ಕರಾವಳಿ

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಚಂಪಾ ಷಷ್ಠಿ/ ವಾಹನ ಪಾರ್ಕಿಂಗ್ ಹೀಗೆ ಮಾಡಿ

ಸಮಗ್ರ ನ್ಯೂಸ್: ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಾರ್ಷಿಕ ಚಂಪಾ ಷಷ್ಠಿ ಜಾತ್ರೆ ಪುಯುಕ್ತ ಉತ್ಸವ ಡಿ.17 ಮತ್ತು 18ರಂದು ನಡೆಯಲಿದ್ದು, ಆಗಮಿಸುವ ಭಕ್ತಾಧಿಗಳು ವಾಹನ ಪಾರ್ಕಿಂಗ್ ಮಾಡಲು ಪೋಲಿಸ್ ಇಲಾಖೆ ಮಾರ್ಗಸೂಚಿ ಹೊರಡಿಸಿದೆ. ಡಿ.17 ಸಂಜೆ 4 ಗಂಟೆಯಿಂದ ಡಿ.18 ಸಂಜೆ 4 ಗಂಟೆಯ ತನಕ ಭಕ್ತಾದಿಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಭಕ್ತಾದಿಗಳು ಮತ್ತು ಸಳೀಯರು ಸಹಕರಿಸಬೇಕೆಂದು, ಸುಬ್ರಹ್ಮಣ್ಯ ಪೋಲಿಸ್ ಠಾಣಾಧಿಕಾರಿಯವರು ಪತ್ರಿಕಾ ಪ್ರಕಟಣಿಯಲ್ಲಿ ತಿಳಿಸಿರುತ್ತಾರೆ. ಪಾರ್ಕಿಂಗ್ ವ್ಯವಸ್ಥೆ ಈ ಕೆಳಗಿನಂತೆ ಇದೆ ಗುಂಡ್ಯ- ಉಪ್ಪಿನಂಗಡಿ- […]

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಚಂಪಾ ಷಷ್ಠಿ/ ವಾಹನ ಪಾರ್ಕಿಂಗ್ ಹೀಗೆ ಮಾಡಿ Read More »

ಕುಕ್ಕೆ ಸುಬ್ರಹ್ಮಣ್ಯ ಚಂಪಾಷಷ್ಟಿ ಹಿನ್ನಲೆ| ಮದ್ಯದಂಗಡಿಗಳನ್ನು ಮುಚ್ಚಲು ಜಿಲ್ಲಾಧಿಕಾರಿ ಆದೇಶ

ಸಮಗ್ರ ನ್ಯೂಸ್: ರಾಜ್ಯದ ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಚಂಪಾಷಷ್ಠಿ ಮಹೋತ್ಸವ ಇದೇ ಡಿಸೆಂಬರ್ 24ರ ವರೆಗೆ ನಡೆಯಲಿದ್ದು, ಈ ಹಿನ್ನಲೆಯಲ್ಲಿ ಕ್ಷೇತ್ರದ ಸಮೀಪದ ಮದ್ಯದಂಗಡಿಗಳನ್ನು ಮುಚ್ಚಲು ದ.ಕ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಡಿಸೆಂಬರ್ 16ರಿಂದ 19ರವರೆಗೆ ಮುಖ್ಯ ರಥೋತ್ಸವಗಳು ನಡೆಯಲಿದೆ. ಈ ಸಂದರ್ಭದಲ್ಲಿ ಅಪಾರ ಭಕ್ತಾದಿಗಳು ಸೇರುವುದರಿಂದ ಶಾಂತಿ ಸುವ್ಯವಸ್ಥೆ ಕಾಪಾಡುವ ಹಿತ ದೃಷ್ಟಿಯಿಂದ ಡಿಸೆಂಬರ್ 17ರಂದು ಬೆಳಿಗ್ಗೆ 6 ಗಂಟೆಯಿಂದ ಡಿಸೆಂಬರ್ 18ರ ಮಧ್ಯರಾತ್ರಿ 12 ಗಂಟೆಯವರೆಗೆ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್

ಕುಕ್ಕೆ ಸುಬ್ರಹ್ಮಣ್ಯ ಚಂಪಾಷಷ್ಟಿ ಹಿನ್ನಲೆ| ಮದ್ಯದಂಗಡಿಗಳನ್ನು ಮುಚ್ಚಲು ಜಿಲ್ಲಾಧಿಕಾರಿ ಆದೇಶ Read More »

ಸುಳ್ಯ: ಗಾಳಿಯಲ್ಲಿ ತೇಲಾಡಿ ವಿಸ್ಮಯ ಸೃಷ್ಟಿಸಿದ ಜಲ್ಲಿಕಲ್ಲು!!

ಸಮಗ್ರ ನ್ಯೂಸ್: ಜಲ್ಲಿಕಲ್ಲೊಂದು‌ ಗಾಳಿಯಲ್ಲಿ ತೇಲಾಡಿ ವಿಸ್ಮಯ ಸೃಷ್ಟಿಸಿದ ವಿಚಿತ್ರ ಘಟನೆಯೊಂದು ಸುಳ್ಯ ತಾಲೂಕಿನ ಕಳಂಜ ಗ್ರಾಮದ ತಂಟೆಪ್ಪಾಡಿಯಲ್ಲಿ ನಡೆದಿದೆ. ಕೆಲ ದಿನಗಳ ಹಿಂದೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಇಲ್ಲಿನ ಕಾಲೇಜು ವಿದ್ಯಾರ್ಥಿನಿಯೋರ್ವರು‌ ತಮ್ಮ ಮೊಬೈಲ್ ನಲ್ಲಿ ಈ ದೃಶ್ಯವನ್ನು ಸೆರೆ ಹಿಡಿದಿದ್ದು, ವಿಡಿಯೋ ವೈರಲ್ ಆಗಿದೆ. ತಂಟೆಪ್ಪಾಡಿ ಪುಟ್ಟಣ್ಣ ಗೌಡ ಅವರ ಪುತ್ರಿ ಧನುಶ್ರೀ ಕೆಲವು ದಿನಗಳ ಹಿಂದೆ ಬೆಳಗ್ಗೆ ಪುತ್ತೂರಿಗೆ ಕಾಲೇಜಿಗೆಂದು ತೆರಳುತ್ತಿರುವಾಗ ರಸ್ತೆಯಲ್ಲಿ ಜಲ್ಲಿ ಕಲ್ಲೊಂದು ತೇಲಾಡುವ ದೃಶ್ಯ

ಸುಳ್ಯ: ಗಾಳಿಯಲ್ಲಿ ತೇಲಾಡಿ ವಿಸ್ಮಯ ಸೃಷ್ಟಿಸಿದ ಜಲ್ಲಿಕಲ್ಲು!! Read More »

ಕುಕ್ಕೆ: ಚಂಪಾಷಷ್ಟಿ ಮಹೋತ್ಸವ ಹಿನ್ನಲೆ| ಅನ್ಯಮತೀಯರಿಗೆ ಸಂತೆ ವ್ಯಾಪಾರ ಅವಕಾಶ ನೀಡದಂತೆ ಮನವಿ

ಸಮಗ್ರ ನ್ಯೂಸ್: ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದಚಂಪಾಷಷ್ಠಿ ಮಹೋತ್ಸವದ ಸಂದರ್ಭದಲ್ಲಿ ಸಂತೆ ವ್ಯಾಪಾರ ನಡೆಸಲು‌ ಅನ್ಯಮತೀಯರಿಗೆ ಅವಕಾಶ ನೀಡಬಾರದು ಹಿಂದೂ ವ್ಯಾಪಾರಿಗಳಿಗೆ ಮಾತ್ರ ಅವಕಾಶ ನೀಡಬೇಕೆಂದು ಹಿಂದೂ ಜಾಗರಣ ವೇದಿಕೆ ಹಾಗೂ ಬಜರಂಗದಳ ಸಂಘಟನೆಯ ಕಾರ್ಯಕರ್ತರು ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ. ಜಿಲ್ಲಾಧಿಕಾರಿಯವರ ಹಾಗೂ ಧಾರ್ಮಿಕ ದತ್ತಿ ಇಲಾಖೆಯ ಅದೇಶದನ್ವಯ ಚಂಪಾಷಷ್ಠಿ ಮಹೋತ್ಸವ ಸಮಯದಲ್ಲಿ ಹಿಂದೂ ಬಾಂಧವರನ್ನು ಹೊರತುಪಡಿಸಿ ಅನ್ಯಧರ್ಮದವರಿಗೆ ವ್ಯಾಪಾರ ವಹಿವಾಟು ನಡೆಸಲು ಅವಕಾಶ ನೀಡಬಾರದು ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಸಂಘಟನೆಯ ಕಾರ್ಯಕರ್ತರ ಮನವಿಗೆ ದೇವಸ್ಥಾನದ

ಕುಕ್ಕೆ: ಚಂಪಾಷಷ್ಟಿ ಮಹೋತ್ಸವ ಹಿನ್ನಲೆ| ಅನ್ಯಮತೀಯರಿಗೆ ಸಂತೆ ವ್ಯಾಪಾರ ಅವಕಾಶ ನೀಡದಂತೆ ಮನವಿ Read More »

ಸುಳ್ಯ: ಎಸ್‌ಡಿಪಿಐ ಸ್ಥಳೀಯ ಬ್ಲಾಕ್ ನಾಯಕರ ಮತ್ತು ಕಾರ್ಯಕರ್ತರ ಸಭೆ

ಸಮಗ್ರ ನ್ಯೂಸ್: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸುಳ್ಯ ವಿಧಾನಸಭಾ ಕ್ಷೇತ್ರದ ಸುಳ್ಯ ಬ್ಲಾಕ್ ವ್ಯಾಪ್ತಿಯ ನಾಯಕರ ಮತ್ತು ಕಾರ್ಯಕರ್ತರ ಸಭೆಯು ವಿಧಾನಸಭಾ ಅಧ್ಯಕ್ಷರಾದ ಅಬ್ದುಲ್ ರಝಾಕ್ ಕೆನರ ರವರ ಅಧ್ಯಕ್ಷತೆಯಲ್ಲಿ ದ.13 ರಂದು ಸುಳ್ಯದಲ್ಲಿ ನಡೆಯಿತು. ಸುಳ್ಯ ವಿಧಾನಸಭಾ ಕ್ಷೇತ್ರದ ಉಪಾಧ್ಯಕ್ಷರಾದ ಅಬ್ದುಲ್ ಕಲಾಂ ಸುಳ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭೆಯಲ್ಲಿ ಪಕ್ಷವನ್ನು ಇನ್ನಷ್ಟು ತಲಮಟ್ಟದಲ್ಲಿ ಸಂಘಟಿಸುವ ಬಗ್ಗೆ ಹಾಗೂ ಮುಂಬರುವ ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಯ ಬಗ್ಗೆ ಚರ್ಚೆ ನಡೆಸಲಾಯಿತು. ಜಿಲ್ಲಾ ಪ್ರಧಾನ

ಸುಳ್ಯ: ಎಸ್‌ಡಿಪಿಐ ಸ್ಥಳೀಯ ಬ್ಲಾಕ್ ನಾಯಕರ ಮತ್ತು ಕಾರ್ಯಕರ್ತರ ಸಭೆ Read More »

ಕುಕ್ಕೆಗೆ ಇಸ್ರೋ ನಿರ್ದೇಶಕ ರಾಮಕೃಷ್ಣ ಭೇಟಿ

ಸುಬ್ರಹ್ಮಣ್ಯ: ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಟೆಲಿಮೆಟ್ರಿ ಟ್ರ್ಯಾಕಿಂಗ್ ಆಂಡ್ ಕಮಾಂಡ್ ನೆಟ್‌ವರ್ಕ್ ನಿರ್ದೇಶಕ ಬಿ.ಎನ್. ರಾಮಕೃಷ್ಣ ಅವರು ಬುಧವಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಿದರು.ಕ್ಷೇತ್ರಕ್ಕೆ ಭೇಟಿ ನೀಡಿದ ಅವರು ಶ್ರೀ ದೇವರ ದರುಶನ ಪಡೆದು ಪ್ರಾರ್ಥನೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ವನಜಾ ವಿ.ಭಟ್, ಶೋಭಾ ಗಿರಿಧರ್, ಕುಮಾರಸ್ವಾಮಿ ವಿದ್ಯಾಸಂಸ್ಥೆಯ ಅಧ್ಯಕ್ಷ ಗಣೇಶ್ ಪ್ರಸಾದ್, ಪ್ರಾಂಶುಪಾಲ ಸಂಕೀರ್ತ್ ಹೆಬ್ಬಾರ್, ದೇವಸ್ಥಾನದ ಶಿಷ್ಟಾಚಾರ ಅಧಿಕಾರಿಗಳಾದ ಜಯರಾಮ ರಾವ್ ಹಾಗೂ ಪ್ರಮೋದ್ ಕುಮಾರ್

ಕುಕ್ಕೆಗೆ ಇಸ್ರೋ ನಿರ್ದೇಶಕ ರಾಮಕೃಷ್ಣ ಭೇಟಿ Read More »

ಡಿ.16: ಸೌಜನ್ಯಳ‌ ನ್ಯಾಯಕ್ಕಾಗಿ ಗುತ್ತಿಗಾರಿನಲ್ಲಿ ಬೃಹತ್ ಪ್ರತಿಭಟನೆ ಸಭೆ| ಬ್ಯಾನರ್ಗಳ ಪೈಪೋಟಿ, ನಿರೀಕ್ಷೆಗೂ ಮೀರಿದ ಸ್ಪಂದನೆ, ಸಾವಿರಾರು ಜನರ ಭಾಗಿ ನಿರೀಕ್ಷೆ

ಸಮಗ್ರ ನ್ಯೂಸ್: ಸೌಜನ್ಯ ಹೋರಾಟ ಸಮಿತಿ ಗುತ್ತಿಗಾರು, ಇದರ ವತಿಯಿಂದ ಡಿ.16 ರಂದು ಸುಳ್ಯ ತಾಲೂಕಿನ ಗುತ್ತಿಗಾರು ದೇವಿಸಿಟಿ ಆವರಣದಲ್ಲಿ ನಡೆಯಲಿರುವ ಬೃಹತ್ ಪ್ರತಿಭಟನಾ ಸಭೆ ಯಶಸ್ಸಿನ ಸಿದ್ಧತಾ ಕಾರ್ಯಗಳು ಹುರುಪಿನಿಂದ ನಡೆಯುತ್ತಿದ್ದು ಸಾವಿರಾರು ಮಂದಿ ಭಾಗವಹಿಸುವ ನಿರೀಕ್ಷೆಯಿದೆ. ದ.ಕ.ಜಿಲ್ಲೆಯ ಗಡಿಯಂಚಿನ ಗ್ರಾಮವಾದ ಕಲ್ಮಕಾರು ನಿಂದ ಹಿಡಿದು ಮರ್ಕಂಜದವರೆಗೆ ಮಡಪ್ಪಾಡಿಯಿಂದ , ಪಂಜ, ಬಳ್ಪ ಪರಿಸರದವರೆಗೆ ಕಾರ್ಯಕ್ರಕ್ಕೆ ಶುಭಕೋರಿ ನೂರಾರು ಬ್ಯಾನರ್ಗಳು, ಸಮಿತಿ ಮುಖಂಡರ ಗ್ರಾಮ ಭೇಟಿ, ಕಾರ್ಯಕ್ರಮಕ್ಕೆ ಅನುಮತಿ ಮತ್ತಿತರ ಚಟುವಟಿಕೆಗಳು ಮುಕ್ತಾಯ ಹಂತದಲ್ಲಿದೆ. ಕೊನೆಯ

ಡಿ.16: ಸೌಜನ್ಯಳ‌ ನ್ಯಾಯಕ್ಕಾಗಿ ಗುತ್ತಿಗಾರಿನಲ್ಲಿ ಬೃಹತ್ ಪ್ರತಿಭಟನೆ ಸಭೆ| ಬ್ಯಾನರ್ಗಳ ಪೈಪೋಟಿ, ನಿರೀಕ್ಷೆಗೂ ಮೀರಿದ ಸ್ಪಂದನೆ, ಸಾವಿರಾರು ಜನರ ಭಾಗಿ ನಿರೀಕ್ಷೆ Read More »

ಸುಳ್ಯ: ಜಾನುವಾರುಗಳಿಗೆ ಮೇವಿನ ಕೊರತೆ ಬಾರದಂತೆ ಪಶು ಆಸ್ಪತ್ರೆಯಲ್ಲಿ ಉಚಿತ ಮೇವಿನ ಬೀಜಗಳು ಲಭ್ಯ

ಸಮಗ್ರ ನ್ಯೂಸ್ : 2023-24ನೇ ಸಾಲಿನ ಮಳೆಯ ಪ್ರಮಾಣ ತೀರಾ ಕಡಿಮೆಯಾಗಿದ್ದು ರೈತರ ಜಾನುವಾರುಗಳಿಗೆ ಮೇವಿನ ಕೊರತೆ ಬಾರದಂತೆ ಆಸಕ್ತ ರೈತರು ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ವಿವಿಧ ಪಶು ಆಸ್ಪತ್ರೆ ಮತ್ತು ಪಶು ಚಿಕಿತ್ಸಾಲಯ ಗಳನ್ನು ಸಂಪರ್ಕಿಸಿ ಉಚಿತವಾಗಿ ಮೇವಿನ ಬೀಜಗಳನ್ನು ಪಡೆದುಕೊಳ್ಳಬಹುದಾಗಿದೆ. ಸದ್ಯಕ್ಕೆ ಇಲಾಖೆಯ ವಿವಿಧ ಸಂಸ್ಥೆಗಳಲ್ಲಿ ಆಫ್ರಿಕನ್ ಉದ್ದ ತಳಿಯ ಜೋಳ, ಹೈಬ್ರಿಡ್ ಜೋವಾರ್,ಮೇವಿನ ಅಲಸಂಡೆ ಮತ್ತು ಬಹುವಾರ್ಷಿಕ ಮೇವಿನ ಬಾಜ್ರ ಬೀಜಗಳು ಲಭ್ಯವಿವೆ. ಆಸಕ್ತರು ತಮ್ಮ ಆಧಾರ್ ಕಾರ್ಡ್

ಸುಳ್ಯ: ಜಾನುವಾರುಗಳಿಗೆ ಮೇವಿನ ಕೊರತೆ ಬಾರದಂತೆ ಪಶು ಆಸ್ಪತ್ರೆಯಲ್ಲಿ ಉಚಿತ ಮೇವಿನ ಬೀಜಗಳು ಲಭ್ಯ Read More »

ಸುಳ್ಯ ಮೂಲದ ಅನನ್ಯ ಶೆಟ್ಟಿ ಗೆ ಬೆಸ್ಟ್ ಐಸ್ ಆಫ್ ಕರ್ನಾಟಕ ಟೈಟಲ್ ಪ್ರಶಸ್ತಿ

ಸಮಗ್ರ ನ್ಯೂಸ್ : ಈಚೆಗೆ ಬೆಂಗಳೂರಿನಲ್ಲಿ ನಿಷಿತ ಸುವರ್ಣ ಇಮೇಜ್ ಕಂಸಲ್ವೆಂಟ್ ಆಯೋಜಿಸಿದ್ದ ಮಿಸ್ಟ‌ರ್, ಮಿಸ್ ಹಾಗೂ ಮಿಸಸ್‌ ಕರ್ನಾಟಕ ಸ್ಪರ್ಧೆಯ ಕರ್ನಾಟಕ ಸ್ಟೈಲ್ ಐಕಾನ್ -2023 ರಲ್ಲಿ ಮಂಗಳೂರಿನ ಅನನ್ಯ ಶೆಟ್ಟಿ ಅವರು ಬೆಸ್ಟ್ ಐಸ್ ಆಫ್‌ ಕರ್ನಾಟಕ ಟೈಟಲ್ ಮುಡಿಗೇರಿಸಿಕೊಂಡಿದ್ದಾರೆ. ಅನನ್ಯ ಶೆಟ್ಟಿ ಅವರು ಮಂಗಳೂರಿನ ಅಡ್ಯಾರಿನವರು. ಇವರು ಮಂಗಳೂರು ನಗರದ ಪ್ರತಿಷ್ಠಿತ ಬಂಟ್ಸ್ ಹಾಸ್ಟೆಲ್‌ ಶಾಲೆ ಹಾಗೂ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದು, ಉದ್ಯಾವರ ಉಡುಪಿಯ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದಿಕ್‌ ಕಾಲೇಜಿನಲ್ಲಿ ದ್ವಿತೀಯ ವರ್ಷದ

ಸುಳ್ಯ ಮೂಲದ ಅನನ್ಯ ಶೆಟ್ಟಿ ಗೆ ಬೆಸ್ಟ್ ಐಸ್ ಆಫ್ ಕರ್ನಾಟಕ ಟೈಟಲ್ ಪ್ರಶಸ್ತಿ Read More »

ಸುಳ್ಯ ತಾ. ಬಂಟರ ಸಮಾವೇಶದ ಆಮಂತ್ರಣ ಬಿಡುಗಡೆ

ಸಮಗ್ರ ನ್ಯೂಸ್ : ಸುಳ್ಯ ತಾಲೂಕು ಬಂಟರ ಸಮಾವೇಶ ಡಿ.31 ರಂದು ಸುಳ್ಯ ಕೇರ್ಪಳದ ಬಂಟರ ಭವನದಲ್ಲಿ ನಡೆಯಲಿದ್ದು ಆಮಂತ್ರಣವನ್ನು ಅಧ್ಯಕ್ಷರಾದ ಜಯಪ್ರಕಾಶ್ ರೈ ಯವರು ಬಿಡುಗಡೆಗೊಳಿಸಿದರು. ಬಳಿಕ ಕಾರ್ಯಕ್ರಮ ದ ವಿವರ ನೀಡಿ ಎಲ್ಲಾ ಸದಸ್ಯರು ಸಕ್ರಿಯರಾಗಿ ಪಾಲ್ಗೊಂಡು ಸಮಾವೇಶವನ್ನು ಯಶಸ್ವಿಗೊಳಿಸಬೇಕೆಂದರು.ಈ ಕಾರ್ಯಕ್ರಮದಲ್ಲಿ ಸುಭಾಸ್ ಚಂದ್ರ ರೈ ಸ್ವಾಗತಿಸಿ ಮೀರಾಮುರಳೀಧರ ರೈ ವಂದಿಸಿದರು, ಉಷಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯಲ್ಲಿ ಬಂಟರ ಸಂಘದ ಪ್ರಧಾನಕಾರ್ಯದರ್ಶಿ ಶುಭಾಸಚಂದ್ರ ರೈ, ಖಜಾಂಜಿ ಗಂಗಾಧರ ರೈ, ಆರಂತೋಡು ವಲಯಾ ಧ್ಯಕ್ಷ

ಸುಳ್ಯ ತಾ. ಬಂಟರ ಸಮಾವೇಶದ ಆಮಂತ್ರಣ ಬಿಡುಗಡೆ Read More »