ಸಮಗ್ರ ಸಮಾಚಾರ

ಪೊಲೀಸ್ ಬಲೆಗೆ ಬಿದ್ದ ಪೊಲೀಸ್ ಜೊತೆ ಮಂಚ ಹತ್ತಿದ್ದ ಪೊಲೀಸ್

ಹೈದರಾಬಾದ್​: ಸಹೋದ್ಯೋಗಿ ಮಹಿಳೆಯೊಂದಿಗೆ ಅನೈತಿಕ ಚಟುವಟಿಕೆಯಲ್ಲಿ ತೊಡಗಿದ್ದಾಗ ಪಿ ಎಸ್ ಐ ಪೊಲೀಸ್ ಬಲೆಗೆ ಬಿದ್ದ ಘಟನೆ ಹೈದರಬಾದ್ನಲ್ಲಿ ನಡೆದಿದೆ. ಸಹೋದ್ಯೋಗಿಯೊಂದಿಗೆ ಸರಸ ಸಲ್ಲಾಪದಲ್ಲಿ ತೊಡಗಿ ಸಿಕ್ಕಿಬಿದ್ದ ಹೈದರಾಬಾದ್​ನ ಜವಹರ್​ ನಗರ ಠಾಣೆಯ ಸಬ್​ ಇನ್ಸ್​ಪೆಕ್ಟರ್​ನನ್ನು ರಾಚಕೊಂಡ ಪೊಲೀಸ್​ ಆಯುಕ್ತ ಮಹೇಶ್​ ಭಾಗವತ್​ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಪಿಎಸ್​ಐ ಅನಿಲ್​ ಎಂಬವರು ಮಹಿಳಾ ಸಿಬ್ಬಂದಿಯೊಂದಿಗೆ ಹಲವು ದಿನಗಳಿಂದ ಈ ಸಂಬಂಧ ಇಟ್ಟುಕೊಂಡಿದ್ದರು. ಇದರ ನಡುವೆ ತಿಮ್ಮೈಪಲ್ಲಿಯಲ್ಲಿರುವ ರೆಸಾರ್ಟ್​ನಒಂದರಲ್ಲಿ ಅನಿಲ್​ ಮತ್ತು ಮಹಿಳೆ ಇಬ್ಬರು ಸೇರಿರುವುದಾಗಿ ಕೀಸರ […]

ಪೊಲೀಸ್ ಬಲೆಗೆ ಬಿದ್ದ ಪೊಲೀಸ್ ಜೊತೆ ಮಂಚ ಹತ್ತಿದ್ದ ಪೊಲೀಸ್ Read More »

ಆಶಾ ಕಾರ್ಯಕರ್ತೆಯರಿಗೆ ತಲಾ 3,000 ಪ್ರೋತ್ಸಾಹ ಧನ ಮಂಜೂರು

ಬೆಂಗಳೂರು: ಕೊರೊನಾ ಮಹಾಮಾರಿಯ ವಿರುದ್ಧ ಎಡೆಬಿಡದೆ ಹೋರಾಡುತ್ತಿರುವ 42,574 ಆಶಾ ಕಾರ್ಯಕರ್ತೆಯರಿಗೆ ರಾಜ್ಯ ಸರ್ಕಾರ ತಲಾ 3,000 ರೂಪಾಯಿ ಪ್ರೋತ್ಸಾಹ ಧನ ಮಂಜೂರು ಮಾಡಿದೆ. ‌ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಶಿಕ್ಷಣ ಸಚಿವ ಸುಧಾಕರ್ ಈ ಕುರಿತು ಟ್ವೀಟ್​​ ಮಾಡಿ ಮಾಹಿತಿ ನೀಡಿದ್ದಾರೆ. ಕೊರೊನಾ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರು ಸಲ್ಲಿಸುತ್ತಿರುವ ಅನನ್ಯ ಸೇವೆಯನ್ನು ಗುರುತಿಸಿ ಆರ್ಥಿಕ ಪ್ಯಾಕೇಜ್-2 ರಲ್ಲಿ ಪರಿಹಾರ ಘೋಷಿಸಲಾಗಿದೆ, ರಾಜ್ಯದ 42,574 ಆಶಾ ಕಾರ್ಯಕರ್ತೆಯರಿಗೆ ಒಟ್ಟು ₹12.75 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ ಎಂದಿದ್ದಾರೆ.

ಆಶಾ ಕಾರ್ಯಕರ್ತೆಯರಿಗೆ ತಲಾ 3,000 ಪ್ರೋತ್ಸಾಹ ಧನ ಮಂಜೂರು Read More »

ಕುಂದಾಪುರ: ರೈಲಿನಡಿಗೆ ಬಿದ್ದು ಚಿರತೆ ಸಾವು

ಕುಂದಾಪುರ ಚಲಿಸುತ್ತಿದ್ದ ರೈಲಿಗೆ ಸಿಲುಕಿ ಚಿರತೆಯೊಂದು ಮೃತಪಟ್ಟ ಘಟನೆ ತಾಲೂಕಿನ ಸೇನಾಪುರ ಬಳಿಯ ಕುಂದಬಾರಂದಾಡಿ ಎಂಬಲ್ಲಿ ನಡೆದಿದೆ. ಇಂದು ಬೆಳಿಗ್ಗೆ ಘಟನೆ ನಡೆದಿದ್ದು, ಚಿರತೆ ರೈಲು ಹಳಿಯ ಮೇಲೆ ಸಂಚರಿಸುತ್ತಿದ್ದಾಗ ರೈಲು ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡು ಸಾವನ್ನಪ್ಪಿದೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಕುಂದಾಪುರ ವಲಯ ಅರಣ್ಯಾಧಿಕಾರಿಗಳು ಭೇಟಿ ನೀಡಿ ಮೃತ ಚಿರತೆಯ ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.

ಕುಂದಾಪುರ: ರೈಲಿನಡಿಗೆ ಬಿದ್ದು ಚಿರತೆ ಸಾವು Read More »

ಆಕ್ರೋಶದ ಬೆನ್ನೆಲ್ಲೆ ವಿವಾದಿತ ಚಿತ್ರ ತೆಗೆದು ಹಾಕಿದ ಅಮೆಜಾನ್

ಬೆಂಗಳೂರು ಕನ್ನಡದ ಬಾವುಟ ಹಾಗು ಲಾಂಛನವುಳ್ಳ ಬಿಕಿನಿಯನ್ನು ಮಾರಾಟಕ್ಕಿಟ್ಟಿದ್ದ ಅಮೆಜಾನ್ ಇದೀಗ ಆ ಚಿತ್ರವನ್ನು ಬದಲಾಯಿಸಿದೆ. ಕಳೆದೆರಡು ದಿನಗಳ ಹಿಂದೆ ಗೂಗಲ್ ಕೂಡ ಕನ್ನಡದ ಬಗ್ಗೆ ಅವಮಾನದ ಹೇಳಿಕೆ ನೀಡಿ ಕನ್ನಡಿಗರ ಆಕ್ರೋಶಕ್ಕೆ ಮಣಿದು ಕ್ಷಮೆ ಯಾಚಿಸಿತ್ತು. ಇದೀಗ ಅಮೆಜಾನ್ ಕೂಡ ಕನ್ನಡಿಗರ ಆಕ್ರೋಶದ ಬೆನ್ನಲ್ಲೆ ಚಿತ್ರ ಬದಲಾಯಿಸಿ ಆ ಜಾಗದಲ್ಲಿ ಬೇರೊಂದು ಫೋಟೋವನ್ನು ಪ್ರಕಟಿಸಿದೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಕನ್ನಡ ಭಾಷೆ, ಸಂಸ್ಕೃತಿ ಮತ್ತು ಪರಂಪರೆಗೆ

ಆಕ್ರೋಶದ ಬೆನ್ನೆಲ್ಲೆ ವಿವಾದಿತ ಚಿತ್ರ ತೆಗೆದು ಹಾಕಿದ ಅಮೆಜಾನ್ Read More »

ಗೂಗಲ್ ಆಯ್ತು ಇದೀಗ ಅಮೆಜಾನ್ ಸರದಿ | ಕನ್ನಡ ಬಾವುಟ ಮಾದರಿಯ ಬಿಕಿನಿ ತಯಾರಿಸಿ ಮಾರಾಟಕ್ಕಿಟ್ಟ ಇ-ಕಾಮರ್ಸ್ ದೈತ್ಯ

ಬೆಂಗಳೂರು: ಗೂಗಲ್ ಕನ್ನಡಕ್ಕೆ ಅವಮಾನ ಮಾಡಿ ಕ್ಷಮೆಯಾಚಿಸಿದ ಬೆನ್ನಲ್ಲೇ ಆನ್ಲೈನ್ ಮಾರ್ಕೆಟ್ ನಲ್ಲಿ ಹೆಸರುವಾಸಿ ತಾಣ ಅಮೆಜಾನ್ ಕನ್ನಡಕ್ಕೆ ಅವಮಾನ ಮಾಡಿ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದೆ. ಈ ಇ-ಕಾಮರ್ಸ್ ದೈತ್ಯ, ಕನ್ನಡದ ಬಾವುಟ ಮತ್ತು ಲಾಂಛನವುಳ್ಳ ಬಿಕಿನಿ ತಯಾರಿಸಿ ಮಾರಾಟಕ್ಕಿರಿಸಿ ಇದೀಗ ಆಕ್ರೋಶಕ್ಕೆ ಗುರಿಯಾಗಿದೆ. ಕೆನಡಾದಲ್ಲಿ ಚಾಲ್ತಿಯಲ್ಲಿರುವ ಅಮೆಜಾನ್ ವೆಬ್ಸೈಟ್ ಒಂದರಲ್ಲಿ ಈ ತರಹದ ಒಳಉಡುಪು ಮಾರಾಟಕ್ಕಿಟ್ಟಿರುವುದು ಗೋಚರಿಸಿತ್ತು. ಆ ವಿಷಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದ ಕನ್ನಡಾಭಿಮಾನಿಗಳು ಅಮೆಜಾನ್ ವಿರುದ್ಧ ಆಕ್ರೋಶದ ಕಿಡಿಕಾರಲು ಆರಂಭಿಸಿದ್ದಾರೆ. ಆದರೆ ಭಾರತದ

ಗೂಗಲ್ ಆಯ್ತು ಇದೀಗ ಅಮೆಜಾನ್ ಸರದಿ | ಕನ್ನಡ ಬಾವುಟ ಮಾದರಿಯ ಬಿಕಿನಿ ತಯಾರಿಸಿ ಮಾರಾಟಕ್ಕಿಟ್ಟ ಇ-ಕಾಮರ್ಸ್ ದೈತ್ಯ Read More »

ಬಾಲಕಿಯ ಸಾಮೂಹಿಕ ಅತ್ಯಾಚಾರ: ಕಿರುತೆರೆ ನಟನ ಬಂಧನ

ಮುಂಬೈ: ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಆರೋಪದ ಮೇಲೆ ಕಿರುತೆರೆ ನಟ ಪರ್ವ್ ವಿ. ಪುರಿ ಸೇರಿದಂತೆ 6 ಮಂದಿಯನ್ನು ಮುಂಬೈ ವಾಲಿವ್ ಪೊಲೀಸರು ಬಂಧಿಸಿದ್ದಾರೆ.ಕಾರಿನಲ್ಲಿ ನಟ ಸೇರಿದಂತೆ ಇತರರು ನನ್ನ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಬಾಲಕಿ ನೀಡಿದ ದೂರಿನ ಅನ್ವಯ ಮುಂಬೈನ ವಾಲಿವ್ ಪೊಲೀಸರು ಪರ್ವ್ ವಿ ಪುರಿ ಸೇರಿದಂತೆ 6 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.ದಿಲ್ ಕಿ ನಸರ್ ಸೆ ಖೂಬ್ ಸೂರತ್ ಧಾರವಾಹಿ ಮೂಲಕ 2013ರಲ್ಲಿ ಕಿರುತೆರೆ ಕಾಲಿಟ್ಟ

ಬಾಲಕಿಯ ಸಾಮೂಹಿಕ ಅತ್ಯಾಚಾರ: ಕಿರುತೆರೆ ನಟನ ಬಂಧನ Read More »

ಪಿಯುಸಿ ಫಲಿತಾಂಶಕ್ಕೆ ಎಸ್ ಎಸ್ ಎಲ್ ಸಿ ಅಂಕವನ್ನೂ ಪರಿಗಣಿಸಲಾಗುವುದು: ಸುರೇಶ್ ಕುಮಾರ್

ಬೆಂಗಳೂರು: ದ್ವಿತೀಯ ಪಿಯುಸಿ ಫಲಿತಾಂಶಕ್ಕೆ, ವಿದ್ಯಾರ್ಥಿಗಳ ಎಸ್ ಎಸ್ ಎಲ್ ಸಿ ಅಂಕಗಳನ್ನೂ ಪರಿಗಣಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಹೇಳಿದ್ದಾರೆ. ರಾಜ್ಯದಲ್ಲಿ ಪ್ರಸಕ್ತ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ರದ್ದು ಮಾಡಿ, ರಾಜ್ಯ ಸರ್ಕಾರ ನಿನ್ನೆ ಆದೇಶ ಹೊರಡಿಸಿತ್ತು. ಇದಕ್ಕೆ ಮಾನದಂಡವಾಗಿ ಪ್ರಥಮ ಪಿಯುಸಿ ಅಂಕ ಆಧರಿಸಿ, ಪಾಸ್ ಮಾಡುವುದಾಗಿ ಶಿಕ್ಷಣ ಸಚಿವರು ತಿಳಿಸಿದ್ದರು. ಅದರ ಬೆನ್ನಲ್ಲೆ ಇಂದು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಮತ್ತೊಂದು ಶುಭ ಸುದ್ದಿ ನೀಡಿಲಾಗಿದ್ದು,

ಪಿಯುಸಿ ಫಲಿತಾಂಶಕ್ಕೆ ಎಸ್ ಎಸ್ ಎಲ್ ಸಿ ಅಂಕವನ್ನೂ ಪರಿಗಣಿಸಲಾಗುವುದು: ಸುರೇಶ್ ಕುಮಾರ್ Read More »

ಸೊಸೆಯ ತಬ್ಬಿಕೊಂಡು ಕೊರೋನ ಅಂಟಿಸಿದಳು ಅತ್ತೆ

ತೆಲಂಗಾಣ: ಅತ್ತೆ-ಸೊಸೆ ಸಂಭಂದವೆಂದರೆ ಅದು ಹಾವು ಮುಂಗುಸಿಯ ಸಂಭಂದದಂತೆ ಎಂಬ ಮಾತು ಚಾಲ್ತಿಯಲ್ಲಿದೆ. ಆಧುನಿಕ ಕಾಲದಲ್ಲಿ ಅಂತೂ ಅತ್ತೆ-ಸೊಸೆ ವೈರತತ್ವವಿರದ ಕುಟುಂಬ ಕಾಣಸಿಗುವುದು ಬಹಳ ವಿರಳ. ಇದಕ್ಕೆ ಪುಷ್ಟಿ ಎಂಬಂತೆ ರಾಜ್ಯದಲ್ಲೊಂದು ಘಟನೆ ನಡೆದಿದೆ. ಸಿರಿಸಿಲ್ಲಾ ಜಿಲ್ಲೆಯ ಸುಮಾರಿಪೇಟಾ ಗ್ರಾಮದಲ್ಲಿ, ಸೊಸೆಯ ಮೇಲೆ ಕುಪಿತಗೊಂಡ ಸೊಂಕಿತೆ ಅತ್ತೆಯೊಬ್ಬಳು ಆಕೆಯನ್ನು ತಬ್ಬಿಕೊಂಡು ಸೋಂಕು ಅಂಟಿಸಿದ ಘಟನೆ ನಡೆದಿದೆ. ಹಿಂದಿನಿಂದಲೂ ಸೊಸೆಯ ಮೇಲೆ ಹಠ ಸಾಧಿಸುತ್ತಿದ್ದ ಅತ್ತೆ, ಕೋವಿಡ್ ಸೋಂಕಿಗೊಳಗಾಗಿ ಕ್ವಾರಂಟೈನ್ ನಲ್ಲಿದ್ದಳು. ಈ ಕಾರಣದಿಂದ ಸೊಸೆ ತನ್ನ ಮಕ್ಕಳನ್ನು

ಸೊಸೆಯ ತಬ್ಬಿಕೊಂಡು ಕೊರೋನ ಅಂಟಿಸಿದಳು ಅತ್ತೆ Read More »

ಅಸಂಘಟಿತ ಕಾರ್ಮಿಕರಿಗೆ 2,000 ರೂ. ಪರಿಹಾರ ಧನ : ಡಿಸಿ ಡಾ. ರಾಜೇಂದ್ರ ಕೆ.ವಿ

ಮಂಗಳೂರು: ಕೋವಿಡ್‌ ಲಾಕ್‌ಡೌನ್‌ ಹಿನ್ನಲೆಯಲ್ಲಿ ದುಡಿಮೆಯಿಲ್ಲದೆ ಸಂಕಷ್ಟಕ್ಕೆ ಸಿಲುಕಿರುವ ಅಸಂಘಟಿತ ವಲಯದ ಕಾರ್ಮಿಕರಿಗೆ ರಾಜ್ಯ ಸರ್ಕಾರದ ವತಿಯಿಂದ ₹2,000 ಪರಿಹಾರಧನವನ್ನು ನೀಡಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಹೇಳಿದ್ದಾರೆ. ಈ ಕುರಿತು ಶುಕ್ರವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೆಲಸವಿಲ್ಲದೆ ಆರ್ಥಿಕವಾಗಿ ಸಂಕಷ್ಟಕ್ಕೊಳಗಾದ ಅಸಂಘಟಿತ ಕಾರ್ಮಿಕ ವಲಯದ 18 ರಿಂದ 65 ವರ್ಷದೊಳಗಿನ ಕ್ಷೌರಿಕ, ಅಗಸ, ಟೈಲರ್, ಅಕ್ಕಸಾಲಿಗ, ಕಮ್ಮಾರ, ಕುಂಬಾರ, ಗೃಹಕಾರ್ಮಿಕರು, ಚಿಂದಿ ಆಯುವವರು, ಹಮಾಲಿ ಇತ್ಯಾದಿ ಕಾರ್ಮಿಕರುಗಳು ಈ ಪರಿಹಾರ

ಅಸಂಘಟಿತ ಕಾರ್ಮಿಕರಿಗೆ 2,000 ರೂ. ಪರಿಹಾರ ಧನ : ಡಿಸಿ ಡಾ. ರಾಜೇಂದ್ರ ಕೆ.ವಿ Read More »

ಹೇಳಿಕೊಟ್ಟಿದ್ದು ಒಂದು, ಕೇಳಿದ್ದು ಮತ್ತೊಂದು : ಎಕ್ಸಾಂ ಎಡವಟ್ಟಿನಲ್ಲಿ ಮಕ್ಳೆಲ್ಲಾ ಫೇಲ್

ಸಮಾಚಾರ ವರದಿ: ಸಾಮಾನ್ಯವಾಗಿ ಪರೀಕ್ಷೆಗಳು ಅಂದಾಗ ಮಕ್ಕಳಿಗೆ ಕಲಿಸಿದ್ದನ್ನೇ ಪ್ರಶ್ನೆಗಳನ್ನಾಗಿ ಕೇಳಿ ಉತ್ತರ ಪಡೆದುಕೊಳ್ತಾರೆ. ಸರಿ ಉತ್ತರ ಬರೆದವ್ನು ಪಾಸ್ ಆದ್ರೆ ಉತ್ತರ ಸರಿ ನೀಡದವ್ನಿಗೆ ಕಡಿಮೆ ಅಂಕವೋ ಅಥವಾ ಫೇಲೋ ಆಗ್ತಾನೆ. ಆದ್ರೆ ಎಕ್ಸಾಮಿನರ್ ತಪ್ಪು ಪ್ರಶ್ನೆ ಕೇಳಿ ಸರಿ ಉತ್ತರ ನಿರೀಕ್ಷಿಸಿದರೆ ಆಗೋದೇನು? ಇಲ್ಲಿ ಆಗಿದ್ದು ಅದೇ.ಪಾಠದಲ್ಲಿ ಇಲ್ಲದ ಪ್ರಶ್ನೆ ಕೇಳಿದ್ದು, ಮಕ್ಕಳಿಗೆ ಉತ್ತರಿಸಲಾಗದೇ ಹೆಚ್ಚೂ ಕಮ್ಮಿ ಎಲ್ಲಾ ಮಕ್ಕಳು ಫೇಲಾದ ಪ್ರಸಂಗ ನಡೆದಿದೆ. ಅಂದ ಹಾಗೆ ಈ ಪರೀಕ್ಷೆ ನಡೆದದ್ದು ಅಂತಿಮ ಸೆಮಿಸ್ಟರ್

ಹೇಳಿಕೊಟ್ಟಿದ್ದು ಒಂದು, ಕೇಳಿದ್ದು ಮತ್ತೊಂದು : ಎಕ್ಸಾಂ ಎಡವಟ್ಟಿನಲ್ಲಿ ಮಕ್ಳೆಲ್ಲಾ ಫೇಲ್ Read More »