ಕರಾವಳಿ

ವಿದ್ಯುತ್ ಶಾಕ್: ನಿವೃತ್ತ ಶಿಕ್ಷಕ ಮೃತ್ಯು

ಕಾಸರಗೋಡು: ಮೋಟಾರ್ ಪಂಪ್ ಚಾಲೂ ಮಾಡುವಾಗ ವಿದ್ಯುತ್ ಶಾಕ್ ತಗಲಿ ನಿವೃತ್ತ ಶಿಕ್ಷಕ ಮೃತಪಟ್ಟ ಘಟನೆ ಜಿಲ್ಲೆಯ ಮಧೂರು ರಸ್ತೆಯ ಕೂಡ್ಲು ಎಂಬಲ್ಲಿ ನಡೆದಿದೆ. ಕೂಡ್ಲು ನಿವಾಸಿ ಮುರಳೀಧರ (೫೭) ಮೃತ ಶಿಕ್ಷಕ. ಇವರು ಪಟ್ಲ ಸರಕಾರಿ ಶಾಲೆಯಲ್ಲಿ ಹಿಂದಿ ಶಿಕ್ಷಕರಾಗಿದ್ದ ಒಂದು ವರ್ಷದ ಹಿಂದೆಯಷ್ಟೇ ನಿವೃತ್ತರಾಗಿದ್ದರು. ಇಂದು ಮಧ್ಯಾಹ್ನ ಮೋಟಾರ್ ಪಂಪ್ ಚಾಲೂ ಮಾಡುತ್ತಿದ್ದಾಗ ಶಾಕ್ ತಗಲಿ ಈ ದುರ್ಘಘಟನೆ ಸಂಭವಿಸಿದೆ.ಶಾಕ್ ತಗಲಿ ಗಂಭೀರ ಸ್ಥಿತಿಯಲ್ಲಿದ್ದ ಮುರಲೀಧರ ಅವರನ್ನು ಕೂಡಲೇ ಕಾಸರಗೋಡಿನ ಆಸ್ಪತ್ರೆಗೆ ಕರೆತಂದಿದ್ದು ಆಗಲೇ […]

ವಿದ್ಯುತ್ ಶಾಕ್: ನಿವೃತ್ತ ಶಿಕ್ಷಕ ಮೃತ್ಯು Read More »

ಬೋಟ್‌ನ ಎಂಜಿನ್ ವೈಫಲ್ಯ: ಮೀನುಗಾರರ ರಕ್ಷಣೆ

ಮಂಗಳೂರು: ಅರಬ್ಬಿ ಸಮುದ್ರದ ಮಧ್ಯ ಬೋಟ್ ಎಂಜಿನ್‌ನಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡು, ಸಮುದ್ರದಲ್ಲಿ ಸಿಲುಕಿದ್ದ ತಮಿಳುನಾಡಿನ ೧೦ ಮೀನುಗಾರರನ್ನು ಕರಾವಳಿ ಕಾವಲು ಪಡೆ ರಕ್ಷಿಸಿದೆ ಘಟನೆ ಇಂದು ನಡೆದಿದೆ. ತಮಿಳುನಾಡು ಮೂಲದ ಲಾರ್ಡ್ ಆಫ್ ಓಶಿಯನ್ ಹೆಸರಿನ ಬೋಟ್ ಆಳಸಮುದ್ರ ಮೀನುಗಾರಿಕೆಗೆಂದು ತೆರಳಿದ್ದ ವೇಳೆ ಇತ್ತೀಚೆಗೆ ತೌಕ್ತೆ ಚಂಡಮಾರುತ ಎದುರಾಗಿತ್ತು. ಚಂಡಮಾರುತದಿAದ ತಪ್ಪಿಸಿಕೊಳ್ಳಲು ಬೋಟ್ ಮೇ ೧೪ರಂದು ಗುಜರಾತ್ ಕರಾವಳಿಯ ಪೋರ್ ಬಂದರಿಗೆ ತೆರಳಿತ್ತು. ಮೇ ೧೯ರ ವರೆಗೂ ಪೋರ್ ಬಂದರಿನಲ್ಲಿದ್ದ ಬೋಟ್ ಬಳಿಕ ಸಮುದ್ರ ಮೂಲಕ

ಬೋಟ್‌ನ ಎಂಜಿನ್ ವೈಫಲ್ಯ: ಮೀನುಗಾರರ ರಕ್ಷಣೆ Read More »

ಪಂಪ್ವೆಲ್ ಫ್ಲೈಓವರ್ ಮೇಲೆ ಕಾರುಡಿಕ್ಕಿ: ಬೈಕ್ ಸವಾರ ಗಂಭೀರ

ಮಂಗಳೂರು: ಕಾರೊಂದು ದ್ವಿಚಕ್ರ ವಾಹನಕ್ಕೆ ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ಸವಾರ ಗಂಭೀರ ಗಾಯಗೊಂಡ ಘಟನೆ ಇಂದು ಬೆಳಗ್ಗೆ ನಗರದ ಪಂಪ್ ವೆಲ್ ನಲ್ಲಿ ನಡೆದಿದೆ. 7 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದ್ದು, ನಗರದ ಗೋರಿಗುಡ್ಡ ಕಡೆಯಿಂದ ನಂತೂರು ಕಡೆಗೆ ತೆರಳುತ್ತಿದ್ದ ದ್ವಿಚಕ್ರ ವಾಹನ ಫ್ಲೈಓವರ್ ಮೇಲೆ ಸಂಚರಿಸುತ್ತಿದ್ದ ವೇಳೆ, ವೇಗವಾಗಿ ಬಂದ ಕಾರು ಹಿಂದುಗಡೆಯಿಂದ ಬಂದು ಢಿಕ್ಕಿ ಹೊಡೆದು ಪಲ್ಟಿ ಹೊಡೆದಿದೆ ಎನ್ನಲಾಗಿದೆ. ಇದರಿಂದ ರಸ್ತೆಗೆಸೆಯಲ್ಪಟ್ಟ ದ್ವಿಚಕ್ರ ವಾಹನ ಸವಾರ ತೀವ್ರವಾಗಿ ಗಾಯಗೊಂಡಿದ್ದು ಸ್ಥಳೀಯ ಆಸ್ಪತ್ರೆಗೆ

ಪಂಪ್ವೆಲ್ ಫ್ಲೈಓವರ್ ಮೇಲೆ ಕಾರುಡಿಕ್ಕಿ: ಬೈಕ್ ಸವಾರ ಗಂಭೀರ Read More »

ಸುಳ್ಯ : ಮಾವಿನಕಾಯಿಯಿಂದ ಶುರುವಾದ ಅತ್ತೆ-ಸೊಸೆ ಜಗಳ ಮೆಣಸಿನ ಹುಡಿ ಯಲ್ಲಿ ಅಂತ್ಯ

ಸುಳ್ಯ: ಅತ್ತೆ ಮತ್ತು ಸೊಸೆಯ ಜಗಳ ಮಾವಿನ ಹಣ್ಣಿನಿಂದ ಶುರುವಾಗಿ ಕೊನೆಗೆ ಸೊಸೆ ಅತ್ತೆಯ ಮುಖಕ್ಕೆ ಮೆಣಸಿನ ಹುಡಿ ನೀರಿನಲ್ಲಿ ಬೆರೆಸಿ ಮುಖಕ್ಕೆ ಎರಚಿದ ಘಟನೆ ಸುಳ್ಯ, ಪೈಚಾರಿನಲ್ಲಿ ನಡೆದಿದೆ.ಪೈಚಾರ್ ನಿವಾಸಿ ಇಸ್ಮಾಯಿಲ್ ಎಂಬವರ ಪತ್ನಿ ಮೈಮೂನ ಕೃತ್ಯ ಎಸಗಿದ ಆರೋಪಿ. ಇವರು ಇಸ್ಮಾಯಿಲ್ ರವರ ತಾಯಿ ಮೇಲೆ ಬಿಸಿನೀರಿಗೆ ಮೆಣಸಿನ ಹುಡಿ ಬೆರೆಸಿ ಎರಚಿದ್ದಾರೆ. ಇಸ್ಮಾಯಿಲ್ ಮತ್ತು ಅಬ್ದುಲ್ ರವರು ಸಹೋದರರಾಗಿದ್ದು ಪೈಚಾರಿನಲ್ಲಿ ಅಕ್ಕಪಕ್ಕದಲ್ಲಿ ವಾಸಿಸುತ್ತಿದ್ದಾರೆ ಇವರ ತಾಯಿ ಅಬ್ದುಲ್ ರವರ ಮನೆಯಲ್ಲಿ ವಾಸಿಸುತ್ತಿದ್ದರು.ಈ ಸಹೋದರರ

ಸುಳ್ಯ : ಮಾವಿನಕಾಯಿಯಿಂದ ಶುರುವಾದ ಅತ್ತೆ-ಸೊಸೆ ಜಗಳ ಮೆಣಸಿನ ಹುಡಿ ಯಲ್ಲಿ ಅಂತ್ಯ Read More »

ಉಡುಪಿ : ಬೆಳ್ತಿಗೆ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ಪತ್ತೆ, ಸೂಕ್ತ ತನಿಖೆಗೆ ಒತ್ತಾಯ

ಉಡುಪಿ : ಜಿಲ್ಲೆಯ ಕಾರ್ಕಳ ತಾಲೂಕಿನ ಬೆಳ್ಮಣ್ ಪಂಚಾಯತ್  ವ್ಯಾಪ್ತಿಯ ಗ್ರಾಮಸ್ಥರಿಗೆ ನೀಡಲಾಗಿರುವ ಬೆಳ್ತಿಗೆ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ಪತ್ತೆಯಾಗಿದೆ. ಸರ್ಕಾರದ ಆಹಾರ ಇಲಾಖೆ ಮೂಲಕ ವಿತರಣೆಯಾಗುವ ಅಕ್ಕಿ ಬಹಳಷ್ಟು ಸಲ ಕಲಬೆರಕೆಯಿಂದ ಕೂಡಿರುವುದು ರಾಜ್ಯದ ಅಲ್ಲಲ್ಲಿ ಬೆಳಕಿಗೆ ಬರುತ್ತಿದೆ. ಅದೇ ರೀತಿ ಬೆಳ್ಮಣ್ ಪಂಚಾಯತ್  ವ್ಯಾಪ್ತಿಯ ಗ್ರಾಮಸ್ಥರಿಗೆ ನೀಡಲಾಗಿರುವ ಬೆಳ್ತಿಗೆ ಅಕ್ಕಿಯಲ್ಲಿ ಹೊಳೆಯುವ ಹರಳಿನ ರೂಪದ ವಸ್ತುಗಳು ಸಿಕ್ಕಿದೆ. ಅನ್ನ ಮಾಡಲು ಅಕ್ಕಿ ಶುಚಿಗೊಳಿಸುವಾಗ ಈ ಅಕ್ರಮ ಬೆಳಕಿಗೆ ಬಂದಿದ್ದು, ಎರಡು ಗೋಣಿಗಳಲ್ಲಿ ಬಂದ ಅಕ್ಕಿಯಲ್ಲಿ

ಉಡುಪಿ : ಬೆಳ್ತಿಗೆ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ಪತ್ತೆ, ಸೂಕ್ತ ತನಿಖೆಗೆ ಒತ್ತಾಯ Read More »

ಕರಾವಳಿ: ಸೋಂಕಿತರ ಸಂಖ್ಯೆ ಇಳಿಮುಖ, ಸಾವಿನ ಸಂಖ್ಯೆ ಏರಿಕೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ಮೇ.೨೬ ರಂದು ಒಂದೇ ದಿನ ಹನ್ನೊಂದು ಮಂದಿ ಬಲಿಯಾಗಿರುವ ಬಗ್ಗೆ ಜಿಲ್ಲಾಡಳಿತ ಮಾಹಿತಿ ನೀಡಿದೆ. ಸಾವಿನ ಸಂಖ್ಯೆಯಲ್ಲಿ ಒಂದೇ ಬಾರಿಗೆ ಏರಿಕೆಯಾಗಿದ್ದು ಆತಂಕ ಮೂಡಿಸಿದೆ.ಕಳೆದ ೨೪ ಗಂಟೆಗಳಲ್ಲಿ ಕೊರೊನಾ ಸೋಂಕಿಗೆ ೧೧ ಮಂದಿ ಸಾವನ್ನಪಿದ್ದು, ಜಿಲ್ಲೆಯಲ್ಲಿ ಈವರೆಗೆ ಬಲಿಯಾದವರ ಸಂಖ್ಯೆ ೮೮೪ ಕ್ಕೆ ಏರಿಕೆಯಾಗಿದೆ.ಇನ್ನು ಜಿಲ್ಲೆಯಲ್ಲಿ ಇದೇ ವೇಳೆ ೭೨೯ ಮಂದಿ ಕೊರೊನಾ ಪಾಸಿಟಿವ್ ಆಗಿದ್ದಾರೆ. ೭೫೬ ಮಂದಿ ಕೊರೊನಾದಿಂದ ಗುಣಮುಖರಾಗಿದ್ದಾರೆ. ಇನ್ನೂ ಜಿಲ್ಲೆಯಲ್ಲಿ ೧೦,೦೯೯ ಮಂದಿ ಒಟ್ಟು

ಕರಾವಳಿ: ಸೋಂಕಿತರ ಸಂಖ್ಯೆ ಇಳಿಮುಖ, ಸಾವಿನ ಸಂಖ್ಯೆ ಏರಿಕೆ Read More »

ಕರಾವಳಿಯಲ್ಲಿ ನಡೆಯಿತು ಪಿಡಿಓ ಗೆ ಕಪಾಲ ಮೋಕ್ಷ | ಬುದ್ದಿಮಾತು ಹೇಳಿದ್ರೆ ಯಾಕಿಂಗೆ ಮಾಡಿದ್ರು?

ಮಂಗಳೂರು.:ಮೇ 25: ಮಾಸ್ಕ್ ಧರಿಸದೇ ಇರುವುದನ್ನು ಪ್ರಶ್ನಿಸಿದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮೇಲೆ ಹಲ್ಲೆಗೈದ ಘಟನೆ ನಗರ ಹೊರವಲಯದ ಮಲ್ಲೂರಿನಲ್ಲಿ ನಡೆದಿದೆ. ಉಳಾಯಿಬೆಟ್ಟು ಗ್ರಾಮ ಪಂಚಾಯತಿ ಪಿಡಿಓ ರಾಜೇಂದ್ರ ಶೆಟ್ಟಿ ಹಲ್ಲೆಗೆ ಒಳಗಾದವರು. ಮಲ್ಲೂರು ಬಳಿಯ ಬದ್ರಿಯಾನಗರದ ಕ್ರಿಕೆಟ್ ಮೈದಾನದಲ್ಲಿ ಗುಂಪು ಸೇರಿದ್ದ ಯುವಕರಿಗೆ ಮಾಸ್ಕ್ ಹಾಕುವಂತೆ ಅಧಿಕಾರಿ ಸೂಚಿಸಿದ್ದರು. ಆದರೆ ಅಧಿಕಾರಿಯ ಮಾತು ಕೇಳದೇ ಅದೇ ಯುವಕರು ಬಳಿಕ ಮಲ್ಲೂರು ಗ್ರಾಮ ಪಂಚಾಯತ್ ಕಚೇರಿ ಆವರಣದಲ್ಲಿ ಸೇರಿದ್ದರು. ಪಂಚಾಯತ್ ಕಚೇರಿ ಆವರಣದಲ್ಲಿ ಮಾಸ್ಕ್ ಹಾಕದೆ ಗುಂಪು

ಕರಾವಳಿಯಲ್ಲಿ ನಡೆಯಿತು ಪಿಡಿಓ ಗೆ ಕಪಾಲ ಮೋಕ್ಷ | ಬುದ್ದಿಮಾತು ಹೇಳಿದ್ರೆ ಯಾಕಿಂಗೆ ಮಾಡಿದ್ರು? Read More »

ಒಮ್ಮೆಲೆ ಉಕ್ಕಿ ಬಂದ ನೀರು: ಮುಳುಗಿದ ಪಿಕ್ ಅಪ್

ಉಜಿರೆ: ಪಿಕ್ ಅಪ್ ವಾಹನವೊಂದು ನದಿ ದಾಟಲು ನದಿಗೆ ಇಳಿಯುತ್ತಿದ್ದಂತೆ ನೀರು ಒಮ್ಮೆಲೆ ಉಕ್ಕಿ ಬಂದ ಪರಿಣಾಮ ವಾಹನ ಮುಳುಗಡೆಯಾಗಿ, ಅದರಲ್ಲಿದ್ದ ಜನರನ್ನು ಸ್ಥಳೀಯರು ರಕ್ಷಿಸಿದ ಘಟನೆ ಚಾರ್ಮಾಡಿ ಬೆಳಿಯ ಚಿಬಿದ್ರೆ ಉರ್ಪೆಲ್ ಗುಡ್ಡೆ ಎಂಬಲ್ಲಿ ಇಂದು ಸಂಜೆ ನಡೆದಿದೆ. ಅಳದಂಗಡಿಯ ಮನೆಯೊಂದಕ್ಕೆ ಪಿಕಪ್ ವಾಹನದಲ್ಲಿ ಸೆಂಟ್ರಿಂಗ್ ಪರಿಕರಗಳನ್ನು ಕೊಂಡೈೂದು ತಿರುಗಿ ಬರುವಾಗ, ಇಂದು ಎಡೆಬಿಡದೆ ಮಳೆಯಾದ ಪರಿಣಾಮ ಮೃತ್ಯುಂಜಯ ನದಿಯಲ್ಲಿ ಒಮ್ಮೆಲೆ ನೆರೆನೀರು ಉಕ್ಕಿಬಂದು ಈ ಘಟನೆ ನಡೆದಿದೆ. ಪಿಕಪ್‌ನಲ್ಲಿದ್ದ ಚಾಲಕ ಮತ್ತು ಇನ್ನೊಬ್ಬ ವ್ಯಕ್ತಿಯನ್ನು

ಒಮ್ಮೆಲೆ ಉಕ್ಕಿ ಬಂದ ನೀರು: ಮುಳುಗಿದ ಪಿಕ್ ಅಪ್ Read More »

ಮೂಡಿಗೆರೆಯ ಮೂತ್ರ ಕುಡಿಸಿದ ಪ್ರಕರಣ: ಯುವಕನ ವಿರುದ್ಧ ಎಫ್ಐಆರ್ ದಾಖಲು | ವಿವಾಹಿತ ಮಹಿಳೆ ಜೊತೆಗಿನ ಫೋನ್ ಸಂಭಾಷಣೆ ವೈರಲ್

ಮೂಡಿಗೆರೆ: ಕಳೆದೆರಡು ವಾರಗಳಿಂದ ರಾಜ್ಯದಾದ್ಯಂತ ಧೂಳೆಬ್ಬಿಸಿರುವ ಮೂಡಿಗೆರೆಯಲ್ಲಿ ಪಿಎಸ್ ಐ, ದಲಿತ ಯುವಕನೋರ್ವನಿಗೆ ಮೂತ್ರ ಕುಡಿಸಿದ್ದರು ಎನ್ನಲಾದ ಪ್ರಕರಣ ದಿನ ಕಳೆದಂತೆ ಹೊಸ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಪಿಎಸ್ಎ ವಿರುದ್ಧ ಎಫ್ಐಆರ್ ದಾಖಲಾದ ಬೆನ್ನಲ್ಲೇ ದೂರು ನೀಡಿದ್ದ ಯುವಕನ ಮೇಲೆಯೂ ಎಫ್ಐಆರ್ ದಾಖಲಾಗಿದೆ. ಕಿರುಗುಂದ ವಿವಾಹಿತ ಮಹಿಳೆಯೋರ್ವರ ದೂರಿನ ಆಧಾರದ ಮೇಲೆ ಬಂಧಿತನಾಗಿದ್ದ ಅದೇ ಗ್ರಾಮದ ದಲಿತ ಯುವಕ ಪುನೀತ್, ಗೋಣಿಬೀಡು ಪಿಎಸ್ಐ ವಿಚಾರಣೆ ವೇಳೆ ನನಗೆ  ಮೂತ್ರ ಕುಡಿಸಿ, ಜಾತಿ ನಿಂದನೆ ಮಾಡಿ, ಹಲ್ಲೆ ನಡೆಸಿದ್ದಾರೆ.

ಮೂಡಿಗೆರೆಯ ಮೂತ್ರ ಕುಡಿಸಿದ ಪ್ರಕರಣ: ಯುವಕನ ವಿರುದ್ಧ ಎಫ್ಐಆರ್ ದಾಖಲು | ವಿವಾಹಿತ ಮಹಿಳೆ ಜೊತೆಗಿನ ಫೋನ್ ಸಂಭಾಷಣೆ ವೈರಲ್ Read More »

ಲಾಕ್ ಡೌನ್ ಟೈಮಲ್ಲಿ‌ ಟಿಕ್ಕಾಪಾರ್ಟಿ: ಅತಿಥಿಗಳಾದ ಪೊಲೀಸರು – ವಿಡಿಯೋ ವೈರಲ್

ಕಾಸರಗೋಡು.ಮೇ.24: ಲಾಕ್‌ಡೌನ್ ಸಂದರ್ಭದಲ್ಲಿ ಕೆಲಸವಿಲ್ಲದ ಯುವಕರು ಜಾಲಿಗಾಗಿ ಟಿಕ್ಕಾ ಪಾರ್ಟಿ ಮಾಡಿದರು, ಆದರೆ ಅಲ್ಲಿಗೆ ಖಾಕಿ ಪಡೆ ಲಗ್ಗೆ ಇಟ್ಟಾಗ ಯುವಕರು ಟಿಕ್ಕಾ ಬಿಟ್ಟು ಓಡಿದ್ದಾರೆ. ಇಂಥ ವಿಲಕ್ಷಣ ಪ್ರಕರಣವೊಂದು ಗಡಿಭಾಗ ಕಾಸರಗೋಡಿನಲ್ಲಿ ಮೇ.23 ರಂದು ನಡೆದಿದೆ. ಒಂದೆಡೆ ಲಾಕ್‌ಡೌನ್‌ನಿಂದ ಕೆಲಸವಿಲ್ಲದೆ ಕಂಗೆಟ್ಟಿದ್ದ ಯುವಕರು ಭಾನುವಾರದಂದು ವೀಕ್ ಎಂಡ್ ಪಾರ್ಟಿ ಮಾಡಲು ಪ್ಲಾನ್ ರೂಪಿಸಿ ಜಾಗ ಸೆಟ್ ಮಾಡಿದರು. ಅದರಂತೆ ನಿಗದಿತ ಸಮಯಕ್ಕೆ ಅಲ್ಲಿ ಸೇರಿ ಟಿಕ್ಕಾ ಮಾಡಲು ಶುರುವಿಟ್ಟರು. ಇನ್ನೇನು ಟಿಕ್ಕಾ ರೆಡಿ ಆಗಿ ಪಾರ್ಟಿಗೆ

ಲಾಕ್ ಡೌನ್ ಟೈಮಲ್ಲಿ‌ ಟಿಕ್ಕಾಪಾರ್ಟಿ: ಅತಿಥಿಗಳಾದ ಪೊಲೀಸರು – ವಿಡಿಯೋ ವೈರಲ್ Read More »