Editor

ಧರ್ಮಸ್ಥಳ: ಪಾದಯಾತ್ರಿ ನೇತ್ರಾವತಿಯಲ್ಲಿ ಮುಳುಗಿ ಸಾವು

ಸಮಗ್ರ ನ್ಯೂಸ್: ಚಿಕ್ಕಮಗಳೂರಿನಿಂದ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಪಾದಯಾತ್ರೆ ಮೂಲಕ ಬಂದ ವ್ಯಕ್ತಿ ನೀರಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಧರ್ಮಸ್ಥಳದ ನೇತ್ರಾವತಿಯಲ್ಲಿ ನಡೆದಿದೆ. ಚಿಕ್ಕಮಗಳೂರು ಜಿಲ್ಲೆಯ ಗೌದನಹಳ್ಳಿ ನಿವಾಸಿ ಚಂದ್ರಶೇಖರ್(40) ಮೃತ ದುರ್ದೈವಿ. ಚಿಕ್ಕಮಗಳೂರು ಜಿಲ್ಲೆಯಲ್ಲಿ ತರಕಾರಿ ವ್ಯಾಪಾರ ಮಾಡಿಕೊಂಡಿದ್ದ ಚಂದ್ರಶೇಖರ್, ಸ್ನೇಹಿತನಾದ ವೆಂಕಟೇಶ್ ಜೊತೆ ಧರ್ಮಸ್ಥಳಕ್ಕೆ ಚಾರ್ಮಾಡಿ ಘಾಟ್ ಮೂಲಕ ಪಾದಯಾತ್ರೆ ಮಾಡಿಕೊಂಡು ಇಂದು ಧರ್ಮಸ್ಥಳ ನೇತ್ರಾವತಿಗೆ ಬಂದಿದ್ದಾರೆ.ಈ ವೇಳೆ ಸ್ನಾನ ಮಾಡಲು ನದಿಗೆ ಇಳಿದಿದ್ದು ಈಜಲು ಬಾರದೆ ನೀರಲ್ಲಿ ಮುಳುಗಿ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ. ಧರ್ಮಸ್ಥಳ

ಧರ್ಮಸ್ಥಳ: ಪಾದಯಾತ್ರಿ ನೇತ್ರಾವತಿಯಲ್ಲಿ ಮುಳುಗಿ ಸಾವು Read More »

ಪ್ರೀತಿಯ ಬಲೆಯಲ್ಲಿ ಬಿದ್ದ ಸಂಬಂಧಿಗಳು| ಚಿಕ್ಕಮ್ಮನನ್ನೇ ಮದುವೆಯಾದ ಯುವಕ!!

ಸಮಗ್ರ ಡಿಜಿಟಲ್ ಡೆಸ್ಕ್: ಪ್ರೀತಿಗೆ ಯಾವುದೇ ಕಂಡೀಷನ್ಸ್ ಇಲ್ಲ. ಸುಮ್ಮನೆ ಹಾಗೆಯೇ ಪ್ರೀತಿ ಆಗಿಬಿಡುತ್ತದೆ. ಮತ್ತೆ ಕಾಣಿಸುವ ಸರಿ ತಪ್ಪುಗಳೆಲ್ಲವೂ ನಂತರ ನಗಣ್ಯ. ಇತ್ತೀಚೆಗ ಝಾರ್ಕಂಡ್​ನಲ್ಲಿ ಇಂಥದ್ದೇ ಪ್ರೇಮ ಪ್ರಸಂಗ ನಡೆದಿದೆ. ಇವರ ಪ್ರೇಮವೋ, ಸಂಬಂಧವೋ ಎರಡವೂ ವಿಚಿತ್ರವಾಗಿದೆ. ಅಮ್ಮನ ಸ್ಥಾನದಲ್ಲಿರುವ ಚಿಕ್ಕಮ್ಮನನ್ನೇ ಈತ ಮದುವೆಯಾಗಿದ್ದಾನೆ. ಅದೆಂಥಾ ಪ್ರೀತಿಯೋ ಇವರಿಗೆ ತಮ್ಮ ನಡುವಿನ ಸಂಬಂಧ ಕೂಡಾ ಪ್ರೀತಿಗಿಂತ ದೊಡ್ಡದಲ್ಲ ಎಂದು ಸಾಬೀತು ಮಾಡಿದ್ದಾರೆ ಈ ಜೋಡಿ. ಈ ಯುವಕನಿಗೆ ಅಪ್ಪನೇ ಅಣ್ಣನೂ ಆಗಿಬಿಟ್ಟಿದ್ದಾನೆ. ತಾಯಿಯ ತಂಗಿಯನ್ನು ಈ

ಪ್ರೀತಿಯ ಬಲೆಯಲ್ಲಿ ಬಿದ್ದ ಸಂಬಂಧಿಗಳು| ಚಿಕ್ಕಮ್ಮನನ್ನೇ ಮದುವೆಯಾದ ಯುವಕ!! Read More »

ಅಡುಗೆ ಎಣ್ಣೆಗೂ ಕಾಡಿದ ಯುದ್ಧ ಭೀತಿ| ಸ್ಥಗಿತಗೊಂಡ ಆಮದು; ಏರಿದ ಬೆಲೆ

ಸಮಗ್ರ ನ್ಯೂಸ್: ಉಕ್ರೇನ್‌ನಲ್ಲಿ ರಷ್ಯಾ ದಾಳಿಗೆ ಪ್ರತಿಯಾಗಿ ದಿಂಡುಗಲ್‌ನಲ್ಲಿ ಅಡುಗೆ ಎಣ್ಣೆಯ ಬೆಲೆ ತೀವ್ರವಾಗಿ ಏರಿದೆ. ಹೀಗಾಗಿ ಆಹಾರ ಪದಾರ್ಥಗಳ ಬೆಲೆ ಏರಿಕೆಯಾಗುವ ಅಪಾಯವಿದೆ. ಭಾರತಕ್ಕೆ ಸುಮಾರು 70 ಪ್ರತಿಶತ ಅಡುಗೆ ಸೂರ್ಯಕಾಂತಿ ಎಣ್ಣೆ ಉಕ್ರೇನ್‌ನಿಂದ ಮತ್ತು 20 ಪ್ರತಿಶತ ರಷ್ಯಾದಿಂದ ಆಮದಾಗುತ್ತಿದ್ದು, ಇವು ಈಗ ಸ್ಥಗಿತಗೊಂಡಿವೆ. ಇದರಿಂದ ಅಡುಗೆಗೆ ಬಳಸಬಹುದಾದ ರಿಫೈನ್ಡ್ ಎಣ್ಣೆ, ತಾಳೆ ಎಣ್ಣೆ, ಸೀಮೆಎಣ್ಣೆ ಬೆಲೆ ಗಗನಕ್ಕೇರಿದೆ. 15 ಕೆಜಿ ತೂಕದ ಸೂರ್ಯಕಾಂತಿ ಎಣ್ಣೆಯ ಟಿನ್ ಉಕ್ರೇನ್‌ನಲ್ಲಿ ಯುದ್ಧದ ಮೊದಲು 2,150 ಕ್ಕೆ

ಅಡುಗೆ ಎಣ್ಣೆಗೂ ಕಾಡಿದ ಯುದ್ಧ ಭೀತಿ| ಸ್ಥಗಿತಗೊಂಡ ಆಮದು; ಏರಿದ ಬೆಲೆ Read More »

ಶಿವ ಶಿವ ಎಂದರೆ ಭಯವಿಲ್ಲ| ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ನೇರಪ್ರಸಾರ|

ಸಮಗ್ರ ನ್ಯೂಸ್: ನಾಡಿನೆಲ್ಲೆಡೆ ಮಹಾ ಶಿವರಾತ್ರಿ ‌ವೈಭವ ಮನೆಮಾಡಿದೆ. ಎಲ್ಲೆಲ್ಲೂ ಶಿವ ನಾಮ ಸ್ಮರಣೆ, ಜಾಗರಣೆಗಳು ಆರಂಭವಾಗಿದೆ. ಪ್ರಸಿದ್ಧ ಯಾತ್ರಾಸ್ಥಳ, ಧರ್ಮದ ನೆಲೆವೀಡು ಮಂಜುನಾಥ ಸನ್ನಿಧಿ ಧರ್ಮಸ್ಥಳದಲ್ಲಿ ಶಿವರಾತ್ರಿ ‌ಜಾಗರಣೆ ಹಾಗೂ ಉತ್ಸವಾದಿ ಕಾರ್ಯಕ್ರಮಗಳು ವೈಭವದಿಂದ ನಡೆಯುತ್ತಿವೆ. ಶ್ರೀ ಕ್ಷೇತ್ರದಿಂದ ನೇರಪ್ರಸಾರವನ್ನು ಇಲ್ಲಿ‌ ವೀಕ್ಷಿಸಿ…

ಶಿವ ಶಿವ ಎಂದರೆ ಭಯವಿಲ್ಲ| ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ನೇರಪ್ರಸಾರ| Read More »

ಉಕ್ರೇನ್ ಬಿಕ್ಕಟ್ಟಿನಲ್ಲಿ ಕನ್ನಡಿಗ ವಿದ್ಯಾರ್ಥಿ ಸಾವು| ಕಂಬನಿ ಮಿಡಿದ‌ ಪ್ರಧಾನಿ ಮೋದಿ|

ಸಮಗ್ರ ನ್ಯೂಸ್: ಯೂಕ್ರೇನ್​ನಲ್ಲಿ ನಡೆದ ರಷ್ಯಾದ ಕ್ಷಿಪಣಿ ದಾಳಿಯಲ್ಲಿ ಸಾವಿಗೀಡಾದ ಕರ್ನಾಟಕದ ವಿದ್ಯಾರ್ಥಿ, ಹಾವೇರಿ ಜಿಲ್ಲೆಯ ನವೀನ್ ಗ್ಯಾನಗೌಡರ ಅವರ ಸಾವನ್ನಪ್ಪಿದ್ದು, ವಿದ್ಯಾರ್ಥಿಯ ಪಾರ್ಥಿವ ಶರೀರವನ್ನು ಭಾರತಕ್ಕೆ ಕರೆತರಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಯೂಕ್ರೇನ್​ನಲ್ಲಿ ನಡೆದ ರಷ್ಯಾದ ಕ್ಷಿಪಣಿ ದಾಳಿಯಲ್ಲಿ ಕರ್ನಾಟಕದ ಹಾವೇರಿ ಜಿಲ್ಲೆಯ ಯುವಕ ಬಲಿಯಾದ ಎಂಬುದು ತಿಳಿದು ಬರುತ್ತಿದ್ದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೃತನ ತಂದೆಗೆ ಕರೆ ಮಾಡಿ ಸಾಂತ್ವನ ಹೇಳಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿಯವರ

ಉಕ್ರೇನ್ ಬಿಕ್ಕಟ್ಟಿನಲ್ಲಿ ಕನ್ನಡಿಗ ವಿದ್ಯಾರ್ಥಿ ಸಾವು| ಕಂಬನಿ ಮಿಡಿದ‌ ಪ್ರಧಾನಿ ಮೋದಿ| Read More »

ಮಂಗಳೂರು: ಹಳೆಯಂಗಡಿ ತೋಕೂರು ಪ್ರದೇಶದಲ್ಲಿ ವಾಮಾಚಾರ ಶಂಕೆ|ಮುಖ್ಯರಸ್ತೆಯಲ್ಲೇ ರಾತ್ರಿ ಕೋಳಿ ಬಲಿ, ಲಿಂಬೆಹುಳಿ, ಕುಂಬಳಕಾಯಿ ಪ್ರಯೋಗ|

ಮಂಗಳೂರು: ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಹಳೆಯಂಗಡಿ, ಇಂದಿರಾನಗರ, ತೋಕೂರು ಪ್ರದೇಶದಲ್ಲಿ ಸಂಜೆಯಾದರೆ ಸಾಕು ವಾಮಾಚಾರಿಗಳು ಸಕ್ರಿಯವಾಗುತ್ತಿದ್ದು ಇವರ ಹಾವಳಿಯಿಂದ ಸ್ಥಳೀಯರಲ್ಲಿ ಆತಂಕ ನಿರ್ಮಾಣವಾಗಿದೆ. ಈ ಬಗ್ಗೆ ಪೊಲೀಸರಿಗೆ ಮೌಖಿಕ ದೂರು ನೀಡಲಾಗಿದ್ದು ರಾತ್ರಿ ವೇಳೆ ಗಸ್ತು ಬಿಗಿಗೊಳಿಸುವಂತೆ ಆಗ್ರಹ ವ್ಯಕ್ತವಾಗಿದೆ. ತೋಕೂರು ಬಸ್ ನಿಲ್ದಾಣ ಪರಿಸರ, ಕೆರೆಕಾಡು ಬೆಳ್ಳಾಯರು ಮುಖ್ಯರಸ್ತೆಯಲ್ಲಿ ರಾತ್ರಿ ವೇಳೆ ಕೋಳಿ ಬಲಿ ನೀಡುವುದು, ಲಿಂಬೆಹುಳಿ, ಕುಂಬಳಕಾಯಿ ಕಡಿಯುವುದು ಇತ್ಯಾದಿ ವಾಮಾಚಾರ ಪ್ರಯೋಗ ನಡೆಸುತ್ತಿದ್ದು ಸ್ಥಳೀಯರು ಬೆಳಗ್ಗೆ ನಡೆದಾಡಲು ಭಯಪಡುವ ಸ್ಥಿತಿ ಎದುರಾಗಿದೆ.

ಮಂಗಳೂರು: ಹಳೆಯಂಗಡಿ ತೋಕೂರು ಪ್ರದೇಶದಲ್ಲಿ ವಾಮಾಚಾರ ಶಂಕೆ|ಮುಖ್ಯರಸ್ತೆಯಲ್ಲೇ ರಾತ್ರಿ ಕೋಳಿ ಬಲಿ, ಲಿಂಬೆಹುಳಿ, ಕುಂಬಳಕಾಯಿ ಪ್ರಯೋಗ| Read More »

ಉಪ್ಪಿನಂಗಡಿ: ಕೆಂಪು ಕಲ್ಲಿನ ಅಟ್ಟಿ ಮಗುಚಿಬಿದ್ದು 3 ವರುಷದ ಮಗು ಸಾವು

ಸಮಗ್ರ ನ್ಯೂಸ್: ಮನೆಯಂಗಳದಲ್ಲಿ ಇರಿಸಿದ್ದ ಕೆಂಪು ಕಲ್ಲಿನ ಅಟ್ಟಿ ಮಗುಚಿ ಬಿದ್ದು ಮೂರೂವರೆ ವರ್ಷ ಪ್ರಾಯದ ಗಂಡು ಮಗುವೊಂದು ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ಬೆಳ್ತಂಗಡಿ ತಾಲೂಕು ತಣ್ಣೀರುಪಂತ ಗ್ರಾಮದ ಬಾಯ್ತಾರು ಎಂಬಲ್ಲಿ ಫೆ.28ರಂದು ಸಂಜೆ ನಡೆದಿದೆ. ಅಶ್ರಫ್ ಮತ್ತು ಸಮೀಮಾ ದಂಪತಿಯ ಮಗ ಮೊಹಮ್ಮದ್ ನೌಶೀರ್ ಮೃತ ಮಗು. ಕಟ್ಟಡ ನಿರ್ಮಾಣಕ್ಕೆ೦ದು ಮನೆಯಂಗಳದಲ್ಲಿ ತಂದಿರಿಸಲಾಗಿದ್ದ ಕೆಂಪು ಕಲ್ಲಿನ ಅಟ್ಟಿಯ ಬಳಿ ಮಗು ನೌಶೀರ್ ಆಟವಾಡುತ್ತಿದ್ದ ವೇಳೆ ಕಲ್ಲಿನ ಅಟ್ಟಿಯು ಮಗುಚಿ ಆತನ ಮೇಲೆಯೇ ಬಿದ್ದಿತ್ತು ಎಂದು

ಉಪ್ಪಿನಂಗಡಿ: ಕೆಂಪು ಕಲ್ಲಿನ ಅಟ್ಟಿ ಮಗುಚಿಬಿದ್ದು 3 ವರುಷದ ಮಗು ಸಾವು Read More »

ಮಂಗಳೂರು: ಕ್ರಿಕೆಟ್ ಕಾಮೆಂಟರಿ ನಿರ್ವಹಿಸಿ ಹಿಂದುರಿಗಿದ ಬಾಲಕನ ಶವ ನದಿಯಲ್ಲಿ ಪತ್ತೆ

ಸಮಗ್ರ‌ ನ್ಯೂಸ್: ಭಾನುವಾರದಂದು ನಾಪತ್ತೆಯಾಗಿದ್ದ ಬಾಲಕನ ಶವ ಫೆ.28 ರ ಸೋಮವಾರ ಇಲ್ಲಿನ ಹೊಯಿಗೆ ಬಜಾರ್ ಬಳಿ ನೇತ್ರಾವತಿ ನದಿಯಲ್ಲಿ ಪತ್ತೆಯಾಗಿದೆ. ಖಾಸಗಿ ಪ್ರೌಢಶಾಲೆಯಲ್ಲಿ ಒಂಬತ್ತನೇ ತರಗತಿಯಲ್ಲಿ ಓದುತ್ತಿದ್ದ ಬಾಲಕ ದೃಶ್ಯಾಂತ್ (16) ಮೃತಪಟ್ಟವನು. ಇಲ್ಲಿನ ಮಹಾಕಾಳಿ ಪಡ್ಪು ಮೈದಾನದಲ್ಲಿ ಕ್ರಿಕೆಟ್ ಪಂದ್ಯಾಟಕ್ಕೆ ದೃಶ್ಯಾಂತ್ ಹೋಗಿ ಭಾನುವಾರ ಮಧ್ಯಾಹ್ನ 3.30ರವರೆಗೆ ಕ್ರಿಕೆಟ್ ಪಂದ್ಯಕ್ಕೆ ಕಾಮೆಂಟರಿ ನಿರ್ವಹಿಸುತ್ತಿದ್ದ. ಪಂದ್ಯ ಮುಗಿಯುತ್ತಿದ್ದಂತೆ ಆತನ ಸ್ನೇಹಿತರು ಪಂದ್ಯ ಮುಗಿಸಿ ತೆರಳಿದ್ದರು. ಆದರೆ ದೃಶ್ಯಾಂತ್ ಮಾತ್ರ ಮನೆ ತಲುಪಿಲ್ಲರಲಿಲ್ಲ. ಆತನ ಸ್ನೇಹಿತರು, ಸಂಬಂಧಿಕರು

ಮಂಗಳೂರು: ಕ್ರಿಕೆಟ್ ಕಾಮೆಂಟರಿ ನಿರ್ವಹಿಸಿ ಹಿಂದುರಿಗಿದ ಬಾಲಕನ ಶವ ನದಿಯಲ್ಲಿ ಪತ್ತೆ Read More »

ಅವಳಿ ಮಕ್ಕಳಿಗೆ ಜನ್ಮನೀಡಿದ ನಟಿ‌ ಅಮೂಲ್ಯ

ಸಮಗ್ರ ನ್ಯೂಸ್: ಚಿತ್ತಾರ ಬೆಡಗಿ, ನಟಿ ಅಮೂಲ್ಯ ಇಂದು ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ . ಮಕ್ಕಳು ಹಾಗೂ ತಾಯಿ ಅಮೂಲ್ಯ ಅವರು ಆರೋಗ್ಯವಾಗಿದ್ದಾರೆ ಎಂದು ಅಮೂಲ್ಯ ಅವರ ಪತಿ ಜಗದೀಶ್ ಆರ್ ಚಂದ್ರ ಅಭಿಮಾನಿಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಇನ್​ಸ್ಟಾಗ್ರಾಂನಲ್ಲಿ ಅಮೂಲ್ಯ ಅವರ ಪತಿ ಜಗದೀಶ್ ಆರ್ ಚಂದ್ರ ಈ ಸಂತೋಷದ ಸುದ್ದಿಯ ಬಗ್ಗೆ ಬರೆದುಕೊಂಡಿದ್ದಾರೆ . ದಂಪತಿಗಳ ಈ ಪಯಣದಲ್ಲಿ ಜತೆ ನಿಂತ ಎಲ್ಲರಿಗೆ ತುಂಬು ಹೃದಯದ ಧನ್ಯವಾದಗಳನ್ನು ತಿಳಿಸಿದ್ದಾರೆ .

ಅವಳಿ ಮಕ್ಕಳಿಗೆ ಜನ್ಮನೀಡಿದ ನಟಿ‌ ಅಮೂಲ್ಯ Read More »

ಸುಳ್ಯ: ವಾಕಿಂಗ್ ತೆರಳುತ್ತಿದ್ದಾತನಿಗೆ ವಾಹನ ಢಿಕ್ಕಿ| ಗಂಭೀರ ಗಾಯಗೊಂಡಾತ ಆಸ್ಪತ್ರೆಯಲ್ಲಿ ಸಾವು|

ಸಮಗ್ರ ನ್ಯೂಸ್: ಮುಂಜಾನೆ ವಾಕಿಂಗ್ ಹೋಗುತ್ತಿದ್ದ ಸಂದರ್ಭದಲ್ಲಿ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಗಂಭೀರಗೊಂಡಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ ಘಟನೆ ಸಂಪಾಜೆಯಲ್ಲಿ ನಡೆದಿದೆ.ಮೃತಪಟ್ಟವರನ್ನು ಸರೋಜ್ ಕುಮಾರ್ ಎಂದು ಗುರುತಿಸಲಾಗಿದೆ. ಸಂಪಾಜೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಕಿಂಗ್ ಹೋಗುತ್ತಿದ್ದ ಸರೋಜ್ ಕುಮಾರ್ ಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದರು. ಕಲ್ಲುಗುಂಡಿಯಲ್ಲಿ ಯಕ್ಷಗಾನ ಮುಗಿಸಿ ದಾರಿಯಲ್ಲಿ ಹೋಗುತ್ತಿದ್ದ ಕೆಲವರು ರಕ್ತದ ಮಡವಿನಲ್ಲಿ ಬಿದ್ದ ಸರೋಜ ಕುಮಾರ್ ನೋಡಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ

ಸುಳ್ಯ: ವಾಕಿಂಗ್ ತೆರಳುತ್ತಿದ್ದಾತನಿಗೆ ವಾಹನ ಢಿಕ್ಕಿ| ಗಂಭೀರ ಗಾಯಗೊಂಡಾತ ಆಸ್ಪತ್ರೆಯಲ್ಲಿ ಸಾವು| Read More »