ಕರಾವಳಿ

ವಾಲ್ಮೀಕಿ ಆಶ್ರಮ‌ ಶಾಲೆ ಬಾಳಿಲದಲ್ಲಿ ಪ್ರವೇಶಾತಿ ಆರಂಭ

ಸಮಗ್ರ ನ್ಯೂಸ್: 2022-23ನೇ ಸಾಲಿಗೆ 1ನೇ ತರಗತಿಯಿಂದ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಆಗೆ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ನಡೆಸಲ್ಪಡುತ್ತಿರುವ ದ.ಕ ಜಿಲ್ಲೆಯ ಸುಳ್ಯ ತಾಲೂಕಿನ ಆಶ್ರಮ ಶಾಲೆ, ಬಾಳಿಲ ಇಲ್ಲಿ ಪ್ರವೇಶಾವಕಾಶ ಆರಂಭಗೊಂಡಿದೆ. ಪರಿಶಿಷ್ಟ ಪಂಗಡದವರಿಗೆ (ST) ಮೊದಲ ಆದ್ಯತೆಯಿದ್ದು, ಪರಿಶಿಷ್ಟ ಜಾತಿ ಮತ್ತು ಇತರ ವರ್ಗದವರಿಗೆ ಅವಕಾಶವಿರುತ್ತದೆ. ಆಯ್ಕೆ ಮತ್ತು ದಾಖಲಾತಿ ಪ್ರಕ್ರಿಯೆ ಹೀಗಿದೆ: 1, 2, 3, 4 ಮತ್ತು 5ನೇ ತರಗತಿಯವರೆಗೆ ದಾಖಲಾತಿಗೆ ಅವಕಾಶ. ಜನನ ಪ್ರಮಾಣ ಪತ್ರ, […]

ವಾಲ್ಮೀಕಿ ಆಶ್ರಮ‌ ಶಾಲೆ ಬಾಳಿಲದಲ್ಲಿ ಪ್ರವೇಶಾತಿ ಆರಂಭ Read More »

ಕುಕ್ಕೆ: ಮೇ.25 ರಂದು ಸರಳ ಸಾಮೂಹಿಕ ವಿವಾಹ| ವಿವಾಹ ಅಕಾಂಕ್ಷಿಗಳಿಂದ ಅರ್ಜಿ ಆಹ್ವಾನ

ಸಮಗ್ರ ನ್ಯೂಸ್; ದಕ್ಷಿಣ ಭಾರತದ ಪ್ರಸಿದ್ಧ ನಾಗ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದಲ್ಲಿ ಮೇ.25ರಿಂದ ಸರಳ ಸಾಮೂಹಿಕ ವಿವಾಹ ನಡೆಯಲಿದೆ.ಜನಸಾಮಾನ್ಯರ ಅನುಕೂಲಕ್ಕೆ ತಕ್ಕಂತೆ ಸಪ್ತಪದಿ ಸಾಮೂಹಿಕ ಸರಳ ವಿವಾಹವನ್ನು ಸರ್ಕಾರ ಆಯೋಜಿಸಿದೆ. ಈ ಸರಳ ವಿವಾಹ ಪ್ರಕ್ರಿಯೆ ಯಲ್ಲಿ ವಿವಾಹ ಆಗಬಯಸುವವರು ಮೇ 4 ವಧು ವರರು ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಸಾಮೂಹಿಕ ವಿವಾಹ ಆಗ ಬಯಸುವವರು ದೇವಾಲಯದ ಕಛೇರಿಯಿಂದ ಅರ್ಜಿ ಪಡೆದು ಅಲ್ಲಿಗೆ ಹಿಂದಿರುಗಿಸತಕ್ಕದು.ಮಾಹಿತಿಗಾಗಿ ದೇವಾಲಯದ ಕಛೇರಿಗೆ ಭೇಟಿ ನೀಡಬಹುದು ಅಥವಾ 08257

ಕುಕ್ಕೆ: ಮೇ.25 ರಂದು ಸರಳ ಸಾಮೂಹಿಕ ವಿವಾಹ| ವಿವಾಹ ಅಕಾಂಕ್ಷಿಗಳಿಂದ ಅರ್ಜಿ ಆಹ್ವಾನ Read More »

ಸುಳ್ಯ: ಸಾರ್ವಜನಿಕವಾಗಿ ತ್ಯಾಜ್ಯ ಚೆಲ್ಲುವ ಕಾರಣ ಸರಕಾರದ ಸ್ವಚ್ಚತಾ ಆಂದೋಲನಕ್ಕೆ ಅಪಚಾರ|ಸೂಕ್ತ ಕ್ರಮಕ್ಕೆ ಪ್ರಶಾಂತ್ ರೈ ಮರುವಂಜ ಆಗ್ರಹ

ಸಮಗ್ರ ನ್ಯೂಸ್: ಸರಕಾರಗಳು ಹಮ್ಮಿಕೊಂಡ ಸ್ವಚ್ಚತಾ ಆಂದೋಲನವು ಬಹಳ ಉತ್ತಮವಾಗಿ ನಡೆಯುತ್ತಿದ್ದಾರೆ ನಾಗರಿಕರು ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆದು ಸ್ವಚ್ಚತಾ ಆಂದೋಲನಕ್ಕೆ ಅಡ್ಡಿ ಉಂಟುಮಾಡುತ್ತಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಲು ತಾಲೂಕು ತುಳುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷರು ಮನವಿ ಮಾಡಿಕೊಂಡಿದ್ದಾರೆ. ನಗರಗಳ ಸುತ್ತಮುತ್ತಲಿನ ವ್ಯಾಪಾರಿಗಳು ತ್ಯಾಜ್ಯ ವಸ್ತುಗಳನ್ನು ಮತ್ತು ಕೋಳಿ ತ್ಯಾಜ್ಯ ಗಳನ್ನು ಎಲ್ಲೆಂದರಲ್ಲಿ ರಸ್ತೆಗಳ ಬದಿಯಲ್ಲಿ ಚೆಲ್ಲಿ ನಾಗರಿಕರಿಗೆ ತೊಂದರೆ ಕೊಡುವುದರೊಂದಿಗೆ ಸರಕಾರದ ಸ್ವಚ್ಚತಾ ಆಂದೋಲನ ಎಂಬ ಪರಿಕಲ್ಪನೆ ಯನ್ನೇ ಬುಡಮೇಲು ಮಾಡುತ್ತಿದ್ದಾರೆ.ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಕಟೀಲು

ಸುಳ್ಯ: ಸಾರ್ವಜನಿಕವಾಗಿ ತ್ಯಾಜ್ಯ ಚೆಲ್ಲುವ ಕಾರಣ ಸರಕಾರದ ಸ್ವಚ್ಚತಾ ಆಂದೋಲನಕ್ಕೆ ಅಪಚಾರ|ಸೂಕ್ತ ಕ್ರಮಕ್ಕೆ ಪ್ರಶಾಂತ್ ರೈ ಮರುವಂಜ ಆಗ್ರಹ Read More »

ಕರಾವಳಿ, ಒಳನಾಡಿನಲ್ಲಿ ಗುಡುಗು ಸಹಿತ ಭಾರೀ ಮಳೆ ನಿರೀಕ್ಷೆ; ಎಲ್ಲೋ ಅಲರ್ಟ್

ಸಮಗ್ರ ನ್ಯೂಸ್ : ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆ ಮತ್ತೆ ಶುರುವಾಗಿದೆ. ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ, ಉತ್ತರ ಒಳನಾಡು, ದಕ್ಷಿಣ ಒಳನಾಡು ಮತ್ತು ಕರಾವಳಿ ಭಾಗದಲ್ಲಿ ಮುಂದಿನ ಮೂರು ದಿನ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಬೀದರ್, ಕಲಬುರಗಿ, ವಿಜಯಪುರ, ಬಾಗಲಕೋಟೆ, ಬೆಳಗಾವಿ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಇನ್ನೂ ಎರಡು ದಿನ ಭಾರೀ ಮಳೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು, ಹಾಸನ, ಉಡುಪಿ, ದಕ್ಷಿಣ ಕನ್ನಡ

ಕರಾವಳಿ, ಒಳನಾಡಿನಲ್ಲಿ ಗುಡುಗು ಸಹಿತ ಭಾರೀ ಮಳೆ ನಿರೀಕ್ಷೆ; ಎಲ್ಲೋ ಅಲರ್ಟ್ Read More »

ಮಂಗಳೂರು: ಮಳಲಿ ಜುಮಾ ಮಸೀದಿ ಕೆಡವದಂತೆ ನ್ಯಾಯಾಲಯದಿಂದ ತಾತ್ಕಾಲಿಕ ತಡೆಯಾಜ್ಞೆ

ಸಮಗ್ರ ನ್ಯೂಸ್: ಮಂಗಳೂರಿನ ತೆಂಕ ಉಳಿಪಾಡಿ ಗ್ರಾಪಂ ವ್ಯಾಪ್ತಿಯ ಮಳಲಿಪೇಟೆಯ ಪುರಾತನ ಜುಮಾ ಮಸೀದಿಯ ಹಳೆಯ ಕಟ್ಟಡವನ್ನು ಕೆಡವದಂತೆ ಮಂಗಳೂರು ಮೂರನೇ ಅಡಿಷನಲ್ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯವು ಶುಕ್ರವಾರ ತಾತ್ಕಾಲಿಕ ಆದೇಶ ನೀಡಿದೆ. ಮಳಲಿಪೇಟೆಯ ಮಸೀದಿಯ ನವೀಕರಣಕ್ಕೆ ಸಂಘಪರಿವಾರದ ಕಾರ್ಯಕರ್ತರು ಗುರುವಾರ ಅಡ್ಡಿಪಡಿಸಿದ್ದರಲ್ಲದೆ, ನಿರ್ಮಾಣಕ್ಕೆ ಅವಕಾಶ ನೀಡಬಾರದು ಎಂದು ಗ್ರಾಪಂಗೆ ಲಿಖಿತ ದೂರು ನೀಡಿದ್ದರು. ಈ ಮಧ್ಯೆ ಬಜರಂಗದಳ-ವಿಎಚ್‌ಪಿ ಮುಖಂಡರು ಮಂಗಳೂರಿನ ಸಿವಿಲ್ ನ್ಯಾಯಾಲಯದ ಮೊರೆ ಹೋಗಿ ನವೀಕರಣಕ್ಕೆ ಅನುಮತಿ ನೀಡಬಾರದು ಎಂದು ಮನವಿ

ಮಂಗಳೂರು: ಮಳಲಿ ಜುಮಾ ಮಸೀದಿ ಕೆಡವದಂತೆ ನ್ಯಾಯಾಲಯದಿಂದ ತಾತ್ಕಾಲಿಕ ತಡೆಯಾಜ್ಞೆ Read More »

ಉಡುಪಿ: ‘ಹಿಜಾಬ್‌ಗಾಗಿ ನಾಳೆಯೂ ಹೈಡ್ರಾಮ ಮಾಡಿದರೆ ಕ್ರಿಮಿನಲ್ ಕೇಸ್’-ರಘುಪತಿ ಭಟ್

ಸಮಗ್ರ ನ್ಯೂಸ್: ಹೈಕೋರ್ಟ್‌ ಆದೇಶ ಮೀರಿ ಹಿಜಾಬ್ ಧರಿಸಲು ಅವಕಾಶ ನೀಡಬೇಕೆಂದು ನಾಳೆಯೂ ಪಟ್ಟು ಹಿಡಿದರೆ ಅಂತಹ ವಿದ್ಯಾರ್ಥಿನಿಯರ ಮೇಲೆ ಕ್ರಿಮಿನಲ್ ಕೇಸ್ ಜೊತೆಗೆ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲಾಗುವುದು ಎಂದು ಉಡುಪಿ ಶಾಸಕ ರಘುಪತಿ ಭಟ್ ಎಚ್ಚರಿಕೆ ನೀಡಿದ್ದಾರೆ. ಉಡುಪಿ ಪರೀಕ್ಷಾ ಕೇಂದ್ರದಲ್ಲಿ ಹಿಜಾಬ್ ಹೋರಾಟಗಾರ್ತಿಯರಿಬ್ಬರು ಹೈಡ್ರಾಮಾ ಸೃಷ್ಟಿಸಿರುವುದಕ್ಕೆ ಆಕ್ರೋಶ ಹೊರ ಹಾಕಿದ ಅವರು, ಇದೊಂದು ಷಡ್ಯಂತ್ರ ಅನ್ನುವುದು ಸಾಬೀತಾಗಿದೆ. ನಿನ್ನೆ ಸಂಜೆಯವರೆಗೆ ಫೋನ್ ಮಾಡಿ ಹಾಲ್ ಟಿಕೆಟ್ ಪಡೆಯಲು ಹೇಳಲಾಗಿತ್ತು. ಬೆಳಗ್ಗಿನವರೆಗೂ ಹಾಲ್ ಟಿಕೆಟ್

ಉಡುಪಿ: ‘ಹಿಜಾಬ್‌ಗಾಗಿ ನಾಳೆಯೂ ಹೈಡ್ರಾಮ ಮಾಡಿದರೆ ಕ್ರಿಮಿನಲ್ ಕೇಸ್’-ರಘುಪತಿ ಭಟ್ Read More »

ಉಡುಪಿ: ಪರೀಕ್ಷಾ ಕೇಂದ್ರದೆದುರು ಹಿಜಾಬ್ ಹೈಡ್ರಾಮಾ| ಪರೀಕ್ಷೆ ಬರೆಯದೆ ಮನೆಗೆ ನಡೆದ ವಿದ್ಯಾರ್ಥಿನಿಯರು|

ಸಮಗ್ರ ನ್ಯೂಸ್: ದ್ವೀತಿಯ ಪಿಯುಸಿ ಅಂತಿಮ ಹಂತದ ಪರೀಕ್ಷೆಯಲ್ಲಿ ಮತ್ತೆ ಹಿಜಾಬ್ ಗೆ ಅವಕಾಶಕ್ಕೆ ವಿಧ್ಯಾರ್ಥಿನಿಯರು ಮನವಿ ಮಾಡಿದ್ದು, ಆದರೆ ರಾಜ್ಯ ಸರಕಾರದ ಆದೇಶ ಹಿನ್ನಲೆ ಹಿಜಾಬ್ ಗೆ ಅವಕಾಶ ನಿರಾಕರಿಸಲಾಗಿದ್ದು, ಹಿಜಾಬ್ ಹೋರಾಟಗಾರ್ತಿಯರು ಪರೀಕ್ಷೆ ಬರೆಯದೆ ಮನೆಗೆ ತೆರಳಿದ್ದಾರೆ. ಉಡುಪಿಯ ವಿದ್ಯೋದಯ ಪದವಿ ಪೂರ್ವ ಕಾಲೇಜಿಗೆ ಹಿಜಬ್ ಹೋರಾಟದ ವಿಧ್ಯಾರ್ಥಿನಿಯರು ಆಗಮಿಸಿದ್ದು, ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ಕೇಳಿದ್ದಾರೆ. ಆದರೆ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಅರ್ಚನಾ ಭಟ್ ಹಾಗೂ ಪರೀಕ್ಷಾ ಸಿಬ್ಬಂದಿ ಹಿಜಾಬ್ ಧರಿಸಿ

ಉಡುಪಿ: ಪರೀಕ್ಷಾ ಕೇಂದ್ರದೆದುರು ಹಿಜಾಬ್ ಹೈಡ್ರಾಮಾ| ಪರೀಕ್ಷೆ ಬರೆಯದೆ ಮನೆಗೆ ನಡೆದ ವಿದ್ಯಾರ್ಥಿನಿಯರು| Read More »

ಎ.23 ಮಂಗಳೂರು ವಿವಿ ಘಟಿಕೋತ್ಸವ| ಕರಾವಳಿಯ ಮೂವರು ಸಾಧಕರಿಗೆ ಗೌರವ ಡಾಕ್ಟರೇಟ್

ಸಮಗ್ರ ನ್ಯೂಸ್: ಧರ್ಮಸ್ಥಳದ ಶ್ರೀಮತಿ ಹೇಮಾವತಿ ವಿ.ಹೆಗ್ಗಡೆ, ಧರ್ಮದರ್ಶಿ ಹರಿಕೃಷ್ಣ ಪುನರೂರು ಮತ್ತು ತುಳು ರಂಗಭೂಮಿ ಕಲಾವಿದ, ನಿರ್ದೇಶಕ ದೇವದಾಸ ಕಾಪಿಕಾಡ್ ಅವರಿಗೆ ಮಂಗಳೂರು ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ಪದವಿ ಪ್ರಕಟಿಸಿದೆ. ಎ.23ರ ಶನಿವಾರ ಜರುಗುವ ವಿಶ್ವವಿದ್ಯಾನಿಲಯದ 40ನೇ ಘಟಿಕೋತ್ಸವದಲ್ಲಿ ರಾಜ್ಯಪಾಲರು ಮತ್ತು ಕುಲಾಧಿಪತಿಗಳಾದ ತಾವರ್ ಚಂದ್ ಗೆಹ್ಲೋಟ್ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಿದ್ದಾರೆ. ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಎಸ್.ಅಬ್ದುಲ್ ನಝೀರ್ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ಉನ್ನತ ಶಿಕ್ಷಣ ಸಚಿವರಾದ ಡಾ.ಅಶ್ವಥ್ ನಾರಾಯಣ ಘಟಿಕೋತ್ಸವದಲ್ಲಿ ಉಪಸ್ಥಿತರಿರುತ್ತಾರೆ.

ಎ.23 ಮಂಗಳೂರು ವಿವಿ ಘಟಿಕೋತ್ಸವ| ಕರಾವಳಿಯ ಮೂವರು ಸಾಧಕರಿಗೆ ಗೌರವ ಡಾಕ್ಟರೇಟ್ Read More »

ದರ್ಗಾ ಕೆಡವಿದಾಗ ದೇವಸ್ಥಾನದ ಗುಡಿ ಪತ್ತೆ; ಕಾಮಗಾರಿ ಸ್ಥಗಿತ

ಸಮಗ್ರ ನ್ಯೂಸ್: ನವೀಕರಣಕ್ಕಾಗಿ ದರ್ಗಾವೊಂದನ್ನು ಕೆಡವಿದ್ದಾಗ ಹಿಂದು ಶೈಲಿಯ ದೇವಸ್ಥಾನದ ಗುಡಿಯೊಂದು ಪತ್ತೆಯಾದ ಘಟನೆ ಮಂಗಳೂರು ಹೊರವಲಯದ ಗಂಜಿಮಠ ಬಳಿಯ ಮಳಲಿಯಲ್ಲಿ ಪತ್ತೆಯಾಗಿದೆ. ಮಾಹಿತಿ ತಿಳಿದು ಮಂಗಳೂರು ತಹಶಿಲ್ದಾರರು ಭೇಟಿ ನೀಡಿ ಪರಿಶೀಲಿಸಿದರು. ವಿಶ್ವ ಹಿಂದೂ ಪರಿಷತ್ತು ಪ್ರಮುಖರು, ಹಿಂದೂ ಸಂಘಟನಾ ಕಾರ್ಯಕರ್ತರು ಭೇಟಿ ನೀಡಿದ್ದಾರೆ.ಸ್ಥಳದ ದಾಖಲೆ ಹಾಗೂ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಸದ್ಯ ಸ್ಥಳೀಯಾಡಳಿತ ಕಾಮಗಾರಿ ಸ್ಥಗಿತಗೊಳಿಸಲು ಆದೇಶಿಸಿದೆ ಎಂದು ತಿಳಿದುಬಂದಿದೆ.

ದರ್ಗಾ ಕೆಡವಿದಾಗ ದೇವಸ್ಥಾನದ ಗುಡಿ ಪತ್ತೆ; ಕಾಮಗಾರಿ ಸ್ಥಗಿತ Read More »

ನಿಮ್ಮ ಸೋರುತ್ತಿರುವ ಛಾವಣಿ ಸರಿಪಡಿಸೋದು ಹೇಗೆ ಗೊತ್ತಾ? ಇಲ್ಲಿದೆ ಸೂಕ್ತ ಪರಿಹಾರ…

ಸಮಗ್ರ ನ್ಯೂಸ್: ಆಧುನಿಕ ಯುಗದಲ್ಲಿ ಪ್ರತಿಯೊಂದು ಕೂಡಾ ಕಾಂಕ್ರೀಟ್ ನಿಂದ ಕೂಡಿದೆ. ಮನೆ, ಕಟ್ಟಡಗಳು, ವಿವಿಧ ಮೂಲ ಸೌಕರ್ಯ ಕಾಮಗಾರಿಗಳು ಸಿಮೆಂಟ್ ಕಾಂಕ್ರೀಟ್ ನಿಂದ ಆವೃತವಾಗಿವೆ. ಆದರೆ ಕಾಮಗಾರಿ ಲೋಪದೋಷ ಮತ್ತು ಕಚ್ಚಾ ವಸ್ತುಗಳ ಸರಿಯಾದ ಬಳಕೆ ಇಲ್ಲದೆ ಕೆಲವೇ ದಿನಗಳಲ್ಲಿ ನಮ್ಮ ಸುಂದರ ಮನೆಗಳು ಸೋರಲು ಶುರುವಾಗುತ್ತವೆ. ಹೆಚ್ಚು ಖರ್ಚು ಮಾಡಿ ಕಟ್ಟಿಸಿದ ಮನೆಗಳು ಮಳೆಗಾಲದಲ್ಲಿ ಸೋರಲು ಆರಂಭಿಸಿದರೆ ಇನ್ನು ಚಿಂತಿಸಬೇಡಿ. ಯಾಕೆಂದರೆ ನಿಮ್ಮ ಈ ಚಿಂತೆಗೆ ಪರಿಹಾರ ಇಲ್ಲಿದೆ. ದ.ಕ ಜಿಲ್ಲೆಯ ವಿವಿಧ ಕಡೆ

ನಿಮ್ಮ ಸೋರುತ್ತಿರುವ ಛಾವಣಿ ಸರಿಪಡಿಸೋದು ಹೇಗೆ ಗೊತ್ತಾ? ಇಲ್ಲಿದೆ ಸೂಕ್ತ ಪರಿಹಾರ… Read More »