Editor

ಪೇಸ್ ಬುಕ್ ನಲ್ಲಿ ಪ್ರವಾದಿ ನಿಂದನಾತ್ಮಕ ಕಮೆಂಟ್| ಆರೋಪಿಯ ಬಂಧನ|

ಸುಳ್ಯ: ಕಳೆದೊಂದು ವಾರದ ಹಿಂದೆ ಪೇಸ್ ಬುಕ್ ನಲ್ಲಿ ಪ್ರವಾದಿ ಮುಹಮ್ಮದ್ (ಸ.ಅ)ರನ್ನು ಆಶ್ಲೀಲ ಪದಗಳಿಂದ‌ ನಿಂದನೆಗೈದ ಆರೋಪದಲ್ಲಿ ತಾಲೂಕಿನ ಐವರ್ನಾಡು ಗ್ರಾಮದ ಜಗದೀಶ್ ಕೈವಲ್ತಡ್ಕ ಎಂಬಾತನನ್ನು ಬೆಳ್ಳಾರೆ ಪೊಲೀಸರು ಬಂಧಿಸಿದ್ದಾರೆ. ಜಗದೀಶ್ ತನ್ನ ಪೇಸ್ ಬುಕ್ ಖಾತೆಯಲ್ಲಿ ಅವಹೇಳನಕಾರಿ ಪದಬಳಕೆ ಮಾಡಿ ಪ್ರವಾದಿಯನ್ನು ನಿಂದಿಸಿ ಕೋಟ್ಯಾಂತರ ಜನರ‌ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಾನೆ, ಈ ಕುರಿತಂತೆ ಪೋಲಿಸರು ಕ್ರಮ ಕೈಗೊಳ್ಳಬೇಕು ಮುಸ್ಲಿಂ ಸಂಘಟನೆಗಳು ದೂರು ನೀಡಿದ್ದವು. ಆದರೆ ದೂರು ನೀಡಿ ವಾರ ಕಳೆದರೂ ಆರೋಪಿಯನ್ನು ಪೊಲೀಸರು

ಪೇಸ್ ಬುಕ್ ನಲ್ಲಿ ಪ್ರವಾದಿ ನಿಂದನಾತ್ಮಕ ಕಮೆಂಟ್| ಆರೋಪಿಯ ಬಂಧನ| Read More »

ಸ್ಪೋಟಗೊಂಡ ಇಲೆಕ್ಟ್ರಿಕ್ ಸ್ಕೂಟರ್| ನೈಜ ಸಂಗತಿ ಏನು?

ಡಿಜಿಟಲ್ ಡೆಸ್ಕ್: ತಮಿಳುನಾಡು ಹಾಗೂ ಪುದುಚೇರಿ ಗಡಿಯಲ್ಲಿ ಇತ್ತೀಚೆಗೆ ಸ್ಕೂಟರ್‌ವೊಂದು ಬೆಂಕಿಗಾಹುತಿಯಾಗಿ, ಅದರಲ್ಲಿದ್ದ ತಂದೆ ಮಗ ಮೃತಪಟ್ಟಿದ್ದರು. ಈ ಅಪಘಾತದ ಸಿಸಿಟಿವಿ ದೃಶ್ಯಾವಳಿ ವೈರಲ್ ಆಗಿದೆ. ರಸ್ತೆಯಲ್ಲಿ ಸಂಚರಿಸುತ್ತಿದ್ದ ಸ್ಕೂಟರ್‌, ಇದ್ದಕ್ಕಿದ್ದಂತೆ ಸ್ಫೋಟಗೊಳ್ಳುವ ದೃಶ್ಯ ಇದರಲ್ಲಿದೆ. ‘ಇಲೆಕ್ಟ್ರಿಕ್ ಸ್ಕೂಟರ್ ಆಗಿರುವ ಕಾರಣ ಸ್ಫೋಟ ನಡೆದಿದೆ’ ಎಂದು ಜಾಲತಾಣಗಳಲ್ಲಿ ಈ ದೃಶ್ಯ ವೈರಲ್ ಆಗಿತ್ತು. ನೈಜ ವರದಿಗಳ ಪ್ರಕಾರ ಬ್ಯಾಟರಿಚಾಲಿತ ಬೈಕ್‌ ಆಗಿದ್ದಕ್ಕೆ ಸ್ಫೋಟ ನಡೆದಿದೆ ಎಂಬುದು ಸುಳ್ಳು. ‘ಸ್ಕೂಟರ್‌ನಲ್ಲಿ ದೀಪಾವಳಿ ಹಬ್ಬಕ್ಕಾಗಿ ಖರೀದಿಸಿದ್ದ ಪಟಾಕಿಯನ್ನು ಸಾಗಿಸಲಾಗುತ್ತಿತ್ತು. ಪಟಾಕಿಯನ್ನು

ಸ್ಪೋಟಗೊಂಡ ಇಲೆಕ್ಟ್ರಿಕ್ ಸ್ಕೂಟರ್| ನೈಜ ಸಂಗತಿ ಏನು? Read More »

ಸುಳ್ಯ| ಐತಿಹಾಸಿಕ ರಸ್ತೆಯಲ್ಲೊಂದು ಅಡ್ವೆಂಚರ್ ಎಕ್ಸ್ಪರಿಮೆಂಟ್| ಪುರಾತನ ಟಾರು ರೋಡಿನಲ್ಲಿ ಸಂಚರಿಸುವ ಮಜಾನೇ ಬೇರೆ..! ಈ ವಿಶೇಷ ರಸ್ತೆ ಇರೋದೆಲ್ಲಿ ಗೊತ್ತೇ..?

ಸುಳ್ಯ: ಈ ರಸ್ತೆಗೆ ಡಾಂಬರು ಹಾಯಿಸಿ ಅದೆಷ್ಟು ದಶಕಗಳು ಕಳೆದಿದೆಯೋ ಗೊತ್ತಿಲ್ಲ. ಅಂದು ಮಾಡಿದ ಡಾಂಬರು ರಸ್ತೆಯ ಕುರುಹುಗಳು ಮಾತ್ರ ಇಲ್ಲಿ ಕಂಡುಬರುತ್ತಿದ್ದು, ಭೌಗೋಳಿಕ ಅಧ್ಯಯನ ಮಾಡುವ ಸಂಶೋಧಕರಿಗೆ, ಐತಿಹಾಸಿಕ ಉತ್ಖನನ ಮಾಡಲು ಈ ರಸ್ತೆ ಹೇಳಿ ಮಾಡಿಸಿದ ಸ್ಥಳ..! ಅಷ್ಟೇ ಅಲ್ಲ, ನೀವೇನಾದ್ರೂ ಹೊಸದಾಗಿ ಅಡ್ವೆಂಚರ್‌ ಮಾಡ್ಬೇಕು ಅಂತ ಮನಸ್ಸು ಮಾಡಿದ್ರೆ ಖಂಡಿತವಾಗಿ ಈ ಸ್ಥಳಕ್ಕೊಮ್ಮೆ ಭೇಟಿ‌ ನೀಡಬಹುದು. ಕೇವಲ ಒಂದೂವರೆ ಕಿ.ಮೀ ರಸ್ತೆಯಲ್ಲಿ ಇಡೀ ವಿಶ್ವ ಪರ್ಯಟನೆ ಮಾಡಿದ ಅನುಭವ ನಿಮ್ಮದಾಗಲಿದೆ. ಇಂತಹ ಒಂದು

ಸುಳ್ಯ| ಐತಿಹಾಸಿಕ ರಸ್ತೆಯಲ್ಲೊಂದು ಅಡ್ವೆಂಚರ್ ಎಕ್ಸ್ಪರಿಮೆಂಟ್| ಪುರಾತನ ಟಾರು ರೋಡಿನಲ್ಲಿ ಸಂಚರಿಸುವ ಮಜಾನೇ ಬೇರೆ..! ಈ ವಿಶೇಷ ರಸ್ತೆ ಇರೋದೆಲ್ಲಿ ಗೊತ್ತೇ..? Read More »

ಕರಾವಳಿಗರೇ ಎಚ್ಚರ..! ಇಂದು ಭಾರೀ ಮಳೆ ಸಾಧ್ಯತೆ

ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ಕರ್ನಾಟಕದ ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಇಂದು ಮಳೆ ಹೆಚ್ಚಾಗಲಿದೆ.ಭಾರತೀಯ ಹವಾಮಾನ ಇಲಾಖೆ (IMD) ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಮತ್ತು ಕರಾವಳಿ ಕರ್ನಾಟಕ ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚನೆಯನ್ನು ನೀಡಿದೆ. ಕಳೆದ ವಾರದಿಂದ ರಾಜ್ಯದ 14ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ, ರಾಜ್ಯದಲ್ಲಿ ಇಲ್ಲಿಯವರೆಗೆ 4 ಜನರು ಸಾವನ್ನಪ್ಪಿದ್ದಾರೆ ಮತ್ತು 15ಕ್ಕೂ ಹೆಚ್ಚು ಮನೆಗಳು ಕುಸಿದಿವೆ. ಮಂಡ್ಯ, ಮೈಸೂರು, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಚಿತ್ರದುರ್ಗ, ಶಿವಮೊಗ್ಗ, ದಾವಣಗೆರೆ, ದಕ್ಷಿಣ

ಕರಾವಳಿಗರೇ ಎಚ್ಚರ..! ಇಂದು ಭಾರೀ ಮಳೆ ಸಾಧ್ಯತೆ Read More »

ಸುಳ್ಯ: ಹಿಂದೂ ಎಂದು ನಂಬಿಸಿ ಅನುಚಿತ ವರ್ತನೆಗೈದ ಮುಸ್ಲಿಂ ಯುವಕ| ಠಾಣೆ ಮೆಟ್ಟಿಲೇರಿದ ಯುವತಿ

ಸುಳ್ಯ: ಅನ್ಯಕೋಮಿನ ಯುವಕನೋರ್ವ ಸಾಮಾಜಿಕ ಜಾಲತಾಣ ದಲ್ಲಿ ಪರಿಚಯವಾದ ಯುವತಿಯೋರ್ವಳನ್ನು ನಾನು ಹಿಂದೂ ಯುವಕನೆಂದು ಸುಳ್ಳು ಹೆಸರು ಹೇಳಿ ನಂಬಿಸಿ ಆಕೆಯನ್ನು ಬಲವಂತವಾಗಿ ಸುತ್ತಾಡಿಸಿ ಅನುಚಿತವಾಗಿ ವರ್ತಿಸಿರುವ ಬಗ್ಗೆ ವಂಚನೆಗೆ ಒಳಗಾದ ಯುವತಿ ಸುಳ್ಯ ಪೋಲಿಸ್ ಮೆಟ್ಟಿಲೇರಿ ದೂರು ನೀಡಿದ್ದಾಳೆ. ಮಡಿಕೇರಿ ಮೂಲದ ಯುವಕನೋರ್ವ ಕಳೆದ 2 ತಿಂಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿದ್ದು ತನ್ನ ಹೆಸರನ್ನು ಕೌಶಲ್ ‌ಎಂದು ಪರಿಚಯಿಸಿಕೊಂಡಿದ್ದನು ಎನ್ನಲಾಗಿದೆ. ನ.೧೧ ರಂದು ಆತ ಯುವತಿಯನ್ನು ಸುಳ್ಯಕ್ಕೆ ಬರುವಂತೆ ಒತ್ತಾಯ ಮಾಡಿದ್ದು, ಹಿಂದೂ ಯುವಕನೆಂದು

ಸುಳ್ಯ: ಹಿಂದೂ ಎಂದು ನಂಬಿಸಿ ಅನುಚಿತ ವರ್ತನೆಗೈದ ಮುಸ್ಲಿಂ ಯುವಕ| ಠಾಣೆ ಮೆಟ್ಟಿಲೇರಿದ ಯುವತಿ Read More »

ಗೋವುಗಳಿಗೂ ಅಂಬ್ಯುಲೆನ್ಸ್ ಸೇವೆ| ದೇಶದಲ್ಲೇ ಮೊದಲ ಬಾರಿಗೆ ಉ.ಪ್ರದೇಶ ಸರ್ಕಾರದ ಹೊಸ ಹೆಜ್ಜೆ|

ಲಕ್ನೋ : ದೇಶದಲ್ಲಿಯೇ ಮೊದಲ ಬಾರಿಗೆ ಉತ್ತರ ಪ್ರದೇಶದಲ್ಲಿ ಹಸುಗಳಿಗೆ ಅಂಬುಲೆನ್ಸ್ ಸೇವೆ ಒದಗಿಸುವ ಯೋಜನೆಗೆ ಚಾಲನೆ ನೀಡಲಾಗುತ್ತಿದೆ. ರಾಜ್ಯದ ಪಶುಸಂಗೋಪನೆ, ಮೀನುಗಾರಿಕೆ, ಡೈರಿ ಅಭಿವೃದ್ಧಿ ಸಚಿವ ಲಕ್ಷ್ಮಿ ನಾರಾಯಣ್ ಚೌಧರಿ ಈ ಯೋಜನೆ ಕುರಿತಾಗಿ ಮಾತನಾಡಿದ್ದಾರೆ. ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಹಸುಗಳಿಗೆ ತ್ವರಿತವಾಗಿ ಚಿಕಿತ್ಸೆ ಲಭ್ಯವಾಗುವಂತೆ ಮಾಡಲು ರಾಜ್ಯ ಸರ್ಕಾರ ಅಂಬುಲೆನ್ಸ್ ಸೇವೆ ಜಾರಿಗೆ ತರುತ್ತಿದೆ ಎಂದು ಹೇಳಿದ್ದಾರೆ. ಪ್ರಾರಂಭಿಕ ಹಂತದಲ್ಲಿ ಈ ಯೋಜನೆಯಡಿ 515 ಅಂಬುಲೆನ್ಸ್ ಕಾರ್ಯನಿರ್ವಹಣೆ ಮಾಡಲಿದ್ದು, ದೇಶದಲ್ಲಿಯೇ ಮೊದಲ ಬಾರಿಗೆ

ಗೋವುಗಳಿಗೂ ಅಂಬ್ಯುಲೆನ್ಸ್ ಸೇವೆ| ದೇಶದಲ್ಲೇ ಮೊದಲ ಬಾರಿಗೆ ಉ.ಪ್ರದೇಶ ಸರ್ಕಾರದ ಹೊಸ ಹೆಜ್ಜೆ| Read More »

ವಿವಾದಾತ್ಮಕ ಹೇಳಿಕೆ ಪ್ರಕರಣ| ಕ್ಷಮೆಯಾಚಿಸಿದ ನಾದಬ್ರಹ್ಮ ಹಂಸಲೇಖ

ಬೆಂಗಳೂರು: ಖ್ಯಾತ ಸಂಗೀತ ನಿರ್ದೇಶಕ, ಸಿನಿಮಾ ಸಾಹಿತಿ ನಾದ ಬ್ರಹ್ಮ ಹಂಸಲೇಖ ಅವರು ಪೇಜಾವರ ಶ್ರೀಗಳ ಕುರಿತು ಆಡಿದ ಮಾತುಗಳಿಗೆ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಅವರು ಕ್ಷಮೆಯಾಚಿಸಿದ್ದಾರೆ. ನಾನು ಒಬ್ಬ ಸಂಗೀತಗಾರ.ನನಗೆ ಯಾರಿಗೂ ನೋವು ಕೊಡಲು ಇಷ್ಟವಿಲ್ಲ. ನನ್ನ ಸಂಗೀತದಂತೆ ನನ್ನ ಮಾತು, ಬದುಕು ಕೂಡ ಎಲ್ಲರಿಗೂ ಸುಖ ಕೊಡಬೇಕು. ಆದರೆ, ಎಲ್ಲಾ ಅನಿಷ್ಠಗಳನ್ನು ತೊಡೆದು ಹಾಕುವ ದಿಸೆಯಲ್ಲಿ ನನ್ನ ಪಾತ್ರವೂ ಯಾವುದೇ ಮೂಲಕ ಇದ್ದರೆ ಅದನ್ನು ನಾನು ಮಾಡಿಯೇ ಮಾಡುತ್ತೇನೆ ಎಂದು ಹೇಳಿದ್ದಾರೆ.

ವಿವಾದಾತ್ಮಕ ಹೇಳಿಕೆ ಪ್ರಕರಣ| ಕ್ಷಮೆಯಾಚಿಸಿದ ನಾದಬ್ರಹ್ಮ ಹಂಸಲೇಖ Read More »

ಮಂಗಳೂರು: ಲೇಡಿಗೋಷನ್ ಆಸ್ಪತ್ರೆಯಲ್ಲಿ ಮಗು ಅದಲು-ಬದಲು ಪ್ರಕರಣ| ಸಂತ್ರಸ್ತ ಮಗು ಡಿಎನ್ಎ ವರದಿ ಬರುವ ಮೊದಲೇ ಸಾವು|

ಮಂಗಳೂರು: ಇಲ್ಲಿನ ಲೇಡಿಗೋಷನ್ ಆಸ್ಪತ್ರೆಯಲ್ಲಿ ನಡೆದಿದೆ ಎನ್ನಲಾದ ಮಗು ಅದಲು-ಬದಲು ಪ್ರಕರಣದಲ್ಲಿನ ಸಂತ್ರಸ್ತ ಮಗು ಸೋಮವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದೆ. ಮೂಲಗಳ ಪ್ರಕಾರ, ಉಸಿರಾಟದ ತೊಂದರೆಯಿಂದ ಮಗು ಮೃತಪಟ್ಟಿದೆ ಎನ್ನಲಾಗಿದೆ. ಅದಲು ಬದಲು ಪ್ರಕರಣದಲ್ಲಿ ಪೋಷಕರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ಬಳಿಕ ಮಗುವಿನ ಡಿ ಎನ್ ಎ ಪರೀಕ್ಷೆಗಾಗಿ ಮಾದರಿಯನ್ನು ಹೈದರಾಬಾದಿಗೆ ಕಳುಹಿಸಿಕೊಡಲಾಗಿತ್ತು. ಪರೀಕ್ಷಾ ವರದಿ ಬರುವುದಕ್ಕಿಂತ ಮೊದಲೇ ಮಗು ಮೃತಪಟ್ಟಿದೆ. ಮಂಗಳೂರಿನ ಲೇಡಿಗೋಶನ್ ಆಸ್ಪತ್ರೆಯಲ್ಲಿ ಅಕ್ಟೋಬರ್ 15ರಂದು, ಕುಂದಾಪುರ ಮೂಲದ ಪೋಷಕರು, ನಮಗೆ ಆಸ್ಪತ್ರೆಯ ಸಿಬ್ಬಂದಿ ಮೊದಲು,

ಮಂಗಳೂರು: ಲೇಡಿಗೋಷನ್ ಆಸ್ಪತ್ರೆಯಲ್ಲಿ ಮಗು ಅದಲು-ಬದಲು ಪ್ರಕರಣ| ಸಂತ್ರಸ್ತ ಮಗು ಡಿಎನ್ಎ ವರದಿ ಬರುವ ಮೊದಲೇ ಸಾವು| Read More »

ಮುಸ್ಲಿಂಮರ ಹಣ‌ ಶರಣ್ ಪಂಪ್ವೆಲ್ ಗೆ ಆಗುತ್ತೆ,! ಮುಸ್ಲಿಂ ಯುವಕರು ಮಾತ್ರ ‌ಬೇಡ ಅಲ್ವೇ?- ಬಿರುವೆರ್ ಕುಡ್ಲ ಕಿಡಿ

ಮಂಗಳೂರು: ಬಜರಂಗ ದಳದ ಮುಖಂಡ ಶರಣ್ ಪಂಪ್‌ವೆಲ್‌ಗೆ ಮುಸ್ಲಿಮರ ಹಣ ಆಗುತ್ತದೆ. ಆದರೆ ಮುಸ್ಲಿಂ ಯುವಕರು ಯಾಕೆ ಆಗುವುದಿಲ್ಲ, ಎಂದು ಬಿರುವೆರ್ ಕುಡ್ಲ ಮಂಗಳೂರು ಪ್ರಶ್ನಿಸಿದೆ. ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿರುವೆರ್ ಕುಡ್ಲದ ಸಂಚಾಲಕ ಲಕ್ಷ್ಮೀಶ್ ಈ ಹಿಂದೆ ನಡೆದ ಸಭೆಯೊಂದರಲ್ಲಿ ಶರಣ್ ಪಂಪ್‌ವೆಲ್ ಬಿರುವೆರ್ ಕುಡ್ಲ ಒಂದು ಜಾತಿಗೆ ಸೀಮಿತವಾಗಿದೆ ಎಂದಿದ್ದರು. ಬಿರುವೆರ್ ಕುಡ್ಲ ಸಮಾಜ ಸೇವೆಗಾಗಿ ಹುಟ್ಟಿಕೊಂಡ ಸಂಸ್ಥೆಯಾಗಿದೆ. ಏಳು ವರ್ಷಗಳಿಂದ ಸಂಸ್ಥೆಯು ಬಡವರಿಗೆ ಜಾತಿ ಭೇದ ನೋಡದೆ ಮೂರೂವರೆ ಕೋಟಿ ರೂ.ಗಳ

ಮುಸ್ಲಿಂಮರ ಹಣ‌ ಶರಣ್ ಪಂಪ್ವೆಲ್ ಗೆ ಆಗುತ್ತೆ,! ಮುಸ್ಲಿಂ ಯುವಕರು ಮಾತ್ರ ‌ಬೇಡ ಅಲ್ವೇ?- ಬಿರುವೆರ್ ಕುಡ್ಲ ಕಿಡಿ Read More »

ಕುಕ್ಕೆ ಸುಬ್ರಹ್ಮಣ್ಯ ದೇವಳದ ಹಿರಿಯ ಹಸು ಕೆಂಪಿ ಇನ್ನಿಲ್ಲ

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಳದಲ್ಲಿ ನಿತ್ಯ ಗೋಪೂಜೆ ಪಡೆಯುತ್ತಿದ್ದ ಹಿರಿಯ ಹಸು ಕೆಂಪಿ ವಯೋಸಹಜತೆಯಿಂದ ರವಿವಾರ ಸಾವನ್ನಪ್ಪಿದೆ. ಹಸು ಸುಮಾರು 20 – 22 ವರ್ಷದಿಂದ ಕ್ಷೇತ್ರದಲ್ಲಿ ನಿತ್ಯ ಗೋಪೂಜೆ ಭಾಗ್ಯವನ್ನು ಪಡೆದಿತ್ತು. ಈ ವರ್ಷವು ದೀಪಾವಳಿಯಂದು ಈ ಹಸುವಿಗೆ ಪೂಜೆ ನೆರವೇರಿಸಲಾಗಿತ್ತು. ಇದೇ ಇದರ ಕೊನೆಯ ದೀಪಾವಳಿಯ ಪೂಜೆ ಆಗಿದೆ ಎಂಬ ಮಾತು ಕೇಳಿಬಂದಿದೆ. ಈ ಹಸು ಸುಮಾರು 13 ಕರುಗಳನ್ನು ಈವರೆಗೆ ಹಾಕಿತ್ತು ಎಂದು ದೇವಳದವರು ಮಾಹಿತಿ ನೀಡಿದ್ದಾರೆ. ಪ್ರೀತಿಯ ಕೆಂಪಿ;ಕೆಂಪಿ ಕಳೆದ 22

ಕುಕ್ಕೆ ಸುಬ್ರಹ್ಮಣ್ಯ ದೇವಳದ ಹಿರಿಯ ಹಸು ಕೆಂಪಿ ಇನ್ನಿಲ್ಲ Read More »