‘ಹಿಂದೂ ಹಬ್ಬಗಳ ರಕ್ಷಣೆಗೆ ತಲವಾರು ಜೊತೆ ಜನರನ್ನು ಕಳುಹಿಸುತ್ತೇವೆ’| ಮಂಗಳೂರಿನಲ್ಲಿ ಶ್ರೀರಾಮ ಸೇನೆಯ ಕುಲಕರ್ಣಿ ಹೇಳಿಕೆ
ಸಮಗ್ರ ನ್ಯೂಸ್: ‘ರಾಜ್ಯ ಸರ್ಕಾರದಿಂದ ಹಿಂದೂ ಹಬ್ಬಗಳಿಗೆ ರಕ್ಷಣೆ ಇಲ್ಲ ಎಂಬುದು ಸಾಬೀತಾಗಿದೆ. ಹಾಗಾಗಿ ನಾವೇ ಶಸ್ತ್ರ ಹಿಡಿದು ಹಬ್ಬ ಆಚರಿಸಲು ನಿರ್ಧರಿಸಿದ್ದೇವೆ. ಮುಂಬರುವ ಗಣೇಶ ಚತುರ್ಥಿ ಸಂದರ್ಭದಲ್ಲಿ, ಆಯೋಜಕರು ವಿನಂತಿಸಿದರೆ ಮೆರವಣಿಗೆಯ ರಕ್ಷಣೆಗಾಗಿ 50 ಯುವಕರನ್ನು ತಲವಾರುಸಹಿತ ಕಳುಹಿಸಲು ಸಿದ್ಧ’ ಎಂದು ಶ್ರೀರಾಮಸೇನೆಯ ರಾಜ್ಯ ಘಟಕದ ಅಧ್ಯಕ್ಷ ಗಂಗಾಧರ ಕುಲಕರ್ಣಿ ತಿಳಿಸಿದರು. ಮಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ನಿಮಗಷ್ಟೇ ಕಲ್ಲು ಹಿಡಿಯಲು, ತಲವಾರು ಹಿಡಿಯಲು ಬರುವುದಲ್ಲ. ಹಿಂದೂ ಸಮಾಜಕ್ಕೂ ಗೊತ್ತಿದೆ ಎಂದು ಮುಸ್ಲಿಂ ಗೂಂಡಾಗಳಿಗೆ […]









