ಸಮಗ್ರ ನ್ಯೂಸ್: ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಮೇಲುಕೋಟೆ ಹೋಬಳಿಯ ಬಳಘಟ್ಟ ಗ್ರಾಮದ ಗೌತಮ್ ಎಂಬುವವರು ಐದು ವರ್ಷದ ಹಿಂದೆ ಮನೆ ಬಿಟ್ಟು ಹೋಗಿದ್ದು, ಮಗನ ನೆನಪಿನಲ್ಲಿ ತಾಯಿ ಹಾಸಿಗೆ ಹಿಡಿದಿದ್ದಾರೆ.
ಬಳಘಟ್ಟದ ಮೂರ್ತಿ ವನಜ ಅವರ ಮಗ ಮನೆ ಬಿಟ್ಟು ಐದು ವರ್ಷ ಕಳೆದರೂ ಇನ್ನೂ ಸಿಕ್ಕಿಲ್ಲ. ಮಗ ಇಂದು ಬರುತ್ತಾನೆ, ನಾಳೆ ಬರುತ್ತಾನೆ ಎಂದು ಜಾತಕ ಪಕ್ಷಿಯಂತೆ ತಾಯಿ ಕಾಯುತ್ತಿದ್ದಾರೆ.
ಮಗನ ನೆನಪಿನಲ್ಲಿ ಹಾಸಿಗೆ ಹಿಡಿದ ತಾಯಿ ವನಜ ಅನಾರೋಗ್ಯದಿಂದ ಗಂಭೀರ ಸ್ಥಿತಿಯಲ್ಲಿ ಇದ್ದು ಮಾತನಾಡಲು ಆಗದೆ ಮಗ ಗೌತಮ್ ಗಾಗಿ ಕಾಯುತ್ತಿದ್ದಾರೆ




























