ಕರಾವಳಿ

ಕರ್ನಾಟಕದಲ್ಲಿ ಕನ್ನಡವೇ ಮೊದಲು| ಕಿಚ್ಚನ ಬೆನ್ನಿಗೆ ನಿಂತ ಸಿಎಂ ಬೊಮ್ಮಾಯಿ

ಸಮಗ್ರ ನ್ಯೂಸ್: ಹಿಂದಿ ರಾಷ್ಟ್ರೀಯ ಭಾಷೆ ಅಲ್ಲ ಎಂದು ನಟ ಕಿಚ್ಚ ಸುದೀಪ್ ಹೇಳಿಕೆಗೆ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ, ಸಿದ್ದರಾಮಯ್ಯ ಈಗಾಗಲೇ ಬೆಂಬಲ ಸೂಚಿಸಿದ್ದಾರೆ. ಆದರೆ ಇದೀಗ ಹಾಲಿ ಸಿಎಂ ಬಸವರಾಜ ಬೊಮ್ಮಾಯಿ ಕೂಡ ಸುದೀಪ್ ಪರ ನಿಂತಿದ್ದಾರೆ. ಭಾಷಾವಾರು, ಪ್ರಾಂತವಾರು ಆದ ಮೇಲೆ ಎಲ್ಲವೂ ಮಾತೃಭಾಷೆ ಆಗಿದೆ. ನಮ್ಮ ರಾಜ್ಯದಲ್ಲಿ ಕನ್ನಡವೇ ಸಾರ್ವಭೌಮ ಎಂದು ನಟ ಸುದೀಪ್ ಹೇಳಿಕೆಗೆ ಸಿಎಂ ಬಸವರಾಜ ಬೊಮ್ಮಾಯಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಹಿಂದಿ ಭಾಷೆಯ ಕುರಿತು ಕಿಚ್ಚ ಸುದೀಪ್ ಮತ್ತು […]

ಕರ್ನಾಟಕದಲ್ಲಿ ಕನ್ನಡವೇ ಮೊದಲು| ಕಿಚ್ಚನ ಬೆನ್ನಿಗೆ ನಿಂತ ಸಿಎಂ ಬೊಮ್ಮಾಯಿ Read More »

ಮಂಗಳೂರು: ಬೈಬಲ್‌ನಲ್ಲಿ ಯೇಸುವನ್ನು ನಂಬಬೇಕು, ಯೇಸು ನಿನ್ನನ್ನು ರಕ್ಷಿಸುತ್ತಾನೆ; ಭಗವದ್ಗೀತೆಯನ್ನು ನಂಬಿದರೆ ಮಾತ್ರ ನೀನು ಹಿಂದೂ ಅಂತ ಉಲ್ಲೇಖವಿಲ್ಲ- ಸಚಿವ ಬಿ.ಸಿ ನಾಗೇಶ್

ಸಮಗ್ರ ನ್ಯೂಸ್: ಭಗವದ್ಗೀತೆ ಧಾರ್ಮಿಕ ಪುಸ್ತಕವಲ್ಲ, ಅದರಲ್ಲಿ ಹಿಂದೂ ಧರ್ಮದ ಆಚರಣೆ ಬಗ್ಗೆ ಹೇಳಿಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ. ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬೈಬಲ್‌ನಲ್ಲಿ ಯೇಸುವನ್ನು ನಂಬಬೇಕು, ಯೇಸು ನಿನ್ನನ್ನು ರಕ್ಷಿಸುತ್ತಾನೆ ಎಂದು ಉಲ್ಲೇಖವಿದೆ. ಆದರೆ, ಭಗವದ್ಗೀತೆಯನ್ನು ನಂಬಿದರೆ ಮಾತ್ರ ನೀನು ಹಿಂದೂ ಅಂತ ಉಲ್ಲೇಖವಿಲ್ಲ. ಬೈಬಲ್ ಮತ್ತು ಕುರಾನ್ ಧಾರ್ಮಿಕ ಗ್ರಂಥಗಳು. ಕ್ರಿಶ್ಚಿಯನ್ ಆಗಬೇಕಾದರೆ ಬೈಬಲ್ ನಂಬಬೇಕು ಅಂತ ಹೇಳಲಾಗಿದೆ. ಆದರೆ, ಭಗವದ್ಗೀತೆಯಲ್ಲಿ ಭಗವದ್ಗೀತೆ ನಂಬದಿರುವವರ ಬಗ್ಗೆ ಎಲ್ಲೂ ಮಾತನಾಡಿಲ್ಲ ಎಂದು ಶಿಕ್ಷಣ

ಮಂಗಳೂರು: ಬೈಬಲ್‌ನಲ್ಲಿ ಯೇಸುವನ್ನು ನಂಬಬೇಕು, ಯೇಸು ನಿನ್ನನ್ನು ರಕ್ಷಿಸುತ್ತಾನೆ; ಭಗವದ್ಗೀತೆಯನ್ನು ನಂಬಿದರೆ ಮಾತ್ರ ನೀನು ಹಿಂದೂ ಅಂತ ಉಲ್ಲೇಖವಿಲ್ಲ- ಸಚಿವ ಬಿ.ಸಿ ನಾಗೇಶ್ Read More »

ಗುಂಡ್ಯ ಹೊಳೆಯಲ್ಲಿ ಸತ್ತ ಮೀನುಗಳ ಪತ್ತೆ : ಮೂವರ ಬಂಧನ

ಸಮಗ್ರ ನ್ಯೂಸ್: ದಕ್ಷಿಣ ಕನ್ನಡದ ಗುಂಡ್ಯ ಹೊಳೆಯಲ್ಲಿ ನೂರಾರು ಮೀನುಗಳು ಸತ್ತುಬಿದ್ದ ದೃಶ್ಯ ಬೆಳಕಿಗೆ ಬಂದಿದ್ದು, ಈ ದುರ್ಘಟನೆಯ ಮೇಲೆ ಗಮನ ಹರಿಸಿದ ಉಪ್ಪಿನಂಗಡಿ ಪೊಲೀಸರು ಆಂಧ್ರದ ಮೂವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಉದನೆ ತೂಗು ಸೇತುವೆ ಸಮೀಪ ಗುಂಡ್ಯ ಹೊಳೆಯಲ್ಲಿ ನೂರಾರು ಮೀನುಗಳು ಸತ್ತು ಬಿದ್ದಿದೆ ಮತ್ತು ನೀರಿಗೆ ತೋಟೆ ಹಾಕಿರುವುದರಿಂದ ಮೀನುಗಳು ಸತ್ತಿದೆ ಎಂದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ವಿಚಾರವಾಗಿ ಕಾರ್ಯಾಚರಣೆ ನಡೆಸಿದ ನೆಲ್ಯಾಡಿ ಹೊರ ಠಾಣೆ ಪೊಲೀಸರು ಉದನೆಯ ಕಳಪಾರು ಎಂಬಲ್ಲಿ

ಗುಂಡ್ಯ ಹೊಳೆಯಲ್ಲಿ ಸತ್ತ ಮೀನುಗಳ ಪತ್ತೆ : ಮೂವರ ಬಂಧನ Read More »

ವಿಟ್ಲ: ಕಾಮಗಾರಿ ವೇಳೆ ಕೆಳಗೆ ಬಿದ್ದು ಯುವಕ ದುರ್ಮರಣ

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಸಮೀಪದಲ್ಲಿ ಲಕ್ನೋ ಮೂಲದ ಕಾರ್ಮಿಕ ಸಭಾಭವನದ ಫಿನಿಶಿಂಗ್ ಕಾಮಗಾರಿ ಮಾಡುತ್ತಿದ್ದ ವೇಳೆ ಆಯತಪ್ಪಿ ಕೆಳಕ್ಕೆ ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ. ವಿಟ್ಲ ಶೋಕಮಾತೆ ಇಗರ್ಜಿಯ ಸಂಬಂಧಪಟ್ಟ ಸಭಾಭವನದ ಫಿನಿಶಿಂಗ್ ಕೆಲಸ ಮಾಡುತ್ತಿದ್ದ ಲಕ್ನೋದ ಪಿಪ್ರಾ ಗೂಮ್ ಮೂಲದ ಕಾರ್ಮಿಕ ಜಯ ಪ್ರಕಾಶ್(25), ನಿನ್ನೆ ಸಂಜೆ ಮೃತಪಟ್ಟಿದ್ದಾನೆ . ಚಿಕಿತ್ಸೆಗೆ ಎಂದು ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ಕರೆದೊಯ್ದರು ಚಿಕಿತ್ಸೆ ಫಲಿಸದೇ ಜಯಪ್ರಕಾಶ್ ಅಸುನೀಗಿದ್ದಾರೆ.

ವಿಟ್ಲ: ಕಾಮಗಾರಿ ವೇಳೆ ಕೆಳಗೆ ಬಿದ್ದು ಯುವಕ ದುರ್ಮರಣ Read More »

ಸುಳ್ಯ: ಮನೆಯಿಂದಲೇ ಮೊಬೈಲ್ ಕದ್ದೊಯ್ದ ಕಿರಾತಕ ಕಳ್ಳ

ಬೆಳ್ಳಾರೆಯ ನೆಟ್ಟಾರು ಮನೆಯಿಂದ ಮೊಬೈಲ್ ಕದ್ದ ಆರೋಪಿಯನ್ನು ಸಂಪ್ಯ ಪೊಲೀಸರು ಬಂಧಿಸಿದ ಘಟನೆ ಎ.25 ರಂದು ನಡೆದಿದೆ. ಮದ್ಯಾಹ್ನದ ಸಮಯಕ್ಕೆ ನೆಟ್ಟಾರಿನ ಮಹಮ್ಮದ್ ಕುಂಞ ಯವರ ಮನೆಯ ಎದುರು ಬಾಗಿಲನ್ನು ಸರಿಸಿ ಮನೆಯ ಒಳಗೆ ಹೋಗಿ ಸುಮಾರು 8000 ಮೌಲ್ಯದ ಎರಡು ಸ್ಯಾಮ್ ಸಾಂಗ್ ಮೊಬೈಲ್ ಎ.24 ರಂದು ಕದ್ದೊಯ್ದಿದ್ದಾರೆ ಎಂದು ಮನೆಯವರು ಬೆಳ್ಳಾರೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಕಳ್ಳತನ ಮಾಡಿದ ಆರೋಪಿ ಉಮೈದ್ರಾತ್ರಿ ಸಮಯಕ್ಕೆ ಸ್ವತ್ತು ಸಮೇತ ಸಂಪ್ಯ ಪೊಲೀಸ ರು ವಶಕ್ಕೆ ಪಡೆದಿದ್ದಾರೆ.

ಸುಳ್ಯ: ಮನೆಯಿಂದಲೇ ಮೊಬೈಲ್ ಕದ್ದೊಯ್ದ ಕಿರಾತಕ ಕಳ್ಳ Read More »

ಇಂದು‌(ಎ.27) ಸಿಎಂ ಬಸವರಾಜ ಬೊಮ್ಮಾಯಿ ಕರಾವಳಿ ಪ್ರವಾಸ

ಸಮಗ್ರ ನ್ಯೂಸ್: ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಇಂದು (ಎ.27) ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದು, ವ್ಯಾಪಕ ಬಂದೋಬಸ್ತ್ ಏರ್ಪಡಿಸಲಾಗಿದೆ. ಮೂಡುಬಿದಿರೆ ತಾಲೂಕು ಆಡಳಿತ ಸೌಧ ಉದ್ಘಾಟನೆ, ಮೂಡುಬಿದಿರೆ ತಾಲೂಕು ಪತ್ರಕರ್ತರ ಸಂಘದ ನೂತನ ಪತ್ರಕರ್ತರ ಭವನ ಶಂಕುಸ್ಥಾಪನೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆಗೆ ಸಿಎಂ ಬೊಮ್ಮಾಯಿ ಮೂಡುಬಿದಿರೆಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಮಂಗಳೂರು ನಗರ ಪೊಲೀಸ್ – ಮಂಗಳೂರು ಉತ್ತರ ಉಪವಿಭಾಗದ ನಿರ್ದೇಶನದಂತೆ ಮೂಡುಬಿದಿರೆಯಲ್ಲಿ ತಾತ್ಕಾಲಿಕವಾಗಿ ವಾಹನ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ.

ಇಂದು‌(ಎ.27) ಸಿಎಂ ಬಸವರಾಜ ಬೊಮ್ಮಾಯಿ ಕರಾವಳಿ ಪ್ರವಾಸ Read More »

ಹಾಲಿನ ಬೆಲೆ ಕನಿಷ್ಠ 3 ರೂ ಗೆ ಹೆಚ್ಚಳಕ್ಕೆ, ಮುಖ್ಯಮಂತ್ರಿಗೆ ಮನವಿ

ಸಮಗ್ರ ನ್ಯೂಸ್: ಪ್ರತಿ ಲೀಟರ್ ಹಾಲಿಗೆ ಕನಿಷ್ಠ 3 ರೂ. ಹೆಚ್ಚಳ ಮಾಡುವಂತೆ ಮುಖ್ಯಮಂತ್ರಿಗಳನ್ನು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಕೋರಿದ್ದಾರೆ. ಹಾಲಿನ ಸಂಸ್ಕರಣೆ, ಕಚ್ಚಾ ಸಾಮಗ್ರಿಗಳು, ವಿದ್ಯುತ್, ಸಾಗಾಣಿಕಾ ವೆಚ್ಚ ಸೇರಿ ಬಹುತೇಕ ಎಲ್ಲ ವೆಚ್ಚಗಳು ಶೇ.30 ಹೆಚ್ಚಾಗಿರುವುದನ್ನು ಪರಿಗಣಿಸಿ ರೈತರಿಗೆ ಹೆಚ್ಚುವರಿ ದರ ನೀಡಲು ಅನುಕೂಲವಾಗುವ ನಿಟ್ಟಿನಲ್ಲಿ ಹಾಲಿನ ದರವನ್ನು ಹೆಚ್ಚಳ ಅನಿವಾರ್ಯವಾಗಿದೆ ಎಂದು ಸಿಎಂ ಬಳಿ ವಿನಂತಿಸಿಕೊಂಡಿದ್ದಾರೆ. ನಂದಿನಿ ಹಾಲಿನ ಮಾರಾಟ ದರಕ್ಕೆ ತುಲನೆ ಮಾಡಿದಾಗ ಇತರೇ ಸಂಸ್ಥೆಗಳ ದರವು ಪ್ರತಿ

ಹಾಲಿನ ಬೆಲೆ ಕನಿಷ್ಠ 3 ರೂ ಗೆ ಹೆಚ್ಚಳಕ್ಕೆ, ಮುಖ್ಯಮಂತ್ರಿಗೆ ಮನವಿ Read More »

ಮಂಗಳೂರು: ಧರ್ಮದಂಗಲ್ ನಡುವೆಯೂ ಸಾಮರಸ್ಯದ ಬೀಜ ಬಿತ್ತಿದ ಹಿಂದೂ ನವವಿವಾಹಿತ| ಮಸೀದಿಯಲ್ಲಿ ಮುಸ್ಲಿಂ ಗೆಳೆಯರಿಗಾಗಿ ಇಪ್ತಾರ್ ಆಯೋಜನೆ

ಸಮಗ್ರ ನ್ಯೂಸ್: ರಾಜ್ಯದಲ್ಲಿ ನಡೆಯುತ್ತಿರುವ ಧರ್ಮ ದಂಗಲ್ ದಿನಕ್ಕೊಂದು ತಿರುವು ಪಡೆಯತ್ತಿದೆ. ಹಿಜಾಬ್‌ನಿಂದ ಆರಂಭವಾದ ವೈಮನಸ್ಸು ಹಲಾಲ್, ವ್ಯಾಪಾರ ಬಹಿಷ್ಕಾರವನ್ನು ದಾಟಿ ಬಂಗಾರ ಖರೀದಿಯವರೆಗೂ ಬಂದು ನಿಂತಿದೆ. ಈ ಘಟನೆಯ ಆತಂಕ‌ದ ನಡುವೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಮರಸ್ಯದ ಘಟನೆ ನಡೆದಿದೆ. ತನ್ನ ಮದುವೆಗೆ ಬಂದರೂ ಉಪವಾಸ ನಿಮಿತ್ತ ಊಟ ಮಾಡದೇ ಹಿಂದಿರುಗಿದ ಮುಸ್ಲಿಂ ಗೆಳೆಯರಿಗೋಸ್ಕರ ಹಿಂದೂ ಯುವಕ ಮಸೀದಿಯಲ್ಲಿ ಇಫ್ತಾರ್ ಕೂಟ ಆಯೋಜನೆ ಮಾಡಿ, ನೂರಾರು ಮಂದಿಗೆ ಊಟ ಹಾಕಿದ ಮಾದರಿ ಕಾರ್ಯ ದಕ್ಷಿಣ ಕನ್ನಡ

ಮಂಗಳೂರು: ಧರ್ಮದಂಗಲ್ ನಡುವೆಯೂ ಸಾಮರಸ್ಯದ ಬೀಜ ಬಿತ್ತಿದ ಹಿಂದೂ ನವವಿವಾಹಿತ| ಮಸೀದಿಯಲ್ಲಿ ಮುಸ್ಲಿಂ ಗೆಳೆಯರಿಗಾಗಿ ಇಪ್ತಾರ್ ಆಯೋಜನೆ Read More »

ಸುಳ್ಯ: ಮರ್ಕಂಜ‌ ಗ್ರಾಮಸ್ಥರ ನಿದ್ದೆಗೆಡಿಸಿದ ಅಳವುಪಾರೆ ಗಣಿಗಾರಿಕೆ| ಸ್ಥಳೀಯ ವಸತಿ ಪ್ರದೇಶದಲ್ಲಿ ದಿನವೂ ಡೈನಮೈಟ್ ಸ್ಪೋಟ| ವಸತಿ ಪ್ರದೇಶದಲ್ಲಿ ಗಣಿಗಾರಿಕೆಗೆ ಪರ್ಮಿಷನ್ ಕೊಟ್ಟು ಕೈತೊಳೆದುಕೊಂಡ ಗಣಿ ಅಧಿಕಾರಿಗಳು

ಸಮಗ್ರ ನ್ಯೂಸ್: ದಿನ ಬೆಳಗಾದರೆ ಎದೆಯೊಡೆಯುವ ಡೈನಮೈಟ್ ಸದ್ದು. ಆಗಸದೆತ್ತರ ಚಿಮ್ಮುವ ಕಗ್ಗಲ್ಲ ಧೂಳು. ಸ್ಪೋಟದ ರಭಸಕ್ಕೆ ಬಿರುಕು ಬಿಡುತ್ತಿರುವ ಮನೆಯ ಗೋಡೆಗಳು. ಇದು ದ.ಕ ಜಿಲ್ಲೆಯ ಸುಳ್ಯ ತಾಲೂಕಿನ ಮರ್ಕಂಜ ಗ್ರಾಮದ ಅಳವುಪಾರೆ ಪ್ರದೇಶದಲ್ಲಿ ನಿತ್ಯ ಕಂಡುಬರುತ್ತಿರುವ ದೃಶ್ಯ. ಊರವರ ವಿರೋಧವಿದ್ದರೂ ತಲೆ ಎತ್ತಿದ ಗಣಿಗಾರಿಕೆಯಿಂದ ಇದೀಗ ಹತ್ತಿರದ ಮನೆಗಳಿಗೆ ಹಾನಿಯುಂಟಾಗಿದ್ದು, ಡೈನಮೈಟ್ ಸದ್ದು ಸ್ಥಳೀಯ ಜನರ‌ ನಿದ್ದೆಗೆಡಿಸಿದೆ. ವಿಡಿಯೋಗಾಗಿ‌ ಕೆಳಗಿನ ಲಿಂಕ್ ಒತ್ತಿರಿ… https://m.facebook.com/story.php?story_fbid=368216975253480&id=100061955421424 ಮರ್ಕಂಜ ಗ್ರಾಮದ ಆಳವುಪಾರೆ ಎಂಬಲ್ಲಿ ಕಳೆದ ಒಂದು ವರ್ಷದಿಂದ

ಸುಳ್ಯ: ಮರ್ಕಂಜ‌ ಗ್ರಾಮಸ್ಥರ ನಿದ್ದೆಗೆಡಿಸಿದ ಅಳವುಪಾರೆ ಗಣಿಗಾರಿಕೆ| ಸ್ಥಳೀಯ ವಸತಿ ಪ್ರದೇಶದಲ್ಲಿ ದಿನವೂ ಡೈನಮೈಟ್ ಸ್ಪೋಟ| ವಸತಿ ಪ್ರದೇಶದಲ್ಲಿ ಗಣಿಗಾರಿಕೆಗೆ ಪರ್ಮಿಷನ್ ಕೊಟ್ಟು ಕೈತೊಳೆದುಕೊಂಡ ಗಣಿ ಅಧಿಕಾರಿಗಳು Read More »

ಮಂಗಳೂರು: ಭಿಕ್ಷೆ ಬೇಡಿದ ಹಣವನ್ನು ಅನ್ನದಾನಕ್ಕಾಗಿ ನೀಡಿದ‌ ವೃದ್ಧೆ

ಸಮಗ್ರ ನ್ಯೂಸ್: ಕೇವಲ ತನ್ನ ಕುಟುಂಬ, ಸಂಸಾರ ಎಂದು ಹಲುಬುತ್ತಾ ಸ್ವಾರ್ಥ ಜೀವನ ನಡೆಸುವ ಈ ಕಾಲಘಟ್ಟದಲ್ಲಿ ಮಂಗಳೂರಿನ ಇಳಿವಯಸ್ಸಿನ ವೃದ್ಧೆ ತಾನು ಭಿಕ್ಷೆ ಬೇಡಿ ಸಂಗ್ರಹಿಸಿದ ಒಂದು ಲಕ್ಷ ರೂಪಾಯಿ ಹಣವನ್ನು ದೇವಸ್ಥಾನದ ಅನ್ನದಾನಕ್ಕೆ ನೀಡಿ ಮಾದರಿಯಾಗಿದ್ದಾರೆ. 80ರ ಹರೆಯದ ಇಳಿವಯಸ್ಸಿನ ಅಶ್ವತ್ಥಮ್ಮ ಸಮಾಜದಿಂದ ಬಂದ ಹಣವನ್ನು ಸಮಾಜಕ್ಕೇ ನೀಡಿ ಗಮನ ಸೆಳೆದಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಮಂಗಳೂರಿನ ಪ್ರಸಿದ್ಧ ಪೊಳಲಿ ರಾಜರಾಜೇಶ್ವರಿ ದೇವಸ್ಥಾನದ ಮುಂಭಾಗ ಭಿಕ್ಷೆ ಬೇಡುತ್ತಿರುವ 80ರ ಹರೆಯ ಅಶ್ವತ್ಥಮ್ಮ ತಾನು ಭಿಕ್ಷೆ

ಮಂಗಳೂರು: ಭಿಕ್ಷೆ ಬೇಡಿದ ಹಣವನ್ನು ಅನ್ನದಾನಕ್ಕಾಗಿ ನೀಡಿದ‌ ವೃದ್ಧೆ Read More »