ಬಸ್ಸ್ ನಲ್ಲಿ ಮೇಕೆಮರಿಗೂ ಟಿಕೆಟ್| ಪ್ರಯಾಣದ ವೆಚ್ಚ ಭರಿಸಿದ ಮಾಲಿಕ..!
ಯಾದಗಿರಿ: ಬಸ್ನಲ್ಲಿ ತನ್ನ ಮಾಲೀಕನ ಜೊತೆಗೆ ಪ್ರಯಾಣ ಮಾಡುತ್ತಿದ್ದ ಮೇಕೆ ಮರಿಗಳಿಗೆ ಕೂಡ ಬಸ್ ಕಂಡಕ್ಟರ್ ಫುಲ್ ಟಿಕೆಟ್ ನೀಡಿ ಅಚ್ಚರಿಗೊಳಿಸಿರುವ ಘಟನೆ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನಲ್ಲಿ ನಡೆದಿದೆ. ರೈತರಾಗಿರುವ ಸುನೀಲ್ ಹಾಗೂ ರಾಮಲಿಂಗ ತಮ್ಮ ಮೇಕೆ ಮರಿಗಳನ್ನು ಯಾದಗಿರಿಯಿಂದ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಕೊಡ್ಲಾ ಗ್ರಾಮಕ್ಕೆ ಬಸ್ ನಲ್ಲಿ ಕರೆದುಕೊಂಡು ಹೋಗಲು ಮುಂದಾಗಿದ್ದರು. ಈ ವೇಳೆ ಬಸ್ ಕಂಡಕ್ಟರ್ ಎರಡು ಮೇಕೆ ಮರಿಗಳಿಗೆ ಫುಲ್ ಟಿಕೆಟ್ ನೀಡಿ ಮೇಕೆ ಮಾಲೀಕರಿಗೆ ದಂಗು ಬಡಿಸಿದ್ದಾರೆ.
ಬಸ್ಸ್ ನಲ್ಲಿ ಮೇಕೆಮರಿಗೂ ಟಿಕೆಟ್| ಪ್ರಯಾಣದ ವೆಚ್ಚ ಭರಿಸಿದ ಮಾಲಿಕ..! Read More »










