ಕರಾವಳಿ

ಮಂಗಳೂರು: ಮೀನಿನ ಪ್ಯಾಕ್ಟರಿಯಲ್ಲಿ ವಿಷಾನಿಲ ಸೋರಿಕೆ| ಮೂವರ ಸಾವು; ಐದು ಮಂದಿ ಗಂಭೀರ

ಸಮಗ್ರ ನ್ಯೂಸ್: ಮಂಗಳೂರು ನಗರದ ಹೊರವಲಯದ ಎಸ್​ಇಝೆಡ್ (ವಿಶೇಷ ಆರ್ಥಿಕ ವಲಯ) ವ್ಯಾಪ್ತಿಯಲ್ಲಿ ಭಾನುವಾರ ತಡರಾತ್ರಿ ವಿಷಾನಿಲ ಸೋರಿಕೆಯಾಗಿ ಮೂವರು ಮೃತಪಟ್ಟಿದ್ದು, ಐವರ ಸ್ಥಿತಿ ಗಂಭೀರವಾಗಿದೆ. ಎಸ್​ಇಝೆಡ್ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮೀನಿನ ಫ್ಯಾಕ್ಟರಿಯ ಟ್ಯಾಂಕೊಂದರಲ್ಲಿ ವಿಷಾನಿಲ ಸೋರಿಕೆಯಾಗಿ ಈ ದುರಂತ ಸಂಭವಿಸಿದೆ. ಭಾನುವಾರ ರಾತ್ರಿ ಕಾರ್ಮಿಕನೊಬ್ಬ ಮೀನಿನ ತ್ಯಾಜ್ಯದ ಟ್ಯಾಂಕನ್ನು ಶುಚಿಗೊಳಿಸಲು ಕೆಳಗಿಳಿದಿದ್ದಾನೆ. ಈ ವೇಳೆ ಏಕಾಏಕಿ ಅಸ್ವಸ್ಥಗೊಂಡು ಬಿದ್ದಿದ್ದಾನೆ. ಕೂಡಲೇ ಆತನನ್ನು ರಕ್ಷಿಸಲು 8 ಕಾರ್ಮಿಕರು ಹೋಗಿದ್ದಾರೆ. ಈ ವೇಳೆ ಅವರು ಕೂಡ ಅಸ್ವಸ್ಥಗೊಂಡು, ಉಸಿರಾಟದಲ್ಲಿ […]

ಮಂಗಳೂರು: ಮೀನಿನ ಪ್ಯಾಕ್ಟರಿಯಲ್ಲಿ ವಿಷಾನಿಲ ಸೋರಿಕೆ| ಮೂವರ ಸಾವು; ಐದು ಮಂದಿ ಗಂಭೀರ Read More »

ಮಾಣಿ : ರಿಕ್ಷಾ ಪಲ್ಟಿಯಾಗಿ ಚಾಲಕ ಗಂಭೀರ| ಆಸ್ಪತ್ರೆಗೆ ಸಾಗಿಸಿದ ಯುವ ಕಾಂಗ್ರೆಸ್ ಕಾರ್ಯಕರ್ತರು

ಸಮಗ್ರ ನ್ಯೂಸ್ : ಹೆದ್ದಾರಿಯಲ್ಲಿ ರಿಕ್ಷಾ ಪಲ್ಟಿಯಾಗಿ ಗಂಭೀರ ಸ್ಥಿತಿಯಲ್ಲಿದ್ದ ವ್ಯಕ್ತಿಯನ್ನು ಮಾಣಿ ಯುವ ಕಾಂಗ್ರೆಸ್ ನ ಕಾರ್ಯಕರ್ತರು ಆಸ್ಪತ್ರೆಗೆ ಸೇರಿಸಿದ ಘಟನೆ ನಡೆದಿದೆ. ರಿಕ್ಷಾ ಚಾಲಕನನ್ನು ಪುತ್ತೂರಿನ ನವೀನ್ ಎಂದು ಗುರುತಿಸಲಾಗಿದೆ. ಈತ ಚಲಾಯಿಸುತ್ತಿದ್ದ ಆಟೋ ರಿಕ್ಷಾ ಮಾಣಿ ಸಮೀಪ ಹೆದ್ದಾರಿಯಲ್ಲಿ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಈ ಪರಿಣಾಮ ಚಾಲಕ ಗಂಭೀರ ಗಾಯಗೊಂಡಿದ್ದರು. ಈ ವೇಳೆ ಘಟನೆ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಮಾಣಿ ಯುವ ಕಾಂಗ್ರೆಸ್ ಕಾರ್ಯಕರ್ತರು ತಕ್ಷಣ ಕಾರಿನಲ್ಲಿ ತುಂಬೆ ಫಾದರ್ ಮುಲ್ಲರ್

ಮಾಣಿ : ರಿಕ್ಷಾ ಪಲ್ಟಿಯಾಗಿ ಚಾಲಕ ಗಂಭೀರ| ಆಸ್ಪತ್ರೆಗೆ ಸಾಗಿಸಿದ ಯುವ ಕಾಂಗ್ರೆಸ್ ಕಾರ್ಯಕರ್ತರು Read More »

ಮಂಗಳೂರು: ಲೇಡಿಹಿಲ್ ವೃತ್ತಕ್ಕೆ ಬ್ರಹ್ಮ ಶ್ರೀ ನಾರಾಯಣ ಗುರು ವೃತ್ತ ನಾಮಕರಣ

ಶ್ರೀ ನಾರಾಯಣ ಗುರುಗಳ ವಿಚಾರಧಾರೆಯೊಂದಿಗೆ ನಾವೆಲ್ಲರೂ ಬೆಳೆದು ಬಂದಿದ್ದು: ಸುನಿಲ್ ಕುಮಾರ್ ಮಂಗಳೂರು: ಮಹಾನಗರ ಪಾಲಿಕೆಯ (ಎಂಸಿಸಿ) ಪ್ರಸ್ತಾವನೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದ ನಂತರ ಲೇಡಿಹಿಲ್ ವೃತ್ತವನ್ನು ಬ್ರಹ್ಮ ಶ್ರೀ ನಾರಾಯಣ ಗುರು ವೃತ್ತ ಎಂದು ಮರುನಾಮಕರಣ ಮಾಡಲಾಗಿದ್ದು, ಏಪ್ರಿಲ್ 14 ರಂದು ಗುರುವಾರ ಶಿಲಾನ್ಯಾಸ ನೆರವೇರಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್‌ಕುಮಾರ್‌ ಫಲಕ ಅನಾವರಣಗೊಳಿಸಿದರು. ಸುನೀಲ್ ಕುಮಾರ್ ಮಾತನಾಡಿ, ಬ್ರಹ್ಮ ಶ್ರೀ ನಾರಾಯಣ ಗುರುಗಳ ವಿಚಾರಧಾರೆಯೊಂದಿಗೆ ನಾವೆಲ್ಲರೂ ಬೆಳೆದು ಬಂದಿದ್ದು, ಲೇಡಿಹಿಲ್ ವೃತ್ತವನ್ನು ಬ್ರಹ್ಮ

ಮಂಗಳೂರು: ಲೇಡಿಹಿಲ್ ವೃತ್ತಕ್ಕೆ ಬ್ರಹ್ಮ ಶ್ರೀ ನಾರಾಯಣ ಗುರು ವೃತ್ತ ನಾಮಕರಣ Read More »

ಸುಳ್ಯ : ಸುವರ್ಣ ಟಿ. ವಿ ಮಲಯಾಳಂ ಚಾನೆಲ್ ಗೆ ಸೇರಿದ ಕಾರು ಪಲ್ಟಿ

ಸುಳ್ಯ: ಟಿವಿ ಚಾನಲ್ ಗೆ ಸೇರಿದ ಕಾರ್ ಅಜ್ಜಾವರ ಗ್ರಾಮದ ಎಂಬಲ್ಲಿ ಇಂದು ಮುಂಜಾನೆ ಪಲ್ಟಿ ಯಾಗಿ ಸವಾರರು ಜೀವಪಾಯದಿಂದ ಪಾರಾದ ಘಟನೆ ಸಂಭವಿಸಿದೆ. ಅಪಘಾತಕ್ಕೀಡಾದ ಕಾರು ಸುವರ್ಣ ಟಿವಿ ಚಾನೆಲ್ ಮಲಯಾಳಂ ಸಂಸ್ಥೆಗೆ ಸೇರಿದಾಗಿದ್ದು, ಬೆಂಗಳೂರಿನಿಂದ ಸುಳ್ಯ, ಅಜ್ಜಾವರ ಮಾರ್ಗವಾಗಿ ಕೇರಳದ ಹೋಗುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದೆ. ಅಪಘಾತದಿಂದ ಸವಾರರು ಸಣ್ಣಪುಟ್ಟ ಗಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ಸುಳ್ಯ : ಸುವರ್ಣ ಟಿ. ವಿ ಮಲಯಾಳಂ ಚಾನೆಲ್ ಗೆ ಸೇರಿದ ಕಾರು ಪಲ್ಟಿ Read More »

ಸುಳ್ಯ: ಸೇತುವೆಯ ತಡೆಗೋಡೆಗೆ ಕಾರು ಡಿಕ್ಕಿ – ಜ್ಯೋತಿಷಿ ಸಹಿತ ಮೂವರಿಗೆ ಗಂಭೀರ ಗಾಯ

ಸುಳ್ಯ: ಕಲ್ಲುಗುಂಡಿ ಪೇಟೆಯ ಬಳಿ ಸೇತುವೆಯ ತಡೆಗೋಡೆಗೆ ಮಾರುತಿ 800 ಕಾರು ಡಿಕ್ಕಿಯಾಗಿ ಮೂವರಿಗೆ ಗಂಭೀರ ಗಾಯ ಗೊಂಡ ಘಟನೆ ನಿನ್ನೆ ರಾತ್ರಿ ಸಂಭವಿಸಿದೆ. ಕಲ್ಲುಗುಂಡಿ ನಿವಾಸಿ ಜ್ಯೋತಿಷಿ ಗುರುರಾಜ್, ಸಂಪಾಜೆ ಮೂಲದ ಪ್ರೇಮ್, ಹಾಗೂ ಮಾತೋರ್ವರೂ ಸೇರಿ ಮೂವರಿಗೆ ಗಂಭೀರ ಗಾಯಗೊಂಡವರು. ಸಂಪಾಜೆಯಿಂದ ಸುಳ್ಯ ಕಡೆಗೆ ತೆರಳುತ್ತಿದ್ದ ಕಾರು ಇದಾಗಿದ್ದು, ಮಳೆ ಬರುತ್ತಿದ್ದ ಹಿನ್ನಲೆ ಚಾಲಕನ ನಿಯಂತ್ರಣ ತಪ್ಪಿ ಘಟನೆ ಸಂಭವಿಸಿದೆ ಎನ್ನಲಾಗಿದೆ. ಇನ್ನೂ ಗಾಯಾಗೊಂಡ ಪ್ರಯಾಣಿಕರನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದೊಯ್ಯಲಾಗಿದೆ.

ಸುಳ್ಯ: ಸೇತುವೆಯ ತಡೆಗೋಡೆಗೆ ಕಾರು ಡಿಕ್ಕಿ – ಜ್ಯೋತಿಷಿ ಸಹಿತ ಮೂವರಿಗೆ ಗಂಭೀರ ಗಾಯ Read More »

ಸುಳ್ಳು ಕೇಸುಗಳಿಗೆ ಎಳ್ಳು ನೀರು ಬಿಡ್ತಾ ಇರುವ ಯುವ ಲಾಯರ್| ಚಿನ್ಮಯನಿರುವಾಗ ಯಾಕೆ ಚಿಂತೆ?

ಸಮಗ್ರ ವಿಶೇಷ: ಹಿಂದೂ ಧರ್ಮರಕ್ಷಣೆ ಹೆಸರಲ್ಲಿ ಅಧಿಕಾರ ಹಿಡಿದವರ ಸರ್ಕಾರ ಇದ್ದಾಗಲೂ ಅದೆಷ್ಟೋ ಹಿಂದೂ ಕಾರ್ಯಕರ್ತರ ಮೇಲೆ ನಿರಂತರ ಸುಳ್ಳು ಕೇಸುಗಳು ದಾಖಲಾಗುತ್ತಿವೆ. ಸರ್ಕಾರ, ಶಾಸಕರು ಯಾರೇ ಇದ್ದರೂ ಕಾರ್ಯಕರ್ತರಿಗೆ ಪ್ರಯೋಜನವಾಗದೇ ಪೊಲೀಸ್ ಪಾಲಾದಾಗ ಕೂಡಲೇ ಕಾ ರಕ್ಷಣೆಗೆ ಆಗಮಿಸುವ ವ್ಯಕ್ತಿಯ ಹೆಸರೇ ಚಿನ್ಮಯಿ ಈಶ್ವರಮಂಗಲ. ಹಿಂದೂ ಜಾಗರಣ ವೇದಿಕೆಯ ಮಂಗಳೂರು ವಿಭಾಗ ಕಾರ್ಯದರ್ಶಿಯಾಗಿರುವ ಚಿನ್ಮಯ್ ವೃತ್ತಿಯಲ್ಲಿ ವಕೀಲರು. ಯಾವುದೇ ಹಿಂದೂ ಕಾರ್ಯಕರ್ತರು ಹಿಂದುತ್ವದ ಹೋರಾಟದಲ್ಲಿ ಜೈಲು ಸೇರಿದಾಗ ಕೂಡಲೇ ಅವರ ರಕ್ಷಣೆಗೆ ಧಾವಿಸಿ ಬರುತ್ತಾರೆ. ಯಾವುದೇ

ಸುಳ್ಳು ಕೇಸುಗಳಿಗೆ ಎಳ್ಳು ನೀರು ಬಿಡ್ತಾ ಇರುವ ಯುವ ಲಾಯರ್| ಚಿನ್ಮಯನಿರುವಾಗ ಯಾಕೆ ಚಿಂತೆ? Read More »

ದ.ಕ ಜಿಲ್ಲೆಯ ಹಲವೆಡೆ ಭಾರೀ ಮಳೆ| ಅಲ್ಲಲ್ಲಿ ಅವಾಂತರ| ಸುಳ್ಯದ ಕಲ್ಲುಗುಂಡಿಯಲ್ಲಿ ಅತ್ಯಧಿಕ ವರ್ಷಧಾರೆ

ಸಮಗ್ರ ನ್ಯೂಸ್: ದ.ಕ.ಜಿಲ್ಲೆಯ ಮಂಗಳೂರು ನಗರ ಮತ್ತು ವಿವಿಧ ತಾಲೂಕುಗಳಲ್ಲಿ ಬುಧವಾರ(ಫೆ.13) ಸಿಡಿಲಬ್ಬರದ ಜೊತೆ ಭಾರೀ ಮಳೆಯಾಗಿದೆ. ಕರಾವಳಿ ತೀರ ಮತ್ತು ಘಟ್ಟದ ತಪ್ಪಲು ಪ್ರದೇಶದಲ್ಲಿ ಗುಡುಗು, ಮಿಂಚು ಸಹಿತ ಉತ್ತಮ ಮಳೆಯಾಗಿದೆ. ನಗರ ಪ್ರದೇಶದ ಬಹುತೇಕ ಕಡೆಗಳಲ್ಲಿ ಮುಸ್ಸಂಜೆಯ ವೇಳೆಗೆ ಗುಡುಗು ಸಹಿತ ಭಾರೀ ಮಳೆಯಾಗಿದೆ. ಬೆಳ್ತಂಗಡಿ ತಾಲೂಕಿನ ಪೀಲ್ಯ ಗ್ರಾಮದ ಶ್ರೀಧರ ಆಚಾರ್ಯ ಎಂಬವರ ತೋಟದಲ್ಲಿ ತೆಂಗಿನ ಮರಕ್ಕೆ ಸಿಡಿಲು ಬಡಿದಿದೆ. ಬಂಟ್ವಾಳ ತಾಲೂಕು ಮಾಣಿ ಗ್ರಾಮದ ಶಂಭುಗ ಶೀನ ಮೂಲ್ಯ ಅವರ ಮನೆಯ

ದ.ಕ ಜಿಲ್ಲೆಯ ಹಲವೆಡೆ ಭಾರೀ ಮಳೆ| ಅಲ್ಲಲ್ಲಿ ಅವಾಂತರ| ಸುಳ್ಯದ ಕಲ್ಲುಗುಂಡಿಯಲ್ಲಿ ಅತ್ಯಧಿಕ ವರ್ಷಧಾರೆ Read More »

ಮಂಗಳೂರು: ಅಡಿಕೆ ಜಿಎಸ್ಟಿ ದರ ಇಳಿಕೆಗೆ ಕ್ಯಾಂಪ್ಕೋ ಅಧ್ಯಕ್ಷರಿಂದ ಮನವಿ

ಸಮಗ್ರ ನ್ಯೂಸ್: ಅಡಿಕೆ ಮಾರುಕಟ್ಟೆಯಲ್ಲಿ ಸಮನ್ವಯ ಸಾಧಿಸಲು ಜಿಎಸ್‌ಟಿ ದರವನ್ನು ಶೇ 5ರಿಂದ ಶೇ 2ಕ್ಕೆ ಇಳಿಸಬೇಕು ಎಂದು ಕ್ಯಾಂಪ್ಕೊ ಅಧ್ಯಕ್ಷ ಎ. ಕಿಶೋರ್‌ಕುಮಾರ್ ಅವರು ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದ ಅವರು, ‘ಸಹಕಾರ ಸಂಸ್ಥೆಗಳು ಶೇ 100ರಷ್ಟು ತೆರಿಗೆಯನ್ನು ಪಾವತಿಸುತ್ತವೆ. ಇಡೀ ಅಡಿಕೆ ಮಾರುಕಟ್ಟೆಯಲ್ಲಿ ನಮ್ಮ ಪಾಲು ಶೇ15ರಷ್ಟು ಇರುವುದರಿಂದ ಸಹಕಾರಿ ಸಂಘಗಳು ರೈತರಿಗೆ ನ್ಯಾಯ ಒದಗಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಜಿಎಸ್‌ಟಿ ಇಳಿಕೆ ಮಾಡಬೇಕು’ ಎಂದು ವಿನಂತಿಸಿದರು. ಬಾಕಿ

ಮಂಗಳೂರು: ಅಡಿಕೆ ಜಿಎಸ್ಟಿ ದರ ಇಳಿಕೆಗೆ ಕ್ಯಾಂಪ್ಕೋ ಅಧ್ಯಕ್ಷರಿಂದ ಮನವಿ Read More »

ಉಡುಪಿ: ಇನ್ನೂ ತೆರವಾಗದ ಸಂತೋಷ್ ಪಾಟೀಲ್ ಶವ| ಈಶ್ವರಪ್ಪ ಬಂಧನವಾಗದೆ ಹೆಣ ಎತ್ತಲ್ಲ ಎಂದು ಕುಟುಂಬದವರ ಪಟ್ಟು

ಸಮಗ್ರ ನ್ಯೂಸ್: ಉಡುಪಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರ ಸಂತೋಷ್ ಮೃತದೇಹ ​​ ಉಡುಪಿ ಶಾಂಭವಿ ಲಾಡ್ಜ್​​ ರೂಂನಲ್ಲೇ ಇದ್ದು, ಬೆಳಗ್ಗೆ 9 ಗಂಟೆ ನಂತರ ತೆರವು ಸಾಧ್ಯತೆ ಆಗಲಿದೆ. ಈಶ್ವರಪ್ಪ ಅರೆಸ್ಟ್ ಆಗದೇ ಅಂತ್ಯ ಸಂಸ್ಕಾರ ಮಾಡಲ್ಲ ಎಂದು ಕುಟುಂಬದವರು ಪಟ್ಟು ಹಿಡಿದಿದ್ದಾರೆ. ಕುಟುಂಬ ಸದಸ್ಯರ ಮುಂದೆ ಪಂಚನಾಮೆ, ಪಂಚನಾಮೆ ಮುಗಿದ ಮೇಲೆ ಮೃತ ದೇಹ ಹೊರಕ್ಕೆ ಕೊಡಲಾಗುತ್ತದೆ. ಸದ್ಯ ಕೊಠಡಿ ಸಂಖ್ಯೆ 207ರಲ್ಲೇ ಮೃತದೇಹ ಇದೆ. ಕುಟುಂಬ ಸದಸ್ಯರ ಸಮ್ಮುಖದಲ್ಲೇ ಮೃತದೇಹ ಹೊರಕ್ಕೆ ತರಲಾಗುತ್ತದೆ. ಮೃತದೇಹ

ಉಡುಪಿ: ಇನ್ನೂ ತೆರವಾಗದ ಸಂತೋಷ್ ಪಾಟೀಲ್ ಶವ| ಈಶ್ವರಪ್ಪ ಬಂಧನವಾಗದೆ ಹೆಣ ಎತ್ತಲ್ಲ ಎಂದು ಕುಟುಂಬದವರ ಪಟ್ಟು Read More »

ಕಳಚಿದ ಬಲಿಪ ಪರಂಪರೆಯ ಮತ್ತೊಂದು ಕೊಂಡಿ| ಯಕ್ಷಗಾನದ ಮೇರು ಪ್ರತಿಭೆ ಪ್ರಸಾದ್ ಭಾಗವತ ಇನ್ನಿಲ್ಲ

ಸಮಗ್ರ ನ್ಯೂಸ್: ಯಕ್ಷಗಾನ ರಂಗದ ತೆಂಕುತಿಟ್ಟಿನ ಅಗ್ರಗಣ್ಯ ಬಲಿಪ ಪರಂಪರೆಯ ಕೊಂಡಿಯೊಂದು ಕಳಚಿ ಹೋಗಿದ್ದು, ಭಾಗವತಿಕೆಯಲ್ಲಿ ಹೆಸರಾಗಿದ್ದ ಬಲಿಪ ಪ್ರಸಾದ ಭಾಗವತರು ಸೋಮವಾರ ಇಹಲೋಕ ತ್ಯಜಿಸಿದ್ದಾರೆ. ಕೆಲ ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾರೆ ಎಂದು ತಿಳಿದು ಬಂದಿದೆ. ಕಟೀಲು ದುರ್ಗಾಪರಮೇಶ್ವರಿ ಯಕ್ಷಗಾನ ಮೇಳದಲ್ಲಿ ಪ್ರಧಾನ ಭಾಗವತರಾಗಿ ಸೇವೆ ಸಲ್ಲಿಸುತ್ತಿದ್ದ ಅವರು ತನ್ನ ಪರಂಪರೆಯ ವಿಶಿಷ್ಟ ಕಂಚಿನ ಕಂಠದ ಮೂಲಕ ಅಪಾರ ಜನಪ್ರಿಯತೆ ಪಡೆದಿದ್ದರು. ಪ್ರಸಾದ್ ಅವರು ತಂದೆ ಖ್ಯಾತ

ಕಳಚಿದ ಬಲಿಪ ಪರಂಪರೆಯ ಮತ್ತೊಂದು ಕೊಂಡಿ| ಯಕ್ಷಗಾನದ ಮೇರು ಪ್ರತಿಭೆ ಪ್ರಸಾದ್ ಭಾಗವತ ಇನ್ನಿಲ್ಲ Read More »