ರಾಜ್ಯ

ಗೆಳತಿಯನ್ನು ಆಕೆಯ‌ ಮನೆಯಲ್ಲಿ ಇರಿದು ಕೊಂದು ಆತ್ಮಹತ್ಯೆ ಮಾಡಿಕೊಂಡ ಭಗ್ನಪ್ರೇಮಿ

ಬೆಂಗಳೂರು: 21ರ ಹರೆಯದ ಯುವಕನೊಬ್ಬ ತನ್ನ 19 ವರ್ಷದ ಪ್ರಿಯತಮೆಯನ್ನು ಆಕೆಯ ಮನೆಯಲ್ಲಿ ಚಾಕುವಿನಿಂದ ಇರಿದು ಕೊಂದು ಹಾಕಿದ ಘಟನೆ ಗುರುವಾರ ಸಂಜೆ ಅದೇ ಮನೆಯ ಸೀಲಿಂಗ್‌ಗೆ ನೇಣು ಬಿಗಿದುಕೊಂಡಿದ್ದಾನೆ. ಜಿಗಣಿಯ ನಿಸರ್ಗ ಲೇಔಟ್‌ನ ಸಿಂಚನಾ(19) ಹತ್ಯೆಗೊಳಗಾದ ಯುವತಿ. ಏಕೈಕ ಪುತ್ರಿಯಾಗಿರುವ ಈಕೆಯ ತಂದೆ ಆನೇಕಲ್‌ನ ಹರಪನಹಳ್ಳಿಯಲ್ಲಿ ಹಾರ್ಡ್‌ವೇರ್ ಅಂಗಡಿ ಹೊಂದಿದ್ದಾರೆ. ಆರೋಪಿ ಕಿಶೋರ್ ಕುಮಾರ್, ಆನೇಕಲ್‌ನ ಗೋಡೌನ್ ಚಾಲಕ. ಸಿಂಚನಾ ಬನ್ನೇರುಘಟ್ಟ ರಸ್ತೆಯಲ್ಲಿರುವ ಖಾಸಗಿ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿನಿ ಎಂದು ಮನೆಯವರು ಪೊಲೀಸರಿಗೆ ತಿಳಿಸಿದ್ದಾರೆ. […]

ಗೆಳತಿಯನ್ನು ಆಕೆಯ‌ ಮನೆಯಲ್ಲಿ ಇರಿದು ಕೊಂದು ಆತ್ಮಹತ್ಯೆ ಮಾಡಿಕೊಂಡ ಭಗ್ನಪ್ರೇಮಿ Read More »

ಭಾರೀ ಮಳೆ ಹಿನ್ನಲೆ| ರಾಜಧಾನಿಯಲ್ಲಿ ಶಾಲಾ ಕಾಲೇಜುಗಳಿಗೆ ನಾಳೆ ರಜೆ|

ಬೆಂಗಳೂರು: ಬೆಂಗಳೂರಿನಲ್ಲಿ ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆ ಬೆಂಗಳೂರು ನಗರದಲ್ಲಿ ನಾಳೆ (ನ.19) ರಂದು ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಕೆಲವು ದಿನಗಳಿಂದ ಬೆಂಗಳೂರಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಮುನ್ನೆಚ್ಚರಿಕೆ ಹಿನ್ನೆಲೆ ಬೆಂಗಳೂರು ನಗರ ದ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿಬೆಂಗಳೂರು ನಗರ ಡಿಸಿ ಮಂಜುನಾಥ್ ಆದೇಶ ಹೊರಡಿಸಿದ್ದಾರೆ. ಇನ್ನೂ ಶನಿವಾರ ರಜೆ ನೀಡುವ ಬಗ್ಗೆ ನಾಳೆ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ. ರಾಜ್ಯದ ನಾನಾ ಭಾಗಗಳಲ್ಲಿ ಭಾರಿ ಮಳೆಯಾಗುತ್ತಿದ್ದು ಮುನ್ನೆಚ್ಚರಿಕೆ ಕ್ರಮದ ಹಿನ್ನಲೆ, ಶಾಲೆಗಳಿಗೆ ರಜೆ

ಭಾರೀ ಮಳೆ ಹಿನ್ನಲೆ| ರಾಜಧಾನಿಯಲ್ಲಿ ಶಾಲಾ ಕಾಲೇಜುಗಳಿಗೆ ನಾಳೆ ರಜೆ| Read More »

ವಿಧಾನಸೌಧದಲ್ಲಿ ಸ್ಯಾನಿಟೈಜರ್ ಕುಡಿದು ಆತ್ಮಹತ್ಯೆಗೆ ಯತ್ನ| ನ್ಯಾಯ ಸಿಗದೇ ಮನನೊಂದು ಕೃತ್ಯ|

ಬೆಂಗಳೂರು: ಕೌಟುಂಬಿಕ ಕಲಹಕ್ಕೆ ನ್ಯಾಯ ಸಿಗುತ್ತಿಲ್ಲ ಎಂದು ಬೇಸತ್ತ ವ್ಯಕ್ತಿಯೋರ್ವ ವಿಧಾನಸೌಧದ ಒಳಗೆ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ. ನಂದಕುಮಾರ್ (54) ಆತ್ಮಹತ್ಯೆಗೆ ಯತ್ನಿಸಿರುವ ವ್ಯಕ್ತಿ ಎನ್ನಲಾಗಿದೆ. ಕೂಡಲೇ ಈತನನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ. ನಂದ ಕುಮಾರ್‌ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯ ಸ್ಥಿರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜೆ.ಸಿ.ನಗರ ವ್ಯಾಪ್ತಿಯ ಪ್ಯಾಲೇಸ್‌ ಗುಟ್ಟಹಳ್ಳಿ ನಿವಾಸಿಯಾಗಿರುವ ನಂದಕುಮಾರ್‌ ತಮ್ಮ ಕುಟುಂಬಸ್ಥರ ವಿರುದ್ದ ಜೆಸಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದರೆ ಕುಟುಂಬಸ್ಥರನ್ನು ಬಂಧಿಸಿ ನ್ಯಾಯ ಒದಗಿಸಿಲ್ಲ

ವಿಧಾನಸೌಧದಲ್ಲಿ ಸ್ಯಾನಿಟೈಜರ್ ಕುಡಿದು ಆತ್ಮಹತ್ಯೆಗೆ ಯತ್ನ| ನ್ಯಾಯ ಸಿಗದೇ ಮನನೊಂದು ಕೃತ್ಯ| Read More »

ಕಾಸರಗೋಡು ಜಿಲ್ಲೆಯ ರೇಷನ್ ಕಾರ್ಡ್‍ಗಳಲ್ಲಿ ಕನ್ನಡ ಮುದ್ರಿಸಲು ಒತ್ತಾಯ

ಮಂಗಳೂರು: ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಪಡಿತರ ಕಾರ್ಡ್ ಗಳಲ್ಲಿ ಹೆಸರು ಮತ್ತು ಇತರ ವಿವರಗಳನ್ನು ಕನ್ನಡದಲ್ಲಿ ಮುದ್ರಿಸಬೇಕು ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಡಾ. ಸಿ. ಸೋಮಶೇಖರ್ ಅವರು ಕಾಸರಗೋಡಿನ ಜಿಲ್ಲಾಧಿಕಾರಿ, ಕೇರಳಾದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ , ಆಹಾರ ಸಚಿವರು ಹಾಗೂ ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ. ಕಾಸರಗೋಡು ಜಿಲ್ಲೆಯಲ್ಲಿ ಅಕ್ಷಯ ಯೋಜನೆಯಡಿ ಅಕ್ಷಯ ಕೇಂದ್ರಗಳಲ್ಲಿ ಹೊಸದಾಗಿ ರೇಷನ್ ಕಾರ್ಡ್‍ಗಳನ್ನು ಮುದ್ರಿಸುತ್ತಿದ್ದು, ಈ ರೇಷನ್ ಕಾರ್ಡುಗಳಲ್ಲಿ ಮಲಯಾಳಿ ಭಾಷೆ

ಕಾಸರಗೋಡು ಜಿಲ್ಲೆಯ ರೇಷನ್ ಕಾರ್ಡ್‍ಗಳಲ್ಲಿ ಕನ್ನಡ ಮುದ್ರಿಸಲು ಒತ್ತಾಯ Read More »

ಉರಿಯುತ್ತಿದ್ದ ಮನೆಯಿಂದ ವೃದ್ಧೆಯನ್ನು ಕಾಪಾಡಿದ ‘ಅಪ್ಪು’|

ಬೆಂಗಳೂರು: ನಗರದ ಹೆಬಗೋಡಿಯ ಅಪಾರ್ಟ್ ಮೆಂಟ್ ಒಂದರಲ್ಲಿ ಬೆಂಕಿ ತಗುಲಿದಾಗ ಮನೆಯೊಳಗಿದ್ದ ವೃದ್ಧೆಯನ್ನು ಮನೆಯ ಸಾಕು ನಾಯಿ ಕಾಪಾಡಿದ ಘಟನೆ ನಡೆದಿದೆ. ಸಂಪಿಗೆ ನಗರದಲ್ಲಿರುವ ಅಪಾರ್ಟ್ ಮೆಂಟ್ ಒಂದರಲ್ಲಿ ನಿನ್ನೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿತ್ತು. ಈ ವೇಳೆ ಮನೆಯಲ್ಲಿ ವೃದ್ಧೆ ಮತ್ತು ಸಾಕು ನಾಯಿ ‘ಅಪ್ಪು’ ಮಾತ್ರ ಇದ್ದರು. ಮನೆಗೆ ಬೆಂಕಿ ತಗುಲುತ್ತಿದ್ದಂತೇ ನಾಯಿ ಸೆಕ್ಯುರಿಟಿ ಬಳಿ ಹೋಗಿ ಜೋರಾಗಿ ಬೊಗಳಿ ಆತನ ಗಮನ ಸೆಳೆದಿದೆ. ಬಳಿಕ ಅಪಾರ್ಟ್ ಮಂದಿಯನ್ನೂ ಜೋರಾಗಿ ಬೊಗಳಿ ಎಚ್ಚರಿಸಿದೆ. ಇದರಿಂದಾಗಿ ಎಚ್ಚೆತ್ತುಕೊಂಡ

ಉರಿಯುತ್ತಿದ್ದ ಮನೆಯಿಂದ ವೃದ್ಧೆಯನ್ನು ಕಾಪಾಡಿದ ‘ಅಪ್ಪು’| Read More »

ರಾಜ್ಯದಲ್ಲಿ ಟೊಮೆಟೊ ದುಬಾರಿ| ಗ್ರಾಹಕರಿಗೆ ಶಾಕ್

ಕೋಲಾರ: ರಾಜ್ಯದಲ್ಲಿ ಭಾರಿ ಮಳೆಯಿಂದಾಗಿ ಟೊಮೊಟೊ ಬೆಲೆ ಏರಿಕೆ ಕಂಡಿದೆ. ಮಾರುಕಟ್ಟೆಯಲ್ಲಿ ಕೆಜಿ ಟೊಮೇಟೋ ದರ 70 ರೂ.ಗಿಂತಲೂ ಹೆಚ್ಚಾಗಿದೆ. ಮಳೆಯ ಕಾರಣ ಮಾರುಕಟ್ಟೆಗೆ ಕಡಿಮೆ ಪ್ರಮಾಣದಲ್ಲಿ ಟೊಮೆಟೊ ಬರುತ್ತಿರುವುದರಿಂದ ದರ ಏರಿಕೆಯಾಗಿದೆ. ಜೊತೆಗೆ ಉಳಿದ ತರಕಾರಿ, ಸೊಪ್ಪು ದರ ಕೂಡ ಹೆಚ್ಚಾಗಿದೆ. ಟೊಮೆಟೊ ಗ್ರಾಹಕರ ಜೇಬಿಗೆ ಕತ್ತರಿ ಹಾಕಿದರೆ ರೈತರಿಗೆ ಸಂತಸ ತಂದಿದೆ. 26 -27 ಕೆಜಿಯ ಒಂದು ಬಾಕ್ಸ್ ಗೆ ಕ್ಕೆ 1200 ರಿಂದ 1500 ರೂಪಾಯಿ ವರೆಗೂ ದರ ಇದೆ. ಕಳೆದ ವಾರ

ರಾಜ್ಯದಲ್ಲಿ ಟೊಮೆಟೊ ದುಬಾರಿ| ಗ್ರಾಹಕರಿಗೆ ಶಾಕ್ Read More »

ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷರಾಗಿ ಎನ್.ಕೆ ಶಾಫಿ ಸ ಅದಿ ಆಯ್ಕೆ

ಬೆಂಗಳೂರು, ನ.17: ರಾಜ್ಯ ವಕ್ಫ್ ಬೋರ್ಡ್‍ನ ನೂತನ ಅಧ್ಯಕ್ಷರಾಗಿ ಮೌಲಾನ ಎನ್.ಕೆ.ಎಂ.ಶಾಫಿ ಸಅದಿ ಆಯ್ಕೆಯಾಗಿದ್ದಾರೆ. ಬುಧವಾರ ನಗರದ ಕನ್ನಿಂಗ್ ಹ್ಯಾಂ ರಸ್ತೆಯಲ್ಲಿರುವ ವಕ್ಫ್ ಬೋರ್ಡ್ ಕಚೇರಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಶಾಫಿ ಸಅದಿ ಪರ 6 ಮತ ಹಾಗೂ ಅವರ ಪ್ರತಿಸ್ಪರ್ಧಿ ಆಸಿಫ್ 4 ಮತಗಳನ್ನು ಪಡೆದರು. ವಕ್ಫ್ ಬೋರ್ಡ್ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮೌಲಾನ ಎನ್.ಕೆ.ಎಂ.ಶಾಫಿ ಸಅದಿ, 2011ರಲ್ಲಿ ನಾನು ವಕ್ಫ್ ಬೋರ್ಡ್‍ಗೆ ಸದಸ್ಯನಾಗಿ ಬಂದಿದ್ದೆ. ಅಲ್ಲಿಂದ ಈವರೆಗೆ ಸಮುದಾಯದ ಸಾಕಷ್ಟು

ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷರಾಗಿ ಎನ್.ಕೆ ಶಾಫಿ ಸ ಅದಿ ಆಯ್ಕೆ Read More »

‘ಯಾವ ಪುಟುಗೋಸಿ‌ ಟಿಪ್ಪು ರೀ!?’ | ಇಮ್ರಾನ್ ಗಡಿ‌‌ ವಿರುದ್ದ ಗೋ ಮಧುಸೂದನ್ ಕಿಡಿ|

ಬೆಂಗಳೂರು : ಕಾಂಗ್ರೆಸ್ ಅಲ್ಪ ಸಂಖ್ಯಾತ ರಾಷ್ಟ್ರೀಯ ಅಧ್ಯಕ್ಷ ಇಮ್ರಾನ್ ಗಡಿ ನೀಡಿದ ವಿವಾದಾತ್ಮಕ ಹೇಳಿಕೆ ವಿರುದ್ಧ ಬಿಜೆಪಿ ಮುಖಂಡ ಗೋ ಮಧುಸೂದನ್ ಬುಧವಾರ ಕಿಡಿ ಕಾರಿದ್ದಾರೆ. ಸುದ್ದಿಗಾರೊಂದಿಗೆ ಮಾತನಾಡಿದ ಅವರು, ‘ನೀವು ಟಿಪ್ಪು ವಂಶಸ್ಥರಿರಬಹುದು, ಬಾಬರ್ ವಂಶಸ್ಥರಿರಬಹುದು, ಅಲ್ಲಾವುದ್ದೀನ್ ಖಿಲ್ಜಿ ವಂಶಸ್ಥರಿರಬಹುದು, ದೇಶದ ಮೇಲೆ ದಾಳಿ ಮಾಡಿದ ಯಾವುದೇ ಆಕ್ರಮಣಕಾರರ ವಂಶಸ್ಥರಿರಬಹುದು. ಆಕ್ರಮಣ ಮಾಡಿದವರೆಲ್ಲ ನಾಶವಾಗಿದ್ದಾರೆಯೇ ವಿನಃ ದೇಶ ಸಾವಿರಾರು ವರ್ಷಗಳಿಂದ ಹಾಗೇ ಉಳಿದಿದೆ. ಇದು ದೇವಭೂಮಿ ಭಾರತ, ನೂರಾರು ವರ್ಷ ಗುಲಾಮಗಿರಿ ಅನುಭವಿಸಿದರೂ ಕೂಡ

‘ಯಾವ ಪುಟುಗೋಸಿ‌ ಟಿಪ್ಪು ರೀ!?’ | ಇಮ್ರಾನ್ ಗಡಿ‌‌ ವಿರುದ್ದ ಗೋ ಮಧುಸೂದನ್ ಕಿಡಿ| Read More »

ಬಸ್ಸ್ ನಲ್ಲಿ ಮೇಕೆಮರಿಗೂ ಟಿಕೆಟ್| ಪ್ರಯಾಣದ ವೆಚ್ಚ ಭರಿಸಿದ ಮಾಲಿಕ..!

ಯಾದಗಿರಿ: ಬಸ್‍ನಲ್ಲಿ ತನ್ನ ಮಾಲೀಕನ ಜೊತೆಗೆ ಪ್ರಯಾಣ ಮಾಡುತ್ತಿದ್ದ ಮೇಕೆ ಮರಿಗಳಿಗೆ ಕೂಡ ಬಸ್ ಕಂಡಕ್ಟರ್ ಫುಲ್ ಟಿಕೆಟ್ ನೀಡಿ ಅಚ್ಚರಿಗೊಳಿಸಿರುವ ಘಟನೆ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನಲ್ಲಿ ನಡೆದಿದೆ. ರೈತರಾಗಿರುವ ಸುನೀಲ್ ಹಾಗೂ ರಾಮಲಿಂಗ ತಮ್ಮ ಮೇಕೆ ಮರಿಗಳನ್ನು ಯಾದಗಿರಿಯಿಂದ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಕೊಡ್ಲಾ ಗ್ರಾಮಕ್ಕೆ ಬಸ್ ನಲ್ಲಿ ಕರೆದುಕೊಂಡು ಹೋಗಲು ಮುಂದಾಗಿದ್ದರು. ಈ ವೇಳೆ ಬಸ್ ಕಂಡಕ್ಟರ್ ಎರಡು ಮೇಕೆ ಮರಿಗಳಿಗೆ ಫುಲ್ ಟಿಕೆಟ್ ನೀಡಿ ಮೇಕೆ ಮಾಲೀಕರಿಗೆ ದಂಗು ಬಡಿಸಿದ್ದಾರೆ.

ಬಸ್ಸ್ ನಲ್ಲಿ ಮೇಕೆಮರಿಗೂ ಟಿಕೆಟ್| ಪ್ರಯಾಣದ ವೆಚ್ಚ ಭರಿಸಿದ ಮಾಲಿಕ..! Read More »

ಅಗಲಿದ ಪುನೀತ್ ರಾಜ್‍ಕುಮಾರ್ ಗೆ ಮರಣೋತ್ತರ ‘ಕರ್ನಾಟಕ ರತ್ನ’ ಪ್ರಶಸ್ತಿ- ಸಿಎಂ ಬೊಮ್ಮಾಯಿ

ಬೆಂಗಳೂರು: ಅಕಾಲಿಕವಾಗಿ ವಿಧಿವಶರಾದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಗೆ ರಾಜ್ಯ ಸರ್ಕಾರ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಿದೆ. ಪುನೀತ ನಮನ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಪುನೀತ್ ಗೆ ಮರಣೋತ್ತರ ಕರ್ನಾಟಕ ರತ್ನ ಘೋಷಿಸಿ, ರಾಜಕುಮಾರ್ ರಂತೆ ಪುನೀತ್ ಗೂ ಸ್ಮಾರಕ ನಿರ್ಮಿಸುವುದಾಗಿ ಹೇಳಿದ್ದಾರೆ. ಅರಮನೆ ಮೈದಾನದಲ್ಲಿ ನಡೆದ ಪುನೀತ ನಮನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಕುರಿತು ಘೋಷಿಸಿದರು. ಪುನೀತ್ ಅತ್ಯುತ್ತಮ ಚಾರಿತ್ರ್ಯದ ಕಾರಣ ಇತಿಹಾಸದ ಪುಟಗಳಲ್ಲಿ ಸೇರಿದ್ದಾರೆ. ಅವರಂತೆ

ಅಗಲಿದ ಪುನೀತ್ ರಾಜ್‍ಕುಮಾರ್ ಗೆ ಮರಣೋತ್ತರ ‘ಕರ್ನಾಟಕ ರತ್ನ’ ಪ್ರಶಸ್ತಿ- ಸಿಎಂ ಬೊಮ್ಮಾಯಿ Read More »