ಪುತ್ತೂರು:ರಸ್ತೆ ಬದಿ ಕಸ ಎಸೆದವರಿಗೆ ಶ್ರದ್ಧಾಂಜಲಿ ಅರ್ಪಣೆ!!

ಸಮಗ್ರ ನ್ಯೂಸ್: ರಸ್ತೆ ಬದಿ ಕಸ ಎಸೆದ ಕಿಡಿಗೇಡಿಗಳಿಗೆ ಪರಿಸರವಾಸಿಯಿಂದ ಶ್ರದ್ಧಾಂಜಲಿ ಅರ್ಪಿಸಿದ ಘಟನೆ ಪುತ್ತೂರು ತಾಲೂಕಿನ ಬೆದ್ರಾಲ ಎಂಬಲ್ಲಿ ಕಂಡು ಬಂದಿದೆ.

. Ad Widget . Ad Widget . Ad Widget .

ಬೆದ್ರಾಲ ಹೌಸ್ ರಸ್ತೆಯಲ್ಲಿ ಕಿಡಿಗೇಡಿಗಳು ಬಿಳಿ ಬಣ್ಣದ ಗೋಣಿ ಚೀಲದಲ್ಲಿ ಖಾಲಿ ಬೀಯರ್ ಬಾಟಲಿ ಮತ್ತು ಕಸಗಳನ್ನು ತುಂಬಿಸಿ ಎಸೆದು ಹೋಗಿದ್ದಾರೆ. ಇದನ್ನು ಕಂಡ ಪರಿಸರವಾಸಿಗಳು ಬಿಸಾಕಿ ಹೋಗಿದ್ದ ಕಸದ ಗೋಣಿ ಚೀಲದ ಬಳಿ ಈ ಕೃತ್ಯ ಎಸಗಿದವರಿಗೆ ಶ್ರದ್ದಾಂಜಲಿ ಅರ್ಪಿಸಿ ಅವರಿಗೆ ಸದ್ಗತಿ ಕೋರುವ ಮತ್ತು ಅವರ ಕುಟುಂಬಕ್ಕೆ ಸದ್ಬುದ್ಧಿಯನ್ನು ನೀಡುವಂತೆ ಪರಮಾತ್ಮನಲ್ಲಿ ಕೋರುವ ಬರಹವನ್ನು ಅಳವಡಿಸಿದ್ದಾರೆ. ಇದು ಒಂದೆಡೆ ಹಾಸ್ಯಾಸ್ಪದವಾಗಿ ಕಂಡರೂ ಕೂಡಾ ಮತ್ತೊಂದೆಡೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಹಾಗೂ ಎಚ್ಚರಿಕೆ ಸಂದೇಶವನ್ನು ನೀಡುತ್ತಿದೆ.

. Ad Widget . Ad Widget . Ad Widget . Ad Widget . Ad Widget . Ad Widget . . Ad Widget . Ad Widget . Ad Widget . Ad Widget .

ಈ ಹಿಂದೆ ನಗರಸಭೆಯು ಕಸವನ್ನು ಎಲ್ಲೆಂದರಲ್ಲಿ ಎಸೆಯಬಾರದು, ಎಸೆದವರು ಯಾರೆಂದು ತಿಳಿದರೆ ದಂಡ ವಿಧಿಸುವುದು ಎಂದು ಮುನ್ನೆಚ್ಚರಿಕೆ ನೀಡುತ್ತಿದ್ದರೂ ಸಾರ್ವಜನಿಕರು ರಸ್ತೆ ಬದಿ ಕಸವನ್ನು ಎಸೆದು ಪರಿಸರ ನಾಶ ಮಾಡುತ್ತಿರುವುದು ವಿಪರ್ಯಾಸ.

Leave a Comment

Your email address will not be published. Required fields are marked *