ರಾಜ್ಯ

ಪತಿಯ ಕುಚಿಕು ಜೊತೆ ಹೆಂಡತಿಯ ಕುಚುಕುಚು | ಮನೆ ಕಡೆ ಸ್ವಲ್ಪ ನೋಡಿಕೋ ಎಂದಾತನ ಹೆಂಡತಿಯನ್ನೇ ಲಪಟಾಯಿಸಿದ ಸ್ನೇಹಿತ

ಬೆಂಗಳೂರು: ಹೊರ ಊರಿನಲ್ಲಿ ಕೆಲಸದಲ್ಲಿದ್ದ ಸ್ನೇಹಿತನ ಹೊಸ ಮನೆ ಕೆಲಸ ನೋಡಿಕೊಳ್ಳಲು ಬಂದ ಗೆಳೆಯನೊಂದಿಗೆ ಮನೆ ಮಾಲೀಕನ ಪತ್ನಿಯೇ ಪರಾರಿಯಾದ ಘಟನೆ ನಗರದ ಕೋಣನಕುಂಟೆ ಎಂಬಲ್ಲಿ ನಡೆದಿದೆ. ಸ್ಥಳೀಯ ನಿವಾಸಿ ದೇವರಾಜ್ ಎಂಬವರು ನೂತನ ಮನೆ ನಿರ್ಮಾಣ ಮಾಡುತ್ತಿದ್ದರು. ಜೊತೆಯಲ್ಲಿ ಕೆಲಸಕ್ಕೂ ಹೋಗುತ್ತಿದ್ದರು. ಈ ಸಮಯದಲ್ಲಿ ಊರಿನಲ್ಲೇ ಇದ್ದ ಗೆಳೆಯ ಮಹೇಶನಿಗೆ ಮನೆ ಕೆಲಸದವರನ್ನು ನೋಡಿಕೊಳ್ಳುವ ಉಸ್ತುವಾರಿ ನೀಡಿದ್ದರು. ಮನೆ ನಿರ್ಮಾಣದ ಕೆಲಸದವರನ್ನು ನೋಡಿಕೊಳ್ಳಲು ಬಂದ ಮಹೇಶ, ದೇವರಾಜ್ ರ ಹೆಂಡತಿಯನ್ನೇ ನೋಡಿಕೊಂಡಿದ್ದಾನೆ. ನಿತ್ಯ ಬರುತ್ತಿದ್ದ ದೇವರಾಜ್ […]

ಪತಿಯ ಕುಚಿಕು ಜೊತೆ ಹೆಂಡತಿಯ ಕುಚುಕುಚು | ಮನೆ ಕಡೆ ಸ್ವಲ್ಪ ನೋಡಿಕೋ ಎಂದಾತನ ಹೆಂಡತಿಯನ್ನೇ ಲಪಟಾಯಿಸಿದ ಸ್ನೇಹಿತ Read More »

ನಂದಿಬೆಟ್ಟಕ್ಕೆ ಶನಿವಾರ-ಭಾನುವಾರ ನೋ ಎಂಟ್ರಿ

ಚಿಕ್ಕಬಳ್ಳಾಪುರ: ಶನಿವಾರ ಮತ್ತು ಭಾನುವಾರ ನಂದಿಬೆಟ್ಟವನ್ನು ಸಂಪೂರ್ಣ ಬಂದ್ ಮಾಡಲಾಗುತ್ತಿದ್ದು, ಪ್ರವಾಸಿಗರೇ ನಂದಿಬೆಟ್ಟಕ್ಕೆ ಬರಬೇಡಿ ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್.ಲತಾ ಆದೇಶಿದ್ದಾರೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಲತಾ ಅವರು, ದಿನದಿಂದ ದಿನಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದ್ದು, ಶನಿವಾರ ಹಾಗೂ ಭಾನುವಾರ ಸಾವಿರಾರು ಮಂದಿ ಪ್ರವಾಸಿಗರು ನಂದಿಬೆಟ್ಟಕ್ಕೆ ಆಗಮಿಸಿಸುತ್ತಾರೆ. ಇದರಿಂದ ಕೊರೊನಾ ನಿಯಮಗಳನ್ನು ಉಲ್ಲಂಘನೆ ಅಲ್ಲದೆ ಸಂಪೂರ್ಣ ಟ್ರಾಫಿಕ್ ಜಾಮ್ ಉಂಟಾಗಿ ಪ್ರವಾಸಿಗರು ಪರದಾಡುವಂತಾಗಿದೆ. ಕಳೆದ ಭಾನುವಾರ 12,000 ಮಂದಿ ಪ್ರವಾಸಿಗರು ನಂದಿಬೆಟ್ಟಕ್ಕೆ ಬಂದು ಹೋಗಿದ್ದು, ಪ್ರವಾಸಿಗರ

ನಂದಿಬೆಟ್ಟಕ್ಕೆ ಶನಿವಾರ-ಭಾನುವಾರ ನೋ ಎಂಟ್ರಿ Read More »

ಕಾಸರಗೋಡು: ಬೈಕ್ ಢಿಕ್ಕಿ | ಪಾದಚಾರಿ ಮೃತ್ಯು

ಕಾಸರಗೋಡು: ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಯುವಕನೋರ್ವ ಬೈಕ್ ಢಿಕ್ಕಿ ಹೊಡೆದು ಮೃತಪಟ್ಟ ಘಟನೆ ಇಂದು (ಜು.15 ರಂದು) ನಡೆದಿದೆ. ಮೃತರನ್ನು ತೃಕ್ಕನ್ನಾಡ್ ನಿವಾಸಿ ರತೀಶ್ ( 37) ಎಂದು ಗುರುತಿಸಲಾಗಿದೆ. ಇವರು ಮೀನು ಕಾರ್ಮಿಕರಾಗಿದ್ದು, ರಾತ್ರಿ ಮನೆಗೆ ತೆರಳುತ್ತಿದ್ದಾಗ ಕಾಞ೦ಗಾಡ್ ಕಡೆಗೆ ತೆರಳುತ್ತಿದ್ದ ಬೈಕ್ ಢಿಕ್ಕಿ ಹೊಡೆದಿದೆ. ಪರಿಣಾಮ ಗಂಭೀರ ಗಾಯಗೊಂಡ ರತೀಶ್ ರನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಬೇಕಲ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಾಸರಗೋಡು: ಬೈಕ್ ಢಿಕ್ಕಿ | ಪಾದಚಾರಿ ಮೃತ್ಯು Read More »

ಶೃಂಗೇರಿ ಆಸಿಡ್ ದಾಳಿ ಪ್ರಕರಣ | ಆರೋಪಿಗಳಿಗೆ 20 ಲಕ್ಷ ದಂಡ ಸಹಿತ ಜೀವವಾಧಿ ಶಿಕ್ಷೆ ಪ್ರಕಟ

ಶೃಂಗೇರಿ: ಚಿಕ್ಕಮಗಳೂರು ಜಿಲ್ಲೆ ಶೃಂಗೇರಿಯಲ್ಲಿ ಮಹಿಳೆಯ ಮೇಲೆ ಆಸಿಡ್ ದಾಳಿ ಪ್ರಕರಣದ ತೀರ್ಪು ಇಂದು ಹೊರ ಬಿದ್ದಿದೆ. ನಾಲ್ವರು ಆರೋಪಿಗಳಿಗೆ ತಲಾ 5 ಲಕ್ಷ ರು ದಂಡ ಮತ್ತು ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಬರೋಬ್ಬರಿ ಆರು ವರ್ಷಗಳ ಬಳಿಕ ಪ್ರಕರಣದ ತೀರ್ಪು ಹೊರ ಬಿದ್ದಿದೆ. ಆರೋಪಿಗಳನ್ನು ಸುದೀರ್ಘ ವಿಚಾರಣೆ ಬಳಿಕ ಅಪರಾಧಿಗಳು ಎಂದು ಸಾಬೀತುಪಡಿಸಲಾಗಿದೆ. ಆರೋಪಿಗಳಾದ ಗಣೇಶ್ ಅಲಿಯಾಸ್ ಗಣಿ (36), ಮಹಮ್ಮದ್ ಕಬೀರ್ (31), ವಿನೋದ್ ಕುಮಾರ್(38), ಹಾಗೂ ಅಬ್ದುಲ್ ವಾಜೀದ್(37) ಅವರಿಗೆ ಜೀವಾವಧಿ ಶಿಕ್ಷೆ

ಶೃಂಗೇರಿ ಆಸಿಡ್ ದಾಳಿ ಪ್ರಕರಣ | ಆರೋಪಿಗಳಿಗೆ 20 ಲಕ್ಷ ದಂಡ ಸಹಿತ ಜೀವವಾಧಿ ಶಿಕ್ಷೆ ಪ್ರಕಟ Read More »

ಮಡಿಕೇರಿ: ಮುಂದುವರಿದ ವರುಣನ ಆರ್ಭಟ | ಆಕಾಶವಾಣಿ ಟವರ್ ತಡೆಗೋಡೆ ಕುಸಿತ

ಕೊಡಗು: ಜಿಲ್ಲೆಯಾದ್ಯಂತ ಸುರಿಯುತ್ತಿರುವ ಧಾರಕಾರ ಮಳೆಯಿಂದಾಗಿ ಮಡಿಕೇರಿ ಆಕಾಶವಾಣಿ ಟವರ್ ನ ತಡೆಗೋಡೆ ಕುಸಿದಿದೆ. ಕಳೆದೆರಡು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಭಾರಿ ಮಳೆಗೆ ಕೊಡಗು ತತ್ತರಿಸಿದೆ. ಇಂದು ಆಕಾಶವಾಣಿಯ ಟವರ್ ನ ತಡೆಗೋಡೆ ಕುಸಿದಿದ್ದುಕಳೆದ ವರ್ಷದ ಮಳೆ ಕುಸಿದ ತಡೆಗೊಡೆಯನ್ನು ಮರು ನಿರ್ಮಿಸಲಾಗಿತ್ತು. ಕೊಡಗಿನ ಕಾವೇರಿ ನದಿ ತುಂಬಿ ಹರಿಯಿತ್ತಿದ್ದು ಹಲವೆಡೆಗಳಲ್ಲಿ ಪ್ರವಾಹ ಉಂಟಾಗುವ ಸಾಧ್ಯತೆಗಳು ಕಂಡುಬರುತ್ತಿವೆ. ಕಳೆದೆರಡು ವರ್ಷಗಳಿಂದ ಕೊಡಗಿನಲ್ಲಿ ಭಾರಿ ಮಳೆಗೆ ಗುಡ್ಡ ಕುಸಿತ ಉಂಟಾಗುತ್ತಿದ್ದು ಈ ವರ್ಷವೂ ಗುಡ್ಡ ಕುಸಿಯಲಾರಂಭಿಸಿದೆ.ಇದೀಗ ಕಳೆದ ಎರಡು

ಮಡಿಕೇರಿ: ಮುಂದುವರಿದ ವರುಣನ ಆರ್ಭಟ | ಆಕಾಶವಾಣಿ ಟವರ್ ತಡೆಗೋಡೆ ಕುಸಿತ Read More »

ಮಡಿಕೇರಿ: ಭಾರಿ ಮಳೆ | ತಾಳತ್’ಮನೆಯಲ್ಲಿ ಗುಡ್ಡ ಕುಸಿತ | ಅಪಾಯದಲ್ಲಿ ಮನೆಗಳು | ಜನರ ಸ್ಥಳಾಂತರಕ್ಕೆ ಸೂಚನೆ

ಮಡಿಕೇರಿ: ಕೊಡಗಿನಲ್ಲಿ ಭಾರಿ ಮಳೆ ಸುರಿಯುತ್ತಿದ್ದು ತಾಳತ್ ಮನೆ ಗ್ರಾಮದಲ್ಲಿ ಗುಡ್ಡ ಕುಸಿತ ಉಂಟಾಗಿದೆ. ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಭೇಟಿ ನೀಡಿದ್ದು ಜನರ ಸ್ಥಳಾಂತರಕ್ಕೆ ಸೂಚನೆ ನೀಡಿದ್ದಾರೆ. ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಭಾರಿ ಮಳೆಯಾಗುತ್ತಿದೆ. ಪ್ರತಿವರ್ಷದಂತೆ ಅಪಾಯ ಎದುರಾಗುವ ಭೀತಿ ಜನರನ್ನು ಕಾಡುತ್ತಿದೆ. ಇಂದು ಮಂಗಳೂರು ರಸ್ತೆಯ ತಾಳತ್ ಮನೆ ಎಂಬಲ್ಲಿ ಗುಡ್ಡ ಕುಸಿದಿದ್ದು ಸುಮಾರು ಆರು ಮನೆಯ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿದೆ. ಯಾವುದೇ ಅಪಾಯ ಸಂಭವಿಸಿಲ್ಲ. ಆದರೆ ಮೊನ್ನೆಎಚ್ಚರಿಕೆ ಕ್ರಮವಾಗಿ ಊರಿನ ಜನರನ್ನು ಬೇರೆಡೆಗೆ

ಮಡಿಕೇರಿ: ಭಾರಿ ಮಳೆ | ತಾಳತ್’ಮನೆಯಲ್ಲಿ ಗುಡ್ಡ ಕುಸಿತ | ಅಪಾಯದಲ್ಲಿ ಮನೆಗಳು | ಜನರ ಸ್ಥಳಾಂತರಕ್ಕೆ ಸೂಚನೆ Read More »

KRS ಬಿರುಕು ಬಿಟ್ಟಿದೆ ಎಂದು ನಾನು ಹೇಳೇ ಇಲ್ಲ : ಸಂಸದೆ ಸುಮಕ್ಕ ಯೂಟರ್ನ್

ಮಂಡ್ಯ : ಕೆಆರ್ ಎಸ್ ಜಲಾಶಯದ ಗೋಡೆಗಳು ಬಿರುಕು ಬಿಟ್ಟಿದೆ ಎಂದು ಹೇಳಿದ್ದ ಸಂಸದೆ ಸುಮಲತಾ ತಮ್ಮ ಹೇಳಿಕೆಯಿಂದ ಯೂಟರ್ನ್ ತೆಗೆದುಕೊಂಡಿದ್ದು ನಾನು ಹಾಗೆ ಹೇಳೇ ಇಲ್ಲ ನನ್ನ ಮಾತನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದಿದ್ದಾರೆ. ಕೆಲ ಸಮಯದ ಹಿಂದೆ ಕೆಆರ್ ಎಸ್ ಡ್ಯಾಮ್ ಸುತ್ತಲೂ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯಿಂದ ಬಿರುಕು ಬಿಟ್ಟಿದೆ. ಸೂಕ್ತ ತನಿಖೆ ಕೈಗೊಳ್ಳಬೇಕು. ಆದರೆ ಅದಕ್ಕೆ ಸ್ಥಳೀಯ ರಾಜಕಾರಣ ಅಡ್ಡಿ ಪಡಿಸುತ್ತಿದೆ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಹೇಳಿದ್ದರು. ಇದೀಗ ಅದನ್ನು ತಿರುಚಿ

KRS ಬಿರುಕು ಬಿಟ್ಟಿದೆ ಎಂದು ನಾನು ಹೇಳೇ ಇಲ್ಲ : ಸಂಸದೆ ಸುಮಕ್ಕ ಯೂಟರ್ನ್ Read More »

ಗೋಲಿ ನುಂಗಿ ಒಂದು ವರ್ಷದ ಮಗು ಮೃತ್ಯು

ದಾವಣಗೆರೆ: ಆಟವಾಡುತ್ತಿದ್ದ ವೇಳೆ ಮಗು ಆಕಸ್ಮಿಕವಾಗಿ ಗೋಲಿ ನಂಗಿ ಸಾವನಪ್ಪಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಹರೀಶ್ ಎಂಬುವರ ಪುತ್ರ ಮನವೀರ್ (1) ಮೃತಪಟ್ಟ ದುರ್ದೈವಿ ಮಗು. ಮನವೀರ್ ನಿತ್ಯ ಮನೆಯಂಗಳದಲ್ಲಿ ಗಾಜಿನ ಗೋಲಿಯಿಂದ ಅಕ್ಕ ಪಕ್ಕದ ಮನೆ ಮಕ್ಕಳೊಂದಿಗೆ ಆಟವಾಡುತ್ತಿದ್ದನು. ಇದೇ ವೇಳೆ ಗೋಲಿ ಬಾಯಲ್ಲಿ ಹಾಕಿಕೊಂಡು ಕ್ಷಣದಲ್ಲಿ ನುಂಗಿ ಬಿಟ್ಟಿದ್ದಾನೆ. ಮಗು ಗೋಲಿ ನುಂಗಿದನ್ನ ಗಮನಿಸಿದ ಜೊತೆಗಿದ್ದ ಬಾಲಕ ಪಾಲಕರಿಗೆ ಹೇಳಿದ್ದು, ಪಾಲಕರು ಆಸ್ಪತ್ರೆಗೆ ಹೋಗುವಷ್ಟರಲ್ಲಿ 10 ರಿಂದ 15 ನಿಮಿಷದಲ್ಲಿ ಮಗು ಮನವೀರ್ ಸಾವನ್ನಪ್ಪಿದೆ.

ಗೋಲಿ ನುಂಗಿ ಒಂದು ವರ್ಷದ ಮಗು ಮೃತ್ಯು Read More »

ಯೂಟ್ಯೂಬ್’ನಿಂದ ವಂಚನೆ, ವಿದೇಶಿಗರಿಂದ ರಿಂದ ಬಹುಭಾಷೆ ಕಲಿತ ಖರ್ತನಾಕ್‌ | ಯುವತಿಯರಿಗೆ ವಂಚಿಸುತ್ತಿದ್ದ ನಕಲಿ ರಾಜವಂಶಸ್ಥ ಬಂಧನ

ಬೆಂಗಳೂರು: ಇಂಗ್ಲೀಷ್, ಸ್ಪಾನಿಷ್ ಸೇರಿದಂತೆ ಹಲವು ಭಾಷೆಗಳನ್ನು ಕಲಿತು ಮೈಸೂರು ರಾಜವಂಶಸ್ಥರ ಹೆಸರಿನಲ್ಲಿ ವ್ಯಕ್ತಿಯೋರ್ವ ಹಲವು ಯುವತಿಯರಿಗೆ ವಂಚನೆ ಎಸಗಿದ ಪ್ರಕರಣ ಪಿರಿಯಾಪಟ್ಟಣದಲ್ಲಿ ಬೆಳಕಿಗೆ ಬಂದಿದೆ. ಆರೋಪಿಯನ್ನು ಮುತ್ತು ಎಂದು ಗುರುತಿಸಲಾಗಿದೆ. ಅದರೆ ಈತ ವಂಚೆನೆ ಕೃತ್ಯ ಎಸಗಲು ಸಿದ್ದಾರ್ಥ ಎಂದು ಹೆಸರು ಬದಲಾಯಿಸಿಕೊಂಡಿದ್ದ. ಸಿದ್ದಾರ್ಥ ಎಂಬ ಹೆಸರಿನ ಮುತ್ತು ಯುವತಿಯರನ್ನು ಪ್ರೀತಿಯ ಬಲೆಗೆ ತಳ್ಳಿ ಮದುವೆಯಾಗುವುದಾಗಿ ನಂಬಿಸುತ್ತಿದ್ದ ಅಲ್ಲದೆ ಸಮಯ ಕಳೆದಂತೆ ಹಣ ಪಡೆದು ವಂಚನೆ ಎಸಗಿರುವುದಾಗಿ ಈತನ ವಿರುದ್ಧ ವೈಟ್‌ಫೀಲ್ಡ್ ಸಿಇಎನ್ ಠಾಣೆಯಲ್ಲಿ ಯುವತಿಯೋರ್ವಳು

ಯೂಟ್ಯೂಬ್’ನಿಂದ ವಂಚನೆ, ವಿದೇಶಿಗರಿಂದ ರಿಂದ ಬಹುಭಾಷೆ ಕಲಿತ ಖರ್ತನಾಕ್‌ | ಯುವತಿಯರಿಗೆ ವಂಚಿಸುತ್ತಿದ್ದ ನಕಲಿ ರಾಜವಂಶಸ್ಥ ಬಂಧನ Read More »

ವಿಷಯುಕ್ತ ಆಹಾರ ಸೇವಿಸಿ ತಂದೆ, ತಾಯಿ, ಅಜ್ಜಿ ಸಾವು | ಮಕ್ಕಳಿಬ್ಬರು ಗಂಭೀರ

ಚಿತ್ರದುರ್ಗ: ಆಕಸ್ಮಿಕವಾಗಿ ವಿಷಯುಕ್ತ ಆಹಾರ ಸೇವಿಸಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿ, ಇಬ್ಬರು ಆಸ್ಪತ್ರೆಗೆ ದಾಖಲಾದ ಘಟನೆ ತಾಲೂಕಿನ ಇಸಾಮುದ್ರ ಗ್ರಾಮದಲ್ಲಿ ನಡೆದಿದೆ. ಭಾನುವಾರ ರಾತ್ರಿ ಕುಟುಂಸ್ಥರು ಮನೆಯಲ್ಲಿ ರಾಗಿಮುದ್ದೆ ಮತ್ತು ಕಾಳು ಸಾರು ಸೇವಿಸಿದ್ದರು. ಕೆಲ ಸಮಯದ ಬಳಿಕ ಮನೆಯವರಿಗೆಲ್ಲರಿಗೂ ಅನಾರೋಗ್ಯ ಕಾಣಿಸಿಕೊಂಡಿದೆ. ಅಶ್ವಸ್ಥಗೊಂಡವರನ್ನು ನೆರೆಮನೆಯವರು ಆಸ್ಪತ್ರೆಗೆ ದಾಖಸಿದ್ದಾರೆ. ಆದರೆ ಅದಾಗಲೇ ಮನೆ ಯಜಮಾನ ತಿಪ್ಪಾನಾಯ್ಕ್(46), ಪತ್ನಿ ಸುಧಾಬಾಯಿ(43), ವೃದ್ಧೆ ಗುಂಡಿಬಾಯಿ(75) ಮೃತಪಟ್ಟಿದ್ದಾರೆ. ತೀವ್ರ ಅಸ್ವಸ್ಥಗೊಂಡ ಮಕ್ಕಳಾದ ರಾಹುಲ್ (18) ಮತ್ತು ರಮ್ಯ(16) ದಾವಣಗೆರೆ ಜಿಲ್ಲಾಸ್ಪತ್ರೆಗೆ

ವಿಷಯುಕ್ತ ಆಹಾರ ಸೇವಿಸಿ ತಂದೆ, ತಾಯಿ, ಅಜ್ಜಿ ಸಾವು | ಮಕ್ಕಳಿಬ್ಬರು ಗಂಭೀರ Read More »