ಸಮಗ್ರ ನ್ಯೂಸ್ : ಸುಳ್ಯ ತಾಲೂಕು ಬಂಟರ ಸಮಾವೇಶ ಡಿ.31 ರಂದು ಸುಳ್ಯ ಕೇರ್ಪಳದ ಬಂಟರ ಭವನದಲ್ಲಿ ನಡೆಯಲಿದ್ದು ಆಮಂತ್ರಣವನ್ನು ಅಧ್ಯಕ್ಷರಾದ ಜಯಪ್ರಕಾಶ್ ರೈ ಯವರು ಬಿಡುಗಡೆಗೊಳಿಸಿದರು.
ಬಳಿಕ ಕಾರ್ಯಕ್ರಮ ದ ವಿವರ ನೀಡಿ ಎಲ್ಲಾ ಸದಸ್ಯರು ಸಕ್ರಿಯರಾಗಿ ಪಾಲ್ಗೊಂಡು ಸಮಾವೇಶವನ್ನು ಯಶಸ್ವಿಗೊಳಿಸಬೇಕೆಂದರು.
ಈ ಕಾರ್ಯಕ್ರಮದಲ್ಲಿ ಸುಭಾಸ್ ಚಂದ್ರ ರೈ ಸ್ವಾಗತಿಸಿ ಮೀರಾಮುರಳೀಧರ ರೈ ವಂದಿಸಿದರು, ಉಷಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯಲ್ಲಿ ಬಂಟರ ಸಂಘದ ಪ್ರಧಾನಕಾರ್ಯದರ್ಶಿ ಶುಭಾಸಚಂದ್ರ ರೈ, ಖಜಾಂಜಿ ಗಂಗಾಧರ ರೈ, ಆರಂತೋಡು ವಲಯಾ ಧ್ಯಕ್ಷ ಜೆ ಕೆ ರೈ, ಬಾಳಿಲ ವಲಯಧ್ಯಕ್ಷ ಕರುಣಾಕರ ರೈ,ಪಂಜ ವಲಯಧ್ಯಕ್ಷ ಪದ್ಮಾನಾಭ ರೈ,ದಯಕರ ರೈ ನಾವೂರು, ಕುಸುಮಾಧರ ರೈ,ಕಮಲಾಕ್ಷಿ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.






