ಸಮಗ್ರ ನ್ಯೂಸ್: ಮೂಡಿಗೆರೆ ತಾಲೂಕಿನ ಮರ್ಕಲ್ ಗ್ರಾಮದ ಅರೆಕೊಡಿಗೆ ಸುಕಲಮಕ್ಕಿ ನರೇಂದ್ರ ಗೌಡ ರವರ ಮನೆಗೆ ರಾತ್ರಿ ಸಮಯದಲ್ಲಿ ಬೃಹತಾಕಾರದ ಮರ ಬಿದ್ದ ಪರಿಣಾಮ ಮನೆ ಸಂಪೂರ್ಣ ನಗುಜ್ಜಾಗಿದೆ ಮನೆಯಲ್ಲಿದ್ದವರು ಅದೃಷ್ಟವಶಾತ್ ಸಾವಿನದವಡೆಯಿಂದ ಪಾರಾಗಿದ ಘಟನೆ ನಡೆದಿದೆ.
ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆಗೆ ಮಲೆನಾಡಿನದ್ಯಂತ ಜನಜೀವನ ಹಸ್ತವ್ಯಸ್ತವಾಗಿದೆ ಕಾಫಿ ಬತ್ತ ಮೊದಲಾದ ಬೆಳೆಗಳು ನೆಲಕೆಚ್ಚಿ ಹೋಗಿದ್ದು ರೈತರು ಕಂಗಾಲಾಗಿ ಹೋಗಿದ್ದಾರೆ. ನಿರಂತರವಾಗಿ ಮಳೆಯಾಗುತ್ತಿದ್ದು ಇಂದು ಸುರಿದ ಮಳೆಗೆ ಮರ ಬಿದ್ದು ಈ ದುರಂತ ಸಂಭವಿಸಿದೆ ಎನ್ನಲಾಗಿದೆ.




























