ಕುಕ್ಕೆ ಸುಬ್ರಹ್ಮಣ್ಯ: ಒಂದೇ ದಿನ 2.5 ಸಾವಿರಕ್ಕೂ ಮಿಕ್ಕಿ ಆಶ್ಲೇಷ ಬಲಿ‌ ಸೇವೆ

ಸಮಗ್ರ ನ್ಯೂಸ್: ಆಶ್ಲೇಷ ನಕ್ಷತ್ರದ ಅಂಗವಾಗಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶುಕ್ರವಾರ ರಾಜ್ಯ, ಹೊರರಾಜ್ಯಗಳಿಂದ ಬಂದ ಸಾವಿರಾರು ಭಕ್ತರು ‘ಆಶ್ಲೇಷ ಬಲಿ’ ಸೇವೆ ಸಲ್ಲಿಸಿದರು. ಈ ಬಾರಿ ದಾಖಲೆಯ 2,540ಕ್ಕೂ ಅಧಿಕ ಸೇವೆ ನಡೆದಿವೆ.

. Ad Widget . Ad Widget . Ad Widget .

ಕುಕ್ಕೆ ಸುಬ್ರಹ್ಮಣ್ಯ ದೇವರ ನಕ್ಷತ್ರವು ಆಶ್ಲೇಷ ಆಗಿರುವುದರಿಂದ ತಿಂಗಳಿನಲ್ಲಿ ಬರುವ ಆಶ್ಲೇಷ ನಕ್ಷತ್ರದಂದು ಹೆಚ್ಚಿನ ಭಕ್ತರು ಬಂದು ಸೇವೆ ಸಲ್ಲಿಸುವುದು ವಾಡಿಕೆ. ಆಶ್ಲೇಷ ಬಲಿ ಸೇವೆಯು ಪ್ರತಿದಿನ ಬೆಳಿಗ್ಗೆ 6.30ಕ್ಕೆ ಆರಂಭವಾಗಿ 3 ಬ್ಯಾಚ್ ಹಾಗೂ ಸಂಜೆ 5ಕ್ಕೆ ಒಂದು ಬ್ಯಾಚ್‌ನಲ್ಲಿ ನಡೆಯುತ್ತದೆ.

. Ad Widget . Ad Widget . Ad Widget . Ad Widget . Ad Widget . Ad Widget . . Ad Widget . Ad Widget . Ad Widget . Ad Widget .

ಭಕ್ತರು ಬೆಳಿಗ್ಗೆ ಕುಮಾರಧಾರಾ ನದಿಯಲ್ಲಿ ಸ್ನಾನ ಮಾಡಿ, ದೇವಳದಲ್ಲಿ ಆಶ್ಲೇಷ ಬಲಿ ರಶೀದಿ ನಂತರ ಸಂಕಲ್ಪ ಮಂದಿರದಲ್ಲಿ ಸಂಕಲ್ಪ ಮಾಡಿಸಿ, ಆಶ್ಲೇಷ ಬಲಿ ನಡೆಯುವ ಅಂಗಣಕ್ಕೆ ಸರತಿ ಸಾಲಿನಲ್ಲಿ ತೆರಳಿ ಸೇವೆ ಸಲ್ಲಿಸುತ್ತಾರೆ.

Leave a Comment

Your email address will not be published. Required fields are marked *