ಬೆಳಗಾವಿ: ಡಾಬಾವೊಂದರಲ್ಲಿ ಊಟ ಮುಗಿಸಿಕೊಂಡು ಬೈಕ್ನಲ್ಲಿ ನಗರಕ್ಕೆ ಹಿಂದಿರುಗುತ್ತಿದ್ದ ಇಬ್ಬರು ವಿದ್ಯಾರ್ಥಿಗಳು ರಸ್ತೆಬದಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟ ಘಟನೆ ತಡರಾತ್ರಿ ಸಂಭವಿಸಿದೆ.
ಸದಾಶಿವ ನಗರದ ರಚಿತ್ ಡುಮಾವತ(21) ಮತ್ತು ಚವಾಟಗಲ್ಲಿಯ ಶ್ರೀನಾಥ ಪವಾರ್(21) ಮೃತ ದುರ್ದೈವಿಗಳು.
ಇವರಿಬ್ಬರೂ ಸ್ನೇಹಿತರ ಜತೆ ಊಟಕ್ಕೆಂದು ಡಾಬಾಕ್ಕೆ ತೆರಳಿದ್ದರು. ರಚಿತ್ ಬಿಕಾಂ ಓದುತ್ತಿದ್ದ, ಶ್ರೀನಾಥ ಸಿಎ ಓದುತ್ತಿದ್ದ.
ಊಟ ಮುಗಿಸಿ ಬೈಕ್ನಲ್ಲಿ ಮನೆಗೆ ಹಿಂದಿರುಗುವಾಗ ಪಿಬಿ ರಸ್ತೆಯ ರಾಷ್ಟ್ರೀಯ ಹೆದ್ದಾರಿ ಬಳಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದಾರೆ. ಗಂಭೀರ ಗಾಯಗೊಂಡ ಇವರಿಬ್ಬರೂ ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ. ಉತ್ತರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






