Editor

ಟಾಟಾ ಗ್ರೂಪ್ ನ ಅಧ್ಯಕ್ಷರಾಗಿ ನೋಯಲ್ ಟಾಟಾ ನೇಮಕ

ಸಮಗ್ರ ನ್ಯೂಸ್: ಟಾಟಾ ಗ್ರೂಪ್ ಗೆ ಹೊಸ ವಾರಸುದಾರರ ಆಯ್ಕೆಯಾಗಿದೆ. ಟಾಟಾ ಟ್ರಸ್ಟ್ ಗಳ ಮುಖ್ಯಸ್ಥರಾಗಿ ನೋಯಲ್ ಟಾಟಾ ಅವರನ್ನು ನೇಮಕ ಮಾಡಲಾಗಿದೆ. ಇಂದು(ಅ.12) ಶುಕ್ರವಾರ ಟಾಟಾ ಟ್ರಸ್ಟ್ ಗಳ ಮಂಡಳಿ ಸಭೆ ನಡೆದಿದ್ದು, ಅದರಲ್ಲಿ ಒಮ್ಮತದಿಂದ ನೋಯಲ್ ಅವರ ಪರವಾಗಿ ಒಮ್ಮತದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಟಾಟಾ ಗ್ರೂಪ್ ನ ಮಾಲೀಕ ಸಂಸ್ಥೆಯಾದ ಟಾಟಾ ಸನ್ಸ್ ನಲ್ಲಿ ಟಾಟಾ ಟ್ರಸ್ಟ್ ಗಳು ಬಹುಪಾಲು ಷೇರುದಾರಿಕೆ ಹೊಂದಿವೆ. ಈ ಮೂಲಕ ಟಾಟಾ ಗ್ರೂಪ್ ನ ಒಡೆತನ ನೋಯಲ್ ಟಾಟಾಗೆ […]

ಟಾಟಾ ಗ್ರೂಪ್ ನ ಅಧ್ಯಕ್ಷರಾಗಿ ನೋಯಲ್ ಟಾಟಾ ನೇಮಕ Read More »

ಬೆಳ್ತಂಗಡಿ: ಡಿವೈಡರ್ ಗೆ ಡಿಕ್ಕಿ ಹೊಡೆದು‌ ಬೈಕ್ ಸವಾರ ಸಾವು

ಸಮಗ್ರ ನ್ಯೂಸ್: ಡಿವೈಡರ್‌ಗೆ ಬೈಕ್‌ ಢಿಕ್ಕಿಯಾದ ಪರಿಣಾಮ ಬೈಕ್‌ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆ ಶಕ್ತಿನಗರದ ಬಳಿ ಅಕ್ಟೋಬರ್ 10 ರಂದು ನಡೆದಿದೆ. ಮೃತರನ್ನು ಬೆಳ್ತಂಗಡಿ ತಾಲೂಕು ತೆಂಕಕಾರಂದೂರು ಗ್ರಾಮದ ಕಟ್ಟೆ ನಿವಾಸಿ ಸುಧೀಶ್‌ (30) ಎಂದು ಗುರುತಿಸಲಾಗಿದೆ. ಸುಧೀಶ್‌ ಅವರು ಯಾವುದೋ ಕಾರ್ಯನಿಮಿತ್ತ ಉಪ್ಪಿನಂಗಡಿಯಿಂದ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಅಪಘಾತ ನಡೆದಿದೆ. ಈ ಅವಘಡದಲ್ಲಿ ಸುಧೀಶ್ ಅವರ ತಲೆಗೆ ಪೆಟ್ಟಾದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸುಧೀಶ್‌ ಅವರು ಪೈಂಟಿಂಗ್‌ ವೃತ್ತಿ ನಡೆಸುತ್ತಿದ್ದರು.

ಬೆಳ್ತಂಗಡಿ: ಡಿವೈಡರ್ ಗೆ ಡಿಕ್ಕಿ ಹೊಡೆದು‌ ಬೈಕ್ ಸವಾರ ಸಾವು Read More »

ಮಹಾರಾಷ್ಟ್ರ: ನಾಸಿಕ್‌ನ ಫಿರಂಗಿ ಕೇಂದ್ರದಲ್ಲಿ ಶೆಲ್ ಸ್ಫೋಟ| ಇಬ್ಬರು ಅಗ್ನಿವೀರರು ಸಾವು

ಸಮಗ್ರ ನ್ಯೂಸ್: ಮಹಾರಾಷ್ಟ್ರದ ನಾಸಿಕ್’ನ ಫಿರಂಗಿ ಕೇಂದ್ರದಲ್ಲಿ ತರಬೇತಿ ಅಭ್ಯಾಸದ ವೇಳೆ ಭಾರತೀಯ ಫೀಲ್ಡ್ ಗನ್ ನಿಂದ ಬಂದ ಶೆಲ್ ಸ್ಫೋಟಗೊಂಡು ಇಬ್ಬರು ಅಗ್ನಿವೀರರು ಸಾವನ್ನಪ್ಪಿದ್ದಾರೆ. ನಾಸಿಕ್ ರಸ್ತೆ ಪ್ರದೇಶದಲ್ಲಿ ಗುರುವಾರ ಮಧ್ಯಾಹ್ನ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಗ್ನಿವೀರರನ್ನು 20 ವರ್ಷದ ಗೋಹಿಲ್ ವಿಶ್ವರಾಜ್ ಸಿಂಗ್ ಮತ್ತು 21 ವರ್ಷದ ಸೈಫತ್ ಎಂದು ಗುರುತಿಸಲಾಗಿದೆ. ಗುಂಡಿನ ಚಕಮಕಿಯ ವೇಳೆ ಶೆಲ್ ಸ್ಫೋಟಗೊಂಡು ಇಬ್ಬರಿಗೂ ಗಾಯಗಳಾಗಿವೆ. ಅವರನ್ನು ಡಿಯೋಲಾಲಿಯ ಎಂಎಚ್ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ

ಮಹಾರಾಷ್ಟ್ರ: ನಾಸಿಕ್‌ನ ಫಿರಂಗಿ ಕೇಂದ್ರದಲ್ಲಿ ಶೆಲ್ ಸ್ಫೋಟ| ಇಬ್ಬರು ಅಗ್ನಿವೀರರು ಸಾವು Read More »

ಸುಳ್ಯ: ಅರ್ಕುಟ್ ಮೊಬೈಲ್ ನಲ್ಲಿ ಬಿಗ್ ಫೆಸ್ಟಿವಲ್ ಸೇಲ್| ಆಫರ್ ಗಳ ಸುರಿಮಳೆ

ಸಮಗ್ರ ನ್ಯೂಸ್: ಸುಳ್ಯದ ಜನತಾ ಸ್ಟೋರ್ ಮುಂಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅರ್ಕುಟ್ ಮೊಬೈಲ್ ನಲ್ಲಿ ಹಬ್ಬಗಳ ಪ್ರಯುಕ್ತ ವಿಶೇಷ ಆಫರ್ ದೊರಕುತ್ತಿದ್ದು, ಸ್ಮಾರ್ಟ್ ಫೋನ್ ಸುಲಭ ಕಂತಿನಲ್ಲಿ ದೊರೆಯಲಿದೆ ಮತ್ತು ಭರ್ಜರಿ ಆಫರ್ ಗಳ ಲಭ್ಯವಿದೆ. ಇಂದು ಮೊಬೈಲ್ ಖರೀದಿಸಿ ನಾಳೆ ಪಾವತಿಸಿ:ಪ್ರತಿ ಖರೀದಿಗೆ ಖಚಿತ ಉಡುಗೊರೆ ಹಾಗೂ ಉಚಿತ ಕೂಪನ್ ಸೌಲಭ್ಯವಿದ್ದು ಏಳು ಬೈಕ್, ಎಸಿ ಹಾಗೂ 500 + ಬಹುಮಾನಗಳು ಪಡೆಯುವ ಅವಕಾಶವಿದೆ. ಐಫೋನು ಸ್ಮಾರ್ಟ್ ಫೋನ್, ಆಂಡ್ರಾಯ್ಡ್ ಮೊಬೈಲ್ ಗಳು ನಿಮ್ಮ ಬಜೆಟ್

ಸುಳ್ಯ: ಅರ್ಕುಟ್ ಮೊಬೈಲ್ ನಲ್ಲಿ ಬಿಗ್ ಫೆಸ್ಟಿವಲ್ ಸೇಲ್| ಆಫರ್ ಗಳ ಸುರಿಮಳೆ Read More »

ನವರಾತ್ರಿ ವೇಳೆಯೇ ಅರಮನೆಗೆ ಹೊಸ ಅತಿಥಿ.. ಯದುವೀರ್-ತ್ರಿಷಿಕಾ ದಂಪತಿಗೆ 2ನೇ ಮಗು ಜನನ

ಸಮಗ್ರ ನ್ಯೂಸ್: ಮೈಸೂರು ಅರಮನೆಯಲ್ಲಿ ದಸರಾ ಸಂಭ್ರಮ ಮನೆ ಮಾಡಿದೆ, ಇತ್ತ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ಪತ್ನಿ ತ್ರಿಷಿಕಾ ದಂಪತಿಗೆ ಎರಡನೇ ಗಂಡು ಮಗು ಜನಿಸಿದೆ. ಇದೀಗ ನವರಾತ್ರಿ ಸಂಭ್ರಮದಲ್ಲಿ ರಾಜರ ಕುಟುಂಬದಲ್ಲಿ ಸಂತಸ ಮತ್ತಷ್ಟು ಹೆಚ್ಚಾಗಿದೆ. ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ತ್ರಿಷಿಕಾ ಕುಮಾರಿ ದೇವಿ ಅವರು 2ನೇ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಆಸ್ಪತ್ರೆಯಲ್ಲಿ ತಾಯಿ, ಮಗು ಇಬ್ಬರು ಆರೋಗ್ಯವಾಗಿದ್ದಾರೆ. ಇದರಿಂದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಗೆ, ಮೈಸೂರು

ನವರಾತ್ರಿ ವೇಳೆಯೇ ಅರಮನೆಗೆ ಹೊಸ ಅತಿಥಿ.. ಯದುವೀರ್-ತ್ರಿಷಿಕಾ ದಂಪತಿಗೆ 2ನೇ ಮಗು ಜನನ Read More »

ಉದ್ಯೋಗಿಗಳ ಹೃದಯ ಗೆದ್ದ ‘ಮೀಶೋ’|ನೌಕರರಿಗೆ 9 ದಿನ ವೇತನ ಸಹಿತ ರಜೆ

ಸಮಗ್ರ ನ್ಯೂಸ್: ಇ -ಕಾಮರ್ಸ್‌ ಕಂಪನಿ ‘ಮೀಶೋ’ ತನ್ನ ಉದ್ಯೋಗಿಗಳಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದೆ. ಉದ್ಯೋಗಿಗಳು ಅಕ್ಟೋಬರ್ 26 ರಿಂದ ನವೆಂಬರ್ 3 ರವರೆಗೆ ರಜಾದಿನದ ಮಜ ಅನುಭವಿಸಲಿದ್ದಾರೆ. 9 ದಿನಗಳವರೆಗೆ ಲ್ಯಾಪ್ಟಾಪ್ ಇಲ್ಲ, ಫೋನ್ ಇಲ್ಲ, ಸಂದೇಶಗಳು ಮತ್ತು ಸಭೆಗಳಿಲ್ಲ. ಕೆಲಸಕ್ಕೆ ಸಂಬಂಧಿಸಿದಂತೆ ಯಾವುದೇ ಮಾತುಕತೆ ಇರುವುದಿಲ್ಲ. ಈ ವಿರಾಮವು ಮುಂಬರುವ ವರ್ಷಕ್ಕೆ ಹೊಸ ಮತ್ತು ಶಕ್ತಿಯುತ ಆರಂಭಕ್ಕಾಗಿ ನಮ್ಮ ಮನಸ್ಸು.10 ದಿನಗಳ ‘ಮೀಶೋ ಮೆಗಾ ಬ್ಲಾಕ್ಟಸ್ಟರ್ ಸೇಲ್ 2024’ ನಲ್ಲಿ 145 ಕೋಟಿ

ಉದ್ಯೋಗಿಗಳ ಹೃದಯ ಗೆದ್ದ ‘ಮೀಶೋ’|ನೌಕರರಿಗೆ 9 ದಿನ ವೇತನ ಸಹಿತ ರಜೆ Read More »

ಗೋಲ್ಡ್ ಪ್ರಿಯರಿಗೆ ಗುಡ್ ನ್ಯೂಸ್| ಚಿನ್ನದ ದರ ಭಾರೀ ಕುಸಿತ

ಸಮಗ್ರ ನ್ಯೂಸ್: ಗೋ ಲ್ಡ್ ಪ್ರಿಯರಿಗೆ ಗುಡ್ ನ್ಯೂಸ್ ಚಿನ್ನದ ದರ ಭಾರೀ ಕುಸಿತ ಕಂಡಿದೆ.ಕಳೆದ 2 ದಿನಗಳಿಂದ ಚಿನ್ನದ ಬೆಲೆ ಕಡಿಮೆ ಆಗಿದ್ದು, ಇಂದು ಆಯುಧ ಪೂಜೆ ಪ್ರಯುಕ್ತ ಬಂಗಾರ ಖರೀದಿ ಮಾಡುವುದು ಒಳ್ಳೆಯದು ಎಂದು ಹೇಳಲಾಗುತ್ತಿದೆ.ಇತ್ತೀಚಿಗೆ ಚಿನ್ನದ ಬೆಲೆ ಗಗನಕ್ಕೇರಿ ಗ್ರಾಹಕರಿಗೆ ಭಾರೀ ನಿರಾಸೆ ಮೂಡಿಸಿತ್ತು. ಬೆಂಗಳೂರಲ್ಲಿ ಇಂದು 22 ಕ್ಯಾರಟ್ ಗೋಲ್ಡ್ ರೇಟ್ ಒಂದು ಗ್ರಾಮ್‌ಗೆ 7,030 ರೂ. ಇದೆ. ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲೂ ಒಂದು ಗ್ರಾಮ್ ಚಿನ್ನದ ಬೆಲೆ

ಗೋಲ್ಡ್ ಪ್ರಿಯರಿಗೆ ಗುಡ್ ನ್ಯೂಸ್| ಚಿನ್ನದ ದರ ಭಾರೀ ಕುಸಿತ Read More »

ಬೇಸಿಗೆಯಲ್ಲಿ ಕರ್ಬೂಜ ಹಣ್ಣು ತಿನ್ನೋದು ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಗೊತ್ತಾ?

ಇಲ್ಲಿದೆ ಸಂಪೂರ್ಣ ಮಾಹಿತಿ ಸಮಗ್ರ ನ್ಯೂಸ್:ಕಲ್ಲಂಗಡಿ ಹಣ್ಣಿನಂತೆಯೇ ಕರ್ಬೂಜವೂ 90% ಕ್ಕೂ ಹೆಚ್ಚು ನೀರಿನಂಶವನ್ನು ಹೊಂದಿರುವ ಫಲವಾಗಿದೆ. ದೇಹದಲ್ಲಿ ನೀರಿನ ಅಂಶ ಉತ್ತಮವಾಗಿದ್ದಾಗ ತಾಪಮಾನವನ್ನು ನಿಯಂತ್ರಿಸಲು, ಜೀರ್ಣಕ್ರಿಯೆ ಉತ್ತಮಗೊಳಿಸಲು ಹಾಗೂ ಪೋಷಕಾಂಶಗಳನ್ನು ದೇಹದ ಎಲ್ಲಾ ಭಾಗಗಳಿಗೆ ಸಾಗಿಸಲು ಸಾಧ್ಯವಾಗುತ್ತದೆ. ಕರ್ಬೂಜದಲ್ಲಿ ವಿವಿಧ ಅವಶ್ಯಕ ವಿಟಮಿನ್ನುಗಳು, ಖನಿಜಗಳು ಹಾಗೂ ವಿಟಮಿನ್ ಸಿ, ಪೊಟ್ಯಾಶಿಯಂ ಹಾಗೂ ಬಿ-ವಿಟಮಿನ್ನುಗಳು ಸಮೃದ್ಧವಾಗಿವೆ. ವಿಟಮಿನ್ ಸಿ ನಮ್ಮ ದೇಹದ ಅಂಗಾಂಶಗಳ ದುರಸ್ತಿಗಾಗಿ ಅವಶ್ಯವಾಗಿದೆ. ಅಲ್ಲದೇ ಇದು ಆಂಟಿ ಆಕ್ಸಿಡೆಂಟ್‌ನಂತೆಯೂ ಕಾರ್ಯನಿರ್ವಹಿಸುತ್ತದೆ ಹಾಗೂ ರೋಗ ನಿರೋಧಕ

ಬೇಸಿಗೆಯಲ್ಲಿ ಕರ್ಬೂಜ ಹಣ್ಣು ತಿನ್ನೋದು ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಗೊತ್ತಾ? Read More »

ಪೊಲೀಸರ ಎದುರೇ ಶಾಸಕನ ಕಪಾಳಕ್ಕೆ ಬಾರಿಸಿದ ವಕೀಲ

ಸಮಗ್ರ ನ್ಯೂಸ್: ವಕೀಲರೊಬ್ಬರು ಪೊಲೀಸರೆದುರೇ ಲಕ್ಕೊದ ಲಖೀಂಪುರ್ ಖೇರಿ ಶಾಸಕ ಯೋಗೇಶ್ ವರ್ಮ ಎಂಬಾತನಿಗೆ (ಅ.9) ಕಪಾಳ ಮೋಕ್ಷ ಮಾಡಿದ್ದಾರೆ.ಈ ಕಪಾಳ ಮೋಕ್ಷದ ಬೆನ್ನಿಗೇ ಶಾಸಕನ ಬೆಂಬಲಿಗರು ಹಲ್ಲೆ ನಡೆಸಿದ್ದು, ವಕೀಲರ ಮೇಲೆ ದಾಳಿ ಮಾಡಿದ್ದಾರೆ. ಆಗ ಮಧ್ಯಪ್ರವೇಶಿಸಿರುವ ಪೊಲೀಸರು, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.ಶಾಸಕನ ಮೇಲೆ ಹಲ್ಲೆ ನಡೆಸಿದ ವಕೀಲನನ್ನು ಸ್ಥಳೀಯ ಬಾ‌ರ್ ಅಸೋಸಿಯೇಷನ್ ಅಧ್ಯಕ್ಷ ಅವಧೇಶ್ ಸಿಂಗ್ ಎಂದು ಗುರುತಿಸಲಾಗಿದೆ. ಈ ಘಟನೆಯು ನಗರ ಸಹಕಾರ ಬ್ಯಾಂಕ್ ಆಡಳಿತ ಸಮಿತಿಯ ಚುನಾವಣೆ ನಡೆಯುವ ವೇಳೆ ನಡೆದಿದ್ದು,

ಪೊಲೀಸರ ಎದುರೇ ಶಾಸಕನ ಕಪಾಳಕ್ಕೆ ಬಾರಿಸಿದ ವಕೀಲ Read More »

ಚಾರ್ಮಾಡಿ ಘಾಟ್ ನಲ್ಲಿ ಭಾರಿ ಮಳೆ ಹಿನ್ನೆಲೆ ಗುಡ್ಡ ಕುಸಿತ

ಸಮಗ್ರ ನ್ಯೂಸ್:ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು, ಇದರ ಪರಿಣಾಮ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್‌ನಲ್ಲಿ ಗುಡ್ಡ ಕುಸಿತವಾಗಿದೆ. ಮತ್ತೊಂದೆಡೆ ಮಳೆ ನೀರು ರಸ್ತೆಯ ಮೇಲೆ ನದಿಯಂತೆ ಹರಿಯುತ್ತಿದೆ. ಆಗಾಗ ಸುರಿಯುತ್ತಿರುವ ಮಳೆಯ ಮಧ್ಯೆ ಎರಡು ಜೆಸಿಬಿ ಇಂದ ಮಣ್ಣಿನ ತೆರವಿಕೆ ಮಾಡಲಾಗಿದೆ.ರಸ್ತೆ ಬದಿ ಗುಂಡಿಗಳ ನಿರ್ಮಾಣ ತಾತ್ಕಾಲಿಕವಾಗಿ ಮಣ್ಣಿನಿಂದ ಮುಚ್ಚಲ್ಪಟ್ಟಿತ್ತು. ಅಧಿಕಾರಿಗಳು ಪ್ರಯಾಣಿಕರು ಎಚ್ಚರಿಕೆಯಿಂದ ವಾಹನ ಚಲಾಯಿಸುವಂತೆ ಮನವಿ ನೀಡಿದ್ದಾರೆ.

ಚಾರ್ಮಾಡಿ ಘಾಟ್ ನಲ್ಲಿ ಭಾರಿ ಮಳೆ ಹಿನ್ನೆಲೆ ಗುಡ್ಡ ಕುಸಿತ Read More »