ಕರಾವಳಿ

ಸುಳ್ಯ: ಕೆಎಸ್ಆರ್ ಟಿಸಿ ಗುತ್ತಿಗೆ ಚಾಲಕರ ದಿಢೀರ್ ಮುಷ್ಕರ| ಗ್ರಾಮೀಣ ರೂಟ್ ಗಳು ಬಂದ್| ಸಂಕಷ್ಟದಲ್ಲಿ ಪ್ರಯಾಣಿಕರು

ಸಮಗ್ರ ನ್ಯೂಸ್: ಕೆಎಸ್ಆರ್ ಟಿಸಿ ಯಲ್ಲಿ ಗುತ್ತಿಗೆ ಆಧಾರದಲ್ಲಿ ನೇಮಕಗೊಂಡ ಬಸ್ಸು ಚಾಲಕರಿಗೆ ಕೆಲಸ ನಿಲ್ಲಿಸುವಂತೆ ಅವರನ್ನು ನೇಮಕ ಮಾಡಿದ ಸಂಸ್ಥೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಅತಂತ್ರವಾಗಿರುವ ಬಸ್ ಚಾಲಕರು ತಮ್ಮ ಉದ್ಯೋಗ ಭದ್ರತೆಗಾಗಿ ಸ್ಪಷ್ಟ ಆದೇಶ ನೀಡಬೇಕೆಂದು ಆಗ್ರಹಿಸಿ ಕೆಲಸ ನಿಲ್ಲಿಸಿದ್ದು, ಸುಳ್ಯ ತಾಲೂಕಿನ ಗ್ರಾಮೀಣ ಬಸ್ ರೂಟ್ ಗಳು ಸ್ಥಗಿತಗೊಂಡು ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಗ್ರಾಮೀಣ ಭಾಗದಲ್ಲಿ ಓಡಾಡುವ ಬಸ್ ರೂಟ್ ಗಳಿಗೆ ಗುತ್ತಿಗೆ ಆಧಾರದಲ್ಲಿ ಚಾಲಕರನ್ನು ನೇಮಕ ಮಾಡಲಾಗಿತ್ತು. ಈ ನೇಮಕದ ಅವಧಿ

ಸುಳ್ಯ: ಕೆಎಸ್ಆರ್ ಟಿಸಿ ಗುತ್ತಿಗೆ ಚಾಲಕರ ದಿಢೀರ್ ಮುಷ್ಕರ| ಗ್ರಾಮೀಣ ರೂಟ್ ಗಳು ಬಂದ್| ಸಂಕಷ್ಟದಲ್ಲಿ ಪ್ರಯಾಣಿಕರು Read More »

ಸುಳ್ಯ: ಕೊರಂಬಡ್ಕ ಕ್ಷೇತ್ರದಿಂದ ಶ್ರೀ ಕ್ಷೇತ್ರ ತೊಡಿಕಾನಕ್ಕೆ ಪಾದಯಾತ್ರೆ

ಸಮಗ್ರ ನ್ಯೂಸ್: ಶ್ರೀ ಕ್ಷೇತ್ರ ಕೊರಂಬಡ್ಕದಲ್ಲಿ ಶುದ್ಧಿಕಲಶ ನಡೆದು ಡಿ. 31ಕ್ಕೆ ಒಂದು ವರ್ಷವಾದ ಪ್ರಯುಕ್ತ ಸುಳ್ಯ ಸೀಮೆ ದೇವಸ್ಥಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಶ್ರೀ ಕ್ಷೇತ್ರ ತೊಡಿಕಾನದಲ್ಲಿ ನಡೆಯುವ ಧನುಪೂಜೆಗೆ ಕೊರಂಬಡ್ಕ ಕ್ಷೇತ್ರದಿಂದ ಪಾದಯಾತ್ರೆ ಮೂಲಕ ತೊಡಿಕಾನ ಕ್ಷೇತ್ರಕ್ಕೆ ತೆರಳಿದರು

ಸುಳ್ಯ: ಕೊರಂಬಡ್ಕ ಕ್ಷೇತ್ರದಿಂದ ಶ್ರೀ ಕ್ಷೇತ್ರ ತೊಡಿಕಾನಕ್ಕೆ ಪಾದಯಾತ್ರೆ Read More »

ಸುಳ್ಯ: ನದಿಗೆ ಸ್ನಾನಕ್ಕೆ ತೆರಳಿದ್ದಾತ ನೀರುಪಾಲು| ಮೃತದೇಹ ಪತ್ತೆ

ಸಮಗ್ರ ನ್ಯೂಸ್: ಸುಳ್ಯ ನಗರದ ಹೊರವಲಯದ ಭಸ್ಮಡ್ಕ ಪಯಸ್ವಿನಿ ನದಿಗೆ ಸ್ನಾನಕ್ಕೆ ಹೋಗಿ ನೀರು ಪಾಲದ ಯುವಕನ ಮೃತದೇಹ ಪತ್ತೆಯಾಗಿದೆ. ಉಪ್ಪಳ ನಿವಾಸಿ ಸಮೀರ್ ಮೃತಪಟ್ಟಿದ್ದು, ಸುಳ್ಯದ ಕುರುಂಜಿಬಾಗ್‌ನಲ್ಲಿರುವ ವಿಶನ್ ಆಪ್ಟಿಕಲ್ಸ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಸುಳ್ಯದಲ್ಲಿ ರೂಮ್ ಮಾಡಿಕೊಂಡು ವಾಸವಾಗಿದ್ದರು. ಇಂದು(ಡಿ.31) ರಜೆ ಇದ್ದ ಹಿನ್ನಲೆಯಲ್ಲಿ ಬಟ್ಟೆ ಒಗೆಯಲು ಮತ್ತು ಸ್ನಾನಕ್ಕೆಂದು ನದಿಗೆ ಬಂದ ಮೂವರು ಯುವಕರು ನೀರಿಗೆ ಇಳಿದಿದ್ದರು ಅದರಲ್ಲಿ ಒಬ್ಬ ಕಣ್ಮರೆಯಾಗಿದ್ದು ಮುಳುಗಿದ್ದಾನೆನ್ನಲಾಗಿದೆ. ಸುಳ್ಯ ಆರಕ್ಷಕ ಠಾಣೆ, ಅಗ್ನಿಶಾಮಕ ದಳ ಸಿಬ್ಬಂದಿ ಶೋಧ

ಸುಳ್ಯ: ನದಿಗೆ ಸ್ನಾನಕ್ಕೆ ತೆರಳಿದ್ದಾತ ನೀರುಪಾಲು| ಮೃತದೇಹ ಪತ್ತೆ Read More »

ಸುಳ್ಯ: ಸಿಎ ಬ್ಯಾಂಕ್ ರಂಗೇರಿದ ಚುನಾವಣೆ ಕಣ| ಗೆಲುವಿನ ಹೆಜ್ಜೆಯತ್ತ ಸಹಕಾರಿ ರಂಗ

ಸಮಗ್ರ ನ್ಯೂಸ್: ಪ್ರತಿಷ್ಟಿತ ಸುಳ್ಯ ಸಿಎ ಬ್ಯಾಂಕ್ ಚುನಾವಣೆ ಈ ಬಾರಿ ಸಹಕಾರಿ ರಂಗ ಗೆಲುವಿನತ್ತ ಹೆಜ್ಜೆಯಿಟ್ಟಿದೆ. ಚುನಾವಣಾ ಪೂರ್ವ ಸಮೀಕ್ಷೆಯಂತೆ ಸಹಕಾರಿ ರಂಗದ ಅಭ್ಯರ್ಥಿಗಳು ಅತ್ಯಂತ ಉತ್ಸಾಹದಿಂದ ಮನೆ ಮನೆ ಭೇಟಿ ನೀಡಿ ಮಾತಯಾಚನೆ ಮಾಡುತ್ತಿದ್ದು, ಈ ಬಾರಿ ಬದಲಾವಣೆಯ ಗಾಳಿ ಬೀಸಿದಂತಿದೆ. ಸಹಕಾರಿ ಭಾರತಿ ಅಭ್ಯರ್ಥಿ ಆಯ್ಕೆಯಲ್ಲಿನ ಗೊಂದಲ ಮತ್ತು ಹೊಂದಾಣಿಕೆ ಕೊರತೆಯೂ ಸಹ ಈ ಬಾರಿ ಸಹಕಾರಿ ರಂಗದ ಅಭ್ಯರ್ಥಿಗಳ ಮೇಲುಗೈಗೆ ಕಾರಣವಾಗಲಿದೆ ಎಂಬುದು ಸಧ್ಯದ ವಿಶ್ಲೇಷಣೆಯಲ್ಲಿ ಕಂಡುಬರುತ್ತಿದೆ. ಒಟ್ಟಿನಲ್ಲಿ ಸುಳ್ಯ ಸಿಎ

ಸುಳ್ಯ: ಸಿಎ ಬ್ಯಾಂಕ್ ರಂಗೇರಿದ ಚುನಾವಣೆ ಕಣ| ಗೆಲುವಿನ ಹೆಜ್ಜೆಯತ್ತ ಸಹಕಾರಿ ರಂಗ Read More »

ಪುತ್ತೂರು ನಗರಸಭೆ ಉಪಚುನಾವಣೆ| ಕಾಂಗ್ರೆಸ್ ಬಿಜೆಪಿಗೆ ತಲಾ ಒಂದು ಸ್ಥಾನ| ಸೋಲುಂಡ ಪುತ್ತಿಲ ಪರಿವಾರ

ಸಮಗ್ರ ನ್ಯೂಸ್: ಪುತ್ತೂರು ನಗರಸಭೆಯ ಎರಡು ಸ್ಥಾನಗಳಿಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳು ತಲಾ ಒಂದು ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ. ಪುತ್ತಿಲ ಪರಿವಾರದ ಅಭ್ಯರ್ಥಿಗಳು ಎರಡೂ ಕಡೆ ಸೋಲು ಕಂಡಿದ್ದಾರೆ. ವಾರ್ಡ್ 1ರಲ್ಲಿ ಕಾಂಗ್ರೆಸ್‌ನ ದಿನೇಶ ಶೇವಿರೆ 427 ಮತಗಳನ್ನು ಪಡೆಯುವ ಮೂಲಕ ಪುತ್ತಿಲ ಪರಿವಾರದ ಅನ್ನಪೂರ್ಣ (308 ಮತ) ವಿರುದ್ದ ಗೆಲುವಿನ ನಗೆ ಬೀರಿದರು. ಬಿಜೆಪಿ ಯ ಸುನೀತಾ 219 ಮತ ಗಳಿಸಿ ಮೂರನೇ‌ ಸ್ಥಾನಕ್ಕೆ ತೃಪ್ತಿ ಪಟ್ಟರು. ನೋಟಾಕ್ಕೆ‌ ನಾಲ್ಕು ಮತಗಳು

ಪುತ್ತೂರು ನಗರಸಭೆ ಉಪಚುನಾವಣೆ| ಕಾಂಗ್ರೆಸ್ ಬಿಜೆಪಿಗೆ ತಲಾ ಒಂದು ಸ್ಥಾನ| ಸೋಲುಂಡ ಪುತ್ತಿಲ ಪರಿವಾರ Read More »

ಉಡುಪಿ: ನೇಜಾರು ಕೊಲೆ ಪ್ರಕರಣ| ಆರೋಪಿ ಪ್ರವೀಣ್ ಚೌಗಲೆ ಜಾಮೀನು ಅರ್ಜಿ ತಿರಸ್ಕೃತ

ಸಮಗ್ರ ನ್ಯೂಸ್: ಉಡುಪಿಯ ನೇಜಾರಿನಲ್ಲಿ ನಡೆದ ಒಂದೇ ಕುಟುಂಬದ ನಾಲ್ವರ ಕಗ್ಗೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪ್ರವೀಣ್ ಚೌಗುಲೆ ಸಲ್ಲಿಸಿರುವ ಜಾಮೀನು ಅರ್ಜಿಯನ್ನು ತಿರಸ್ಕರಿಸಿ ಉಡುಪಿಯ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಇಂದು(ಡಿ.30) ಆದೇಶ ನೀಡಿದೆ. ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ಪ್ರವೀಣ್ ಚೌಗುಲೆ ಜಾಮೀನು ಕೋರಿ ಡಿ.14ರಂದು ಅರ್ಜಿಯನ್ನು ವಕೀಲ ಕೆ.ಎಸ್.ಎನ್.ರಾಜೇಶ್ ಮೂಲಕ ಸಲ್ಲಿಸಿದ್ದ. ಇದಕ್ಕೆ ಸರಕಾರಿ ಅಭಿಯೋಜಕ ಪ್ರಕಾಶ್‌ಚಂದ್ರ ಶೆಟ್ಟಿ ಆಕ್ಷೇಪಣೆ ಸಲ್ಲಿಸಿದ್ದರು. ಈ ಕುರಿತು ವಾದ ಪ್ರತಿವಾದವನ್ನು ಆಲಿಸಿದ ನ್ಯಾಯಾಧೀಶ ದಿನೇಶ್

ಉಡುಪಿ: ನೇಜಾರು ಕೊಲೆ ಪ್ರಕರಣ| ಆರೋಪಿ ಪ್ರವೀಣ್ ಚೌಗಲೆ ಜಾಮೀನು ಅರ್ಜಿ ತಿರಸ್ಕೃತ Read More »

ಸಾಹಿತಿ ಎಚ್. ಭೀಮರಾವ್ ವಾಷ್ಠರ್ ಕೋಡಿಹಾಳ ಅವರಿಗೆ ಕನ್ನಡ ಕಣ್ಮಣಿ ರಾಷ್ಟ್ರ ಪ್ರಶಸ್ತಿ ಪ್ರದಾನ

ಸಮಗ್ರ ನ್ಯೂಸ್: ಬೆಳಕು ಸಾಹಿತ್ಯ, ಶೈಕ್ಷಣಿಕ, ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ರಾಯಚೂರು ವೀರಶೈವ ಸಭಾ ಭವನದ ದಿವ್ಯ ಸಭಾಂಗಣದಲ್ಲಿ ಜರುಗಿದ, ರಾಜ್ಯಮಟ್ಟದ ಬೆಳಕು ಸಾಹಿತ್ಯ ಸಮಾರಂಭದ ಭವ್ಯ ವೇದಿಕೆಯಲ್ಲಿ ಸುಳ್ಯದ ಖ್ಯಾತ ಸಾಹಿತಿ ಮತ್ತು ಜ್ಯೋತಿಷಿ ಶ್ರೀ ಎಚ್. ಭೀಮರಾವ್ ವಾಷ್ಠರ್ ಕೋಡಿಹಾಳ ಅವರಿಗೆ 2023 ನೇ ಸಾಲಿನ ಕನ್ನಡ ಕಣ್ಮಣಿ ರಾಷ್ಟ್ರ ಪ್ರಶಸ್ತಿಯನ್ನು ಗಣ್ಯರ ಸಮಾಕ್ಷಮ ನೀಡಿ ಗೌರವಿಸಲಾಯಿತು. ಅವರ ಜ್ಯೋತಿಷ್ಯ, ಸಾಹಿತ್ಯ, ಸಂಘಟನಾ ಕ್ಷೇತ್ರದಲ್ಲಿ ಮಾಡುತ್ತಿರುವ ಅಪಾರ ಸಾಧನೆಗಾಗಿ ರಾಷ್ಟ್ರಮಟ್ಟದ ಕನ್ನಡ ಕಣ್ಮಣಿ ಪ್ರಶಸ್ತಿ

ಸಾಹಿತಿ ಎಚ್. ಭೀಮರಾವ್ ವಾಷ್ಠರ್ ಕೋಡಿಹಾಳ ಅವರಿಗೆ ಕನ್ನಡ ಕಣ್ಮಣಿ ರಾಷ್ಟ್ರ ಪ್ರಶಸ್ತಿ ಪ್ರದಾನ Read More »

ಪೆರುವಾಜೆ: ಕೊಲ್ಯ ಶ್ರೀ ಕೊರಗಜ್ಜ ದೈವಸ್ಥಾನದಲ್ಲಿ ವರ್ಷಾವಧಿ ಕೊರಗಜ್ಜನ ನೇಮೋತ್ಸವ| ಇಂದು (ಡಿ. 30) ಹರಕೆಯ ಕೊರಗಜ್ಜನ ನೇಮೋತ್ಸವ

ಸಮಗ್ರ ನ್ಯೂಸ್: ಕೊಲ್ಯ-ಪೆರುವಾಜೆ ಶ್ರೀ ಕೊರಗಜ್ಜ ದೈವಸ್ಥಾನದಲ್ಲಿ ವರ್ಷಾವಧಿ ಕೊರಗಜ್ಜನ ನೇಮೋತ್ಸವ ಡಿ. 29ರಂದು ನಡೆಯಲಿದೆ. ಬೆಳಿಗ್ಗೆ ಗಣಹೋಮ, ಶ್ರೀ ಸತ್ಯನಾರಾಯಣ ಪೂಜೆ ವರ್ಷಾವಧಿ ಅನ್ನಸಂತರ್ಪಣೆ ಬಳಿಕ ರಾತ್ರಿ ಶ್ರೀ ಕೊರಗ ತನಿಯ ನೇಮೋತ್ಸವ ನಡೆಯಿತು. ಇಂದು (ಡಿ. 30ರಂದು) ರಾತ್ರಿ ಗಂಟೆ 8-00 ರಿಂದ ಸುಳ್ಯದ ಐವರ್ನಾಡು ಗ್ರಾಮದ ದೇವರಕಾನ ಮನೆಯ ಕೆ.ಬಿ. ಪ್ರಸಾದ್ ನಿತ್ಯ ಚಿಕನ್ ಸೆಂಟರ್ ಬೆಳ್ಳಾರೆ ಹಾಗೂ ಮನೆಯವರ ಹರಕೆಯ ನೇಮೋತ್ಸವ ನಡೆಯಲಿದೆ. ಆ ಪ್ರಯುಕ್ತ ಕುಟುಂಬದವರೆಲ್ಲಾ ಆಗಮಿಸಿ, ದೈವದ ಪ್ರಸಾದ

ಪೆರುವಾಜೆ: ಕೊಲ್ಯ ಶ್ರೀ ಕೊರಗಜ್ಜ ದೈವಸ್ಥಾನದಲ್ಲಿ ವರ್ಷಾವಧಿ ಕೊರಗಜ್ಜನ ನೇಮೋತ್ಸವ| ಇಂದು (ಡಿ. 30) ಹರಕೆಯ ಕೊರಗಜ್ಜನ ನೇಮೋತ್ಸವ Read More »

ಸುಳ್ಯ: ಅಪರಾಧ ಪ್ರಕರಣಗಳ ಸಂಖ್ಯೆ ಏರಿಕೆ| ಹಲವು ಕಡೆಗಳಲ್ಲಿ ಕಳ್ಳರ ಕೈಚಳಕ| ಸುಳ್ಯ ಪೊಲೀಸರು ಏನ್ಮಾಡ್ತಿದ್ದಾರೆ?

ಸಮಗ್ರ ನ್ಯೂಸ್: ಸುಳ್ಯ ತಾಲ್ಲೂಕಿನ ಹಲವೆಡೆ ಅಪರಾಧ ಪ್ರಕರಣಗಳು ದಿನೇದಿನೇ ಏರಿಕೆಯಾಗುತ್ತಿದ್ದು ಕಾನೂನು ಕ್ರಮ ಕೈಗೊಳ್ಳಬೇಕಾದ ಪೊಲೀಸರು ನಿಷ್ಕ್ರಿಯವಾಗಿರುವುದು ಆತಂಕ ಸೃಷ್ಟಿಸುತ್ತಿದೆ. ತಾಲೂಕಿನ ಹಲವೆಡೆ ದಿನಂಪ್ರತಿ ಕಳ್ಳತನಗಳು ನಡೆಯುತ್ತಿದ್ದು, ತನಿಖೆಗಳು ತಾರ್ಕಿಕ ಅಂತ್ಯ ಕಾಣುತ್ತಿಲ್ಲ. ಪೊಲೀಸರು ನೆಪಮಾತ್ರಕ್ಕೆ ಪ್ರಕರಣ ದಾಖಲಿಸಿಕೊಳ್ಳುತ್ತಿದ್ದು, ಇದುವರೆಗೆ ಹಲವು ಪ್ರಕರಣಗಳು ಕೊಳೆತು ಹೋಗಿವೆ. ಕಳೆದ ಒಂದೆರಡು ತಿಂಗಳಲ್ಲಿ ಸುಳ್ಯ‌ ಠಾಣಾ ವ್ಯಾಪ್ತಿಯ ಜಾಲ್ಸೂರು, ಕನಕಮಜಲುಗಳಲ್ಲಿ ಹಲವಾರು ಮನೆ, ಅಂಗಡಿಗಳ ಒಳನುಗ್ಗಿರುವ ಕಳ್ಳರು ನಗ-ನಗದು ದೋಚಿದ್ದಾರೆ. ಅದಾದ ಬಳಿಕ ಸಂಪಾಜೆ, ಕಲ್ಲುಗುಂಡಿ ಪರಿಸರದಲ್ಲೂ ಕಳ್ಳತನ

ಸುಳ್ಯ: ಅಪರಾಧ ಪ್ರಕರಣಗಳ ಸಂಖ್ಯೆ ಏರಿಕೆ| ಹಲವು ಕಡೆಗಳಲ್ಲಿ ಕಳ್ಳರ ಕೈಚಳಕ| ಸುಳ್ಯ ಪೊಲೀಸರು ಏನ್ಮಾಡ್ತಿದ್ದಾರೆ? Read More »

ಉಪ್ಪಿನಂಗಡಿ: ಲಾರಿಯೊಳಗೆ ಸಾವನ್ನಪ್ಪಿದ ಚಾಲಕ| ಎರಡು ದಿನ ಕಳೆದ ಬಳಿಕ ಬೆಳಕಿಗೆ ಬಂತು ಪ್ರಕರಣ

ಸಮಗ್ರ ನ್ಯೂಸ್: ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಲಾರಿ ನಿಲ್ಲಿಸಿ ಮಲಗಿದ್ದ ಲಾರಿ ಚಾಲಕ ಹೃದಯಾಘಾತದಿಂದ ಲಾರಿಯಲ್ಲೇ ಮೃತಪಟ್ಟಿದ್ದು, ಎರಡು ದಿನಗಳ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಚನ್ನಪಟ್ಟಣದ ಖಲೀಲ್ ಖಾನ್ ಮೃತ ಚಾಲಕ. ಮೈಸೂರಿನಿಂದ ಬಿ.ಸಿ. ರೋಡಿಗೆ ಹಾಸಿಗೆಯ ಲೋಡನ್ನು ಲಾರಿಯಲ್ಲಿ ತಂದಿದ್ದ ಅವರು ಅದನ್ನು ಖಾಲಿ ಮಾಡಿ ಎರಡು ದಿನಗಳ ಹಿಂದೆ ರಾತ್ರಿ ಉಪ್ಪಿನಂಗಡಿಯ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಲಾರಿ ನಿಲ್ಲಿಸಿ ಮಲಗಿದ್ದ ಸ್ಥಿತಿಯಲ್ಲಿಯೇ ಮೃತಪಟ್ಟಿರುವುದು ಕಂಡು ಬಂದಿದೆ. ಮೃತ ಖಲೀಲ್‌ ಖಾನ್‌

ಉಪ್ಪಿನಂಗಡಿ: ಲಾರಿಯೊಳಗೆ ಸಾವನ್ನಪ್ಪಿದ ಚಾಲಕ| ಎರಡು ದಿನ ಕಳೆದ ಬಳಿಕ ಬೆಳಕಿಗೆ ಬಂತು ಪ್ರಕರಣ Read More »