ಕರಾವಳಿ

ಸುಳ್ಯ:ಐವರ್ನಾಡಿನಲ್ಲಿ ಉಗ್ರ ಪ್ರತಿಭಟನಾ ಎಚ್ಚರಿಕೆಯ, ಬ್ಯಾನರ್ ಅಳವಡಿಕೆ|ಹೊಂಡ ಗುಂಡಿಗಳಿಂದ ಮುಕ್ತಿಯಾಗದ ರಸ್ತೆ|ಮಗು ಕೂಗಿದರೆ ಮಾತ್ರ ತಾಯಿ ಹಾಲು ಕೊಡುವುದು!!

ಸಮಗ್ರ ನ್ಯೂಸ್: ಪ್ರತಿದಿನ ನೂರಾರು ಮಂದಿ ಓಡಾಡುವ ರಸ್ತೆ ಹೊಂಡ ಗುಂಡಿಗಳಿಂದ ಮುಕ್ತಿಯಾಗದೆ ಇರುವುದರಿಂದ ಕೊನೆಗೆ ದಾರಿತೋಚದೆ ಐವರ್ನಾಡಿನಲ್ಲಿ ಉಗ್ರ ಪ್ರತಿಭಟನಾ ಎಚ್ಚರಿಕೆ ಬ್ಯಾನರ್ ಅಳವಡಿಕೆ ಮಾಡಿದ್ದಾರೆ. ದಿನ ಬೆಳಗಾದರೆ ಇಲ್ಲಿ ನೂರಾರು ಮಂದಿ ಸೇರಿದಂತೆ ಶಾಲಾ ಮಕ್ಕಳು,ಐವರ್ನಾಡು ಪಂಚಲಿಂಗೇಶ್ವರ ಸನ್ನಿಧಾನಕ್ಕೆ ಭಕ್ತರು ಓಡಾಡುತ್ತಾರೆ, ಕೆಲವರು ನಡೆದುಕೊಂಡು ಹೋದರೆ ಇನ್ನೂ ಕೆಲವರು ತಮ್ಮ ತಮ್ಮ ವಾಹನಗಳಲ್ಲಿ ಓಡಾಡುತ್ತಾರೆ. ಆದರೆ ಈ ರಸ್ತೆಯಲ್ಲಿ ಓಡಾಡಿದ ಬಳಿಕ ಮನೆಗೆ ಬಂದು ಮೈ-ಕೈ ನೋವಿನಿಂದ ಏನು ಕೆಲಸ ಮಾಡದ ಪರಿಸ್ಥಿತಿ ಇಲ್ಲಿನ […]

ಸುಳ್ಯ:ಐವರ್ನಾಡಿನಲ್ಲಿ ಉಗ್ರ ಪ್ರತಿಭಟನಾ ಎಚ್ಚರಿಕೆಯ, ಬ್ಯಾನರ್ ಅಳವಡಿಕೆ|ಹೊಂಡ ಗುಂಡಿಗಳಿಂದ ಮುಕ್ತಿಯಾಗದ ರಸ್ತೆ|ಮಗು ಕೂಗಿದರೆ ಮಾತ್ರ ತಾಯಿ ಹಾಲು ಕೊಡುವುದು!! Read More »

ಕೆಎಸ್ಎಸ್ ಕಾಲೇಜಿನಲ್ಲಿ ಲೋಗೋ ರಂಗ್ ಪ್ರದರ್ಶನ

ಸಮಗ್ರ ನ್ಯೂಸ್: ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾ ವಿದ್ಯಾಲಯ ಸುಬ್ರಹ್ಮಣ್ಯ, ಆಂತರಿಕ ಗುಣಮಟ್ಟ ಭರವಸಾ ಕೋಶ ಮತ್ತು ವಾಣಿಜ್ಯ ಹಾಗೂ ಉದ್ಯಮಾಡಳಿತ ವಿಭಾಗದ ಆಶ್ರಯದಲ್ಲಿ ಪ್ರಥಮ ಬಿಕಾಂ ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದ ಲೋಗೋ ರಂಗ್ ಪ್ರದರ್ಶನವು ಮಹಾವಿದ್ಯಾಲಯದ ಸಭಾಂಗಣದಲ್ಲಿ ನಡೆಯಿತು. ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ಒಟ್ಟು 34 ವಿವಿಧ ಆಪ್(app)ಗಳನ್ನು ರಂಗೋಲಿಯಲ್ಲಿ ಮೂಡಿಸಿದರು. ಕಾರ್ಯಕ್ರಮವನ್ನು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ದಿನೇಶ್ ಪಿ.ಟಿ. ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟನೆ ಮಾಡಿ ಪ್ರದರ್ಶನ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಆಂತರಿಕ ಗುಣಮಟ್ಟ

ಕೆಎಸ್ಎಸ್ ಕಾಲೇಜಿನಲ್ಲಿ ಲೋಗೋ ರಂಗ್ ಪ್ರದರ್ಶನ Read More »

ಉಳ್ಳಾಲ: ಗೂಡ್ಸ್ ಆಟೋ ಚಾಲಕ ಬಾವಿಗೆ ಹಾರಿ ಆತ್ಮಹತ್ಯೆ

ಸಮಗ್ರ ನ್ಯೂಸ್: ಗೂಡ್ಸ್ ರಿಕ್ಷಾ ಚಾಲಕ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರಿನ ತೊಕ್ಕೊಟ್ಟು ಒಳಪೇಟೆಯ ಸಂತ ಸೆಬೆಸ್ತಿಯನ್ನರ ಚರ್ಚ್ ಬಳಿ ನಡೆದಿದೆ. ಮೃತರನ್ನು ತೊಕ್ಕೊಟ್ಟು ಕೃಷ್ಣ ನಗರದ ಲಚ್ಚಿಲ್ ನಿವಾಸಿ ನಾಗೇಶ್ (62) ಗೂಡ್ಸ್ ಆಟೋ ಟೆಂಪೊ ಚಲಾಯಿಸುತ್ತಿದ್ದರು. ಟೆಂಪೋವನ್ನ ನಾಗೇಶ್ ಅವರು ಒಳಪೇಟೆಯ ಚರ್ಚ್ ಮುಂಭಾಗದ ಗಣೇಶ್ ಭವನ ಹೊಟೇಲು ಮಾಲಕರ ಮನೆಯಂಗಳದಲ್ಲೇ ರಾತ್ರಿ ನಿಲ್ಲಿಸುತ್ತಿದ್ದರು. ಇಂದು ಬೆಳಿಗ್ಗೆ ನಾಗೇಶ್ ಅವರು ಟೆಂಪೋ ತೆಗೆಯದೆ ನಾಪತ್ತೆಯಾಗಿದ್ದು ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಗಣೇಶ್ ಭವನ ಮಾಲಕರ

ಉಳ್ಳಾಲ: ಗೂಡ್ಸ್ ಆಟೋ ಚಾಲಕ ಬಾವಿಗೆ ಹಾರಿ ಆತ್ಮಹತ್ಯೆ Read More »

ಛಾಯಾಗ್ರಾಹಕರ ಸಂಘದ ಅಧ್ಯಕ್ಷ, ಪದಾಧಿಕಾರಿಗಳ ಆಯ್ಕೆ

ಸಮಗ್ರ ನ್ಯೂಸ್: ಸೌತ್ ಕೆನರಾ ಫೋಟೋಗ್ರಾಪರ್ಸ್ ಅಸೊಸಿಯೇಷನ್ ದ.ಕ. ಮತ್ತು ಉಡುಪಿ ಜಿಲ್ಲೆ ಇದರ ಜಂಟಿ ಕಾರ್ಯಕಾರಿ ಸಭೆ ಮಂಗಳೂರಿನ ಸೈಂಟ್ ಸೆಬಾಸ್ಟಿಯನ್ ಹಾಲ್ ನಲ್ಲಿ ಸೆ. 26ರಂದು ನಡೆಯಿತು. ಜಿಲ್ಲಾಧ್ಯಕ್ಷ ಆನಂದ ಎನ್. ಬಂಟ್ವಾಳ್ ಹಾಗೂ ಎಲ್ಲಾ ಜಿಲ್ಲಾ ಪದಾಧಿಕಾರಿಗಳ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ 2024-25 ನೇ ಸಾಲಿನ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಆಯ್ಕೆ ನಡೆಸಲಾಯಿತು. ಸುಳ್ಯ ವಲಯದ ನಿಕಟ ಪೂರ್ವ ಅಧ್ಯಕ್ಷ ಹರೀಶ್ ಪಿ. ರಾವ್ ಇವರನ್ನು ಜಿಲ್ಲಾ ಛಾಯಾ ಗ್ರಾಹಕ ಮಾಧ್ಯಮ

ಛಾಯಾಗ್ರಾಹಕರ ಸಂಘದ ಅಧ್ಯಕ್ಷ, ಪದಾಧಿಕಾರಿಗಳ ಆಯ್ಕೆ Read More »

ಸುಳ್ಯ:ಎನ್ನೆಂಸಿ ವಿಜ್ಞಾನ ಸಂಘದ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ

ಸಮಗ್ರ ನ್ಯೂಸ್: ನೆಹರೂ ಮೆಮೋರಿಯಲ್ ಕಾಲೇಜು ಸುಳ್ಯ ಇಲ್ಲಿನ ವಿಜ್ಞಾನ ಸಂಘ ಇದರ 2023- 24ನೇ ಸಾಲಿನ ವಾರ್ಷಿಕ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮ ಸೆ. 26ರಂದು ಕಾಲೇಜು ಸಭಾಂಗಣದಲ್ಲಿ ನಡೆಯಿತು. ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜಿನ ವಿಜ್ಞಾನ ಶಿಕ್ಷಕಿ ಪ್ರಣವಿ ಎಂ. ವೈಜ್ಞಾನಿಕವಾಗಿ ವಿಕ್ರಂ ಲ್ಯಾಂಡರ್ ರೋವರ್ ಚಲನೆಯ ಮಾದರಿ ಮೂಲಕ ವಿಜ್ಞಾನ ಸಂಘದ ಪರದೆಯನ್ನು ಸರಿಸಿ ವಿನೂತನ ರೀತಿಯಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ವಿಜ್ಞಾನ ಎಂಬುದು ಜ್ಞಾನದ ಒಂದು ಶಾಖೆ. ಇಂದು ಹಲವಾರು ವೈಜ್ಞಾನಿಕ

ಸುಳ್ಯ:ಎನ್ನೆಂಸಿ ವಿಜ್ಞಾನ ಸಂಘದ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ Read More »

ಮಂಗಳೂರಿನಲ್ಲಿ ಡ್ರಗ್ಸ್ ಮಾರುತ್ತಿದ್ದ ಸುಳ್ಯದ ಯುವಕ ಪೊಲೀಸ್ ವಶಕ್ಕೆ

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡ್ರಗ್ಸ್ ದಂಧೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಈಗಾಗಲೇ ಹಲವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಪೈಕಿ ಕಾಲೇಜು ವಿದ್ಯಾರ್ಥಿಗಳು ಕೂಡ ಸೇರಿದ್ದಾರೆ. ಇದೀಗ ಮಂಗಳೂರು ನಗರದ ಬೆಂದೂರ್ ವೆಲ್ ಪರಿಸರದಲ್ಲಿ ಮಾದಕವಸ್ತು ಮಾರಾಟ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬ ಸಿಸಿಬಿ ಪೊಲೀಸರ ಸೆರೆಯಾಗಿದ್ದಾನೆ. ಮಂಗಳೂರಿನ ಕಾಲೋಜುವೊಂದರ ಪದವಿ ವಿದ್ಯಾರ್ಥಿಯಾಗಿರುವ ಸುಳ್ಯದ ಹಳಗೇಟಿನಲ್ಲಿರುವ ಆಲ್ಫಮ್ ಕಾರ್ನರ್ ಹೊಟೇಲ್ ನ ಮಾಲೀಕ ಡೆಲ್ಮಾ ಮುಸ್ತಫಾ ಎಂಬವರ ಮಗ ಲುಕುಮಾನುಲ್ ಹಕೀಂ (22) ಬಂಧಿತ ಆರೋಪಿಯಾಗಿದ್ದು. ಈತನಿಂದ 1

ಮಂಗಳೂರಿನಲ್ಲಿ ಡ್ರಗ್ಸ್ ಮಾರುತ್ತಿದ್ದ ಸುಳ್ಯದ ಯುವಕ ಪೊಲೀಸ್ ವಶಕ್ಕೆ Read More »

ಮಂಗಳೂರು: ರಿಕ್ಷಾಕ್ಕೆ ಡಿಕ್ಕಿ ಹೊಡೆದ ಆಂಬುಲೆನ್ಸ್

ಸಮಗ್ರ ನ್ಯೂಸ್: ರೋಗಿಯೊಬ್ಬರನ್ನು ಕರೆದುಕೊಂಡು ಹೋಗುತ್ತಿದ್ದ 108 ಆಂಬ್ಯುಲೆನ್ಸ್ ಟೈಲ್ಸ್ ಸಾಗಿಸುತ್ತಿದ್ದ ಆಟೋ ರಿಕ್ಷಾಗೆ ಢಿಕ್ಕಿ ಹೊಡೆದ ಪರಿಣಾಮ ಆಟೋ ಚಾಲಕ ಮತ್ತು ಮಗು ಗಾಯಗೊಂಡ ಘಟನೆ ಮಂಗಳೂರಿನ ಪಡೀಲ್ ನಲ್ಲಿ ನಡೆದಿದೆ. ಆಟೋ ರಿಕ್ಷಾದಲ್ಲಿ ಮೂವರು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಗಾಯಗೊಂಡ ಆಟೋ ರಿಕ್ಷಾ ಚಾಲಕ ಹಾಗೂ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಂಬ್ಯುಲೆನ್ಸ್ ಹಿಂದಿನಿಂದ ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದಿದ್ದು ಅಪಘಾತದ ರಭಸಕ್ಕೆ ಆಟೋ ರಿಕ್ಷಾದಲ್ಲಿದ್ದ ಟೈಲ್ಸ್ ರಸ್ತೆಯ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.

ಮಂಗಳೂರು: ರಿಕ್ಷಾಕ್ಕೆ ಡಿಕ್ಕಿ ಹೊಡೆದ ಆಂಬುಲೆನ್ಸ್ Read More »

ಸೌಜನ್ಯ ಪ್ರಕರಣ ಪರ ದನಿ ಎತ್ತದ ತುಳು ಚಿತ್ರನಟರ ವಿರುದ್ಧ ಪೋಸ್ಟರ್ ಅಭಿಯಾನ

ಸಮಗ್ರ ನ್ಯೂಸ್: ಹನ್ನೆರಡು ವರ್ಷಗಳ ಹಿಂದೆ ಅತ್ಯಾಚಾರಕ್ಕೆ ಒಳಗಾಗಿ‌ ಕೊಲೆಯಾಗಿ‌ ಹೋದ ಧರ್ಮಸ್ಥಳ ಸಮೀಪದ ಪಾಂಗಾಳ ನಿವಾಸಿ ಕುಮಾರಿ ಸೌಜನ್ಯ ಪ್ರಕರಣದ ಕುರಿತಂತೆ ಮೌನಕ್ಕೆ ಶರಣಾಗಿರುವ ತುಳು ಚಿತ್ರರಂಗದ ನಟರ ವಿರುದ್ದ ಪೋಸ್ಟರ್ ಅಭಿಯಾನ ಆರಂಭಿಸಲಾಗಿದೆ. ಕರಾವಳಿ ಸೇರಿದಂತೆ ರಾಜ್ಯಾದ್ಯಂತ ಸೌಜನ್ಯ ಪರ ಪ್ರತಿಭಟನೆಗಳು ನಡೆಯುತ್ತಿದ್ದು, ಕನ್ನಡ ಚಿತ್ರರಂಗದ ಹಲವಾರು ನಟರು ಸೌಜನ್ಯಳ ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಾರೆ. ಆದರೆ ಕರಾವಳಿಯಲ್ಲೇ ನಡೆದ ಈ ಹೇಯ ಕೃತ್ಯಕ್ಕೆ ಸಂಬಂಧಿಸಿದಂತೆ ತುಳು ಚಿತ್ರರಂಗದ ದಿಗ್ಗಜರು ಮೌನಕ್ಕೆ ಶರಣಾಗಿದ್ದಾರೆ. ಇದೀಗ ಈ

ಸೌಜನ್ಯ ಪ್ರಕರಣ ಪರ ದನಿ ಎತ್ತದ ತುಳು ಚಿತ್ರನಟರ ವಿರುದ್ಧ ಪೋಸ್ಟರ್ ಅಭಿಯಾನ Read More »

ಸುಳ್ಯ:ಫ್ರೆಂಡ್ಸ್ ಕ್ಲಬ್ ಜಯನಗರ ಇದರ ನೂತನ ಪದಾಧಿಕಾರಿಗಳ ಆಯ್ಕೆ

ಜಯನಗರದಲ್ಲಿ ಫ್ರೆಂಡ್ಸ್ ಕ್ಲಬ್ ನ ನೂತನ ಪದಾಧಿಕಾರಿಗಳ ಆಯ್ಕೆ. ನೂತನ ಅಧ್ಯಕ್ಷರಾಗಿ ಸುರೇಶ್ ಕಾಮತ್ ಜಯನಗರ, ಉಪಾಧ್ಯಕ್ಷರಾಗಿ ರೋಪಿ ಜಯನಗರ, ಶರೀಫ್ ಜಯನಗರ, ಕಾರ್ಯದರ್ಶಿಯಾಗಿ ಜನಾರ್ಧನ ಜಿ. ಜಯನಗರ, ಜತೆ ಕಾರ್ಯದರ್ಶಿಯಾಗಿ ಸುಂದರ ಕುದ್ಪಾಜೆ, ಖಜಾಂಜಿಯಾಗಿ ಪ್ರಸನ್ನ ಕುದ್ಪಾಜೆ, ಸಂಘಟನಾ ಕಾರ್ಯದರ್ಶಿಯಾಗಿ ರಮೇಶ್ ಕುದ್ಪಾಜೆ, ಕ್ರೀಡಾ ಕಾರ್ಯದರ್ಶಿಯಾಗಿ ಲೋಕೇಶ್ ಕೊಡೆಂಕಿರಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಮನೋಜ್ ಜಯನಗರ, ನಿರ್ದೇಶಕರುಗಳಾಗಿ ನಿತಿನ್ ಕೊಯಿಂಗೋಡಿ, ಪ್ರಶಾಂತ್ ಜಯನಗರ, ಚೇತನ್ ಜಯನಗರ, ಪ್ರಕಾಶ್ ನಾರಾಜೆ,ಗಣೇಶ್ ಕುದ್ಪಾಜೆ, ಶಶಿಕುಮಾರ್ ಕುದ್ಪಾಜೆ,ಪ್ರವೀಣ್ ಕುದ್ಪಾಜೆ, ಗೌರವ ಸಲಹೆಗಾರರಾಗಿ

ಸುಳ್ಯ:ಫ್ರೆಂಡ್ಸ್ ಕ್ಲಬ್ ಜಯನಗರ ಇದರ ನೂತನ ಪದಾಧಿಕಾರಿಗಳ ಆಯ್ಕೆ Read More »

ಸಂತ್ರಸ್ತನಿಗಾಗಿ ಮಿಡಿದ ಯುವ ಮನಸ್ಸುಗಳು

ಸಮಗ್ರ ನ್ಯೂಸ್: ಸುಳ್ಯ ತಾಲ್ಲೂಕಿನ ಕೊಲ್ಲಮೊಗ್ರು ಗ್ರಾಮದ ಶಿವಾಲ ಎಂಬಲ್ಲಿ ನೆಲೆಸಿರುವ ಸಚಿತ್ ಶಿವಾಲ ಎಂಬುವವರಿಗೆ ಕಿಡ್ನಿ ವೈಫಲ್ಯನಿಂದ ಬಳಲುತ್ತಿದ್ದು, ಅವರ ಚಿಕಿತ್ಸೆಗಾಗಿ ಕಲ್ಮಕಾರಿನ ಯುವಕರು ಧನ ಸಂಗ್ರಹ ಮಾಡಿ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಸಚಿತ್ ಶಿವಾಲ ಕಳೆದ ಎರಡು ವರ್ಷಗಳಿಂದ ಕಿಡ್ನಿ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದು, ಈಗಾಗಲೇ ಎರಡು ಕಿಡ್ನಿಗಳು ಶೇ 80 ರಷ್ಟು ನಿಷ್ಕ್ರಿಯಗೊಂಡಿದ್ದು, ಅತೀ ಶೀಘ್ರದಲ್ಲೇ ಕಿಡ್ನಿ ಟ್ರಾನ್ಸ್ ಪ್ಲಾಂಟ್ ಮಾಡುವುದು ಅನಿವಾರ್ಯವಾಗಿದೆ. ಇದಕ್ಕಾಗಿ 16 ಲಕ್ಷದಷ್ಟು ಹಣದ ಅವಶ್ಯಕತೆ ಇದೆ.

ಸಂತ್ರಸ್ತನಿಗಾಗಿ ಮಿಡಿದ ಯುವ ಮನಸ್ಸುಗಳು Read More »