ಪುತ್ತೂರು: ಕಾಸು ಪಡೆದು ಫ್ರೀ ಟಿಕೆಟ್ ಕೊಟ್ಟ ಕೆಎಸ್ಆರ್ ಟಿಸಿ ನಿರ್ವಾಹಕ!!

ಸಮಗ್ರ ನ್ಯೂಸ್: ಸರ್ಕಾರ ಮಹಿಳೆಯರಿಗೆ ಹೊರಡಿಸಿದ ಫ್ರೀ ಬಸ್ ವ್ಯವಸ್ಥೆಯನ್ನು ಕೆಲವು ಕಂಡಕ್ಟರ್ ಗಳು ಹಣ ಕೊಟ್ಟು ಪ್ರಯಾಣಿಸುವ ಮಹಿಳೆಯರಿಗೆ ಸರ್ಕಾರ ನೀಡಿದ ಶಕ್ತಿ ಯೋಜನೆಯಡಿಯಲ್ಲಿ ಮಹಿಳೆಯರ ಉಚಿತ ಚೀಟಿ ನೀಡುತ್ತಿದ್ದಾರೆ. ಈ ಮೂಲಕ ಸರ್ಕಾರಕ್ಕೆ ಮತ್ತೆ ಹೊರೆ ಹೊರಿಸುತ್ತಿರುವ ಘಟನೆ ನಡೆದಿದೆ.

. Ad Widget . Ad Widget . Ad Widget .

ಮಂಗಳೂರಿನಿಂದ ಪುತ್ತೂರಿಗೆ ಹೋಗುತ್ತಿದ್ದ ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಒಂದರಲ್ಲಿ ವಿವೇಕಾನಂದ ಕಾಲೇಜಿನ ವಿದ್ಯಾರ್ಥಿನಿಯೋರ್ವಳು ನೆಹರೂ ನಗರದಿಂದ ಪುತ್ತೂರಿಗೆ ಆಧಾರ್‌ ತೋರಿಸದೇ ಹಣ ಕೊಟ್ಟು ಟಿಕೆಟ್ ಪಡೆದಿದ್ದಳು. ಆದರೆ ಆಕೆಗೆ ಫ್ರೀ ಟಿಕೆಟ್ ನೀಡಿದ ಕಂಡಕ್ಟರ್ ಹಣವನ್ನು ಕಿಸೆಗೆ ಇಳಿಸಿಕೊಂಡಿದ್ದಾನೆ.

. Ad Widget . Ad Widget . Ad Widget . Ad Widget . Ad Widget . Ad Widget . . Ad Widget . Ad Widget . Ad Widget . Ad Widget .

ಈ ಬಗ್ಗೆ ವಿದ್ಯಾರ್ಥಿನಿ ‘ಸಮಗ್ರ ಸಮಾಚಾರ’ ಕ್ಕೆ ಮಾಹಿತಿ ನೀಡಿದ್ದು, ಕೆಎಸ್ಆರ್ ಟಿ ಸಿ ಅಧಿಕಾರಿಗಳು‌ ಗಮನ ಹರಿಸುವಂತೆ ಮನವಿ ಮಾಡಿದ್ದಾಳೆ.

ಕಂಡಕ್ಟರ್ ಗಳ ಕಿತಾಪತಿಯಿಂದಾಗಿ ನಿಗಮಕ್ಕೆ ಮತ್ತು ಸರ್ಕಾರಕ್ಕೆ ಹೊರೆಯಾಗುತ್ತಿದ್ದು, ಈ ಕುರಿತು ಸಾರಿಗೆ ಅಧಿಕಾರಿಗಳು ಗಮನ ಹರಿಸಬೇಕಿದೆ.

Leave a Comment

Your email address will not be published. Required fields are marked *