ಸಮಗ್ರ ಸಮಾಚಾರ

ಅಪ್ಪನ ಕಸಿದ ಕೊರೊನ, ಎತ್ತಿ ಮುದ್ದಾಡೋರು, ಹೊರಗಡೆ ಕರೆದೊಯ್ಯುವವರಾರು?

ಬೆಂಗಳೂರು: ‘ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿದ್ದ ಅಪ್ಪ ಮನೆಗೆ ಬಂದು ಒಂದೂವರೆ ವರ್ಷವಾಗಿತ್ತು. ಅವರು ಹೊರಗಡೆ ಕರೆದೊಯ್ದು, ಇಷ್ಟವಾದ ತಿನಿಸು ಹಾಗೂ ವಸ್ತುಗಳನ್ನು ಕೊಡಿಸುತ್ತಿದ್ದರು. ಕೋವಿಡ್‌ ಕಾಯಿಲೆಯು ಅಪ್ಪನನ್ನು ನಮ್ಮಿಂದ ದೂರ ಮಾಡಿತು. ಈಗ ಹೊರಗಡೆ ಕರೆದೊಯ್ಯುವವರು ಯಾರು?’ ಇದು ಎಂಟೂವರೆ ವರ್ಷದ ಬಾಲಕಿಯ ಪ್ರಶ್ನೆ. ಮೂರನೇ ತರಗತಿ ಓದುತ್ತಿರುವ ಪೂರ್ವಿಕಾ ಕಳೆದ ಏಪ್ರಿಲ್‌ನಲ್ಲಿ ತಂದೆಯನ್ನು ಕಳೆದುಕೊಂಡಿದ್ದಾಳೆ. ಅವಳ ತಾಯಿ ಶುಶ್ರೂಷಕಿಯಾಗಿದ್ದು, ರಾಜೀವ್‌ಗಾಂಧಿ ಎದೆರೋಗಗಳ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಆಸ್ಪತ್ರೆಗೆ ದಾಖಲಾದ ಹಲವಾರು ಕೊರೊನಾ ಸೋಂಕಿತರ ಆರೈಕೆ ಮಾಡಿದ್ದ […]

ಅಪ್ಪನ ಕಸಿದ ಕೊರೊನ, ಎತ್ತಿ ಮುದ್ದಾಡೋರು, ಹೊರಗಡೆ ಕರೆದೊಯ್ಯುವವರಾರು? Read More »

ಅಪ್ಪ, ಅಮ್ಮ, ಅಜ್ಜಿ ಮತ್ತು ತಂಗಿಯನ್ನು ಕೊಂದು ಟ್ಯಾಂಕ್’ನಲ್ಲಿ ಅಡಗಿಸಿಟ್ಟ | ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿದ್ದ ಯುವಕ ನಾಲ್ಕು ತಿಂಗಳ ಬಳಿಕ ಅಂದರ್

ಪಶ್ಚಿಮ ಬಂಗಾಳ: ಅಪ್ಪ, ಅಮ್ಮ, ಅಜ್ಜಿ ಮತ್ತು ತಂಗಿಯನ್ನು ಬರ್ಬರವಾಗಿ ಕೊಂದು ಹೆಣಗಳನ್ನು ನೀರಿನ ಟ್ಯಾಂಕ್ ಒಳಗೆ ಮುಚ್ಚಿಟ್ಟು 4 ತಿಂಗಳಿನಿಂದ ನಾಟಕವಾಡಿದ್ದ ಯುವಕನೊಬ್ಬ ಕೊನೆಗೆ ಪೊಲೀಸರ ಅತಿಥಿಯಾಗಿದ್ದಾನೆ. ರಾಜ್ಯದ ಮಾಲ್ಡ ಜಿಲ್ಲೆಯ ಕಲಿಯಚಲೀಕ್ ಗ್ರಾಮದ ಯುವಕ ಆಸೀಫ್ (19) ತನ್ನ ಮನೆಯವರನ್ನೇ ಕೊಂದ ಪಾಪಿ ಯುವಕ. ಈತ ತನ್ನ ತಂದೆ ಜವಾದ್ ಅಲಿ, ತಾಯಿ ಇರಾ ಬೀಬಿ, ತಂಗಿ ಆರಿಫಾ ಹಾಗೂ ಅಜ್ಜಿ ಅಲೆಕ್ಜಾನ್​ರನ್ನು ಕೊಲೆ ಮಾಡಿದ್ದಾನೆ. ಅವರ ದೇಹಗಳನ್ನು ವಾಟರ್​ ಟ್ಯಾಂಕ್​ನಲ್ಲಿ ಮುಚ್ಚಿಟ್ಟಿದ್ದಾನೆ. ಬಳಿಕ

ಅಪ್ಪ, ಅಮ್ಮ, ಅಜ್ಜಿ ಮತ್ತು ತಂಗಿಯನ್ನು ಕೊಂದು ಟ್ಯಾಂಕ್’ನಲ್ಲಿ ಅಡಗಿಸಿಟ್ಟ | ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿದ್ದ ಯುವಕ ನಾಲ್ಕು ತಿಂಗಳ ಬಳಿಕ ಅಂದರ್ Read More »

ಹಾಸನ ಕಾರು ಲಾರಿ ಭೀಕರ ಅಪಘಾತ ಬೆಳ್ತಂಗಡಿ ಮೂಲದ ಮೂವರು ಸಾವು | ಓರ್ವ ಗಂಭೀರ

ಬೆಳ್ತಂಗಡಿ: ಹಾಸನದಲ್ಲಿ ಲಾರಿ ಗೆ ಕಾರೊಂದು ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಹೋದರರರು ಸೇರಿದಂತೆ ಮೂವರು ಸ್ಥಳದಲ್ಲೇ ಮೃತಪಟ್ಟು, ಓರ್ವ ಗಂಭೀರ ಗಾಯಗೊಂಡ ಘಟನೆ ಇಂದು ಸಂಜೆ ನಡೆದಿದೆ. ಮೃತಪಟ್ಟ ಇಬ್ಬರನ್ನು ತಾಲೂಕಿನ ಇಂದ್ರಬೆಟ್ಟು ಗ್ರಾಮದ ಕುತ್ರಬೆಟ್ಟುವಿನ ಜಯಪ್ರಕಾಶ್ (25) ಯೋಗೀಶ್(23) ಎಂದು ಗುರುತಿಸಲಾಗಿದೆ. ಮೃತಪಟ್ಟ ಇನ್ನೊಬ್ಬರು ಮತ್ತು ಗಾಯಗೊಂಡ ಒಬ್ಬರ ಮಾಹಿತಿ ತಿಳಿದುಬಂದಿಲ್ಲ.ಹಾಸನ ಹೊರವಲಯದ ಕೆಂಚಟ್ಟಿ ಹಳ್ಳಿ ಸಮೀಪ ಅಪಘಾತ ಸಂಭವಿಸಿದೆ. ರಸ್ತೆಯಲ್ಲಿದ್ದ ಹಂಪ್ ಕಂಡು ಲಾರಿ ಚಾಲಕ ಹಠಾತ್ ಬ್ರೇಕ್ ಹಾಕಿದ ಪರಿಣಾಮ

ಹಾಸನ ಕಾರು ಲಾರಿ ಭೀಕರ ಅಪಘಾತ ಬೆಳ್ತಂಗಡಿ ಮೂಲದ ಮೂವರು ಸಾವು | ಓರ್ವ ಗಂಭೀರ Read More »

ಮತ್ತೆ 13 ಜಿಲ್ಲೆಗಳಲ್ಲಿ ಲಾಕ್ಡೌನ್ ಕಂಟಿನ್ಯೂ | ದಕ್ಷಿಣಕನ್ನಡಕ್ಕಿಲ್ಲ ರಿಲೀಫ್ ಭಾಗ್ಯ

ಬೆಂಗಳೂರು: ಕೋವಿಡ್ ಪಾಸಿಟಿವಿಟಿ ದರ ಶೇಕಡ 5 ಕ್ಕಿಂತ ಕೆಳಕ್ಕೆ ಇಳಿಯದ 13 ಜಿಲ್ಲೆಗಳಲ್ಲಿ ಲಾಕ್ಡೌನ್ ಮುಂದುವರಿಸಲು ರಾಜ್ಯಸರ್ಕಾರ ನಿರ್ಧರಿಸಿದೆ. ಇನ್ನುಳಿದಂತೆ ಪಾಸಿಟಿವಿಟಿ ದರ ಇಳಿಕೆ ಕಂಡಿರುವ 16 ಜಿಲ್ಲೆಗಳಲ್ಲಿ ಲಾಕ್ಡೌನ್ ತೆರವುಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಪಾಸಿಟಿವಿಟಿ ದರದ ಆಧಾರದ ಮೇಲೆ ಉತ್ತರ ಕನ್ನಡ, ಬೆಳಗಾವಿ, ಮಂಡ್ಯ, ಕೊಪ್ಪಳ, ಚಿಕ್ಕಬಳ್ಳಾಪುರ, ತುಮಕೂರು, ಕೋಲಾರ, ಬೆಂಗಳೂರು ನಗರ ಸೇರಿದಂತೆ ಗದಗ, ರಾಯಚೂರು, ಬಾಗಲಕೋಟೆ, ಕಲಬುರ್ಗಿ, ಹಾವೇರಿ, ರಾಮನಗರ, ಯಾದಗಿರಿ ಹಾಗೂ ಬೀದರ್ ಸೇರಿದಂತೆ 16 ಜಿಲ್ಲೆಗಳಲ್ಲಿ, ಈ

ಮತ್ತೆ 13 ಜಿಲ್ಲೆಗಳಲ್ಲಿ ಲಾಕ್ಡೌನ್ ಕಂಟಿನ್ಯೂ | ದಕ್ಷಿಣಕನ್ನಡಕ್ಕಿಲ್ಲ ರಿಲೀಫ್ ಭಾಗ್ಯ Read More »

”ಮದ್ಯದ ಬೆಲೆ ಹೆಚ್ಚಾಗಿದೆ, ಬನ್ನಿ ಕುಳಿತು ಚರ್ಚಿಸೋಣ”

ಕೊಪ್ಪಳ: ಲಾಕ್‌ಡೌನ್ ನೆಪವಾಗಿಟ್ಟುಕೊಂಡು ಅಧಿಕ ದರದಲ್ಲಿ ಮದ್ಯ ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪವಿದೆ. ಈ ಆರೋಪಕ್ಕೆ ಪುಷ್ಠಿ ಕೊಡುವಂತೆ ಕೊಪ್ಪಳ ಜಿಲ್ಲೆಯ ಹೊಸಹಳ್ಳಿಯಲ್ಲಿ ದುಪ್ಪಟ್ಟು ದರಕ್ಕೆ ಮದ್ಯ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಬೇಸತ್ತ ಮದ್ಯಪ್ರೀಯರು ಗ್ರಾಮದಲ್ಲಿರುವ ಎಲ್ಲಾ ಕುಡುಕರು ಒಂದು ಕಡೆ ಚರ್ಚಿಸೋಣ ಬನ್ನಿ ಎಂದು ಡಂಗುರ ಸಾರಿದ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ. ನಮ್ಮ ಗ್ರಾಮದಲ್ಲಿ ಹಾಗೂ ಗಂಗಾವತಿಯಲ್ಲಿ ದುಪ್ಪಟ್ಟು ದರಕ್ಕೆ ಮದ್ಯ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಬಡವರಿಗೆ ತೊಂದರೆಯಾಗುತ್ತಿದೆ. ಲಾಕ್‌ಡೌನ್ ನೆಪ ಹೇಳಿಕೊಂಡು 50

”ಮದ್ಯದ ಬೆಲೆ ಹೆಚ್ಚಾಗಿದೆ, ಬನ್ನಿ ಕುಳಿತು ಚರ್ಚಿಸೋಣ” Read More »

ತಬ್ಲೀಘಿ ಜಮಾತ್ ಗುರಿಯಾಗಿರಿಸಿ ಕಾರ್ಯಕ್ರಮ ಆರೋಪ | ಸುವರ್ಣ ನ್ಯೂಸ್ ಮತ್ತು ನ್ಯೂಸ್ 18 ಕನ್ನಡ ಮೇಲೆ ದಂಡ | ಕ್ಷಮೆಯಾಚಿಸಲು ಆದೇಶ

ಬೆಂಗಳೂರು: ತಬ್ಲಿಘಿ ಜಮಾತ್ ಗುರಿಯಾಗಿರಿಸಿ ಅಸಂಬದ್ಧವಾಗಿ ಕಾರ್ಯಕ್ರಮ ಬಿತ್ತರಿಸಿದ ಕನ್ನಡದ ನ್ಯೂಸ್ ಚಾನೆಲ್ ಗಳಾದ ಸುವರ್ಣನ್ಯೂಸ್ ಮತ್ತು ನ್ಯೂಸ್ 18 ಕನ್ನಡಕ್ಕೆ 1.5 ಲಕ್ಷ ದಂಡ ವಿಧಿಸಿ ಕ್ಷಮೆಯಾಚಿಸಲು ಆದೇಶಿಸಲಾಗಿದೆ. ಕೊರೋನಾ ಆಕ್ರಮಣ ಆರಂಭದ ದಿನಗಳಲ್ಲಿ ಸರ್ಕಾರದ ಅನುಮತಿ ಮೇರೆಗೆ ತಬ್ಲೀಘಿ ಜಮಾತ್ ಕಾರ್ಯಕ್ರಮ ನಡೆದಿತ್ತು. ಇನ್ನು ಆ ಸಮಯದಲ್ಲಿ ಕೋವಿಡ್ ವೈರಸ್ ವ್ಯಾಪಕವಾಗಿ ಹರಡಲು ಆರಂಭಿಸಿದ್ದರಿಂದ ನ್ಯೂಸ್ ಚಾನೆಲ್ ಗಳು ತಮ್ಮ ಚಾನೆಲ್ ನಲ್ಲಿ ತಬ್ಲಿಘಿ ಜಮಾತ್ ನ್ನು ಕೊರೋನ ಹರಡಿಸಲು ಏರ್ಪಡಿಸಲಾಗಿದೆ ಎಂದು ಬಿಂಬಿಸಿದ್ದವು.

ತಬ್ಲೀಘಿ ಜಮಾತ್ ಗುರಿಯಾಗಿರಿಸಿ ಕಾರ್ಯಕ್ರಮ ಆರೋಪ | ಸುವರ್ಣ ನ್ಯೂಸ್ ಮತ್ತು ನ್ಯೂಸ್ 18 ಕನ್ನಡ ಮೇಲೆ ದಂಡ | ಕ್ಷಮೆಯಾಚಿಸಲು ಆದೇಶ Read More »

ವಿಟ್ಲ: ಮಹಿಳೆಯ ಮಾನಭಂಗಕ್ಕೆ ಯತ್ನಿಸಿದ ಗ್ರಾಮ ಪಂಚಾಯತ್ ಅಧ್ಯಕ್ಷ

ಬಂಟ್ವಾಳ: ಗ್ರಾಮ ಪಂಚಾಯತ್ ಅಧ್ಯಕ್ಷ ಗ್ರಾಮದ ಮಹಿಳೆಯೊಬ್ಬರ ಮನೆಗೆ ನುಗ್ಗಿ ಆಕೆಯ ಮಾನಭಂಗಕ್ಕೆ ಯತ್ನಿಸಿದ ಘಟನೆ ಕನ್ಯಾನದಿಂದ ವರದಿಯಾಗಿದೆ. ಈ ಸಂಬಂಧ ಕನ್ಯಾನ ಗ್ರಾಮ ಪಂಚಾಯತ್ ಅಧ್ಯಕ್ಷ ರಹಿಮಾನ್ ಎಂಬವನ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗ್ರಾಮದ ಪಿಲಿಚಂಡಿ ಗುಡ್ಡೆ ಎಂಬಲ್ಲಿನ ಒಂದು ಮನೆಯವರು ನೀರಿನ ಬಿಲ್ ಪಾವತಿಸದ ಕಾರಣ ಗ್ರಾಮ ಪಂಚಾಯಿತಿ ಪಿಡಿಓ ಮತ್ತು ಸಿಬ್ಬಂದಿ ಬಂದಿದ್ದರು. ಬಿಲ್ ಪಾವತಿಸುವ ಭರವಸೆ ನೀಡಿದ ನಂತರ ಅವರು ತೆರಳಿದ್ದರು. ಇನ್ನು ಸಂಜೆ ವೇಳೆ ಗ್ರಾಮ

ವಿಟ್ಲ: ಮಹಿಳೆಯ ಮಾನಭಂಗಕ್ಕೆ ಯತ್ನಿಸಿದ ಗ್ರಾಮ ಪಂಚಾಯತ್ ಅಧ್ಯಕ್ಷ Read More »

ಪುತ್ತೂರು:ಯುವಕರೊಂದಿಗೆ ಆಸ್ಪತ್ರೆಗೆ ಬಂದ ಯುವತಿ | ಮಿಸ್’ಅಂಡರ್’ಸ್ಟ್ಯಾಂಡಿಂಗ್ ಮಾಡಿಕೊಂಡ ಹಿಂಜಾವೇ

ಪುತ್ತೂರು : ಯುವತಿಯೋರ್ವಳು ಅನ್ಯಕೋಮಿನವರ ಜೊತೆ ಆಸ್ಪತ್ರೆಗೆ ಬಂದದನ್ನು ಗಮನಿಸಿದ ಹಿಂಜಾವೇ ಯುವಕರ ಆತುರದ ನಿರ್ಧಾರದಿಂದ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆ ಜೂ. 17 ರಂದು ಪುತ್ತೂರಿನಲ್ಲಿ ನಡೆದಿದೆ. ವಿಟ್ಲ‌ಮೂಲದ ನಾಲ್ಕು ಮಂದಿಯ ತಂಡವೊಂದು ಪುತ್ತೂರಿಗೆ ಬಂದಿದ್ದು ಈ ಗುಂಪಿನಲ್ಲಿ ಹಿಂದು ಯುವತಿಯೋರ್ವಳು ಜೊತೆಗಿದ್ದಳು. ಉಳಿದಂತೆ ಇಬ್ಬರು ಯುವಕರು ಹಾಗೂ ಒಬ್ಬಾಕೆ ಯುವತಿ ಅನ್ಯಧರ್ಮದವರಾಗಿದ್ದರು. ಇವರನ್ನು ಗಮನಿಸಿದ ಸಾರ್ವಜನಿಕರಲ್ಲಿ ಅನುಮಾನ ಬಂದು ಹಿಂಜಾವೇಯವರಿಗೆ ಮಾಹಿತಿ ನೀಡಿದ್ದಾರೆ ಎಂದು ಹೇಳಲಾಗಿದ್ದು, ಈ ವೇಳೆ ತಕ್ಷಣ ಸ್ಥಳಕ್ಕೆ ಆಗಮಿಸಿದ

ಪುತ್ತೂರು:ಯುವಕರೊಂದಿಗೆ ಆಸ್ಪತ್ರೆಗೆ ಬಂದ ಯುವತಿ | ಮಿಸ್’ಅಂಡರ್’ಸ್ಟ್ಯಾಂಡಿಂಗ್ ಮಾಡಿಕೊಂಡ ಹಿಂಜಾವೇ Read More »

ಕಡಬ: ಗುಡ್ಡದಲ್ಲಿ ರಿಕ್ಷಾ ಚಾಲಕನ ಸರಸಸಲ್ಲಾಪ | ಕಾಲೇಜು ವಿದ್ಯಾರ್ಥಿನಿ ಹೊಟ್ಟೆಯಲ್ಲಿ `ಯುವರಾಜ’

ಕಡಬ: ರಿಕ್ಷಾ ಚಾಲಕನೊಂದಿಗೆ ನಿರಂತರ ಲೈಂಗಿಕ ಸಂಪರ್ಕ ದಿಂದ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಗರ್ಭಿಣಿಯಾದ ಘಟನೆ ಕಡಬ ಠಾಣ ವ್ಯಾಪ್ತಿಯಲ್ಲಿ ನಡೆದಿದೆ. ಆರೋಪಿಯನ್ನು ರಿಕ್ಷಾ ಚಾಲಕ ಯುವರಾಜ್ ಎಂದು ಗುರುತಿಸಲಾಗಿದೆ. ಈತನ ಜೊತೆ ಸರಸಸಲ್ಲಾಪದಿಂದ ಕಾಲೇಜು ವಿದ್ಯಾರ್ಥಿನಿ ಗರ್ಭಿಣಿಯಾಗಿದ್ದಾಳೆ. ವಿದ್ಯಾರ್ಥಿನಿಗೆ ಹೊಟ್ಟೆ ನೋವು ಕಾಣಿಸಿಕೊಂಡ ಕಾರಣ ಮನೆಯವರು ಆಕೆಯನ್ನು ಪರೀಕ್ಷೆಗೆ ಒಳಪಡಿಸಿದ್ದಾರೆ. ಈ ವೇಳೆ ಆಕೆ ಗರ್ಭಿಣಿಯಾಗಿರುವ ವಿಷಯ ಬೆಳಕಿಗೆ ಬಂದಿದೆ. ಕಳೆದೊಂದು ವರ್ಷದಿಂದ ಪರಿಚಯದ ಯುವಕನೊಂದಿಗೆ ಆಕೆಯ ಲವ್ವಿ-ಡವ್ವಿಯ ಗುಟ್ಟು ರಟ್ಟಾಗಿದೆ. ಇದೀಗ ಮನೆಯವರಿಗೆ ಆಕೆ 8

ಕಡಬ: ಗುಡ್ಡದಲ್ಲಿ ರಿಕ್ಷಾ ಚಾಲಕನ ಸರಸಸಲ್ಲಾಪ | ಕಾಲೇಜು ವಿದ್ಯಾರ್ಥಿನಿ ಹೊಟ್ಟೆಯಲ್ಲಿ `ಯುವರಾಜ’ Read More »

ಬಂಟ್ವಾಳ: ಲಾರಿ ಅಪಘಾತ | ಚಾಲಕ, ಕ್ಲೀನರ್ ಗೆ ಗಾಯ

ಬಂಟ್ವಾಳ: ಲಾರಿಯೊಂದು ಧರೆಗೆ ಡಿಕ್ಕಿ ಹೊಡೆದ ಪರಿಣಾಮಚಾಲಕ ಹಾಗೂ ನಿರ್ವಾಹಕ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಇಂದು ಮುಂಜಾನೆ ಬಂಟ್ವಾಳದಲ್ಲಿ ನಡೆದಿದೆ. ಲಾರಿ ಶಿವಮೊಗ್ಗದಿಂದ ಪುತ್ತೂರಿಗೆ ಅಕ್ಕಿ ಹೇರಿಕೊಂಡು ಕೊಂಡು ಬರುತ್ತಿತ್ತು. ಬಂಟ್ವಾಳದ ಎಸ್ ವಿ‌ಎಸ್ ಶಾಲೆ ಬಳಿ ಚಾಲಕನ ನಿಯಂತ್ರಣ ಕಳೆದುಕೊಂಡು ಲಾರಿ ರಸ್ತೆ ಬದಿಗೆ ಚಲಿಸಿ ಧರೆಗೆ ಡಿಕ್ಕಿ ಹೊಡೆದಿದೆ. ಲಾರಿ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ ಚಾಲಕ ಹಾಗೂ ನಿರ್ವಾಹಕನಿಗೆ ಗಾಯಗಳಾಗಿದ್ದು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಮೆಲ್ಕಾರ್ ಟ್ರಾಫಿಕ್ ಪೋಲೀಸರು

ಬಂಟ್ವಾಳ: ಲಾರಿ ಅಪಘಾತ | ಚಾಲಕ, ಕ್ಲೀನರ್ ಗೆ ಗಾಯ Read More »