ಮಡಿಕೇರಿ: ಮನೆಗೆ ಸಮೀಪದಲ್ಲಿರುವ ತೋಟದಲ್ಲಿ ಗಾಂಜಾ ಗಿಡ ಬೆಳೆದಿರುವದನ್ನು ಪತ್ತೆ ಹಚ್ಚಿದ ಮಡಿಕೇರಿ ಗ್ರಾಮಾಂತರ ಪೋಲಿಸರು, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮೂರ್ನಾಡು ಸಮೀಪದ ಕಟ್ಟೆಮಾಡು ಗ್ರಾಮದ ಕೊಪ್ಪಂಗೇರಿ ಪೈಸಾರಿ ನಿವಾಸಿ ಎಚ್.ಎಸ್.ಲೋಕೇಶ್ ಅಣ್ಣಯ್ಯ ಬಂಧಿತ ಆರೋಪಿ.
ಲೋಕೇಶ್ ತನ್ನ ಮನೆಯ ಸಮೀಪವಿರುವ ತೋಟದಲ್ಲಿ ಗಾಂಜಾ ಗಿಡ ಬೆಳೆದಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೋಲಿಸರು ದಾಳಿ ಮಾಡಿದ್ದಾರೆ. ಈ ಸಂದರ್ಭ ತೋಟದಲ್ಲಿ ಎರಡು ಬೆಳೆದು ಕಟಾವಿಗೆ ಬಂದಿರುವ ಗಿಡಗಳು ಪತ್ತೆಯಾಗಿವೆ. ಗಿಡಗಳನ್ನು ವಶಪಡಿಸಿಕೊಂಡ ಪೋಲಿಸರು, ಆರೋಪಿ ಲೋಕೇಶ್ನನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಗ್ರಾಮಾಂತರ ವೃತ್ತ ನಿರೀಕ್ಷಕ ರವಿಕಿರಣ್, ಠಾಣಾಧಿಕಾರಿ ಸದಾಶಿವಯ್ಯ, ಸಿಬ್ಬಂದಿಗಳಾದ ಮನೋಜ್ ದಿನೇಶ್, ಸಜನ್, ಕೃಷ್ಣಮೂರ್ತಿ, ರಾಜೇಶ್ ಪಾಲ್ಗೊಂಡಿದ್ದರು.
ಮಡಿಕೇರಿ: ಅಕ್ರಮ ಗಾಂಜಾ ಬೆಳೆ ಪತ್ತೆ, ಆರೋಪಿ ವಶಕ್ಕೆ





