ಸರ್ಕಾರ ನಿರ್ಮಾಣಕ್ಕೆ ಮ್ಯಾಜಿಕ್ ನಂಬರ್ ಅಡ್ಡಿ| ವಿಜಯ್ ಗೆ ಬಹುಮತದೊಂದಿಗೆ ಬರಲು ರಾಜ್ಯಪಾಲರ ಸೂಚನೆ

ಸಮಗ್ರ ನ್ಯೂಸ್: ತಮಿಳುನಾಡು ರಾಜಕೀಯದಲ್ಲಿ ನಾಟಕೀಯ ಬೆಳವಣಿಗೆ ನಡೆದಿದೆ. ತಮಿಳಗ ವೆಟ್ರಿ ಕಳಗಂ (TVK) ಅಧ್ಯಕ್ಷ ವಿಜಯ್ ಅವರು ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅವರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದರು. ಆದರೆ, ರಾಜ್ಯಪಾಲರು 118 ಶಾಸಕರ ಬೆಂಬಲ ಪಡೆದು ಮರಳಿ ಬರುವಂತೆ ಸೂಚಿಸಿದ್ದಾರೆ.

Ad Widget ... ..

ಮೂಲಗಳ ಪ್ರಕಾರ, ವಿಜಯ್ ಕೇವಲ 112 ಶಾಸಕರ ಬೆಂಬಲದ ಪತ್ರವನ್ನು ಮಾತ್ರ ಸಲ್ಲಿಸಿದ್ದರು ಎನ್ನಲಾಗಿದ್ದು, ಇದರಿಂದಾಗಿ ತಮಿಳುನಾಡಿನಲ್ಲಿ ಹೊಸ ಸರ್ಕಾರದ ಪ್ರಮಾಣವಚನ ತಡವಾಗಲಿದೆ

Ad Widget

ತಮಿಳುನಾಡಿನಲ್ಲಿ ಸಂಖ್ಯೆಗಳ ಆಟ ಆರಂಭವಾಗಿದ್ದು, ಪರಿಸ್ಥಿತಿ ಈಗಾಗಲೇ ಉದ್ವಿಗ್ನಗೊಂಡಿದೆ. ನಟ-ರಾಜಕಾರಣಿ ವಿಜಯ್ ಅವರು 112 ಶಾಸಕರ ಬೆಂಬಲದೊಂದಿಗೆ ರಾಜಭವನಕ್ಕೆ ಪ್ರವೇಶಿಸಿದರು, ಆದರೆ ಆ ಸಂಖ್ಯೆ ಸಾಕಾಗುವುದಿಲ್ಲ ಎಂಬ ಉತ್ತರ ಲಭಿಸಿದೆ. “118ರ ಸಂಖ್ಯಾಬಲದೊಂದಿಗೆ ಬನ್ನಿ” ಎಂದು ರಾಜ್ಯಪಾಲರು ವಿಜಯ್‌ಗೆ ತಿಳಿಸಿದ್ದು, ಇದು ರಾಜಕೀಯ ಚದುರಂಗದಾಟಕ್ಕೆ ಹೊಸ ವೇಗ ನೀಡಿದೆ. ಕಾಂಗ್ರೆಸ್‌ನ ಐವರು ಶಾಸಕರ ಬೆಂಬಲ ತಮಗೆ ಇದೆ ಎಂದು ವಿಜಯ್ ಮೌಖಿಕವಾಗಿ ಹೇಳಿದ್ದಾರಾದರೂ, ಅದನ್ನು ಅಧಿಕೃತವಾಗಿ ಸಾಬೀತುಪಡಿಸಲು ಕಾಲಾವಕಾಶ ಕೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವಿಜಯ್ ಅವರ ಟಿವಿಕೆ ಪಕ್ಷವು ತನ್ನ ಚೊಚ್ಚಲ ಚುನಾವಣೆಯಲ್ಲಿ 234 ಸ್ಥಾನಗಳ ಪೈಕಿ 108 ಸ್ಥಾನಗಳನ್ನು ಗೆದ್ದು ಅದ್ಭುತ ಪ್ರದರ್ಶನ ನೀಡಿದೆ. ಆದರೆ ಬಹುಮತಕ್ಕೆ 10 ಸ್ಥಾನಗಳ ಕೊರತೆಯಿದೆ. ಮಿತ್ರಪಕ್ಷಗಳು ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಡಿಎಂಕೆ ಮಿತ್ರಪಕ್ಷವಾಗಿರುವ ವಿಡುತಲೈ ಚಿರುತ್ತೈಗಲ್ ಕಚ್ಚಿ (VCK), ಗುರುವಾರ ಬೆಳಗ್ಗೆ 10 ಗಂಟೆಗೆ ಪ್ರಮುಖ ಸಭೆ ನಡೆಸಿ ತನ್ನ ನಿಲುವು ಪ್ರಕಟಿಸಲಿದೆ. ಎಡಪಕ್ಷಗಳು ತಮ್ಮ ನಿರ್ಧಾರವನ್ನು ಮೇ 8ಕ್ಕೆ (ಶುಕ್ರವಾರ) ಮುಂದೂಡಿದ್ದು, ಇನ್ನೂ ಪೂರ್ಣ ಪ್ರಮಾಣದಲ್ಲಿ ವಿಜಯ್ ಪರ ನಿಂತಿಲ್ಲ. ವಿಸಿಕೆ ಮತ್ತು ಎಡಪಕ್ಷಗಳು ಸದ್ಯ ಡಿಎಂಕೆ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟದ ಭಾಗವಾಗಿವೆ. ಸದ್ಯಕ್ಕೆ ಹಕ್ಕು ಮಂಡನೆಯಾಗಿದ್ದರೂ, ಮುಖ್ಯಮಂತ್ರಿ ಗದ್ದುಗೆ ಇನ್ನೂ ವಿಜಯ್ ಅವರಿಂದ ಸ್ವಲ್ಪ ದೂರದಲ್ಲೇ ಉಳಿದಿದೆ.

Leave a Comment

Your email address will not be published. Required fields are marked *