ಕರಾವಳಿ

ನಮಗಿಲ್ಲದ ಲಸಿಕೆಯನ್ನು ಪಾಕಿಸ್ತಾನ ಬಾಂಗ್ಲಾದೇಶಕ್ಕೆ ಪೂರೈಸಿದ್ದ್ಯಾಕೆ…?ಇದು ಪ್ರಜಾಪ್ರಭುತ್ವವೋ ನಿರಂಕುಶಪ್ರಭುತ್ವವೋ…..?: ಯು ಟಿ ಖಾದರ್

ಮಂಗಳೂರು: ಇಂದು ನಮ್ಮ ದೇಶದ ಜನತೆಗೆ ವಿತರಿಸಲು ಕೋವಿಡ್ ವ್ಯಾಕ್ಸಿನ್ ಕೊರತೆ ಉಂಟಾಗಿದ್ದು, ದೇಶದ ಪ್ರಜೆಗಳಿಗೆ ಸಾಕಾಗುವಷ್ಟು ಲಸಿಕೆ ಇಟ್ಟುಕೊಳ್ಳದೆ ಹೊರ ರಾಷ್ಟ್ರಗಳಿಗೆ ಲಸಿಕೆ ಪೂರೈಸಿದ್ದು ಯಾಕೆ, ಎಂದು ಕರ್ನಾಟಕ ಸರ್ಕಾರದ ಮಾಜಿ ಸಚಿವರು ಹಾಗೂ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಯು ಟಿ ಖಾದರ್ ಪ್ರಶ್ನಿಸಿದ್ದಾರೆ. ಮಂಗಳೂರು ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದವರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅದಾಗಿಯೂ,  ಸುಮಾರು 20ಕ್ಕೂ  ಹೆಚ್ಚು ವಿದೇಶಿ ಲಸಿಕೆ ಕಂಪೆನಿಗಳು ಭಾರತಕ್ಕೆ ಲಸಿಕೆ ನೀಡಲು […]

ನಮಗಿಲ್ಲದ ಲಸಿಕೆಯನ್ನು ಪಾಕಿಸ್ತಾನ ಬಾಂಗ್ಲಾದೇಶಕ್ಕೆ ಪೂರೈಸಿದ್ದ್ಯಾಕೆ…?ಇದು ಪ್ರಜಾಪ್ರಭುತ್ವವೋ ನಿರಂಕುಶಪ್ರಭುತ್ವವೋ…..?: ಯು ಟಿ ಖಾದರ್ Read More »

ದ.ಕ : 7 ಗಂಟೆಯಿಂದ ಪಡಿತರ ವಿತರಣೆ, ತಂಬ್ ಗೆ ಒತ್ತಾಯಿಸುವಂತಿಲ್ಲ-ಜಿಲ್ಲಾಧಿಕಾರಿ

ಮಂಗಳೂರು, ಮೇ 21: ನ್ಯಾಯಬೆಲೆ ಅಂಗಡಿದಾರರು ಬೆಳಗ್ಗೆ ಏಳು ಗಂಟೆಗೆಯಿಂದ  ಕಡ್ಡಾಯವಾಗಿ  ಪಡಿತರ ವಿತರಣೆ ಪಾರಂಭಿಸಬೇಕು,  ಅಲ್ಲದೆ 10 ಗಂಟೆ ನಂತರ ಕ್ಯೂ ನಲ್ಲಿ ಉಳಿದವರಿಗೂ ಪಡಿತರ ವಿತರಿಸಬೇಕು ಹಾಗೆ, ಕೋವಿಡ್  ಮಾರ್ಗಸೂಚಿಯನ್ನು ಪಾಲನೆ ಮಾಡಬೇಕು ಎಂದು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ತಿಳಿಸಿದ್ದಾರೆ. ನ್ಯಾಯಬೆಲೆ ಅಂಗಡಿದಾರರು ಬೆಳಗ್ಗೆ 7 ಗಂಟೆಯ ಮೊದಲೇ ಬಂದು ಅಂಗಡಿ ಬಾಗಿಲು  ತೆರೆಯಬೇಕು, ಹಾಗೇ 7 ಗಂಟೆಯಿಂದ  ಕಡ್ಡಾಯವಾಗಿ ಪಡಿತರ ವಿತರಣೆ ಪ್ರಾರಂಭಿಸಬೇಕು. ಪಡಿತರ ಚೀಟಿದಾರರು ದಟ್ಟಣೆಯಾದಲ್ಲಿ ಆದ್ಯತೆ ಮೇರೆಗೆ ಸಾಲಿನಲ್ಲಿ ನಿಲ್ಲಲು

ದ.ಕ : 7 ಗಂಟೆಯಿಂದ ಪಡಿತರ ವಿತರಣೆ, ತಂಬ್ ಗೆ ಒತ್ತಾಯಿಸುವಂತಿಲ್ಲ-ಜಿಲ್ಲಾಧಿಕಾರಿ Read More »

ಹರಕಲು ಜೋಪಡಿಯಲ್ಲಿ ವಾಸಿಸುತ್ತಿದ್ದವರಿಗೆ ಮನೆ ನಿರ್ಮಿಸಿಕೊಟ್ಟ ಮುಸ್ಲಿಂ ಐಕ್ಯ ವೇದಿಕೆ

ವಿಟ್ಲ: ವಾಸಿಸಲು ಸರಿಯಾದ ಮನೆ ಇರದೆ ಹರಕಲು ಜೋಪಡಿಯಲ್ಲಿ ವಾಸಿಸುತ್ತಿದ್ದ ವ್ಯಕ್ತಿಯೋರ್ವರಿಗೆ ಮುಸ್ಲಿಂ ಐಕ್ಯ ವೇದಿಕೆ ಪೆರುವಾಯಿ ಮನೆ ನಿರ್ಮಿಸಿಕೊಟ್ಟು ಮಾನವೀಯತೆ ಮೆರೆದಿದ್ದಾರೆ. ಇಲ್ಲಿನ ಮುಚ್ಚಿರಪದವು ಎಂಬಲ್ಲಿ  ವಾಸಿಸುತ್ತಿದ್ದ ಸಂಜೀವ ಮೊಗೇರ ಎಂಬವರ ಹಳೆಯ ಮನೆ ಈ ಬಾರಿಯ ಮಳೆಗಾಲ ಆರಂಭದಲ್ಲಿ ಹಾನಿಯಾಗಿ ಶೋಚನೀಯ ಸ್ಥಿತಿ ತಲುಪಿತ್ತು. ಅವರು ಹೊಸಮನೆ ನಿರ್ಮಿಸಿಕೊಳ್ಳುವಲ್ಲಿ ಅಶಕ್ತರಾಗಿದ್ದ ಕಾರಣ ಪರಿಸ್ಥಿತಿ ಮನಗಂಡು ಪೆರುವಾಯಿ ಮುಸ್ಲಿಂ ಐಕ್ಯ ವೇದಿಕೆಯವರು ಸುಮಾರು ಒಂದು ಲಕ್ಷ ರೂಪಾಯಿ ಸ್ವಂತ ಖರ್ಚಿನಲ್ಲಿ ಹೊಸದೊಂದು ಸಣ್ಣ ಸುಸಜ್ಜಿತ ಮನೆ

ಹರಕಲು ಜೋಪಡಿಯಲ್ಲಿ ವಾಸಿಸುತ್ತಿದ್ದವರಿಗೆ ಮನೆ ನಿರ್ಮಿಸಿಕೊಟ್ಟ ಮುಸ್ಲಿಂ ಐಕ್ಯ ವೇದಿಕೆ Read More »

ಮರೆಯಲಾಗದ ಮಹಾಪತನ : ಮಂಗಳೂರು ‌ವಿಮಾನ ದುರಂತದ ಕಹಿನೆನಪು

ಬೆಳಿಗ್ಗೆ 5.30 ರ ಸಮಯ ಇರಬಹುದು. ವಿಮಾನದ ಪೈಲಟ್‌ ಇನ್ನು ಅರ್ಧ ಗಂಟೆಯಲ್ಲಿ ವಿಮಾನ ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿಯಲಿದೆ ಎಂದು ಘೋಷಣೆ ಮಾಡಿದರು. ಇನ್ನೇನು ತವರು ನೆಲ ಬಂದೇ ಬಿಟ್ಟಿತು ಎನ್ನುವ ಸಂತಸದಲ್ಲಿದ್ದ ವಿಮಾನ ಪ್ರಯಾಣಿಕರ ಜೀವನದಲ್ಲಿ ಬಹುದೊಡ್ಡ ದುರಂತ ನಡೆದೇ ಹೋಯಿತು. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇಯಿಂದ ಜಾರಿ ಕೆಳಕ್ಕೆ ಬಿದ್ದು ಸಂಭವಿಸಿದ ಮಹಾ ದುರಂತಕ್ಕೆ ಮೇ 22 (ಇಂದು)ರಂದು 11 ವರ್ಷ ಪೂರ್ಣವಾಗುತ್ತಿದೆ. ದೇಶದ ನಾಗರಿಕ ವಿಮಾನಯಾನದ ಇತಿಹಾಸದಲ್ಲಿ ಇದು ಎಂದೆಂದೂ

ಮರೆಯಲಾಗದ ಮಹಾಪತನ : ಮಂಗಳೂರು ‌ವಿಮಾನ ದುರಂತದ ಕಹಿನೆನಪು Read More »

ಮಂಗಳೂರು: ಲಾರಿ ಢಿಕ್ಕಿ- ಸೈಕಲ್ ಸವಾರ ಸ್ಥಳದಲ್ಲೇ ಸಾವು

ಮಂಗಳೂರು, ಮೇ ೨೧: ರಾ.ಹೆ.ಯ ಬೈಕಂಪಾಡಿಯಲ್ಲಿ ಲಾರಿಯೊಂದು ಸೈಕಲ್ ಸವಾರನಿಗೆ  ಢಿಕ್ಕಿ ಹೊಡೆದ ಪರಿಣಾಮ ಆತ ಸ್ಥಳದಲ್ಲೇ ಸಾವನಪ್ಪಿದ ಘಟನೆ ಶುಕ್ರವಾರ ಸಂಜೆ ನಡೆದಿದೆ.ಮಧು ಕೆ. ಮೃತ ಸೈಕಲ್ ಸವಾರ ಎಂದು ಗುರುತಿಸಲಾಗಿದೆ. ಈತ ಹೈರೇಂಜ್ ಸೆಕ್ಯುರಿಟಿ ಸರ್ವಿಸಸ್‌ನ ಉದ್ಯೋಗಿ ಎಂದು ತಿಳಿದುಬಂದಿದೆ.ಈತ ಸೈಕಲ್‌ನಲ್ಲಿ ತೆರಳುತ್ತಿದ್ದಾಗ ಅತೀ ವೇಗವಾಗಿ, ಅಜಾಗರೂಕತೆಯಿಂದ ಧಾವಿಸಿ ಬಂದ ಲಾರಿ ಢಿಕ್ಕಿ ಹೊಡೆಯಿತು ಎನ್ನಲಾಗಿದ್ದು. ಇದರಿಂದ ಸೈಕಲ್ ಸವಾರ ಸ್ಥಳದಲ್ಲೇ ಕೊನೆಯುಸಿರೆಳೆದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಮಂಗಳೂರು ಉತ್ತರ ಸಂಚಾರ

ಮಂಗಳೂರು: ಲಾರಿ ಢಿಕ್ಕಿ- ಸೈಕಲ್ ಸವಾರ ಸ್ಥಳದಲ್ಲೇ ಸಾವು Read More »

ದಕ್ಷಿಣ ಕನ್ನಡದಲ್ಲಿ ಲಾಕ್ ಡೌನ್ ಬಗ್ಗೆ ಜಿಲ್ಲಾಧಿಕಾರಿ ಸ್ಪಷ್ಟನೆ

ಮಂಗಳೂರು. ಮೇ20: ಕೊರೊನಾ ನಿಯಂತ್ರಣ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಹೊಸ ನಿಯಮ ಹೊರಡಿಸಿರುವುದಾಗಿ ಕೆಲವು ನ್ಯೂಸ್ ವೆಬ್ಸೈಟ್ ಗಳು ತಪ್ಪು ವರದಿ ಮಾಡಿರುವ ಬಗ್ಗೆ ಇದೀಗ ಜಿಲ್ಲಾಧಿಕಾರಿ ಸ್ಪಷ್ಟನೆ ನೀಡಿದ್ದಾರೆ. ” ದ.ಕ.ಜಿಲ್ಲೆಯಾದ್ಯಂತ ಕೆಲವು ನಿರ್ಬಂಧಗಳೊಂದಿಗೆ ಹೊಸ ಮಾರ್ಗಸೂಚಿ ಜಾರಿಯಾಗುತ್ತದೆ, ವಾರದಲ್ಲಿ ಎರಡು ದಿನ ಮಾತ್ರ ಸಾಮಾಗ್ರಿ ಖರೀದಿಗೆ ಅವಕಾಶ ನೀಡಲಾಗುತ್ತದೆ, ಮೇ. 24 ರಿಂದ ಜಿಲ್ಲೆಯಲ್ಲಿ ಮದುವೆ ಸಮಾರಂಭಗಳಿಗೆ ಅವಕಾಶ ಇರುವುದಿಲ್ಲ ಎಂದು ಸಾಮಾಜಿಕ ಜಾಲತಾಣ ಹಾಗೂ ವೆಬ್ ಮಾಧ್ಯಮಗಳಲ್ಲಿ ವರದಿ ಪ್ರಸಾರವಾಗುತ್ತಿತ್ತು. ಈ ಬಗ್ಗೆ ತಕ್ಷಣ

ದಕ್ಷಿಣ ಕನ್ನಡದಲ್ಲಿ ಲಾಕ್ ಡೌನ್ ಬಗ್ಗೆ ಜಿಲ್ಲಾಧಿಕಾರಿ ಸ್ಪಷ್ಟನೆ Read More »

ಕೋವಿಡ್ ನಿಯಮ ಉಲ್ಲಂಘನೆ: ಡಾ. ಕಕ್ಕಿಲಾಯ ವಿರುದ್ದ ಪ್ರಕರಣ ದಾಖಲು

ಮಂಗಳೂರು: ಮೇ 19: ಇಲ್ಲಿನ ಸೂಪರ್ ಮಾರ್ಕೆಟ್ ಗೆ ತೆರಳಿ ಮಾಸ್ಕ್ ಬಗ್ಗೆ ವಾಗ್ವಾದ ಮಾಡಿ ತೆರಳಿದ್ದ ನಗರದ ಖ್ಯಾತ ವೈದ್ಯ ಡಾ.ಬಿ.ಎಸ್. ಕಕ್ಕಿಲ್ಲಾಯ ವಿರುದ್ಧ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಂಗಳೂರಿನ ಕದ್ರಿಯಲ್ಲಿ ಕಾರ್ಯಾಚರಿಸುತ್ತಿರುವ ಜಿಮ್ಮಿ ಮಾರ್ಕೆಟ್ ಪಾಲುದಾರ ರೇನ್ ರೊಸಾರಿಯೋ ಕದ್ರಿ ಠಾಣೆಯಲ್ಲಿ ಕಕ್ಕಿಲಾಯ ವಿರುದ್ಧ ದೂರು ನೀಡಿದ್ದಾರೆ. ಮೇ 18ರ ಬೆಳಗ್ಗೆ ಮಾರ್ಕೆಟ್ ಗೆ ಬಂದಿದ್ದ ವೈದ್ಯರು ಅಲ್ಲಿನ ಸಿಬ್ಬಂದಿ ಜೊತೆ ಮಾಸ್ಕ್ ವಿಚಾರದಲ್ಲಿ ವಾಗ್ವಾದ ನಡೆಸಿದ್ದಾರೆ. ಗ್ರಾಹಕರು ಕಡ್ಡಾಯವಾಗಿ ಮಾಸ್ಕ್ ಹಾಕಿರಬೇಕೆಂದು

ಕೋವಿಡ್ ನಿಯಮ ಉಲ್ಲಂಘನೆ: ಡಾ. ಕಕ್ಕಿಲಾಯ ವಿರುದ್ದ ಪ್ರಕರಣ ದಾಖಲು Read More »

ತೌಕ್ತೆ ಬಳಿಕ ಬರುತ್ತಿದೆ ಯಾಸ್ ಚಂಡಮಾರುತ..!

ನವದೆಹಲಿ: ಒಂದು ಚಂಡಮಾರುತ ತಂದಂತಹ ಅವಾಂತರವೇ ಇನ್ನು ಮುಗಿದಿಲ್ಲ. ಅಷ್ಟರಲ್ಲೇ ಇದೀಗ ಮತ್ತೊಂದು ಚಂಡಮಾರುತದ ಭೀತಿ ಎದುರಾಗಿದೆ. ಮೊದಲನೆಯ ಚಂಡಮಾರುತ ಅರಬ್ಬಿ ಸಮುದ್ರದಲ್ಲಿ ಸೃಷ್ಟಿಯಾಗಿದ್ದರೆ ಇದು ಬಂಗಾಳಕೊಲ್ಲಿಯಲ್ಲಿ ರೂಪುಗೊಳ್ಳಲಿದೆ. ಮೇ 23ರಂದು ಹೊಸ ಚಂಡಮಾರುತ ಸೃಷ್ಟಿಯಾಗುವ ಸಾಧ್ಯತೆ ಇದ್ದು, ಅದಕ್ಕೆ ಯಾಸ್ ಎಂದು  ಹೆಸರಿಡಲು ತೀರ್ಮಾನಿಸಲಾಗಿದೆ. ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಲಿರುವ ಈ ಚಂಡಮಾರುತ ಮ್ಯಾನ್ಮಾರ್ ಕಡೆ ತೆರಳುವ ಸಾಧ್ಯತೆ ಇದೆ. ಬಂಗಾಳ ಕೊಲ್ಲಿಯಲ್ಲಿ ಇದೀಗ ಚಂಡಮಾರುತ ಸೃಷ್ಟಿಗೆ  ಪೂರಕವಾದ ವಾತಾವರಣ ನಿರ್ಮಾಣವಾಗುತ್ತಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ತೌಕ್ತೆ ಬಳಿಕ ಬರುತ್ತಿದೆ ಯಾಸ್ ಚಂಡಮಾರುತ..! Read More »

ಕರಾವಳಿಯಲ್ಲಿ ಬ್ಲ್ಯಾಕ್ ಫಂಗಸ್ ಗೆ ಓರ್ವ ಬಲಿ? !

ಮಂಗಳೂರು : ಜಿಲ್ಲೆಯಲ್ಲಿ ಕೊರೊನಾ ಮಹಾಮಾರಿಯ ಜೊತೆಗೆ ಬ್ಲ್ಯಾಕ್ ಫಂಗಸ್ ಪ್ರಕರಣಗಳು ಕಂಡುಬತ್ತಿದೆ. ಜಿಲ್ಲೆಯಲ್ಲಿ 6 ಬ್ಲ್ಯಾಕ್ ಫಂಗಸ್ ಪ್ರಕರಣಗಳು ಕಂಡುಬಂದಿದ್ದು, ಓರ್ವ ಶಂಕಿತ ಈಗಾಗಲೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.ಇನ್ನೂಳಿದ ಸೋಂಕಿತರು ಸದ್ಯ ವೆನ್ಲಾಕ್ ಮತ್ತು ಖಾಸಗಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕರಾವಳಿಯಲ್ಲಿ ಬ್ಲ್ಯಾಕ್ ಫಂಗಸ್ ಗೆ ಓರ್ವ ಬಲಿ? ! Read More »

ಕಾರ್ಕಳ : ಕೊರೊನಾ ಮಾರ್ಗಸೂಚಿ ಉಲ್ಲಂಘನೆ – ಕೇಸು ದಾಖಲು

ಕಾರ್ಕಳ, ಮೇ.18: ರಾಜ್ಯ ಸರಕಾರ  ಹಾಗೂ ಜಿಲ್ಲಾಡಳಿತವು ಹೊರಡಿಸಿದ ಕೊರೊನಾ ಕರ್ಫ್ಯೂ  ಮಾರ್ಗಸೂಚಿಯನ್ನು ಉಲ್ಲಂಘಿಸಿ  ವ್ಯಾಪಾರದಲ್ಲಿ ತೊಡಗಿಸಿದ ವ್ಯಾಪಾರಿಯೊಬ್ಬರ ವಿರುದ್ಧ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ. ಸಾಣೂರು ಗ್ರಾಮದ ಕುಂಟಲ್ಪಾ‌ಡಿ ನಿವಾಸಿ ಪ್ರಕಾಶ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ. ಇವರು ಕುಂಟಲ್ಪಾಡಿಯಲ್ಲಿ ತನ್ನ ಮಾಲಕತ್ವದಲ್ಲಿರುವ ಅಂಗಡಿಯನ್ನು ಸಂಜೆ 6:30ಕ್ಕೆ ತೆರೆದು ವ್ಯಾಪಾರ ನಡೆಸುತಿದ್ದರು. ಈ  ಬಗ್ಗೆ  ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದ್ದಾರೆ. ಆ ಬಳಿಕ ಅಂಗಡಿಯನ್ನು ಮುಚ್ಚಿಸಿ ಆರೋಪಿ ಪ್ರಕಾಶ್ ವಿರುದ್ಧ ಪ್ರಕರಣದ ದಾಖಲಿಸಿಕೊಂಡಿದ್ದಾರೆ.

ಕಾರ್ಕಳ : ಕೊರೊನಾ ಮಾರ್ಗಸೂಚಿ ಉಲ್ಲಂಘನೆ – ಕೇಸು ದಾಖಲು Read More »