10 ರಂದು ಸೈಫನ್ ಮನೆಯಲ್ಲಿ ಫ್ಯಾನ್ ನ ಕರೆಂಟ್ ಶಾಕ್ ನಿಂದ ಸಾವಿಗೀಡಾದ ಬಗ್ಗೆ ತಿಳಿದು ಕುಟುಂಬಸ್ಥರು

ಪ್ರೀತಿಯ ಮಿತ್ರನ ಜೊತೆ ಪತ್ನಿಯ ರಾಸಲೀಲೆಯ ನೋಡಿದ ಪತಿ| ಮುಂದೆ ನಡೆದದ್ದು ಮಾತ್ರ ಭೀಕರ..! Read More »

ಚಿಕ್ಕಮಗಳೂರು: ನಿಧಿಗಾಗಿ 25 ಅಡಿ ಆಳದ ಗುಂಡಿ ತೋಡಿದ ದುಷ್ಕರ್ಮಿಗಳು

ಸಮಗ್ರ ನ್ಯೂಸ್: ದುಷ್ಕರ್ಮಿಗಳು ನಿಧಿಗಾಗಿ 25 ಅಡಿ ಆಳದ ಗುಂಡಿ ತೋಡಿದ ಘಟನೆ ಚಿಕ್ಕಮಗಳೂರು ತಾಲೂಕಿನ ಆಣೂರು ಸಮೀಪದ ಕೆಸರಿಕೆ‌ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಸಮೀದಪ ಅರಣ್ಯದಲ್ಲಿ 15 ಅಡಿ ಅಗಲ ಮತ್ತು 25 ಅಡಿ ಆಳದ ಗುಂಡಿಯನ್ನು ಗುರುವಾರ ರಾತ್ರಿ ತೋಡುತ್ತಿದ್ದರು. ನಿರ್ಜನ ಪ್ರದೇಶದಲ್ಲಿ ಬೆಳಕು ಕಂಡ ಗ್ರಾಮದ ಕೆಲವರು ಸ್ಥಳಕ್ಕೆ ತೆರಳಿದ್ದಾರೆ. ಜನ ಹತ್ತಿರಕ್ಕೆ ಬರುತ್ತಿದ್ದಂತೆ ಎಲ್ಲಾ ವಸ್ತುಗಳನ್ನು ಅಲ್ಲೇ ಬಿಟ್ಟು ಕಿಡಿಗೇಡಿಗಳು ಓಡಿ ಹೋಗಿದ್ದಾರೆ.ಸ್ಥಳದಲ್ಲಿ ಅರಿಶಿನಿ, ಕುಂಕುಮ, ಕುಂಬಳಕಾಯಿ, ತೆಂಗಿನ ಕಾಯಿ, ಬಲಿ

ಚಿಕ್ಕಮಗಳೂರು: ನಿಧಿಗಾಗಿ 25 ಅಡಿ ಆಳದ ಗುಂಡಿ ತೋಡಿದ ದುಷ್ಕರ್ಮಿಗಳು Read More »

ಪುಟಾಣಿಗಳ ನಡುವೆ ಹೊಡೆದಾಟ| ಪೋಷಕರೇ ‘ಡೇ ಕೇರ್ ‘ ಸೆಂಟರ್ ಗೆ ಕಳುಹಿಸುವ ಮುನ್ನ ಎಚ್ಚರ

ಸಮಗ್ರ ನ್ಯೂಸ್: ಪುಟ್ಟ ಮಕ್ಕಳನ್ನು ಡೇ ಕೇರ್​ ಸೆಂಟರ್ ಗೆ ಸೇರಿಸಿ ಕೆಲಸಕ್ಕೆ ಹೋಗುವುದು ಮಹಾನಗರಗಳಲ್ಲಿ ಮಾಮೂಲಿಯಾಗಿದೆ. ಆದರೆ ಈ ಡೇ ಕೇರ್​ನಲ್ಲಿನ ಸಿಬ್ಬಂದಿ ಮಕ್ಕಳನ್ನು ಹೇಗೆ ಕೇರ್ ಮಾಡುತ್ತಾರೆ ಅನ್ನುವ ಅನುಮಾನ ಮೂಡುವಂತ ಘಟನೆಯೊಂದು ಸದ್ಯ ಬೆಂಗಳೂರಿನಲ್ಲಿ ನಡೆದಿದೆ. ನಗರದ ಚಿಕ್ಕಲಸಂದ್ರದಲ್ಲಿರುವ ಡೇ ಕೇರ್ ಸೆಂಟರ್​ನಲ್ಲಿ ದೊಡ್ಡ ಮಗು ಇನ್ನೊಂದು ಸಣ್ಣ ಮಗುವಿಗೆ ಪದೇ ಪದೇ ಹೊಡೆದಿರುವಂತಹ ಘಟನೆ ನಡೆದಿದ್ದು, ಸದ್ಯ ವಿಡಿಯೋ ವೈರಲ್​ ಆಗಿದೆ. ಡೇ ಕೇರ್ ಸೆಂಟರ್ ಅಲ್ಲಿ ಮಕ್ಕಳನ್ನು ನೋಡಿಕೊಳ್ಳುತ್ತಿದ್ದ ಆಯಾ

ಪುಟಾಣಿಗಳ ನಡುವೆ ಹೊಡೆದಾಟ| ಪೋಷಕರೇ ‘ಡೇ ಕೇರ್ ‘ ಸೆಂಟರ್ ಗೆ ಕಳುಹಿಸುವ ಮುನ್ನ ಎಚ್ಚರ Read More »

ಅಪ್ರಾಪ್ತೆಯ ಅತ್ಯಾಚಾರ; ಆರೋಪಿ ಅಂದರ್

ಸಮಗ್ರ ನ್ಯೂಸ್: ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಅತ್ಯಾಚಾರ ಎಸಗಿರುವ ಪ್ರಕರಣ ಸುಳ್ಯ ತಾಲೂಕಿನ ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈಕೆ ಬೆಳ್ಳಾರೆಯ ಕೊಡಿಯಾಲ ಮೂಲದ ಬಾಲಕಿ ಎಂದು ಗುರುತಿಸಲಾಗಿದೆ. ಸುಬ್ರಹ್ಮಣ್ಯದ ಕಾಲೋಜೊಂದರಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ ಬಾಲಕಿಯನ್ನು ಪರಿಚಯದ ಯುವಕನೊಬ್ಬ ಪುಸಲಾಯಿಸಿ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ ಎಂದು ಬಾಲಕಿಯ ತಂದೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸದ್ಯ ಯುವಕನ ವಿರುದ್ಧ ಫೋಕ್ಸೋ ಕಾಯಿದೆಯಡಿ ಕೇಸು ದಾಖಲಾಗಿದೆ. ಯುವತಿಯನ್ನು ಅತ್ಯಾಚಾರ

ಅಪ್ರಾಪ್ತೆಯ ಅತ್ಯಾಚಾರ; ಆರೋಪಿ ಅಂದರ್ Read More »

ಕಡಬ: ಚಿನ್ನದ ಅಂಗಡಿ ಮಾಲೀಕ ಸಾವನ್ನಪ್ಪಿದ ಪ್ರಕರಣ| ಅನುಮಾನ ಬಗೆಹರಿಸಿದ ಪೋಸ್ಟ್ ಮಾರ್ಟಂ ವರದಿ| ಇಲ್ಲಿದೆ ಫುಲ್ ಡೀಟೈಲ್ಸ್

ಸಮಗ್ರ ನ್ಯೂಸ್: ಚಿನ್ನದ ಅಂಗಡಿಯ ಉದ್ಘಾಟನೆಯ ದಿನ ಗುಂಡ್ಯ ಸಮೀಪದ ಕೆಂಪು ಹೊಳೆಯ ಸಮೀಪ ಮೃತಪಟ್ಟ ನಾಗಪ್ರಸಾದ್ ಪೋಸ್ಟ್ ಮಾರ್ಟಂ ವರದಿ ಬಂದಿದ್ದು, ಸಹಜ ರಸ್ತೆ ಅಪಘಾತಕ್ಕೆ ಬಲಿಯಾಗಿರುವುದಾಗಿ ತಿಳಿದು ಬಂದಿದೆ. ಐಶ್ವರ್ಯ ಗೋಲ್ಡ್ ಉದ್ಘಾಟನೆಗೂ ಮುನ್ನ ಕಡಬ ನಿವಾಸಿಯಾಗಿರುವ ದಯಾನಂದ ಆಚಾರ್ಯ ಅವರ ಪುತ್ರ ನಾಗಪ್ರಸಾದ್ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವುದು ಹಲವು ಊಹಾಪೋಹಗಳಿಗೆ ಕಾರಣವಾಗಿ ನಾಗಪ್ರಸಾದ್‌ ಸಾವಿನ ಸುತ್ತ ಅನುಮಾನದ ಹುತ್ತ ಬೆಳೆದಿತ್ತು. ಕಡಬ ತಾಲೂಕಿನ ಮರ್ದಾಳದ ಮಸೀದಿ ಬಿಲ್ಡಿಂಗ್ ನಲ್ಲಿ ನಾಗಪ್ರಸಾದ್ ಮಾಲೀಕತ್ವದ ಐಶ್ವರ್ಯ

ಕಡಬ: ಚಿನ್ನದ ಅಂಗಡಿ ಮಾಲೀಕ ಸಾವನ್ನಪ್ಪಿದ ಪ್ರಕರಣ| ಅನುಮಾನ ಬಗೆಹರಿಸಿದ ಪೋಸ್ಟ್ ಮಾರ್ಟಂ ವರದಿ| ಇಲ್ಲಿದೆ ಫುಲ್ ಡೀಟೈಲ್ಸ್ Read More »

ಉಪ್ಪಿನಂಗಡಿ: ಹೆರಿಗೆ ವೇಳೆ ರಕ್ತಸ್ರಾವದಿಂದ ತಾಯಿ ಸಾವನ್ನಪ್ಪಿದ ಪ್ರಕರಣ| ಅಮ್ಮನ ಜೊತೆಗೇ ಸಾವಿನ ದಾರಿ ಹಿಡಿದ ಕಂದಮ್ಮ

ಸಮಗ್ರ ನ್ಯೂಸ್: ತೀವ್ರ ರಕ್ತಸ್ರಾವದಿಂದಾಗಿ ಬಾಣಂತಿ ಆಶಾ ಕಾರ್ಯಕರ್ತೆ ಮೃತಪಟ್ಟ ಬೆನ್ನಲ್ಲೇ ಇದೀಗ ಕೂಸು ಕೂಡ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಆಶಾ ಕಾರ್ಯಕರ್ತೆ ಭವ್ಯ(28) ಜೂ. 20ರಂದು ರಾತ್ರಿ ಹೆರಿಗೆ ಸಂದರ್ಭ ರಕ್ತಸ್ರಾವದಿಂದ ಸಾವನ್ನಪ್ಪಿದ್ದರು. ಇದರ ಬೆನ್ನಿಗೆ ಅವರ ಹಸುಕೂಸು ಗುರುವಾರ ಮುಂಜಾನೆ ಮೃತಪಟ್ಟಿದೆ ಎಂದು ತಿಳಿದುಬಂದಿದೆ. ಭವ್ಯರವರು ತನ್ನ 3ನೇ ಹೆರಿಗೆಗಾಗಿ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಕಳೆದ ಮಂಗಳವಾರ ರಾತ್ರಿ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದು, ಹೆರಿಗೆಯಾಗುತ್ತಲೇ ರಕ್ತಸ್ರಾವ ಉಂಟಾಗಿ ಸಾವನ್ನಪ್ಪಿದ್ದರು. ಜನಿಸಿದ

ಉಪ್ಪಿನಂಗಡಿ: ಹೆರಿಗೆ ವೇಳೆ ರಕ್ತಸ್ರಾವದಿಂದ ತಾಯಿ ಸಾವನ್ನಪ್ಪಿದ ಪ್ರಕರಣ| ಅಮ್ಮನ ಜೊತೆಗೇ ಸಾವಿನ ದಾರಿ ಹಿಡಿದ ಕಂದಮ್ಮ Read More »

ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ತಹಶಿಲ್ದಾರ್

ಸಮಗ್ರ ನ್ಯೂಸ್: ಗ್ರಾಮ ಲೆಕ್ಕಿಗರ ವರ್ಗಾವಣೆಗಾಗಿ 40 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಪಾಂಡವಪುರ ತಹಶೀಲ್ದಾರ್ ಕೆ.ಸಿ.ಸೌಮ್ಯ ಗುರುವಾರ ಸಂಜೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಕಳೆದ ನಾಲ್ಕುವರೆಗೆ ತಿಂಗಳಿಂದ ಪಾಂಡವಪುರ ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಕೆ.ಎಸ್.ಸೌಮ್ಯ ಅವರು ಇದೇ ತಾಲೂಕಿನಲ್ಲಿ ಗ್ರಾಮ ಲೆಕ್ಕಿಗರಾಗಿ ಕೆಲಸ‌ ನಿರ್ವಹಿಸುತ್ತಿದ್ದ ಮರಿಸ್ವಾಮಿ ಅವರ ಬೇರೆಡೆ ವರ್ಗಾವಣೆ ಮಾಡುವುದಕ್ಕಾಗಿ 40 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಪಾಂಡವಪುರ ತಹಶೀಲ್ದಾರ್ ಕಚೇರಿಯಲ್ಲಿ ಮರಿಸ್ವಾಮಿ ಅವರಿಂದ 40 ಸಾವಿರ ಲಂಚದ ಹಣ ಪಡೆಯುತ್ತಿದ್ದಾಗ

ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ತಹಶಿಲ್ದಾರ್ Read More »

ಬೆನ್ನು ನೋವು ಎಂದು ಬಂದ ಯುವತಿಯ ಪ್ರಾಣ ತೆಗೆದರಾ ಡಾಕ್ಟರ್!? |ಇಲ್ಲಸಲ್ಲದ ಚಿಕಿತ್ಸೆ ನೀಡಿ ಮನೆಗೆ ಶವ ಕಳುಹಿಸಿದ ಉಡುಪಿ ಸಿಟಿ ಆಸ್ಪತ್ರೆ

ಸಮಗ್ರ ನ್ಯೂಸ್:‌ ಬೆನ್ನು ನೋವು ಎಂದು ಹೋದ ಯುವತಿಗೆ ಇಲ್ಲಸಲ್ಲದ ಚಿಕಿತ್ಸೆ ಮಾಡಿ ಯುವತಿಯ ಜೀವ ತೆಗೆದಿದ್ದಾರೆ ಎನ್ನಲಾದ ಘಟನೆ ಉಡುಪಿಯ ಸಿಟಿ ಆಸ್ಪತ್ರೆಯಲ್ಲಿ ನಡೆದಿದೆ. ಮೃತ ಯುವತಿಯನ್ನು ನಿಖಿತಾ ಎಂದು ಗುರುತಿಸಲಾಗಿದೆ. ಈಕೆ ವಿದ್ಯಾರ್ಥಿಯಾಗಿದ್ದು ಕೆಲ ದಿನಗಳ ಹಿಂದೆ ಬೆನ್ನು ನೋವು ಎಂದು ಪರೀಕ್ಷೆ ಮಾಡಿಸಲು ಉಡುಪಿಯಲ್ಲಿರುವ ಸಿಟಿ ಆಸ್ಪತ್ರೆಗೆ ಹೋಗಿದ್ದಳು. ಈ ವೇಲೆ ಅಲ್ಲಿಯ ವೈದ್ಯರು ಆಕೆಯನ್ನು ಪರೀಕ್ಷೆ ಮಾಡಿ ನಿನಗೆ ಅರ್ನಿಯಾ, ಅಪೆಂಡಿಕ್ಸ್‌ ಇದೆ ಎಂದು ಇತ್ಯಾದಿ ಇಲ್ಲ ಸಲ್ಲದ ಗುಣಮಟ್ಟದ ಪರೀಕ್ಷೆಗಳನ್ನು

ಬೆನ್ನು ನೋವು ಎಂದು ಬಂದ ಯುವತಿಯ ಪ್ರಾಣ ತೆಗೆದರಾ ಡಾಕ್ಟರ್!? |ಇಲ್ಲಸಲ್ಲದ ಚಿಕಿತ್ಸೆ ನೀಡಿ ಮನೆಗೆ ಶವ ಕಳುಹಿಸಿದ ಉಡುಪಿ ಸಿಟಿ ಆಸ್ಪತ್ರೆ Read More »