ಸುಳ್ಯ:ಐವರ್ನಾಡಿನಲ್ಲಿ ಉಗ್ರ ಪ್ರತಿಭಟನಾ ಎಚ್ಚರಿಕೆಯ, ಬ್ಯಾನರ್ ಅಳವಡಿಕೆ|ಹೊಂಡ ಗುಂಡಿಗಳಿಂದ ಮುಕ್ತಿಯಾಗದ ರಸ್ತೆ|ಮಗು ಕೂಗಿದರೆ ಮಾತ್ರ ತಾಯಿ ಹಾಲು ಕೊಡುವುದು!!
ಸಮಗ್ರ ನ್ಯೂಸ್: ಪ್ರತಿದಿನ ನೂರಾರು ಮಂದಿ ಓಡಾಡುವ ರಸ್ತೆ ಹೊಂಡ ಗುಂಡಿಗಳಿಂದ ಮುಕ್ತಿಯಾಗದೆ ಇರುವುದರಿಂದ ಕೊನೆಗೆ ದಾರಿತೋಚದೆ ಐವರ್ನಾಡಿನಲ್ಲಿ ಉಗ್ರ ಪ್ರತಿಭಟನಾ ಎಚ್ಚರಿಕೆ ಬ್ಯಾನರ್ ಅಳವಡಿಕೆ ಮಾಡಿದ್ದಾರೆ. ದಿನ ಬೆಳಗಾದರೆ ಇಲ್ಲಿ ನೂರಾರು ಮಂದಿ ಸೇರಿದಂತೆ ಶಾಲಾ ಮಕ್ಕಳು,ಐವರ್ನಾಡು ಪಂಚಲಿಂಗೇಶ್ವರ ಸನ್ನಿಧಾನಕ್ಕೆ ಭಕ್ತರು ಓಡಾಡುತ್ತಾರೆ, ಕೆಲವರು ನಡೆದುಕೊಂಡು ಹೋದರೆ ಇನ್ನೂ ಕೆಲವರು ತಮ್ಮ ತಮ್ಮ ವಾಹನಗಳಲ್ಲಿ ಓಡಾಡುತ್ತಾರೆ. ಆದರೆ ಈ ರಸ್ತೆಯಲ್ಲಿ ಓಡಾಡಿದ ಬಳಿಕ ಮನೆಗೆ ಬಂದು ಮೈ-ಕೈ ನೋವಿನಿಂದ ಏನು ಕೆಲಸ ಮಾಡದ ಪರಿಸ್ಥಿತಿ ಇಲ್ಲಿನ […]










