ಕರಾವಳಿ

ಪುತ್ತೂರು: ಲೈಂಗಿಕ ದೌರ್ಜನ್ಯ ಎಸಗಿ ಬ್ಲ್ಯಾಕ್ ಮೇಲ್| ಪ್ರಶಾಂತ್ ಭಟ್ ಮಾಣಿಲ ಕಾರವಾರದಲ್ಲಿ ಅರೆಸ್ಟ್

ಸಮಗ್ರ ನ್ಯೂಸ್: ಬಣ್ಣದ ಮಾತಿನಿಂದ ವಿವಾಹಿತ ಮಹಿಳೆಯನ್ನು ಲೈಂಗಿಕವಾಗಿ ಬಳಸಿ, ಬ್ಲ್ಯಾಕ್‌ಮೇಲ್ ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಆರ್ಲಪದವು ಮೂಲದ ಪ್ರಶಾಂತ ಭಟ್ ಮಾಣಿಲ ಆರೋಪಿ. ಮಹಿಳೆಯನ್ನು ಲೈಂಗಿಕವಾಗಿ ಬಳಸಿದ್ದಲ್ಲದೇ ಲಕ್ಷಗಟ್ಟಲೆ ಹಣಕ್ಕೆ ಬೇಡಿಕೆಯಿಟ್ಟು ಆರೋಪಿಯು ಬ್ಲ್ಯಾಕ್ ಮೇಲ್ ಮಾಡಿದ್ದ. ಸಂತ್ರಸ್ತ ಮಹಿಳೆಗೆ ಸಂಗೀತದಲ್ಲಿ ಆಸಕ್ತಿಯಿದ್ದು, ಕ್ಲಬ್ ಹೌಸ್ ಅ್ಯಪ್‌ನಲ್ಲಿ ಹಾಡುತ್ತಿದ್ದಳು. 2020 ರಲ್ಲಿ ಆ್ಯಪ್ ಮೂಲಕವೇ ಆರೋಪಿಯ ಪರಿಚಯವಾಗಿ, ಪರಿಚಯ ಸ್ನೇಹಕ್ಕೆ ತಿರುಗಿ ಕ್ರಮೇಣ ಪರಸ್ಪರ ಇಷ್ಟಪಟ್ಟಿದ್ದರು. 2023ರ ಜನವರಿ […]

ಪುತ್ತೂರು: ಲೈಂಗಿಕ ದೌರ್ಜನ್ಯ ಎಸಗಿ ಬ್ಲ್ಯಾಕ್ ಮೇಲ್| ಪ್ರಶಾಂತ್ ಭಟ್ ಮಾಣಿಲ ಕಾರವಾರದಲ್ಲಿ ಅರೆಸ್ಟ್ Read More »

ಬಾಳುಗೋಡು: ಬಿಟ್ಟುಮಕ್ಕಿ-ಪುಣೇರಿ ವರೆಗೆ ಕೆಎಸ್ಆರ್ ಟಿಸಿ ವಿಸ್ತ್ರತ ಬಸ್ ರೂಟ್ ಗೆ ಚಾಲನೆ

ಸಮಗ್ರ ನ್ಯೂಸ್: ಪುತ್ತೂರಿನಿಂದ ಬಾಳುಗೋಡು ಮಾರ್ಗವಾಗಿ ಸಂಚರಿಸುವ ಎಲ್ಲಾ ಬಸ್ಸುಗಳು ಇನ್ನು ಮುಂದೆ ಬಾಳುಗೋಡಿನಿಂದ ಒಂದು ಕಿಮೀ ಮುಂದುವರೆದು ಬೆಟ್ಟುಮಕ್ಕಿ- ಪುಣೇರಿ ಎಸ್.ಸಿ ಕಾಲನಿಯವರೆಗೆ ಸಂಚರಿಸಲಿದ್ದು, ಬಾಳುಗೋಡು ಗ್ರಾಮದ ಬೆಟ್ಟುಮಕ್ಕಿಯಲ್ಲಿ ಇಂದು (ಸೆ. 28ರಂದು) ಚಾಲನೆ ನೀಡಲಾಯಿತು. ಬಾಳುಗೋಡು ಗ್ರಾಮದ ಹಿರಿಯ ಕಾಂಗ್ರೆಸ್ ಮುಖಂಡ ದಯಾನಂದ ಕಟ್ಟೆಮನೆ ರಿಬ್ಬನ್ ಕತ್ತರಿಸುವ ಮೂಲಕ ಸ್ವಾಗತಿಸಿದರು. ಸುಳ್ಯದ ಕಾಂಗ್ರೆಸ್ ಹಿರಿಯ ಮುಖಂಡ ಬೆಟ್ಟ ಜಯರಾಮ್ ಭಟ್ ನೇತೃತ್ವದಲ್ಲಿ ಬಸ್ ಮಾರ್ಗ ಮುಂದುವರೆಸುವಂತೆ ಸತತವಾಗಿ ಪ್ರಯತ್ನಿಸಿದ್ದ ಬಾಳುಗೋಡು ಗ್ರಾಮ ಕಾಂಗ್ರೆಸ್ ಸಮಿತಿ

ಬಾಳುಗೋಡು: ಬಿಟ್ಟುಮಕ್ಕಿ-ಪುಣೇರಿ ವರೆಗೆ ಕೆಎಸ್ಆರ್ ಟಿಸಿ ವಿಸ್ತ್ರತ ಬಸ್ ರೂಟ್ ಗೆ ಚಾಲನೆ Read More »

ಸುಳ್ಯ ಶಾಖೆಯ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಸಂಸ್ಥೆ ವಿದ್ಯಾಮಾತಾ ಅಕಾಡೆಮಿ ಸೆ.28 ರಂದು ಉದ್ಘಾಟನೆ

ಸಮಗ್ರ ನ್ಯೂಸ್: ಭಾರತ ಸರಕಾರದ ಮಾನ್ಯತೆ ಪಡೆದ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಮತ್ತು ಖಾಸಗಿ ಉದ್ಯೋಗಗಳ ವೃತ್ತಿಪರ ಕೌಶಲ್ಯ ತರಬೇತಿ ಸಂಸ್ಥೆಯಾಗಿರುವ, ಪುತ್ತೂರಿನಲ್ಲಿ ಹೆಸರುವಾಸಿಯಾಗಿರುವ “ವಿದ್ಯಾಮಾತಾ ಅಕಾಡೆಮಿ”ಯ ಶಾಖಾ ಕಛೇರಿ ಸುಳ್ಯದ ರಥಬೀದಿಯ ಟಿಎಪಿಸಿಎಂಎಸ್ ನಲ್ಲಿ ಸೆ.28 ರಂದು ಶುಭಾರಂಭಗೊಂಡಿದೆ. ಪುತ್ತೂರಿನ ಮಾಜಿ ಶಾಸಕಿ ಶಕುಂತಲಾ. ಟಿ . ಶೆಟ್ಟಿ ಮತ್ತು ಇತರ ಅತಿಥಿಗಳು ಉದ್ಘಾಟಿಸಿದರು. ಹಾಗೆಯೇ ಆನೇಕ ಅತಿಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಭಾಗ್ಯೇಶ್ ರವರು ಮಾತನಾಡಿ ಪುತ್ತೂರಿನಲ್ಲಿ ಉದ್ಯೋಗ ಮೇಳ ಮಾಡಿದ ನಂತರ ಸುಳ್ಯದಲ್ಲಿ

ಸುಳ್ಯ ಶಾಖೆಯ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಸಂಸ್ಥೆ ವಿದ್ಯಾಮಾತಾ ಅಕಾಡೆಮಿ ಸೆ.28 ರಂದು ಉದ್ಘಾಟನೆ Read More »

ಕಡಬ: ವ್ಯಕ್ತಿ ಮೇಲೆ ಕಾಡಾನೆ ದಾಳಿ| ಗಂಭೀರವಾಗಿ ಗಾಯಗೊಂಡಾತ ಆಸ್ಪತ್ರೆಗೆ ದಾಖಲು

ಸಮಗ್ರ ನ್ಯೂಸ್: ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯ ಮೇಲೆ ಕಾಡಾನೆ ದಾಳಿ ನಡೆಸಿದ ಪರಿಣಾಮ ಪಾದಚಾರಿ ಗಂಭೀರ ಗಾಯಗೊಂಡ ಘಟನೆ ಕಡಬ ತಾಲೂಕಿನ ಮರ್ಧಾಳ ಸಮೀಪದ ಸುಳ್ಯ ಎಂಬಲ್ಲಿ ಗುರುವಾರ (ಸೆ.28) ದಂದು ರಾತ್ರಿ ಸಂಭವಿಸಿದೆ. ಕಾಡಾನೆ ತುಳಿತಕ್ಕೊಳಗಾದವರನ್ನು ನೇಲ್ಯಡ್ಕ ನಿವಾಸಿ ಚೋಮ(52) ಎಂದು ಗುರುತಿಸಲಾಗಿದೆ. ಇವರು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಸುಳ್ಯ ಸಮೀಪ ಏಕಾಏಕಿ ಪ್ರತ್ಯಕ್ಷಗೊಂಡ ಕಾಡಾನೆ ದಾಳಿ ನಡೆಸಿದೆ. ಪರಿಣಾಮ ಗಂಭೀರ ಗಾಯಗೊಂಡ ಚೋಮರವರನ್ನು ಕಡಬ ಸಮುದಾಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ

ಕಡಬ: ವ್ಯಕ್ತಿ ಮೇಲೆ ಕಾಡಾನೆ ದಾಳಿ| ಗಂಭೀರವಾಗಿ ಗಾಯಗೊಂಡಾತ ಆಸ್ಪತ್ರೆಗೆ ದಾಖಲು Read More »

ಕರ್ನಾಟಕ ಬಂದ್ ಹಿನ್ನೆಲೆ| ನಾಳೆ ದ.ಕ ದಲ್ಲಿ ಶಾಲೆ ಕಾಲೇಜುಗಳಿಗೆ ರಜೆ ಇದೆಯಾ? ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದ್ದಿಷ್ಟು…

ಸಮಗ್ರ ನ್ಯೂಸ್: ಕಾವೇರಿ ನೀರಿನ ವಿಚಾರದಲ್ಲಿ ಕನ್ನಡ ಸಂಘಟನೆಗಳು ಕರ್ನಾಟಕ ಬಂದ್ ಗೆ ಕರೆ ನೀಡಿದ್ದು, ಈ ಹಿನ್ನೆಲೆಯಲ್ಲಿ ದ.ಕನ್ನಡ ಜಿಲ್ಲೆಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ. ಕರಾವಳಿ ಭಾಗದಲ್ಲಿ ಇದರ ಬಂದ್ ಬಿಸಿ ತಟ್ಟುವುದಿಲ್ಲ. ಈ ಹಿನ್ನೆಲೆ ನಾಳೆ ಶಾಲಾ ಕಾಲೇಜುಗಳು ಎಂದಿನಂತೆ ಕಾರ್ಯಾಚರಿಸಲಿದೆ. ದಕ್ಷಿಣ ಕನ್ನಡ ಶಾಲಾ ಕಾಲೇಜುಗಳಿಗೆ ರಜೆ ಇಲ್ಲ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮಾಹಿತಿ ನೀಡಿದ್ದಾರೆ.

ಕರ್ನಾಟಕ ಬಂದ್ ಹಿನ್ನೆಲೆ| ನಾಳೆ ದ.ಕ ದಲ್ಲಿ ಶಾಲೆ ಕಾಲೇಜುಗಳಿಗೆ ರಜೆ ಇದೆಯಾ? ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದ್ದಿಷ್ಟು… Read More »

ಸುಳ್ಯ: ತಿಂಗಳ ಕರುವಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿದ ಡಾ. ನಿತಿನ್‌ ಪ್ರಭು

ಸಮಗ್ರ ನ್ಯೂಸ್:‌ ಬಾಯಿ ಬಳಿ ಮೂಳೆ ಮುರಿತಕ್ಕೊಳಗಾದ ಒಂದು ತಿಂಗಳ ಕರುವಿಗೆ ಸುಳ್ಯ ಪಶುವೈದ್ಯಾಧಿಕಾರಿಯಾದ ಡಾ. ನಿತಿನ್‌ ಪ್ರಭು ಮತ್ತು ಡಾ. ನಾಗರಾಜ್ Rtd ಕೇರಳ ವೆಟ್ನರಿ ಕೌನ್ಸಿಲ್‌ ಪಶು ವೈದ್ಯಕೀಯ ಪರಿಷತ್ ನ ಕನ್ಸಲ್ಟೆಂಟ್ ಆಗಿದ್ದವರು ಶಸ್ತ್ರಚಿಕಿತ್ಸೆ ಮಾಡಿಸಿ ಯಶಸ್ವಿಯಾಗಿದ್ದಾರೆ. https://m.facebook.com/story.php?story_fbid=pfbid034ZJTy4JRKJz5mnHWff4zmmKyLRfFi68AVQLcLkiJbcWmbuewj82G4QkMXPSRyANCl&id=100067962716650&mibextid=Nif5oz ಸುಳ್ಯದ, ಐವರ್ನಾಡು ಗ್ರಾಮದ ಕೃಷ್ಣಪ್ಪ ಕುಕ್ಕುಡೇಲು ಎಂಬವವರ ಒಂದು ತಿಂಗಳ ಕರು ಕಮರಿಗೆ ಬಿದ್ದು ಬಾಯಿ ಭಾಗದ ದವಡೆ ಮೂಳೆ ಮುರಿತಕ್ಕೊಳಕ್ಕಾಗಿತ್ತು. ಇದನ್ನು ಪರೀಕ್ಷಿಸಿದ ಸುಳ್ಯದ ಪಶುವೈದ್ಯಾಧಿಕಾರಿಯಾದ ಡಾ. ನಿತಿನ್‌ ಪ್ರಭು‌ ಮತ್ತು

ಸುಳ್ಯ: ತಿಂಗಳ ಕರುವಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿದ ಡಾ. ನಿತಿನ್‌ ಪ್ರಭು Read More »

ಉಜಿರೆ: ಸೆ. 29ರಂದು ಶ್ರೀ ಕಾಲಭೈರವೇಶ್ವರ ಒಕ್ಕಲಿಗ ಗೌಡರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಅರಸಿನಮಕ್ಕಿ ಶಾಖೆ ಉದ್ಘಾಟನೆ

ಸಮಗ್ರ ನ್ಯೂಸ್: ಉಜಿರೆ ಶ್ರೀ ಕಾಲಭೈರವೇಶ್ವರ ಒಕ್ಕಲಿಗ ಗೌಡರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಅರಸಿನಮಕ್ಕಿ ಶಾಖೆಯ ಉದ್ಘಾಟನಾ ಸಮಾರಂಭ ಸೆ. 29ರಂದು ನಡೆಯಲಿದೆ. ಆದಿ ಚುಂಚನಗಿರಿ ಮಹಾಸಂಸ್ಥಾನ, ಶಾಖಾ ಮಠ, ಕಾವೂರು, ಮಂಗಳೂರು ಇಲ್ಲಿನ ಪೂಜ್ಯ ಶ್ರೀ ಶ್ರೀ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿ ಅವರಿಂದ ಸುಸಜ್ಜಿತ ಅರಸಿನಮಕ್ಕಿ ಶಾಖೆಯ ಉದ್ಘಾಟನೆಗೊಳ್ಳಲಿದೆ. ಶ್ರೀ ಕಾಲಭೈರವೇಶ್ವರ ಒಕ್ಕಲಿಗ ಗೌಡರ ಕ್ರೆ.ಸೌ.ಸ. ಸಂಘದ ಅಧ್ಯಕ್ಷ ರಂಜನ್ ಜಿ. ಗೌಡ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಸಮಾರಂಭದ ಮುಖ್ಯ ಅತಿಥಿಗಳಾಗಿ ಕರ್ನಾಟಕ

ಉಜಿರೆ: ಸೆ. 29ರಂದು ಶ್ರೀ ಕಾಲಭೈರವೇಶ್ವರ ಒಕ್ಕಲಿಗ ಗೌಡರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಅರಸಿನಮಕ್ಕಿ ಶಾಖೆ ಉದ್ಘಾಟನೆ Read More »

ಸುಳ್ಯ: ಅಂಜಲಿ ಮೊಂಟೆಸ್ಸರಿ ಸ್ಕೂಲ್ ನಲ್ಲಿ ಬ್ಲೂ ಡೇ ಆಚರಣೆ

ಸಮಗ್ರ ನ್ಯೂಸ್: ಅಂಜಲಿ ಮೊಂಟೆಸ್ಸರಿ ಸ್ಕೂಲ್ ನಲ್ಲಿ ಸೆ. 27ರಂದು ನೀಲಿ ಬಣ್ಣದ ಆಚರಣೆಯನ್ನು ಆಚರಿಸಲಾಯಿತು. ನೀಲಿ ಬಣ್ಣವು ನಂಬಿಕೆ, ನಿಷ್ಠೆ, ಬುದ್ದಿವಂತಿಕೆ, ವಿಶ್ವಾಸ, ಸತ್ಯ ಮತ್ತು ಸ್ವರ್ಗವನ್ನು ಸೂಚಿಸುತ್ತದೆ. ಅದೇ ರೀತಿ ನೀಲಿ ಬಣ್ಣವನ್ನು ಶಾಂತಿಯುತ ಎಂದು ಪರಿಗಣಿಸಲಾಗಿದೆ. ನೀಲಿ ಬಣ್ಣದ ಆಚರಣೆಯ ಜೊತೆಗೆ ನೀಲಿ ಬಣ್ಣದ ಆಕಾಶ, ನೀಲಿ ಬಣ್ಣದ ಮೋಡ, ನೀಲಿ ಬಣ್ಣದ ಗ್ಲೋಬ್ ಬಗ್ಗೆ ಸಂಸ್ಥೆಯ ಸಂಚಾಲಕಿ ಗೀತಾಂಜಲಿ ಅವರು ವಿವರಿಸಿದರು. ಪುಟಾಣಿ ವಿದ್ಯಾರ್ಥಿಗಳು ನೀಲಿ ಬಣ್ಣದ ಬಟ್ಟೆ ಧರಿಸಿ ರಾಂಪ್

ಸುಳ್ಯ: ಅಂಜಲಿ ಮೊಂಟೆಸ್ಸರಿ ಸ್ಕೂಲ್ ನಲ್ಲಿ ಬ್ಲೂ ಡೇ ಆಚರಣೆ Read More »

AS Ramakrishna murder case, ಸುಳ್ಯ: ಕೆವಿಜಿ ಮೆಡಿಕಲ್ ಕಾಲೇಜು ಆಡಳಿತಾಧಿಕಾರಿ ಎ.ಎಸ್ ರಾಮಕೃಷ್ಣ ಕೊಲೆ‌ ಪ್ರಕರಣ| ಡಾ.ರೇಣುಕಾಪ್ರಸಾದ್ ಸೇರಿ‌ 6 ಮಂದಿ ದೋಷಿ ಎಂದ ಹೈಕೋರ್ಟ್

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯ ಕೆವಿಜಿ ಮೆಡಿಕಲ್‌ ಕಾಲೇಜು‌ ಆಡಳಿತಾಧಿಕಾರಿಯಾಗಿದ್ದ ಎ ಎಸ್‌ ರಾಮಕೃಷ್ಣ ಅವರ ಕೊಲೆ ಪ್ರಕರಣದಲ್ಲಿ ಡಾ.ರೇಣುಕಾ ಪ್ರಸಾದ್‌ ಸೇರಿದಂತೆ ಆರು ಮಂದಿಯನ್ನು ದೋಷಿಗಳು ಎಂದು ತೀರ್ಮಾನಿಸಿ ಕರ್ನಾಟಕ ಹೈಕೋರ್ಟ್‌ ಬುಧವಾರ(ಸೆ. 27) ಆದೇಶ ಹೊರಡಿಸಿದೆ. ಪ್ರಕರಣದಲ್ಲಿ ರೇಣುಕಾ ಪ್ರಸಾದ್‌ ಸೇರಿದಂತೆ ಏಳು ಮಂದಿ ಆರೋಪಿಗಳನ್ನು ಖುಲಾಸೆಗೊಳಿಸಿ ಪುತ್ತೂರಿನ 5ನೇ ಹೆಚ್ಚುವರಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯ ಹೊರಡಿಸಿದ್ದ ಆದೇಶ ರದ್ದು ಕೋರಿ ರಾಜ್ಯ ಸರ್ಕಾರ (ಪುತ್ತೂರು ಉಪ ವಿಭಾಗದ ಸಹಾಯಕ ಪೊಲೀಸ್‌

AS Ramakrishna murder case, ಸುಳ್ಯ: ಕೆವಿಜಿ ಮೆಡಿಕಲ್ ಕಾಲೇಜು ಆಡಳಿತಾಧಿಕಾರಿ ಎ.ಎಸ್ ರಾಮಕೃಷ್ಣ ಕೊಲೆ‌ ಪ್ರಕರಣ| ಡಾ.ರೇಣುಕಾಪ್ರಸಾದ್ ಸೇರಿ‌ 6 ಮಂದಿ ದೋಷಿ ಎಂದ ಹೈಕೋರ್ಟ್ Read More »

ಕಡಬ: ಬಿಳಿನೆಲೆ ಪ್ರಾ.ಕೃ.ಪ ಸಂಘದಲ್ಲಿ ಸಿಇಒ‌ ಅಕ್ರಮ ನೇಮಕಾತಿಯಲ್ಲಿ ಭ್ರಷ್ಟಾಚಾರ ಆರೋಪ| ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷರಿಗೆ ಧಿಕ್ಕಾರ ಕೂಗಿದ ಸದಸ್ಯರು

ಸಮಗ್ರ ನ್ಯೂಸ್:‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇಮಕಾತಿಯಲ್ಲಿ‌ ಅಕ್ರಮ ನಡೆಸಲಾಗಿದೆ ಎಂದು ಆರೋಪಿಸಿ ಅಧ್ಯಕ್ಷರ‌ ವಿರುದ್ಧ ಸದಸ್ಯರು ಧಿಕ್ಕಾರ ಕೂಗಿದ ಘಟನೆ ಕಡಬ ತಾಲೂಕಿನ ಬಿಳಿನೆಲೆಯಲ್ಲಿ‌ ಸೆ.26ರಂದು ನಡೆದಿದೆ. ಇಲ್ಲಿನ ಬಿಳಿನೆಲೆಯ ಪ್ರಾ.ಕೃ.ಪ ಸಂಘದ ವಾರ್ಷಿಕ ಮಹಾಸಭೆಯು ಅಧ್ಯಕ್ಷ ದಾಮೋದರ ಗುಂಡ್ಯರವರ ಅಧ್ಯಕ್ಷತೆಯಲ್ಲಿ ಪ್ರಾರಂಭವಾಗಿತ್ತು. ಆದರೆ ಸಭೆಯಲ್ಲಿ ಪ್ರಶ್ನಾವಳಿಗಳು ಮತ್ತು ಮುಂದಿನ ನಿರ್ಣಯಗಳು ಮಂಡನೆಯಾಗಬೇಕಾದ ಬದಲು ಆಲ್ಲಿ ನಡೆದದ್ದು ಪ್ರತಿಭಟನೆ. ಒಂದು ಕಡೆಯಿಂದ ಭ್ರಷ್ಟಾಚಾರದ ಕೂಗು ಕೇಳಿದರೆ ಇನ್ನೊಂದು ಕಡೆಯಿಂದ ಮುಖ್ಯಕಾರ್ಯನಿರ್ವಹಣಾಧಿಕರಿ ಆಯ್ಕೆಯಲ್ಲಿ ತಮ್ಮೂರಿನವರನ್ನು ಬಿಟ್ಟು ಪರ ಊರಿನವರಿಗೆ

ಕಡಬ: ಬಿಳಿನೆಲೆ ಪ್ರಾ.ಕೃ.ಪ ಸಂಘದಲ್ಲಿ ಸಿಇಒ‌ ಅಕ್ರಮ ನೇಮಕಾತಿಯಲ್ಲಿ ಭ್ರಷ್ಟಾಚಾರ ಆರೋಪ| ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷರಿಗೆ ಧಿಕ್ಕಾರ ಕೂಗಿದ ಸದಸ್ಯರು Read More »