ಹಾಸನಾಂಬೆ ದೇಗುಲದಲ್ಲಿ ಕರೆಂಟ್ ಅವಾಂತರ..!ಕರೆಂಟ್ ಶಾಕ್ ಗೆ ಕುಸಿದು ಬಿದ್ದ ಜನ

ಸಮಗ್ರ ಸಮಾಚಾರ: ಹಾಸನದ ಹಾಸನಾಂಬೆ ದೇವಾಲಯ ಬಳಿ ಕರೆಂಟ್ ಶಾಕ್ ವಿಚಾರವಾಗಿ ಅಲ್ಲೋಲ ಕಲ್ಲೋಲವಾಗಿದೆ. ದಿಢೀರ್ ನೂಕು ನುಗ್ಗಲು ಆರಂಭವಾಗಿದೆ. ಧರ್ಮ‌ ದರ್ಶನ ಸರತಿ ಸಾಲಿನ ಬಳಿ ಮಹಿಳೆಯರು ನರಳಾಡುತ್ತಿದ್ದಾರೆ. ಹಾಸನಾಂಬೆ ದರ್ಶನಕ್ಕೆಂದು ತೆರಳಿದ್ದ ಭಕ್ತರಿಗೆ ಕರೆಂಟ್​ ಶಾಕ್​ ತಗುಲಿದೆ. ಕೆಲವರಿಗೆ ಕರೆಂಟ್ ಶಾಕ್ ಆಗಿ ಕುಸಿದು ಬಿದ್ದು ಅವಾಂತರ ಉಂಟಾಗಿದೆ.

. Ad Widget . Ad Widget

ಒಬ್ಬರ ಮೇಲೆ ಒಬ್ಬರು ಬಿದ್ದು ಓಡಿದ ಮಹಿಳೆಯರಿಂದ ಕಾಲ್ತುಳಿತ ಕೂಡ ಉಂಟಾಗಿದೆ. ಇದರಿಂದಾಗಿ ಹಲವಾರು ಮಹಿಳೆಯರು ನರಳಾಡುವಂತಾಗಿದೆ. ಹಾಸನಾಂಬೆ ದರ್ಶನಕ್ಕೆ ಅಪಾರ ಪ್ರಮಾಣದಲ್ಲಿ ಭಕ್ತರು ಸೇರಿದ್ದರಿಂದ ಈ ರೀತಿ ಆಗಿದೆ. ಕೆಲವರನ್ನು ಹೊರಗೆಳೆದು ಕರೆತಂದ ಸ್ಥಳೀಯರು ಅವರನ್ನು ಸೇವ್​ ಮಾಡಲು ನೋಡಿದ್ದಾರೆ. ಹಾಸನಾಂಬೆ ದರ್ಶನಕ್ಕೆ ಭಾರೀ ಸಂಖ್ಯೆಯಲ್ಲಿ ಜನ ಬಂದು ಅವಾಂತರ ಆಗಿದೆ. ದಿನಗಟ್ಟಲೆ ಕಾದರೂ ಸಿಗದ ಹಾಸನಾಂಬೆ ದರ್ಶನಕ್ಕಾಗಿ ಮಹಿಳೆಯರು ನೂಕು ನುಗ್ಗಲು ಮಾಡಿಕೊಂಡಿದ್ದಾರೆ. ಹಾಸನದ ಸಂತೇಪೇಟೆಯ ಧರ್ಮ ದರ್ಶನ ಸರತಿ ಸಾಲಿನ ಬಳಿ ಈ ಘಟನೆ ನಡೆದಿದೆ.

. Ad Widget . . Ad Widget . Ad Widget

ದೇವಸ್ಥಾನದಲ್ಲಿ ಯಾವುದೇ ರೀತಿಯ ವ್ಯವಸ್ಥೆ ಇಲ್ಲ, ಏನು ಪ್ರಯೋಜನವಿಲ್ಲ, ಸ್ವಯಂಸೇವಕರು ಯಾವುದೇ ರೀತಿಯಲ್ಲಿ ಸಹಾಯ ಮಾಡಿಲ್ಲ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನೂ ಮಳೆಯಿಂದ ಶಾರ್ಟ್ ಸರ್ಕ್ಯೂಟ್ ಸಂಭವಿಸಿದೆ ಎಂದು ತಿಳಿದು ಬಂದಿದೆ. ಆದರೆ ನಿಖರ ಕಾರಣ ತಿಳಿದು ಬಂದಿಲ್ಲ.

Leave a Comment

Your email address will not be published. Required fields are marked *