ಕರಾವಳಿ

ಆಳ್ವಾಸ್ ಕಾಲೇಜಿನ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿ ಆತ್ಮಹತ್ಯೆ

ಸಮಗ್ರ ನ್ಯೂಸ್ : ದಕ್ಷಿಣ ಕನ್ನಡ ಜಿಲ್ಲೆ ಮೂಡಬಿದ್ರೆಯಲ್ಲಿರುವ ಆಳ್ವಾಸ್ ಕಾಲೇಜಿನ ಹಾಸ್ಟೆಲ್‌ನಲ್ಲಿ ಓರ್ವ ವಿದ್ಯಾರ್ಥಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಕೋಲಾರ ಮೂಲದ ಸಂಜಯ್ ಭುವನ್ (16) ಮೃತ ದುರ್ದೈವಿ. ಹಾಸ್ಟೆಲ್ ನಲ್ಲಿ ವಿದ್ಯಾರ್ಥಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಘಟನೆ ಮಾ.12 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ಘಟನೆ ತಿಳಿದು NSUI ನ ಜಿಲ್ಲಾಧ್ಯಕ್ಷ ಸುಹಾನ್ ನೇತೃತ್ವದಲ್ಲಿ ಕಾಲೇಜಿಗೆ ಮುತ್ತಿಗೆ ಹಾಕಲಾಯಿತು. ಸ್ಥಳದಲ್ಲಿ ಬಿಗಿವಿನ ಪರಿಸ್ಥಿತಿ ನಿರ್ಮಾಣವಾಗಿದೆ. ಪೊಲೀಸರು ಕಾಲೇಜು […]

ಆಳ್ವಾಸ್ ಕಾಲೇಜಿನ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿ ಆತ್ಮಹತ್ಯೆ Read More »

ಮೂಡುಬಿದ್ರೆ: ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ|ಶಿಕ್ಷಕನ ವಿರುದ್ಧ ದೂರು

ಸಮಗ್ರ ನ್ಯೂಸ್ : ಕಲ್ಲಮುಂಡ್ಕೂರು ಸರ್ಕಾರಿ ಅನುದಾನಿತ ಶಾಲೆಯ ಅಧ್ಯಾಪಕರೊಬ್ಬರ ವಿರುದ್ಧ ಲೈಂಗಿಕ ಕಿರುಕುಳ ಆರೋಪದಲ್ಲಿ ಪ್ರಕರಣ ದಾಖಲಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಆರೋಪಿಯನ್ನು ಶಾಲೆಯ ಸಹ ಅಧ್ಯಾಪಕ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದ ನಿವಾಸಿ ಗುರುವ ಮೊಗೇರಾ ಎಂದು ಗುರುತಿಸಲಾಗಿದೆ. ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿನಿಯರಿಗೆ ಅಧ್ಯಾಪಕ ಗುರುವ ಮೊಗೇರಾ ಅವರು ಲೈಂಗಿಕ ಕಿರುಕುಳ ನೀಡಿರುವ ಕುರಿತು ಶಾಲೆಯ ಮುಖ್ಯೋಪಾಧ್ಯಾಯ ಸದಾನಂದ ಅವರು ಮೂಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಫೆ.28ರಂದು ಹತ್ತನೇ ತರಗತಿಯ ಕೆಲವು

ಮೂಡುಬಿದ್ರೆ: ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ|ಶಿಕ್ಷಕನ ವಿರುದ್ಧ ದೂರು Read More »

ಬೆಳ್ತಂಗಡಿ: ಚಾನೆಲ್ ಕಚೇರಿಯಿಂದ ಲಕ್ಷಾಂತರ ಮೌಲ್ಯದ ಕ್ಯಾಮರಾ, ಸಿಸಿ ಕ್ಯಾಮರ, ನಗದು ದರೋಡೆ

ಸಮಗ್ರ ನ್ಯೂಸ್ : ಯೂಟ್ಯೂಬ್ ಚಾನೆಲ್ ಕಚೇರಿಗೆ ಬಂದ ವ್ಯಕ್ತಿಯೊಬ್ಬ ಲಕ್ಷಾಂತರ ರೂಪಾಯಿ ಮೌಲ್ಯದ ವೀಡಿಯೋ ಕ್ಯಾಮೆರಾ, ಸೀಸಿ ಟಿವಿ ಹಾಗೂ ಸಾವಿರಾರು ರೂಪಾಯಿ ನಗದು ದೋಚಿದ ಘಟನೆ ಬೆಳ್ತಂಗಡಿ ತಾಲೂಕಿನ ಸಂತೆಕಟ್ಟೆಯಲ್ಲಿ ನಡೆದಿದೆ. ಸವಣಾಲು ಗ್ರಾಮದ ನಿವಾಸಿ ಸುದೀಪ್ (24) ಎಂಬವರ ಯೂಟ್ಯೂಬ್ ಚಾನೆಲ್ ಕಚೇರಿಯಲ್ಲಿ ಈ ಕೃತ್ಯ ನಡೆದಿದ್ದು, ಆರೋಪಿಯನ್ನು ಪ್ರತೀಕ್ ಕೋಟ್ಯಾನ್ ಎಂದು ಗುರುತಿಸಲಾಗಿದೆ. ಸುದೀಪ್ ಅವರು ಸಂತೆಕಟ್ಟೆ ಸುವರ್ಣ ಆಕೇರ್ಡ್ ಸಂಕೀರ್ಣದಲ್ಲಿ ಯೂಟ್ಯೂಬ್ ಚಾನಲ್ ನಡೆಸುತ್ತಿದ್ದು, ಗುರುವಾರ ಸಂಜೆ ಆರೋಪಿ ಪ್ರತೀಕ್

ಬೆಳ್ತಂಗಡಿ: ಚಾನೆಲ್ ಕಚೇರಿಯಿಂದ ಲಕ್ಷಾಂತರ ಮೌಲ್ಯದ ಕ್ಯಾಮರಾ, ಸಿಸಿ ಕ್ಯಾಮರ, ನಗದು ದರೋಡೆ Read More »

ಕಡಬ: ಅನಾರೋಗ್ಯದಿಂದ ಹೂವಿನ ವ್ಯಾಪಾರಿ ಸಾವು

ಸಮಗ್ರ ನ್ಯೂಸ್ : ಇಲ್ಲಿನ ದುರ್ಗಾಂಬಿಕ ದೇವಸ್ಥಾನದ ಸಮೀಪ ವ್ಯಕ್ತಿಯೋರ್ವರು ಹಲವು ವರ್ಷಗಳಿಂದ ಹೂವಿನ ವ್ಯಾಪಾರ ಮಾಡುತ್ತಿದ್ದ ವ್ಯಾಪಾರಿಯೊಬ್ಬರು ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಘಟನೆ ನಡೆದಿದೆ. ಮೃತರು ಕಡಬದ ಹೊಯ್ಗೆಕೆರೆ ನಿವಾಸಿ ರಮೇಶ್ ಶೆಟ್ಟಿ ಹಲವು ಸಮಯಗಳಿಂದ ಮಾರಕ ಕಾಯಿಲೆಗೆ ತುತ್ತಾಗಿದ್ದ ಇವರು ನಿರಂತರವಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಕೆಲ ದಿನಗಳ ಹಿಂದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಅವರು ಮಾ.14 ರಂದು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿರುವುದಾಗಿ ಕುಟುಂಬ ಮೂಲಗಳು ತಿಳಿಸಿವೆ. ಇತ್ತೀಚೆಗೆ ಉತ್ಸಾಹಿ ಯುವಕರ ಕಾರುಣ್ಯ ಸೇವಾ

ಕಡಬ: ಅನಾರೋಗ್ಯದಿಂದ ಹೂವಿನ ವ್ಯಾಪಾರಿ ಸಾವು Read More »

ವಿಟ್ಲ: ಅಡಿಕೆ, ಕರಿಮೆಣಸು ಕಳ್ಳತನ|ಪ್ರಕರಣ ದಾಖಲು

ಸಮಗ್ರ ನ್ಯೂಸ್ : ಕೊಠಡಿಯಲ್ಲಿಟ್ಟಿದ್ದ ಅಡಿಕೆ ಮತ್ತು ಕರಿಮೆಣಸು ಕಳ್ಳತನ ವಾಗಿರುವ ಘಟನೆ ವಿಟ್ಲದ ಕೊಳ್ನಾಡು ಗ್ರಾಮದ ಕುಡ್ತಮುಗೇರು ಎಂಬಲ್ಲಿನ ಮನೆಯ ಸಮೀಪ ನಡೆದಿದೆ. ಕುಡ್ತಮುಗೇರು ಕೆ. ಅಣ್ಣು ಸಪಲ್ಯ (62) ಅವರು ಒಣಗಿಸಿ ಸುಲಿಯದ ಅಡಿಕೆ (ಅಂದಾಜು 150 ಕೆ.ಜಿ.) ಮತ್ತು 4 ಗೋಣಿಚೀಲದಲ್ಲಿ ಒಣಗಿದ ಕರಿಮೆಣಸು (ಅಂದಾಜು 30 ಕೆ.ಜಿ.)ಗಳನ್ನು ಸಂಗ್ರಹಿಸಿಟ್ಟಿದ್ದರು. ಕೊಠಡಿಯ ಬಾಗಿಲಿನ ಚಿಲಕವನ್ನು ಮುರಿದಿರುವುದು ಕಂಡು ಬಂದಿದ್ದು, ಪರಿಶೀಲಿಸಿದಾಗ, ಅಡಿಕೆ ಮತ್ತು ಕಾಳುಮೆಣಸು ಕಳ್ಳತನ ಆಗಿರುವುದು ತಿಳಿಯಿತು. ಕಳ್ಳತನವಾದ ಸೊತ್ತುಗಳ ಒಟ್ಟು

ವಿಟ್ಲ: ಅಡಿಕೆ, ಕರಿಮೆಣಸು ಕಳ್ಳತನ|ಪ್ರಕರಣ ದಾಖಲು Read More »

ಕಡಬ: ಅಕ್ರಮ ಮರಳು ಸಾಗಾಟ|ಇಬ್ಬರ ಸೆರೆ

ಸಮಗ್ರ ನ್ಯೂಸ್ : ಅಧಿಕಾರಿಗಳು ಕಂದಕ ನಿರ್ಮಿಸಿದ್ದರೂ ಅದನ್ನು ಮುಚ್ಚಿ ನೂಜಿಬಾಳ್ತಿಲ ಗ್ರಾಮದ ಇಚ್ಲಂಪಾಡಿ ಸೇತುವೆ ಅಡಿಭಾಗದಿಂದ ರಾಜರೋಷವಾಗಿ ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ ಇಬ್ಬರನ್ನು ವಾಹನ ಸಹಿತ ಕಡಬ ಪೆÇಲೀಸರು ವಶಕ್ಕೆ ಪಡೆದು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಕಡಬ ತಾಲೂಕು ನೂಳಿಬಾಳ್ತಿಲ ಗ್ರಾಮದ ಪ್ರಭಾಕರ ಮತ್ತು ಸಜಿ ಅಕ್ರಮ ಮರಳು ಸಾಗಾಟ ಮಾಡುತ್ತಿರುವಾಗ ಸಿಕ್ಕಿಬಿದ್ದ ಬಂಧಿತರು. ಕಡಬ ಠಾಣಾ ಎಸ್.ಐ ಅಭಿನಂದನ್ ಅವರು ಮಾ.14 ರ ನಸುಕಿನ ಜಾವ 03 ರ ಸುಮಾರಿಗೆ ನೂಜಿಬಾಳ್ತಿಲ

ಕಡಬ: ಅಕ್ರಮ ಮರಳು ಸಾಗಾಟ|ಇಬ್ಬರ ಸೆರೆ Read More »

ಪುತ್ತೂರು : ತೆಂಗಿನ ಮರದ ವಿಚಾರ| ಮಹಿಳೆಗೆ ಹಲ್ಲೆ, ಜೀವ ಬೆದರಿಕೆ

ಸಮಗ್ರ ನ್ಯೂಸ್ :ತೋಟದಲ್ಲಿದ್ದ ಮಹಿಳೆಯೊಬ್ಬರಿಗೆ ಪಕ್ಕದ ತೋಟದ ವ್ಯಕ್ತಿಯೊಬ್ಬರು ತೆಂಗಿನ ಮರದ ವಿಚಾರ ತೆಗೆದು ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿದ ಘಟನೆ ಇತ್ತೀಚೆಗೆ ಸಾಮೆತ್ತಡ್ಕದಲ್ಲಿ ನಡೆದಿದೆ. ಸಾಮೆತ್ತಡ್ಕ ನಿವಾಸಿ ಸಂತ್ರಸ್ತ ಮಹಿಳೆ ನೀಡಿದ ದೂರಿನಂತೆ ‘ಮಹಿಳೆಯ ತಂದೆಯ ಮರಣಾನಂತರ ಅವರ ಅಡಿಕೆ ಮತ್ತು ತೆಂಗಿನ ತೋಟವನ್ನು ನೋಡಿಕೊಳ್ಳುತ್ತಿದ್ದು, ಮಾ.13ರಂದು ಸಂಜೆ ಸಹೋದರ ಮುಹಮ್ಮದ್ ಮುಸ್ತಾಫ ಅವರೊಂದಿಗೆ ತೋಟಕ್ಕೆ ಹೋಗಿದ್ದ ಸಮಯ ನೌಫಲ್ ಎಂಬವರ ಮೂಲಕ ತೆಂಗಿನ ಮರದಿಂದ ಎಳನೀರು ಮತ್ತು ತೆಂಗಿನ ಕಾಯಿ ತೆಗೆಸುತ್ತಿದ್ದ ವೇಳೆ ಪಕ್ಕದ

ಪುತ್ತೂರು : ತೆಂಗಿನ ಮರದ ವಿಚಾರ| ಮಹಿಳೆಗೆ ಹಲ್ಲೆ, ಜೀವ ಬೆದರಿಕೆ Read More »

ಪುತ್ತೂರು: ಕೆಲಸದ ಆಮಿಷವೊಡ್ಡಿ ಯುವತಿಯ ಮೇಲೆ ಅತ್ಯಚಾರ: ಆರೋಪಿಗಳಿಬ್ಬರ ಬಂಧನ

ಸಮಗ್ರ ನ್ಯೂಸ್ : ಕೆಲಸದ ಆಮಿಷವೊಡ್ಡಿ ವಾಮಂಜೂರು ಮೂಲದ ಯುವತಿಯೊಬ್ಬಳನ್ನು ಪುತ್ತೂರಿಗೆ ಕರೆತಂದ ಇಬ್ಬರು ಯುವಕರು ಕೆಮ್ಮಯಿ ಸಮೀಪದ ಬಾಡಿಗೆ ಮನೆಯೊಂದರಲ್ಲಿ ಲೈಂಗಿಕ ದೌರ್ಜನ್ಯ ನಡೆಸಿ ಅತ್ಯಾಚಾರ ನಡೆಸಿ, ಆರೋಪಿಗಳು ಪರಾರಿಯಾಗಿದ್ದಾರೆ. ಅತ್ಯಾಚಾರಕ್ಕೊಳಗಾದ ಯುವತಿ ಅಸ್ವಸ್ತಗೊಂಡು ಕುಸಿದು ಬಿದ್ದಾಗ ಸ್ಥಳೀಯರ ಸಹಾಯದಿಂದ ಆಸ್ಪತ್ರೆಗೆ ದಾಖಲಿಸಿದಾಗ ಯುವಕರ ಈ ಕೃತ್ಯ ಬೆಳಕಿಗೆ ಬಂದಿದೆ. ಸಂತ್ರಸ್ತ ಯುವತಿಯ ದೂರಿನ ಆಧಾರದಲ್ಲಿ ಉಪ್ಪಿನಂಗಡಿ ಕರ್ವೇಲು ನಿವಾಸಿ ಮತ್ತು ಬಂಟ್ವಾಳ ತಾಲೂಕು ನಿವಾಸಿ ಇಬ್ಬರನ್ನು ಪುತ್ತೂರು ಮಹಿಳಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಯುವತಿಗೆ

ಪುತ್ತೂರು: ಕೆಲಸದ ಆಮಿಷವೊಡ್ಡಿ ಯುವತಿಯ ಮೇಲೆ ಅತ್ಯಚಾರ: ಆರೋಪಿಗಳಿಬ್ಬರ ಬಂಧನ Read More »

ಅಕ್ರಮ ನೀರು ಬಳಕೆ -ಮಂಗಳೂರು ಮೇಯರ್ ಎಚ್ಚರಿಕೆ

ಸಮಗ್ರ ನ್ಯೂಸ್ : ಮಂಗಳೂರು ಮಹಾನಗರ ಪಾಲಿಕೆಯ ಮುಖ್ಯ ಪೈಪ್‌ಲೈನ್‌ನಿಂದ ತುಂಬೆ ಮಾರ್ಗವಾಗಿ ಅಕ್ರಮವಾಗಿ ನೀರನ್ನು ತೆಗೆದುಕೊಂಡು ನೀರಾವರಿ ಮತ್ತು ವಾಣಿಜ್ಯ ಚಟುವಟಿಕೆಗಳಿಗೆ ಬಳಸುವ ವ್ಯಕ್ತಿಗಳ ವಿರುದ್ಧ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಅವರು ಕಠಿಣ ಎಚ್ಚರಿಕೆ ನೀಡಿದ್ದಾರೆ. ಈಗಾಗಲೇ ಹಲವಾರು ಅಕ್ರಮ ಸಂಪರ್ಕಗಳನ್ನು ಕಡಿತಗೊಳಿಸಲಾಗಿದೆ. ಎಂಸಿಸಿ ಕುಡಿಯುವ ನೀರು ಪೂರೈಕೆಗೆ ಪಡಿತರವನ್ನು ಆಯ್ಕೆ ಮಾಡುವುದಿಲ್ಲ ಎಂದು ಮೇಯರ್ ಶೆಟ್ಟಿ ಸುದ್ದಿಗಾರರಿಗೆ ಭರವಸೆ ನೀಡಿದರು. ಈ ಬೇಸಿಗೆಯಲ್ಲಿ ನಗರವು ನೀರಿನ ಕೊರತೆಯನ್ನು ಎದುರಿಸುವುದಿಲ್ಲ ಎಂಬ ವಿಶ್ವಾಸ ನಮಗಿದೆ.

ಅಕ್ರಮ ನೀರು ಬಳಕೆ -ಮಂಗಳೂರು ಮೇಯರ್ ಎಚ್ಚರಿಕೆ Read More »

ಬಂಟ್ವಾಳ: ಬೈಕ್-ಸ್ಕೂಟರ್ ಢಿಕ್ಕಿ|ನಾಲ್ವರಿಗೆ ಗಾಯ

ಸಮಗ್ರ ನ್ಯೂಸ್ : ಶಂಭೂರು ಶ್ರೀ ಷಣ್ಮುಖ ದೇವಸ್ಥಾನದ ದ್ವಾರದ ಬಳಿಯಲ್ಲಿ ಬೈಕ್ ಹಾಗೂ ಸ್ಕೂಟರ್ ಢಿಕ್ಕಿ ಹೊಡೆದುಕೊಂಡ ಪರಿಣಾಮ ಎರಡೂ ವಾಹನಗಳ ನಾಲ್ವರು ಸವಾರರು ಗಾಯಗೊಂಡಿರುವ ಘಟನೆ ನಡೆದಿದೆ. ಸ್ಕೂಟರ್ ಸವಾರ ಮಂಗಳೂರು ಅಳಪೆ ನಿವಾಸಿ ಉದಯಕುಮಾರ್ ಅವರು ಸಂಬAಧಿ ಸುಂದರ ಬಂಗೇರ ಅವರನ್ನು ಕುಳ್ಳಿರಿಸಿಕೊಂಡು ಹೋಗುತ್ತಿದ್ದಾಗ ಎದುರಿನಿಂದ ಬಂದ ಅಶ್ವತ್ಥ್ ಅವರು ಚಲಾಯಿಸುತ್ತಿದ್ದ ಬೈಕ್ ಢಿಕ್ಕಿ ಹೊಡೆದಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಘಟನೆಯಲ್ಲಿ ಎರಡು ಬೈಕ್‌ಗಳಲ್ಲಿದ್ದ ನಾಲ್ವರು ಗಾಯಗೊಂಡಿದ್ದು, ಸುಂದರ ಬಂಗೇರ ಅವರನ್ನು ಒಳರೋಗಿಯಾಗಿ

ಬಂಟ್ವಾಳ: ಬೈಕ್-ಸ್ಕೂಟರ್ ಢಿಕ್ಕಿ|ನಾಲ್ವರಿಗೆ ಗಾಯ Read More »