ರಾಜ್ಯ

ವಾಜಪೇಯಿ ಮಾತುಗಳನ್ನು ನೆನೆದು ಕಣ್ಣೀರಿಟ್ಟ ಸಿಎಂ ಯಡಿಯೂರಪ್ಪ

ಬೆಂಗಳೂರು: ಕೇಂದ್ರ ಸಚಿವರಾಗುವಂತೆ ಅಟಲ್ ಬಿಹಾರಿ ವಾಜಪೇಯಿ ಹೇಳಿದ ಕೆಳವು ಮಾತಗನ್ನು ನೆಪಪಿಸಿಕೊಳ್ಳುತ್ತ ಸಿಎಂ ಬಿ.ಎಸ್.ಯಡಿಯೂರಪ್ಪ ಭಾವುಕರಾಗಿ ಕಣ್ಣೀರು ಹಾಕಿದರು. ವಿಧಾನಸೌಧದಲ್ಲಿ ಆಯೋಜಿಸಲಾಗಿದ್ದ ಸಾಧನ ಸಮಾವೇಶದಲ್ಲಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ ಎಲ್ಲೋ ಮಂಡ್ಯದ ಬೂಕನಕೆರೆಯಲ್ಲಿ ಹುಟ್ಟಿ, ಶಿವಮೊಗ್ಗಕ್ಕೆ ಬಂದು ಶಿಕಾರಿಪುರದಲ್ಲಿ ಜೀವನ ಆರಂಭ ಮಾಡಿದೆ. ಆರ್‌ಎಸ್ ಪ್ರಚಾರಕನಾಗಿ ಕೆಲಸ ಮಾಡಿದ್ದೆ. ಶಿಕಾರಿಪುರ ಪುರಸಭೆ ಚುನಾವಣೆಯಲ್ಲಿ ಗೆದ್ದು ಅಧ್ಯಕ್ಷನಾದೆ. ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ಮಾರಣಾಂತಿಕ ಹಲ್ಲೆಯಾಗಿತ್ತು. ಕಚೇರಿಗೆ ಹೋಗುವ ಸಂದರ್ಭದಲ್ಲಿ ನನ್ನ ಮೇಲೆ ಹಲ್ಲೆ ಮಾಡಿದಾಗ ನನ್ನ ಜೀವನ ಮುಗಿದೇ ಹೋಯಿತು […]

ವಾಜಪೇಯಿ ಮಾತುಗಳನ್ನು ನೆನೆದು ಕಣ್ಣೀರಿಟ್ಟ ಸಿಎಂ ಯಡಿಯೂರಪ್ಪ Read More »

ಹಿರಿಯ ನಟಿ‌ ಜಯಂತಿ ಇನ್ನಿಲ್ಲ

ಕನ್ನಡ ಚಿತ್ರರಂಗದ ಹಿರಿಯ ನಟಿ, ಅಭಿನಯ ಶಾರದೆ ಎಂದೇ ಜನಪ್ರಿಯರಾಗಿದ್ದ ಜಯಂತಿ(76) ಕೊನೆಯುಸಿರೆಳೆದಿದ್ದಾರೆ. ಜಯಂತಿ ಅವರು ಕನ್ನಡ, ತಮಿಳು, ತೆಲುಗು, ಹಿಂದಿ ಮಲಯಾಳಂ ಸೇರಿದಂತೆ ಹಲವು ಭಾಷೆಗಳ ಸಿನಿಮಾಗಳಲ್ಲಿ ನಟಿಸಿದ್ದರು. ಕನ್ನಡದಲ್ಲಿ ಇವರ ಮೊದಲ ಸಿನಿಮಾ ಜೇನು ಗೂಡು. ಎಡಕಲ್ಲು ಗುಡ್ಡದ ಮೇಲೆ ಚಿತ್ರದಲ್ಲಿ ಜಯಂತಿಯವರು ಮೊದಲ ಬಾರಿಗೆ ವಿಶಿಷ್ಟ ಪಾತ್ರವೊಂದರಲ್ಲಿ ಅಭಿನಯಿಸಿದ್ದರು. ಇವರು ಕನ್ನಡ ಚಿತ್ರರಂಗದ ಬೋಲ್ಡ್ ಅಂಡ್ ಬ್ಯೂಟಿಫುಲ್ ನಟಿ ಅಂತಲೂ ಕರೆಯಲ್ಪಡುತ್ತಿದ್ದರು. ಇವರ ಮನೋಜ್ಞ ಅಭಿನಯಕ್ಕೆ ಅಭಿನಯ ಶಾರದೆ ಎಂಬ ಬಿರುದನ್ನ ಕನ್ನಡ

ಹಿರಿಯ ನಟಿ‌ ಜಯಂತಿ ಇನ್ನಿಲ್ಲ Read More »

ಯಡಿಯೂರಪ್ಪ ‌ಚೆನ್ನಾಗೇ ಕೆಲ್ಸ ಮಾಡ್ತಿದಾರೆ – ಅಚ್ಚರಿ ಮೂಡಿಸಿದ ನಡ್ಡಾ‌ ಹೇಳಿಕೆ

ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಹೇಳಿಕೆಯನ್ನು ಅಚ್ಚರಿಯ ಹೇಳಿಕೆ ಎಂದು ವಿಶ್ಲೇಷಿಸಲಾಗುತ್ತಿದೆ. ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಸರ್ಕಾರ ಜನಪರ ಕಾರ್ಯಗಳನ್ನು ಮಾಡುತ್ತಿದೆ. ಎಲ್ಲವನ್ನೂ ನಾವು ಗಮನಿಸುತ್ತಿದ್ದೇವೆ. ನಾಯತ್ವ ಬದಲಾವಣೆ ಕುರಿತು ಯಾವುದೇ ಚರ್ಚೆ ನಡೆಯುತ್ತಿಲ್ಲ ಎಂದು ಹೇಳಿದ್ದಾರೆ.

ಯಡಿಯೂರಪ್ಪ ‌ಚೆನ್ನಾಗೇ ಕೆಲ್ಸ ಮಾಡ್ತಿದಾರೆ – ಅಚ್ಚರಿ ಮೂಡಿಸಿದ ನಡ್ಡಾ‌ ಹೇಳಿಕೆ Read More »

ರಾಜ್ಯ ರಾಜಕೀಯದಲ್ಲಿ ‌ಧರ್ಮಯುದ್ಧ: ಎಲ್ಲ ತೊರೆದವರಿಗೇಕೆ ಈ ಆಸೆ?

ಬೆಂಗಳೂರು: ರಾಜ್ಯ‌ ರಾಜಕಾರಣದಲ್ಲಿ ಕ್ಷಣಕ್ಕೊಂದು ವಿದ್ಯಾಮಾನಗಳು ಘಟಿಸುತ್ತಿದ್ದು, ರಾಜಕಾರಣದ ಅಖಾಡಕ್ಕೆ ಈ ಧರ್ಮಗುರುಗಳ‌ ಎಂಟ್ರಿಯಾಗಿದೆ.‘ವರ್ತಮಾನದ ಸಮಸ್ಯೆಗಳು ಮತ್ತು ಪರಿಹಾರ’ ಎಂಬ ಹೆಸರಿನಲ್ಲಿಬಾಳೆಹೊಸೂರು ದಿಂಗಾಲೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಸಮಾವೇಶವು ಬೆಂಗಳೂರಿನ ಅರಮನೆ ಮೈದಾನದಲ್ಲಿ ಭರ್ಜರಿಯಾಗಿ ನಡೆಯುತ್ತಿದೆ. ಈಗಾಗಲೇ ಸಾವಿರಕ್ಕೂ ಅಧಿಕ ಮಠಾಧೀಶರು ಸಮಾವೇಶಕ್ಕೆ ಆಗಮಿಸಿದ್ದು, ಯಡಿಯೂರಪ್ಪರವರನ್ನು ಹುದ್ದೆಯಿಂದ ‌ಕೆಳಗಿಳಿಸುವುದರ ಕುರಿತು ಚರ್ಚೆ ನಡೆಸಲಾಗುತ್ತಿದೆ ಎನ್ನುವುದು ಕೇಳಿ ಬಂದಿದೆ. ‘ರಾಜಕೀಯ ಬೆಳವಣಿಗೆಗಳನ್ನಾಧರಿಸಿ ನನ್ನ ಪರವಾಗಿ ಹೇಳಿಕೆ, ಪ್ರತಿಭಟನೆಗಳಿಗೆ ಯಾರೂ ಮುಂದಾಗಬಾರದೆಂದು ವಿನಂತಿಸುತ್ತೇನೆ. ಅಭಿಮಾನ ಶಿಸ್ತಿನ ವ್ಯಾಪ್ತಿ ಮೀರಬಾರದು. ಪಕ್ಷ ನನಗೆ

ರಾಜ್ಯ ರಾಜಕೀಯದಲ್ಲಿ ‌ಧರ್ಮಯುದ್ಧ: ಎಲ್ಲ ತೊರೆದವರಿಗೇಕೆ ಈ ಆಸೆ? Read More »

ಅತ್ತೆಯ ಕರಿಮಣಿ ಎಗರಿಸಿದ ಅಳಿಯ, ಖತರ್ನಾಕ್ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

ಮಂಗಳೂರು: ಕಳ್ಳತನ ಪ್ರಕರಣಗಳಲ್ಲಿ ಹೆಚ್ಚಾಗಿ ಹೊರಗಿನ ವ್ಯಕ್ತಿ ಬಂದು ಕೃತ್ಯ ನಡೆಸಿರುವುದನ್ನು ಕೇಳಿರ್ತೆವೆ. ಆದ್ರೆ ಇಲ್ಲೊಬ್ಬ ಅಳಿಯ ತನ್ನ ಅತ್ತೆಯ ಕರಿಮಣಿ ಸರಕ್ಕೆ ಕನ್ನ ಹಾಕೋಕೆ ಹೋಗಿ ಅಂದರ್ ಆಗಿದ್ದಾನೆ. ಈ ಕೃತ್ಯವನ್ನು ಸಂಬಂಧಿಕನೇ ಮಾಡಿದ ಎಂದು ಗೊತ್ತಾಗಿ ಮನೆಯವರು ಶಾಕ್‌ಗೆ ಒಳಗಾಗಿದ್ದಾರೆ. ಮಂಗಳೂರು ಕಮೀಷನರೇಟ್‌ನ ಸುರತ್ಕಲ್ ಠಾಣಾ ವ್ಯಾಪ್ತಿಯ ಹೊಸಬೆಟ್ಟು ಗ್ರಾಮದ ಮಿತ್ತೊಟ್ಟು ಪ್ರದೇಶ ಕಳೆದ ತಿಂಗಳ ಹಿಂದೆ ಒಂದು ಘಟನೆ ನಡೆದಿತ್ತು. ಒಂಟಿ ಮಹಿಳೆಯ ಮನೆಗೆ ಇಬ್ಬರು ಕಳ್ಳರು ನುಗ್ಗಿ ಮಹಿಳೆಗೆ ಹಲ್ಲೆ ನಡೆಸಿ

ಅತ್ತೆಯ ಕರಿಮಣಿ ಎಗರಿಸಿದ ಅಳಿಯ, ಖತರ್ನಾಕ್ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ Read More »

ದೆಹಲಿ ಸಂದೇಶಕ್ಕೆ ಕಾತುರ: ಜಾತಕ ಪಕ್ಷಿಗಳಂತೆ ಕಾದು‌ಕುಳಿತಿರುವ ಸಿಎಂ ಆಕಾಂಕ್ಷಿಗಳು

ಬೆಂಗಳೂರು: ರಾಜ್ಯದಲ್ಲಿ ಸುರಿಯುತ್ತಿರುವ ಭಾರೀ ಮಳೆ, ಪ್ರವಾಹ ಪರಿಸ್ಥಿತಿಯ ನಡುವೆಯೂ, ರಾಜಕೀಯ ಮೇಲಾಟಗಳು‌ ನಡೆಯುತ್ತಿದ್ದು, ಎಲ್ಲರ ಚಿತ್ತ ದೆಹಲಿ ಸಂದೇಶದತ್ತ ನೆಟ್ಟಿದೆ. ಹೈಕಮಾಂಡ್ ಯಡಿಯೂರಪ್ಪರನ್ನು ತೆರಳಲು ಸೂಚಿಸುತ್ತಾ? ಅಥವಾ ಮುಂದುವರೆಸುತ್ತಾ? ಎಂಬ ಪ್ರಶ್ನೆಗಳು ಮೂಡಿದ್ದು, ಸಿಎಂ ಆಕಾಂಕ್ಷಿಗಳೂ ಯಡಿಯೂರಪ್ಪನವರ ಉತ್ತರಾಧಿಕಾರಿಯಾಗಲು ಕಾದು ಕುಳಿತಿದ್ದಾರೆ. ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ನಾಳೆ(ಜು.26)ಗೆ ಎರಡು ವರ್ಷ ಪೂರೈಸಲಿದ್ದು, ಈ ಸಂತೋಷವನ್ನು ಹಂಚಿಕೊಳ್ಳಲು ಸ್ವತಃ ಯಡಿಯೂರಪ್ಪನವರಿಗೇ ಆಸಕ್ತಿ ಇದ್ದಂತಿಲ್ಲ. ಈ ನಡುವೆ ರಾಜ್ಯದ ಉತ್ತರ ಕರ್ನಾಟಕ ,ಮಲೆನಾಡು ಭಾಗಗಳಲ್ಲಿ ಧಾರಾಕಾರ

ದೆಹಲಿ ಸಂದೇಶಕ್ಕೆ ಕಾತುರ: ಜಾತಕ ಪಕ್ಷಿಗಳಂತೆ ಕಾದು‌ಕುಳಿತಿರುವ ಸಿಎಂ ಆಕಾಂಕ್ಷಿಗಳು Read More »

ನಾಳೆ(ಜು.26)ಯಿಂದ ರಾಜ್ಯದಲ್ಲಿ ಕಾಲೇಜುಗಳು ರೀ ಓಪನ್

ಬೆಂಗಳೂರು: ನಾಳೆ(ಜು.26)ರಿಂದ ರಾಜ್ಯಾದ್ಯಂತ ಪದವಿ ಕಾಲೇಜುಗಳು ಆರಂಭವಾಗಲಿದ್ದು, ವಿದ್ಯಾರ್ಥಿಗಳ ಸ್ವಾಗತಕ್ಕೆ ಕಾಲೇಜು ಶಿಕ್ಷಣ ಇಲಾಖೆ ಸಕಲ ತಯಾರಿ ಮಾಡಿಕೊಂಡಿದೆ. ಪದವಿ, ಸ್ನಾತಕೋತ್ತರ ಪದವಿ, ಇಂಜಿನಿಯರಿಂಗ್ ಪದವಿಯ ಭೌತಿಕ ತರಗತಿಗಳು ಸೋಮವಾರದಿಂದ ಆರಂಭವಾಗಲಿದ್ದು, ಉನ್ನತ ಶಿಕ್ಷಣ ಇಲಾಖೆಯಿಂದ ಶೈಕ್ಷಣಿಕ ಮಾರ್ಗಸೂಚಿ ಪ್ರಕಟವಾಗಿದೆ. ಆನ್ಲೈನ್ ಮತ್ತು ಆಫ್ಲೈನ್ ನಲ್ಲಿಯೂ ತರಗತಿಗಳನ್ನು ನಡೆಸಲು ಕ್ರಮ ಕೈಗೊಳ್ಳಲಾಗಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಜೊತೆಗೆ ಪ್ರತಿ ಕೊಠಡಿಗೆ ಕನಿಷ್ಠ 30 ವಿದ್ಯಾರ್ಥಿಗಳು ನಿಗದಿಗೊಳಿಸಲು ವಿವಿಗಳು ಮುಂದಾಗಿದ್ದು, ಕೊರೋನಾ ನಿಯಮಗಳನ್ನು ಪಾಲಿಸುವುದರೊಂದಿಗೆ ಕಾಲೇಜುಗಳನ್ನು ಆರಂಭಿಸಲಾಗುವುದು ಎಂದು

ನಾಳೆ(ಜು.26)ಯಿಂದ ರಾಜ್ಯದಲ್ಲಿ ಕಾಲೇಜುಗಳು ರೀ ಓಪನ್ Read More »

ಶಾಲೆ ಯಾವಾಗ ಓಪನ್ ಮಾಡ್ತೀರಿ? ಇಲ್ಲದಿದ್ದರೆ ನಾವೇ ಶಾಲೆ ಓಪನ್ ಮಾಡ್ಕೋತೀವಿ. ಸರ್ಕಾರಕ್ಕೆ ರುಪ್ಸಾ ಟಕ್ಕರ್! ಆ.2ರಿಂದ ಶಾಲೆ ತೆರೆಯುವ ಎಚ್ಚರಿಕೆ.

ಬೆಂಗಳೂರು: ಕೋವಿಡ್ ಎರಡನೇ ಅಲೆಯ ತೀವ್ರತೆ ಕಡಿಮೆಯಾಗಿದ್ದು, ಲಾಕ್​ಡೌನ್​ ಕೂಡ ಸಡಿಲವಾಗಿದೆ. ಈ ಬಾರಿಯ ಎಸ್​ಎಸ್​ಎಲ್​ಸಿ ಪರೀಕ್ಷೆ ಕೂಡ ಯಶಸ್ವಿಯಾಗಿದ್ದು, ಈಗಿರುವ ಬೇಡಿಕೆ ಶಾಲೆ ಆರಂಭ ಯಾವಾಗ ಎನ್ನೋದು. ಸರ್ಕಾರ ಕೂಡ ಈ ಬಗ್ಗೆ ಗಮನಹರಿಸಿದ್ದು, ಶಾಲೆ ಆರಂಭಿಸುವ ಬಗ್ಗೆ ಯೋಜನೆ ಸಿದ್ಧಪಡಿಸುತ್ತಿದೆ. ಆದರೆ ಈ ವಿಚಾರವಾಗಿ ಖಾಸಗಿ ಶಾಲೆಗಳ ಒಕ್ಕೂಟ ಒಂದು ಹೆಜ್ಜೆ ಮುಂದೆ ಇಟ್ಟಿದ್ದು, ಸರ್ಕಾರ ಶಾಲೆ ಆರಂಭಿಸದೇ ಹೋದರೆ ಅಗಸ್ಟ್ 2 ರಿಂದ ಖಾಸಗಿ ಶಾಲೆ ಆರಂಭಿಸುವುದಾಗಿ ಎಚ್ಚರಿಕೆ ನೀಡಿವೆ. ಶೇ.80 ರಷ್ಟು

ಶಾಲೆ ಯಾವಾಗ ಓಪನ್ ಮಾಡ್ತೀರಿ? ಇಲ್ಲದಿದ್ದರೆ ನಾವೇ ಶಾಲೆ ಓಪನ್ ಮಾಡ್ಕೋತೀವಿ. ಸರ್ಕಾರಕ್ಕೆ ರುಪ್ಸಾ ಟಕ್ಕರ್! ಆ.2ರಿಂದ ಶಾಲೆ ತೆರೆಯುವ ಎಚ್ಚರಿಕೆ. Read More »

ರಾಜ್ಯ‌ ಉಳಿಸ್ಬೇಕಂದ್ರೆ ಕಾಂಗ್ರೆಸ್ ಕಿತ್ತೋಡಿಸ್ಬೇಕು…! ಆವೇಶದಲ್ಲಿ ಎಡವಟ್ಟು ಹೇಳಿಕೆ ಕೊಟ್ಟ ಸಿದ್ದು

ತುಮಕೂರು: ಸುದ್ದಿಗೊಷ್ಠಿ ವೇಳೆ ಎಡವಟ್ಟು ಮಾಡಿಕೊಂಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ರಾಜ್ಯ ಉಳಿಸಲು ಕಾಂಗ್ರೆಸ್ ಪಕ್ಷವನ್ನೇ ತೆಗೆಯಬೇಕು ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ತುಮಕೂರಿನಲ್ಲಿ ಸುದ್ದಿಗೋಷ್ಠಿ ವೇಳೆ ಮಾತನಾಡಿದ ಸಿದ್ದರಾಮಯ್ಯ, ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುವ ಆವೇಶದಲ್ಲಿ ಬಿಜೆಪಿಯನ್ನು ತೆಗೆಯಬೇಕು ಎಂದು ಹೇಳುವ ಬದಲು ಬಾಯಿತಪ್ಪಿನಿಂದ ಕಾಂಗ್ರೆಸ್ ಪಕ್ಷವನ್ನು ರಾಜ್ಯದಿಂದ ತೆಗೆಯಬೇಕು ಎಂದು ಹೇಳಿದ್ದಾರೆ. ಎಸ್.ಆರ್. ಪಾಟೀಲ್ ಹೇಳಿದ ಬಳಿಕ ತಕ್ಷಣ ಸರಿಪಡಿಸಿಕೊಂಡು ಬಿಜೆಪಿಯನ್ನು ರಾಜ್ಯದಿಂದ ತೆಗೆಯಬೇಕು ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಭ್ರಷ್ಟ ಬಿಜೆಪಿ

ರಾಜ್ಯ‌ ಉಳಿಸ್ಬೇಕಂದ್ರೆ ಕಾಂಗ್ರೆಸ್ ಕಿತ್ತೋಡಿಸ್ಬೇಕು…! ಆವೇಶದಲ್ಲಿ ಎಡವಟ್ಟು ಹೇಳಿಕೆ ಕೊಟ್ಟ ಸಿದ್ದು Read More »

ಅಂಗನವಾಡಿಯ ಮೊಟ್ಟೆಗೆ ‘ಜೊಲ್ಲು’ ಸುರಿಸಿದ ಸಚಿವೆ| ರಾಜೀನಾಮೆ ಆಗ್ರಹಿಸಿ‌ ಕಾಂಗ್ರೆಸ್ ಪ್ರತಿಭಟನೆ| ವರದಿ ಕೇಳಿದ ಕೇಂದ್ರ|

ಬೆಂಗಳೂರು : ಅಂಗನವಾಡಿ ಮೂಲಕ ವಿತರಿಸಲಾಗಿರುವ ಮೊಟ್ಟೆ ಪೂರೈಕೆ ಟೆಂಡರ್ ಗಾಗಿ ದೊಡ್ಡ ಸೀಲ್ ನಡೆದಿದ್ದು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಅವರೇ ಈ ಡೀಲ್ ಗೆ ಒಪ್ಪಿಕೊಂಡಿದ್ದಾರೆ ಎಂಬ ಸ್ಪೋಟಕ ಮಾಹಿತಿ ಬಯಲಾಗಿದೆ. ಗರ್ಭಿಣಿಯರಿಗೆ, ಅಪೌಷ್ಟಿಕ ಮಕ್ಕಳಿಗೆ ನೀಡಲಾಗುವ ಮಾತೃಪೂರ್ಣ ಮೊಟ್ಟೆ ಟೆಂಡರ್ ಪ್ರಕ್ರಿಯೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮುಂದಾಗಿತ್ತು. ಆದರೆ ಈ ಟೆಂಡರ್ ನ್ನು ತಮಗೆ ಬೇಕಾದವರಿಗೆ ನೀಡಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ

ಅಂಗನವಾಡಿಯ ಮೊಟ್ಟೆಗೆ ‘ಜೊಲ್ಲು’ ಸುರಿಸಿದ ಸಚಿವೆ| ರಾಜೀನಾಮೆ ಆಗ್ರಹಿಸಿ‌ ಕಾಂಗ್ರೆಸ್ ಪ್ರತಿಭಟನೆ| ವರದಿ ಕೇಳಿದ ಕೇಂದ್ರ| Read More »