ನಿಮಗೆ ಇದು ಬೇಕಿತ್ತಾ ?! ಸಚಿವ ಜಾರ್ಜ್ ಗೆ ನಿರ್ಮಲಾನಂದ ಶ್ರೀಗಳ ಸಮ್ಮುಖದಲ್ಲಿ ಭಾರಿ ಮುಖಭಂಗ

ಸಮಗ್ರ ನ್ಯೂಸ್:ಒಕ್ಕಲಿಗರ ಸಂಘದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಚಿವ ಕೆ.ಜೆ.ಜಾರ್ಜ್ ಗೆ ತೀವ್ರ ಮುಖಭಂಗ ಎದುರಾಗಿದೆ. ಸಂಘದ ಕಾರ್ಯಕ್ರಮದ ವೇದಿಕೆಯಲ್ಲಿ ಗ್ಯಾರಂಟಿಗಳ ಬಗ್ಗೆ ಭಾಷಣ ಮಾಡಲು ಮುಂದಾದ ಸಚಿವ ಕೆ.ಜೆ.ಜಾರ್ಜ್ ಭಾಷಣವನ್ನು ಸಭಿಕರು ಅರ್ಧಕ್ಕೆ ತಡೆದಿದ್ದಾರೆ.

Ad Widget ... ..

ಚಿಕ್ಕಮಗಳೂರಿನ ಎಐಟಿ ವೃತ್ತದಲ್ಲಿ ಉದ್ಘಾಟನೆಗೊಂಡ ಒಕ್ಕಲಿಗರ ಬೆಳ್ಳಿ ಭವನ ಕಾರ್ಯಕ್ರಮದಲ್ಲಿ ನಿರ್ಮಲಾನಂದ ಶ್ರೀಗಳ ಎದುರು ಸಚಿವ ಜಾರ್ಜ್ ಈ ರೀತಿ ಮುಜುಗರಕ್ಕೀಡಾಗಿದ್ದಾರೆ. ಒಕ್ಕಲಿಗ ಸಮಾಜದ ಯುವಕರು ಭಾಷಣದ ಮಧ್ಯಪ್ರವೇಶಿಸಿ, ಇದು ರಾಜಕೀಯ ವೇದಿಕೆಯಲ್ಲ, ರಾಜಕೀಯ ಮಾತನಾಡೋದಾದ್ರೆ ಕೆಳಗೆ ಇಳಿಯಿರಿ ಎಂದು ಕೂಗಾಡಿದ್ರು.

Ad Widget

ಇದೇ ವೇಳೆ ಈ ವೇದಿಕೆಯಲ್ಲಿ ನೀವು ರಾಜಕೀಯ ಮಾಡಬೇಡಿ, ನನಗೂ ರಾಜಕೀಯ ಬರುತ್ತೆ ಅಂತ ಸಚಿವ ಜಾರ್ಜ್ ಕೂಡ ಸಿಟ್ಟಾಗಿದ್ದು, ಶ್ರೀಗಳು ಮಧ್ಯ ಪ್ರವೇಶದಿಂದ ನಂತರ ಯುವಕರು ಸುಮ್ಮನಾಗಿದ್ದಾರೆ. ಈ ಬೆಳವಣಿಗೆಯ ನಂತರ ಸಚಿವರು ತಮ್ಮ ಮಾತಿಗೆ ಸಭೆಯಲ್ಲೇ ಕ್ಷಮೆಯಾಚಿಸಿದ್ರು.

Leave a Comment

Your email address will not be published. Required fields are marked *