ಕರಾವಳಿ

ಪುತ್ತೂರು ಬಿಜೆಪಿ ಕಚೇರಿಯಲ್ಲಿ ಸಂಸದ ಚೌಟ ನೇತೃತ್ವದಲ್ಲಿ ಪರ್ಸನಲ್ ಮೀಟಿಂಗ್!! ಕುತೂಹಲ ಮೂಡಿಸಿದ ಕೇಸರಿ ಪಾಳಯದ ನಡೆ

ಸಮಗ್ರ ನ್ಯೂಸ್: ಪುತ್ತೂರು ಬಿಜೆಪಿ ಕಚೇರಿಯಲ್ಲಿ ಸಂಸದ ಬ್ರಿಜೇಶ್ ಚೌಟ ನೇತೃತ್ವದಲ್ಲಿ ಗುರುವಾರ ರಹಸ್ಯ ಸಭೆ ನಡೆದಿದ್ದು ಕುತೂಹಲ ಮೂಡಿಸಿದೆ. ಬಿಜೆಪಿ ಪಾಳಯದಲ್ಲಿ ಕಳೆದ ಕೆಲ ದಿನಗಳಿಂದ ನಡೆಯುತ್ತಿರುವ ಬೆಳವಣಿಗೆಯ ಜತೆಗೆ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಆಕಾಂಕ್ಷಿತರು ಇನ್ನಿಲ್ಲದ ಕಸರತ್ತು ನಡೆಸಿದ್ದು ಹೀಗಾಗಿ ಚೌಟ ಅವರ ನೇತೃತ್ವದಲ್ಲಿ ಗೌಪ್ಯ ಸಭೆ ನಡೆದಿದೆ ಎನ್ನಲಾಗಿದೆ. ಸುಳ್ಯ ಕ್ಷೇತ್ರದ ಭೇಟಿ ನಡುವೆ ಸಂಸದ ಚೌಟ ಅವರು ದಿಢೀರ್ ಆಗಿ ಪುತ್ತೂರು ಪಕ್ಷದ ಕಚೇರಿಗೆ ಆಗಮಿಸಿದ್ದರು. ಸಂಸದರ ಆಗಮನದ ಬಗ್ಗೆ […]

ಪುತ್ತೂರು ಬಿಜೆಪಿ ಕಚೇರಿಯಲ್ಲಿ ಸಂಸದ ಚೌಟ ನೇತೃತ್ವದಲ್ಲಿ ಪರ್ಸನಲ್ ಮೀಟಿಂಗ್!! ಕುತೂಹಲ ಮೂಡಿಸಿದ ಕೇಸರಿ ಪಾಳಯದ ನಡೆ Read More »

ಪುತ್ತೂರು: ಮನೆಯಲ್ಲಿ ಅನುಮಾನಾಸ್ಪದ ಚಟುವಟಿಕೆ ಹಿನ್ನೆಲೆ| ಪೊಲೀಸರಿಂದ ದಿಢೀರ್ ದಾಳಿ

ಸಮಗ್ರ ನ್ಯೂಸ್: ಮನೆಯೊಂದಕ್ಕೆ ದಿಢೀರ್‌ ದಾಳಿ ನಡೆಸಿದ ಪುತ್ತೂರು ನಗರ ಠಾಣೆ ಪೊಲೀಸರು ಇಬ್ಬರು ಮಹಿಳೆಯರನ್ನು ವಶಕ್ಕೆ ಪಡೆದ ಘಟನೆ ಪುತ್ತೂರು ನಗರದ ಹೊರವಲಯ ಬನ್ನೂರಿನಲ್ಲಿ ಆ 29 ರಂದು ಸಂಜೆ ನಡೆದಿದೆ. ಆ ಮನೆಯಲ್ಲಿ ಅನುಮಾನಸ್ಪದ ಚಟುವಟಿಕೆ ನಡೆಯುತ್ತಿದೆ ಎಂಬ ದೂರು ಬಂದ ಹಿನ್ನಲೆಯಲ್ಲಿ ದಾಳಿ ನಡೆಸಿರುವುದಾಗಿ ಪೊಲೀಸ್‌ ಮೂಲಗಳು ತಿಳಿಸಿವೆ . ಪೊಲೀಸರು ಭೇಟಿ ನೀಡಿದ ವೇಳೆ ಆ ಮನೆಯಲ್ಲಿ ಮನೆ ಒಡತಿಯ ಯೊಂದಿಗೆ ಮತ್ತೊಬ್ಬರು ಮಹಿಳೆಯೂ ಇದ್ದರು. ಇವರ ಹೊರತು ಮನೆಯಲ್ಲಿ ಬೇರೆ

ಪುತ್ತೂರು: ಮನೆಯಲ್ಲಿ ಅನುಮಾನಾಸ್ಪದ ಚಟುವಟಿಕೆ ಹಿನ್ನೆಲೆ| ಪೊಲೀಸರಿಂದ ದಿಢೀರ್ ದಾಳಿ Read More »

ಮತ್ತೆ ಕನ್ನಡ ಸಿನಿಮಾ ಮಾಡೋದಾಗಿ ಸುಳಿವು ಕೊಟ್ಟ ಕರಾವಳಿ ಬೆಡಗಿ

ಸಮಗ್ರ ನ್ಯೂಸ್: ಕರಾವಳಿ ಬೆಡಗಿ ನೇಹಾ ಶೆಟ್ಟಿ ಕನ್ನಡ ಸಿನಿಮಾದಲ್ಲಿ ನಟಿಸುವ ಬಗ್ಗೆ ಸುಳಿವು ನೀಡಿದ್ದಾರೆ. ಅವರು ಮಾತನಾಡಿ, ಕನ್ನಡದಲ್ಲಿ ಎಷ್ಟು ಒಳ್ಳೆಯ ಸಿನಿಮಾ ಬರುತ್ತಿದೆ. ‘ಕಾಂತಾರ’ ಚಿತ್ರಕ್ಕೆ ನ್ಯಾಷನಲ್ ಅವಾರ್ಡ್ ಬಂದಿದೆ ಇದರ ಬಗ್ಗೆ ಖುಷಿ ಇದೆ ಎಂದಿದ್ದಾರೆ. ಬಳಿಕ ನೇಹಾ ಶೆಟ್ಟಿ ಕನ್ನಡಕ್ಕೆ ಬರುವ ಬಗ್ಗೆ ಪ್ಲ್ಯಾನ್ ಮಾಡಿದ್ದಾರೆ. ಕನ್ನಡದ ಸ್ಕ್ರಿಪ್ಟ್‌ಗಳನ್ನು ಕೇಳುತ್ತಿರುವ ನೇಹಾ ಶೆಟ್ಟಿ, ಒಂದು ಒಳ್ಳೆಯ ಕಥೆಗಾಗಿ ಕಾಯುತ್ತಿದ್ದಾರೆ. ಅದು ಕಂಪ್ಲೀಟ್ ಹೊಸ ರೀತಿಯ ಪಾತ್ರವೇ ಆಗಿರಬೇಕು ಎಂಬುದು ಆಸೆ ಎಂದು

ಮತ್ತೆ ಕನ್ನಡ ಸಿನಿಮಾ ಮಾಡೋದಾಗಿ ಸುಳಿವು ಕೊಟ್ಟ ಕರಾವಳಿ ಬೆಡಗಿ Read More »

ಸಂಘದ ಸ್ವಯಂ ಸೇವಕ ಹುದ್ದೆಯಿಂದ ಮುರಳೀಕೃಷ್ಣ ಹಸಂತಡ್ಕ ಬಿಡುಗಡೆ| ಪಕ್ಷದ ಜವಾಬ್ದಾರಿ ವಹಿಸಲು ವಿಎಚ್ ಪಿ ಸೂಚನೆ

ಸಮಗ್ರ ನ್ಯೂಸ್: ಮೂರು ದಶಕಗಳ ಪರಿವಾರ ಸಂಘಟನೆಗಳ ವಿವಿಧ ಜವಾಬ್ದಾರಿ ನಿರ್ವಹಿಸಿದ ಮುರಳಿಕೃಷ್ಣ ಹಸಂತಡ್ಕ ಅವರನ್ನು ಸಂಘದ ಸ್ವಯಂ ಸೇವಕ ಹುದ್ದೆಯಿಂದ ಬಿಡುಗಡೆ ಮಾಡಲಾಗಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಸಕ್ರೀಯರಾಗಿದ್ದು ಪರಿವಾರ ಸಂಘಟನೆಗಳಲ್ಲಿ ಸುದೀರ್ಘ 28 ವರ್ಷಗಳ ಕಾಲ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ ಮುರಳಿಕೃಷ್ಣ ಹಸಂತಡ್ಕ ಅವರನ್ನು ಇದೀಗ ಸಂಘದಿಂದ ಪೂರ್ಣವಾಗಿ ಬಿಡುಗಡೆಗೊಳಿಸಿ ಪಕ್ಷ ಸಂಘಟನೆಯನ್ನು ಮಾಡುವಂತೆ ವಿಶ್ವಹಿಂದು ಪರಿಷದ್ ಸೂಚನೆ ನೀಡಿದೆ. ಈ ಬೆಳವಣಿಗೆ ಪುತ್ತೂರಿನ ಮುಂದಿನ ರಾಜಕೀಯದಲ್ಲಿ ಕುತೂಹಲ ಮೂಡಿಸಿದೆ. ವಿದ್ಯಾರ್ಥಿ ಜೀವನದಲ್ಲೇ

ಸಂಘದ ಸ್ವಯಂ ಸೇವಕ ಹುದ್ದೆಯಿಂದ ಮುರಳೀಕೃಷ್ಣ ಹಸಂತಡ್ಕ ಬಿಡುಗಡೆ| ಪಕ್ಷದ ಜವಾಬ್ದಾರಿ ವಹಿಸಲು ವಿಎಚ್ ಪಿ ಸೂಚನೆ Read More »

ಕಡಬ: ಅವಸರ ತಂದ ಅಪಘಾತ| ಬೈಕ್ ಸವಾರ ಸಾವು; ಚರಂಡಿಗೆ ಉರುಳಿದ ಇನ್ನೋವಾ

ಸಮಗ್ರ ನ್ಯೂಸ್: ಖಾಸಗಿ ಬಸ್ಸ್ ಅನ್ನು ಓವರ್‌ಟೇಕ್ ಮಾಡುವ ಭರದಲ್ಲಿ ಬೈಕೊಂದು ಸ್ಕಿಡ್ ಆಗಿ ಬಿದ್ದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಸುಬ್ರಹ್ಮಣ್ಯ – ಧರ್ಮಸ್ಥಳ ರಾಜ್ಯ ಹೆದ್ದಾರಿಯ ಇಚಿಲಂಪಾಡಿ ಸಮೀಪದ ನೂಜಿಬಾಳ್ತಿಲ ಎಂಬಲ್ಲಿ ಸೋಮವಾರ(ಆ.26)ದಂದು ನಡೆದಿದೆ. ಮೃತ ಸವಾರನನ್ನು ಶಿವಮೊಗ್ಗ ಜಿಲ್ಲೆಯ ಹಾರನಹಳ್ಳಿ ಗ್ರಾಮದ ಗುತ್ಯಪ್ಪ ಎಂಬವರ ಪುತ್ರ ದೇವರಾಜ್ (22) ಎಂದು ಗುರುತಿಸಲಾಗಿದೆ. ಈತ ತನ್ನ ಸ್ನೇಹಿತರೊಂದಿಗೆ ಬೈಕಿನಲ್ಲಿ ಧರ್ಮಸ್ಥಳ ಯಾತ್ರೆ ಮುಗಿಸಿ ಸುಬ್ರಹ್ಮಣ್ಯಕ್ಕೆ‌ ತೆರಳುತ್ತಿದ್ದ ವೇಳೆ ನೂಜಿಬಾಳ್ತಿಲ ಬೆಥನಿ‌ ಕಾಲೇಜಿನ ಮುಂಭಾಗದಲ್ಲಿ

ಕಡಬ: ಅವಸರ ತಂದ ಅಪಘಾತ| ಬೈಕ್ ಸವಾರ ಸಾವು; ಚರಂಡಿಗೆ ಉರುಳಿದ ಇನ್ನೋವಾ Read More »

ಆಲಂಕಾರು: ಆ.30ರಂದು ಹಿಂದೂ ಜಾಗರಣ ವೇದಿಕೆಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿಯ 9 ನೇ ವರ್ಷದ ಅಟ್ವಿ ಮಡಿಕೆ ಒಡೆಯುವ ಉತ್ಸವ

ಸಮಗ್ರ ನ್ಯೂಸ್: ಆಲಂಕಾರು ಹಿಂದೂ ಜಾಗರಣ ವೇದಿಕೆಯ ಆಶ್ರಯದಲ್ಲಿ ಮೊಸರು ಕುಡಿಕೆ ಉತ್ಸವ ಸಮಿತಿಯ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ 9 ನೇ ವರ್ಷದ ಅಟ್ವಿ ಮಡಿಕೆ ಒಡೆಯುವ ಉತ್ಸವವು ಆ.30ರಂದು ಮಧ್ಯಾಹ್ನ ಗಂಟೆ 2.30 ರಿಂದ ಆಲಂಕಾರು ಪೇಟೆಯಲ್ಲಿ ನಡೆಯಲಿದೆ. ಆಲಂಕಾರು ವರ್ತಕ ಸಂಘದ ಅಧ್ಯಕ್ಷರು ಮತ್ತು ಉದ್ಯಮಿ ಲಕ್ಷ್ಮೀನಾರಾಯಣ ಪ್ರಭು ಉದ್ಘಾಟನೆ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮಗಳು ಸಾರ್ವಜನಿಕ ಅಟ್ಟಿ ಮಡಿಕೆ ಒಡೆಯುವುದು, ಶ್ರೀ ಭಾರತಿ ಶಾಲೆಯ ಪುಟಾಣಿ ಮಕ್ಕಳ ಶ್ರೀ ಕೃಷ್ಣ

ಆಲಂಕಾರು: ಆ.30ರಂದು ಹಿಂದೂ ಜಾಗರಣ ವೇದಿಕೆಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿಯ 9 ನೇ ವರ್ಷದ ಅಟ್ವಿ ಮಡಿಕೆ ಒಡೆಯುವ ಉತ್ಸವ Read More »

ಕೊಲೆ ಆರೋಪಿ ನಟ ದರ್ಶನ್‌ಗೆ ರಾಜಾತಿಥ್ಯ| ಪರಪ್ಪನ ಅಗ್ರಹಾರ ಜೈಲಿನ 7 ಸಿಬ್ಬಂದಿ ಅಮಾನತು| ಶೀಘ್ರದಲ್ಲಿ ಬೇರೆ ಕಾರಾಗೃಹಗಳಿಗೆ ಸ್ಥಳಾಂತರ – ಸಿಎಂ

ಸಮಗ್ರ ನ್ಯೂಸ್: ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್‌ಗೆ ಪರಪ್ಪನ ಆಗ್ರಹಾರ ಜೈಲಿನಲ್ಲಿ ವಿಶೇಷ ಆತಿಥ್ಯ ನೀಡಿ ಕರ್ತವ್ಯ ಲೋಪ ಎಸಗಿದ ಆರೋಪದಡಿ 7 ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೈಲರ್‌ ಶರಣಪ್ಪ ಪ್ರಭು, ಎಸ್‌ ಖಂಡೇಲ್‌ ವಾಲ್, ಅಸಿಸ್ಟೆಂಟ್ ಜೈಲರ್‌ ಎಲ್‌.ಎಸ್. ತಿಪ್ಪೇಸ್ವಾಮಿ, ಶ್ರೀಕಾಂತ್ ತಲ್ವಾರ್, ಹೆಡ್‌ ವಾರ್ಡರ್‌ ವೆಂಕಪ್ಪ, ಸಂಪತ್ ಕುಮಾರ್, ವಾರ್ಡರ್ ಬಸಪ್ಪ ತೇಲಿ ಎಂಬವರನ್ನು ಅಮಾನತು ಮಾಡಲಾಗಿದೆ ಎಂದು

ಕೊಲೆ ಆರೋಪಿ ನಟ ದರ್ಶನ್‌ಗೆ ರಾಜಾತಿಥ್ಯ| ಪರಪ್ಪನ ಅಗ್ರಹಾರ ಜೈಲಿನ 7 ಸಿಬ್ಬಂದಿ ಅಮಾನತು| ಶೀಘ್ರದಲ್ಲಿ ಬೇರೆ ಕಾರಾಗೃಹಗಳಿಗೆ ಸ್ಥಳಾಂತರ – ಸಿಎಂ Read More »

ಕುಕ್ಕೆ ಸುಬ್ರಹ್ಮಣ್ಯ: ಪಾರ್ಕಿಂಗ್ ನಿಯಮ ಉಲ್ಲಂಘಿಸಿದರೆ ದಂಡ ಫಿಕ್ಸ್

ಸಮಗ್ರ ನ್ಯೂಸ್: ಕುಕ್ಕೆ ಸುಬ್ರಹ್ಮಣ್ಯದ ಪೇಟೆಯಲ್ಲಿ ಸುಗಮ ಸಂಚಾರ ಹಿನ್ನೆಲೆಯಲ್ಲಿ ಇತ್ತೀಚೆಗೆ ಹೊಸದಾಗಿ ಜಾರಿ ಮಾಡಲಾಗಿರುವ ಪಾರ್ಕಿಂಗ್‌ ಹಾಗೂ ಸಂಚಾರ ನಿಯಮ ಉಲ್ಲಂಘಿಸಿದಲ್ಲಿ ಶನಿವಾರದಿಂದ ದಂಡ ವಾಪತಿಸಬೇಕಾದ ನಿಯಮ ಜಾರಿಗೆ ಬಂದಿದೆ. ಪ್ರಸಿದ್ಧ ಯಾತ್ರಾ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿನ ವಾಹನ ದಟ್ಟಣೆ ನಿಯಂತ್ರಿಸುವ ಉದ್ದೇಶದಿಂದ ಸುಬ್ರಹ್ಮಣ್ಯ ಪೊಲೀಸ್‌ ವತಿಯಿಂದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ, ಸುಬ್ರಹ್ಮಣ್ಯ ಗ್ರಾಮ ಪಂಚಾಯತ್‌, ವಿವಿಧ ಇಲಾಖೆಗಳು, ಸಾರ್ವಜನಿಕರ ಸಭೆ ನಡೆಸಿ ಹೊಸ ಪಾರ್ಕಿಂಗ್‌ ಹಾಗೂ ಸಂಚಾರ ನಿಯಮ ಜಾರಿಗೊಳಿಸಲಾಗಿತ್ತು. ಹೊಸ ನಿಯಮದ ಬಗ್ಗೆ

ಕುಕ್ಕೆ ಸುಬ್ರಹ್ಮಣ್ಯ: ಪಾರ್ಕಿಂಗ್ ನಿಯಮ ಉಲ್ಲಂಘಿಸಿದರೆ ದಂಡ ಫಿಕ್ಸ್ Read More »

ಸುಳ್ಯ: ಅಪಘಾತದಲ್ಲಿ ಸಾವನ್ನಪ್ಪಿದ ಜೊತೆಗಾರ| ಮನಕಲಕಿದ ಶ್ವಾನಗಳ ಮೂಕರೋದನೆ

ಸಮಗ್ರ ನ್ಯೂಸ್: ಅಪಘಾತದಲ್ಲಿ ನಾಯಿಯೊಂದು ಸಾವನ್ನಪ್ಪಿದ್ದು, ಸದಾ ಅದರ ಜತೆಗಿರುತ್ತಿದ್ದ ಇತರ ನಾಯಿಗಳು ಮೃತದೇಹದ ಬಳಿ ರೋದಿಸುತ್ತಿದ್ದ ಮನಕಲಕುವ ದೃಶ್ಯ ಸುಳ್ಯ ಪೈಚಾರ್‌ ಜಂಕ್ಷನ್‌ನಲ್ಲಿ ಕಂಡುಬಂತು. ಮಾಣಿ- ಮೈಸೂರು ಹೆದ್ದಾರಿಯ ಪೈಚಾರ್‌ ಜಂಕ್ಷನ್‌ನಲ್ಲಿ 4-5 ನಾಯಿಗಳು ಓಡಾಡಿಕೊಂಡಿದ್ದು, ಇವುಗಳಲ್ಲೊಂದು ಬಸ್ಸಿನಡಿಗೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದೆ. ಇದರ ಮೃತದೇಹದ ಬಳಿಯಲ್ಲಿ ನೆರೆದ ಇತರ ನಾಯಿಗಳು ತುಂಬಾ ರೋದಿಸಿದವು. ಇದರ ವೀಡಿಯೋ ಜಾಲತಾಣದಲ್ಲಿ ವೈರಲ್‌ ಆಗಿದೆ. ಬಳಿಕ ನಾಯಿಯ ಮೃತದೇಹವನ್ನು ತೆರವು ಮಾಡಲಾಯಿತು.

ಸುಳ್ಯ: ಅಪಘಾತದಲ್ಲಿ ಸಾವನ್ನಪ್ಪಿದ ಜೊತೆಗಾರ| ಮನಕಲಕಿದ ಶ್ವಾನಗಳ ಮೂಕರೋದನೆ Read More »

ಪುತ್ತೂರು: ಚೂರಿ ಇರಿತ ಪ್ರಕರಣದ ವಿದ್ಯಾರ್ಥಿಗಳಿಬ್ಬರ ಮನೆಗೆ ಶಾಸಕ ಅಶೋಕ್ ರೈ ಭೇಟಿ

ಸಮಗ್ರ ನ್ಯೂಸ್: ಪುತ್ತೂರಿ‌ನ ಕೊಂಬೆಟ್ಟು ಸರಕಾರಿ ಕಾಲೇಜಿನ ವಿದ್ಯಾರ್ಥಿನಿಯು ಸಹ ಪಾಠಿ ವಿದ್ಯಾರ್ಥಿ ವಿರುದ್ಧ ಚೂರಿ ಇರಿತದ ಆರೋಪದ ಬಗ್ಗೆ ತನಿಖೆ ನಡೆಯು ತ್ತಿದ್ದು, ಶಾಸಕ ಅಶೋಕ್‌ ಕುಮಾರ್‌ ರೈ ವಿದ್ಯಾರ್ಥಿಗಳಿಬ್ಬರ ಮನೆಗೂ ಭೇಟಿ ನೀಡಿದರು. ಬಳಿಕ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ| ಯತೀಶ್‌ ಎನ್‌. ಬಳಿ ದೂರವಾಣಿ ಮೂಲಕ ಮಾತನಾಡಿದ ಶಾಸಕರು, ಕಾಲೇಜಿನಲ್ಲಿ ಏನು ಘಟನೆ ನಡೆದಿದೆಯೋ ಅದರ ಬಗ್ಗೆ ಕೂಲಂಕಷವಾಗಿ, ನ್ಯಾಯಯುತವಾಗಿ ತನಿಖೆ ನಡೆಸಬೇಕು. ಇದರಲ್ಲಿ ಯಾವುದೇ ರಾಜಕೀಯ ಒತ್ತಡವಿಲ್ಲ. ತನಿಖೆ ನಡೆಸಿ ಸತ್ಯಾಸತ್ಯತೆಯನ್ನು ಹೊರ ತನ್ನಿ.

ಪುತ್ತೂರು: ಚೂರಿ ಇರಿತ ಪ್ರಕರಣದ ವಿದ್ಯಾರ್ಥಿಗಳಿಬ್ಬರ ಮನೆಗೆ ಶಾಸಕ ಅಶೋಕ್ ರೈ ಭೇಟಿ Read More »