ರಾಜ್ಯ

ಕೋವಿಡ್ ಹೊಸ ಅಲೆ ಹೆಚ್ಚಳ| ಮತ್ತೆ ಲಾಕ್ಡೌನ್ ನತ್ತ ಮುಖಮಾಡಿದ ಚೀನಾ|

ಸಮಗ್ರ ನ್ಯೂಸ್: ಕೋವಿಡ್ ನ ಹೊಸ ಅಲೆಯ ಕಾರಣ ಸೋಂಕಿನ ಪ್ರಕರಣಗಳು ತೀವ್ರವಾಗಿ ಏರಿಕೆ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಚೀನಾ ಮತ್ತೆ ಲಾಕ್‌ಡೌನ್ ನತ್ತ ಮುಖಮಾಡಿದೆ. ಚೀನಾದ ಈಶಾನ್ಯದಲ್ಲಿರುವ ಚಾಂಗ್ಚುನ್ ಎಂಬ ನಗರದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗಿರುವ ಕಾರಣ ಅಲ್ಲಿನ ನಿವಾಸಿಗಳಿಗೆ ಮೂರು ಸುತ್ತಿನ ಪರೀಕ್ಷೆಗಳನ್ನು ಕಡ್ಡಾಯಗೊಳಿಸಲಾಗಿದ್ದು, ಅಗತ್ಯವಲ್ಲದ ವಹಿವಾಟುಗಳನ್ನು ತಕ್ಷಣದಿಂದಲೇ ಸ್ಥಗಿತಗೊಳಿಸಲಾಗಿದೆ. ಶುಕ್ರವಾರದಂದು ಒಂದೇ ದಿನದಲ್ಲಿ ಸ್ಥಳೀಯವಾಗಿ 397 ಪ್ರಕರಣಗಳನ್ನು ದಾಖಲಿಸಿದ ಚೀನಾ, ಇವುಗಳಲ್ಲಿ 98 ಪ್ರಕರಣಗಳನ್ನು ಚಾಂಗ್ಚುನ್ ಸುತ್ತಮುತ್ತಲೇ ಕಂಡಿದೆ. ಸೋಂಕಿನ ವಿರುದ್ಧ ಕಠಿಣ ಕ್ರಮ […]

ಕೋವಿಡ್ ಹೊಸ ಅಲೆ ಹೆಚ್ಚಳ| ಮತ್ತೆ ಲಾಕ್ಡೌನ್ ನತ್ತ ಮುಖಮಾಡಿದ ಚೀನಾ| Read More »

ಈ ದೃಶ್ಯ ನೋಡಿದ್ರೆ ಬೈಕ್ ಸೃಷ್ಟಿಕರ್ತ ಆತ್ಮಹತ್ಯೆ ಮಾಡ್ಕೊಳ್ಳೋದು ಗ್ಯಾರಂಟಿ!, ಒಂದೇ ಬೈಕಲ್ಲಿ 9 ಮಂದಿ ಜಾಲಿರೈಡ್

ಸಮಗ್ರ ನ್ಯೂಸ್: ಒಂದು ಬೈಕ್‌ನಲ್ಲಿ ಅಬ್ಬಬ್ಬಾ..ಎಂದರೆ ಮೂವರು ತೆರಳಬಹುದು. ಇಲ್ಲವೇ ನಾಲ್ವರು ತೆರಳಬಹುದು. ಆದರೆ ಇಲ್ಲೊಬ್ಬ ಒಂದೇ ಬೈಕ್‌ನಲ್ಲಿ ಬರೋಬ್ಬರಿ ತಾನೂ ಸೇರಿದಂತೆ ಒಂಬತ್ತು ಜನರನ್ನು ಬೈಕ್‌ನಲ್ಲಿ ತೆರಳಿದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೊಪ್ಪಳದ ಗಿಣಗೇರಾದಿಂದ ಗಂಗಾವತಿಗೆ ದ್ವಿಚಕ್ರ ವಾಹನದಲ್ಲಿ 9 ಜನರು ಪ್ರಯಾಣ ಬೆಳೆಸಿದ್ದು ಕ್ಯಾಮರಾದಲ್ಲಿ ಸೆರೆಯಾಗಿದೆ. ನಾಲ್ವರು ಹಿರಿಯರು, ಐವರು ಸಣ್ಣ ಮಕ್ಕಳು ಈ ಬೈಕಿನಲ್ಲಿ ಕುಳಿತು ಸವಾರಿ ಮಾಡಿದ್ದಾರೆ. ನಿಜಕ್ಕೂ ಈ ಸವಾರಿಯು ಎಲ್ಲರ ಗಮನ ಸೆಳೆದಿದೆ. ದಾರಿಹೋಕರು ಈ

ಈ ದೃಶ್ಯ ನೋಡಿದ್ರೆ ಬೈಕ್ ಸೃಷ್ಟಿಕರ್ತ ಆತ್ಮಹತ್ಯೆ ಮಾಡ್ಕೊಳ್ಳೋದು ಗ್ಯಾರಂಟಿ!, ಒಂದೇ ಬೈಕಲ್ಲಿ 9 ಮಂದಿ ಜಾಲಿರೈಡ್ Read More »

ರಾಜ್ಯವನ್ನೂ ಕಾಂಗ್ರೆಸ್ ಮುಕ್ತ ಮಾಡ್ತೇವೆ – ವಿಪಕ್ಷದ ಕಾಲೆಳೆದ ಬಿ.ಎಸ್ ಯಡಿಯೂರಪ್ಪ

ಸಮಗ್ರ ನ್ಯೂಸ್: ಕಾಂಗ್ರೆಸ್ ಮುಕ್ತ ಎನ್ನುವುದಕ್ಕೆ ಪಂಚರಾಜ್ಯ ಚುನಾವಣೆ ಉದಾಹರಣೆ. ದೇಶದಲ್ಲಷ್ಟೇ ಅಲ್ಲ, ರಾಜ್ಯದಲ್ಲೂ ಕಾಂಗ್ರೆಸ್ ಮುಕ್ತ ಮಾಡುತ್ತೇವೆ. ಮೋದಿ ಜೊತೆ ಜನ ಇದ್ದಾರೆಂಬುದಕ್ಕೆ ಈ ಫಲಿತಾಂಶ ಸಾಕ್ಷಿ’ ಎಂದು ಬಿಎಸ್‌ವೈ ವಿಪಕ್ಷಗಳ ಕಾಲೆಳೆದಿದ್ದಾರೆ. ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ 4 ರಾಜ್ಯಗಳಲ್ಲಿ ಭರ್ಜರಿ ಗೆಲುವು ಸಾಧಿಸಿದೆ. ಬಿಜೆಪಿ ನಾಯಕರು ಖುಷಿಯಲ್ಲಿದ್ದಾರೆ. ವಿಧಾನಸಭೆಯಲ್ಲಿ ಮಾಜಿ ಸಿಎಂಗಳ ಟಾಕ್ ವಾರ್ ಮುಂದುವರೆದಿದೆ. ‘ಪಂಚರಾಜ್ಯ ಚುನಾವಣೆ ಗೆಲುವು ನಮ್ಮ ವಿಶ್ವಾಸ ಹೆಚ್ಚಿಸಿದೆ. ರಾಜ್ಯದಲ್ಲಿ ಸಾಮೂಹಿಕ ನಾಯಕತ್ವದಡಿಯಲ್ಲಿ ರಾಜ್ಯ ಪ್ರವಾಸ ಮಾಡುತ್ತೇವೆ. 135

ರಾಜ್ಯವನ್ನೂ ಕಾಂಗ್ರೆಸ್ ಮುಕ್ತ ಮಾಡ್ತೇವೆ – ವಿಪಕ್ಷದ ಕಾಲೆಳೆದ ಬಿ.ಎಸ್ ಯಡಿಯೂರಪ್ಪ Read More »

ಪಂಚರಾಜ್ಯ ಫಲಿತಾಂಶ ಫೈನಲ್|ಮೂರು ಭದ್ರ ಕೋಟೆಗಳಲ್ಲಿ ಮತ್ತೆ ಕೇಸರಿ | ಪಂಜಾಬ್ ನಲ್ಲಿ ‘ಕೈ’ ತಪ್ಪಿಸಿ ‘ಆಪ್’ ಲಾಂಚ್ ಮಾಡಿದ ಕೇಜ್ರಿ|ಗೋವಾದಲ್ಲಿ ಆತಂತ್ರ | ಕಮಲ ಅರಳಿಸುತ್ತಾರಾ ದೇವೇಂದ್ರ….?

ಸಮಗ್ರ ನ್ಯೂಸ್: ಬಹುನಿರೀಕ್ಷಿತ ಪಂಚರಾಜ್ಯ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟಗೊಂಡಿದ್ದು ಮೂರು ರಾಜ್ಯಗಳಲ್ಲಿ ಮತ್ತೆ ಸಂಪೂರ್ಣ ಬಹುಮತದೊಂದಿಗೆ ಬಿಜೆಪಿ ಅಧಿಕಾರದ ಗದ್ದುಗೆ ಏರಿದೆ. ಇನ್ನುಳಿದಂತೆ ಕಾಂಗ್ರೆಸ್ ಭದ್ರಕೋಟೆ ಪಂಜಾಬಿನಲ್ಲಿ ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಾರ್ಟಿ ಪ್ರಚಂಡ ಗೆಲುವು ಸಾಧಿಸುವ ಮೂಲಕ ದೆಹಲಿಯ ನಂತರ ದೇಶದ ಇನ್ನೊಂದು ರಾಜ್ಯದಲ್ಲಿ ಸರಕಾರ ರಚಿಸಲು ಹಾತೊರೆಯುತ್ತಿದೆ. ಇತ್ತ ಗೋವಾದ ಹೆಚ್ಚು ಸ್ಥಾನಗಳಲ್ಲಿ ಗೆದ್ದು, ಸಂಪೂರ್ಣ ಬಹುಮತ ಸಾಭೀತುಗೊಳಿಸುವಲ್ಲಿ ವಿಫಲವಾಗಿರುವ ಬಿಜೆಪಿ ಸರ್ಕಾರ ರಚನೆಗೆ ಕಸರತ್ತು ಶುರುಮಾಡಿದೆ. ಉತ್ತರಪ್ರದೇಶದಲ್ಲಿ ನಿರೀಕ್ಷೆಯಂತೆಯೇ

ಪಂಚರಾಜ್ಯ ಫಲಿತಾಂಶ ಫೈನಲ್|ಮೂರು ಭದ್ರ ಕೋಟೆಗಳಲ್ಲಿ ಮತ್ತೆ ಕೇಸರಿ | ಪಂಜಾಬ್ ನಲ್ಲಿ ‘ಕೈ’ ತಪ್ಪಿಸಿ ‘ಆಪ್’ ಲಾಂಚ್ ಮಾಡಿದ ಕೇಜ್ರಿ|ಗೋವಾದಲ್ಲಿ ಆತಂತ್ರ | ಕಮಲ ಅರಳಿಸುತ್ತಾರಾ ದೇವೇಂದ್ರ….? Read More »

ಭೀಕರ ಅಪಘಾತ; ಸಂಸದರ ಪುತ್ರ ಸಾವು

ಸಮಗ್ರ ನ್ಯೂಸ್: ರಾಜ್ಯಸಭಾ ಸದಸ್ಯ ಎನ್​​.ಆರ್​. ಇಳಂಗೋವನ್ ಅವರ ಪುತ್ರ ರಾಕೇಶ್​ (22) ಗುರುವಾರ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ದಾರುಣವಾಗಿ ಮೃತಪಟ್ಟಿದ್ದಾರೆ. ಸಂಸದರ ಪುತ್ರ ಪುದುಚೇರಿಯಿಂದ ಚೆನ್ನೈಗೆ ಹೆಚ್ಚು ಪ್ರಯಾಣಿಕರೊಂದಿಗೆ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದರು.ನಿಯಂತ್ರಣ ತಪ್ಪಿದ ಕಾರು ರಸ್ತೆಯ ಡಿವೈಡರ್​ಗೆ ಡಿಕ್ಕಿ ಹೊಡೆದು ಅಪಘಾತದ ಸಂಭವಿಸಿದೆ. ರಾಕೇಶ್​ ಸ್ಥಳದಲ್ಲೇ ಮೃತಪಟ್ಟರೆ, ಮತ್ತೊಬ್ಬ ಪ್ರಯಾಣಿಕ ಗಂಭೀರವಾರ ಗಾಯಗೊಂಡಿದ್ದಾರೆ.‘ಘಟನೆಗೆ ಸಂಬಂಧಿಸಿದಂತೆ ಇನ್ನು ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ. ಸದ್ಯ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ರಾಕೇಶ್​

ಭೀಕರ ಅಪಘಾತ; ಸಂಸದರ ಪುತ್ರ ಸಾವು Read More »

‘ಹಿಂದೂ ಕಾರ್ಯಕರ್ತರಲ್ಲ, ಅವರ ಹೆಂಡ್ತಿ, ಮಕ್ಳೇ ಮುಂದಿನ ಟಾರ್ಗೆಟ್’| ಎಂಎಲ್ಸಿ ಡಿ.ಎಸ್ ಅರುಣ್ ಗೆ ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ|

ಸಮಗ್ರ ನ್ಯೂಸ್: ಭಜರಂಗದಳ ಕಾರ್ಯಕರ್ತ ಹರ್ಷನ ಹತ್ಯೆ ಬೆನ್ನಲ್ಲೇ ಎಂಎಲ್‌ಸಿ ಡಿ.ಎಸ್.ಅರುಣ್ ಅವರಿಗೆ ಸಾಮಾಜಿಕ ಜಾಲತಾಣದ ಮೂಲಕ ಬೆದರಿಕೆ ಹಾಕಲಾಗಿದೆ. ಫೆ.20ರಂದು ರಾತ್ರಿ ಹರ್ಷನ ಹತ್ಯೆ ಬಳಿಕ ಎಂಎಲ್‌ಸಿ ಡಿ.ಎಸ್.ಅರುಣ್ ಅವರು ಕೃತ್ಯದ ಹಿಂದೆ ಮುಸ್ಲಿಮರು ಇರುವ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದರು. ಇದರ ಬೆನ್ನಲ್ಲೇ ಅರುಣ್ ಅವರಿಗೆ ಜಾಲತಾಣದ ಮೂಲಕ ಬೆದರಿಕೆ ಸಂದೇಶ ಪೋಸ್ಟ್ ಮಾಡಲಾಗಿದೆ. ಮುಸ್ತಾಕ್ ಅಲಿ ಹೆಸರಿನ ವ್ಯಕ್ತಿಯು ‘ನಿಮ್ಮ ತಲೇಲಿ ಇವತ್ತು ಕೇವಲ ಒಬ್ಬ ಹಿಂದೂ ಕಾರ್ಯಕರ್ತ ಸತ್ತಿದ್ದಾನೆ. ಆದರೆ ಮುಂದಿನ

‘ಹಿಂದೂ ಕಾರ್ಯಕರ್ತರಲ್ಲ, ಅವರ ಹೆಂಡ್ತಿ, ಮಕ್ಳೇ ಮುಂದಿನ ಟಾರ್ಗೆಟ್’| ಎಂಎಲ್ಸಿ ಡಿ.ಎಸ್ ಅರುಣ್ ಗೆ ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ| Read More »

‘ಆಪರೇಷನ್ ಗಂಗಾ’ ಕಾರ್ಯಾಚರಣೆಯಲ್ಲಿ ಮಂಗಳೂರಿನ ಮೈಕಲ್ ಸಲ್ದಾನ

ಸಮಗ್ರ ನ್ಯೂಸ್: ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳನ್ನು ಸ್ವದೇಶಕ್ಕೆ ಕರೆತರುವ ‘ಆಪರೇಶನ್ ಗಂಗಾ’ ಕಾರ್ಯಾಚರಣೆಯಲ್ಲಿ ಮಂಗಳೂರು ಮೂಲದ ಪೈಲಟ್ ಕ್ಯಾಪ್ಟನ್ ಮೈಕೆಲ್‌ ಸಲ್ಡಾನ ಕೂಡಾ ಇದ್ದಾರೆ. ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನದ ಪೈಲಟ್ ಆಗಿರುವ ಕ್ಯಾಪ್ಟನ್ ಮೈಕೆಲ್‌ ಸಲ್ಡಾನ ಅವರನ್ನು ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು ನಿಯೋಜಿಸಲಾಗಿತ್ತು. ಈಗಾಗಲೇ ಅನೇಕ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಅವರು ತಾಯ್ನಾಡಿಗೆ ಕರೆತಂದಿದ್ದಾರೆ. ಎರಡು ವರ್ಷಗಳ ಹಿಂದೆ ಕೋವಿಡ್‌ -19 ವ್ಯಾಪಕವಾಗಿದ್ದ ಸಂದರ್ಭ ಗಲ್ಫ್ ರಾಷ್ಟ್ರಗಳಲ್ಲಿ ಅನೇಕ ಭಾರತೀಯರು ಸಿಲುಕಿಕೊಂಡಿದ್ದರು. ಆಗಲೂ ಕ್ಯಾಪ್ಟನ್

‘ಆಪರೇಷನ್ ಗಂಗಾ’ ಕಾರ್ಯಾಚರಣೆಯಲ್ಲಿ ಮಂಗಳೂರಿನ ಮೈಕಲ್ ಸಲ್ದಾನ Read More »

ಮಂಗಳೂರು : ಜಿಲ್ಲೆಯಲ್ಲಿ ತಂಪೆರೆದ ಬೇಸಿಗೆ ಮಳೆ| ಮುಂದಿನ 5 ದಿನ ಮಳೆ ಮುಂದುವರೆಯುವ ಸಾಧ್ಯತೆ|

ಸಮಗ್ರ ನ್ಯೂಸ್: ಮಂಗಳೂರು ನಗರ ಸೇರಿದಂತೆ ದ.ಕ. ಜಿಲ್ಲೆಯ ವಿವಿಧ ಕಡೆಗಳಲ್ಲಿ ಮಂಗಳವಾರ ಸಂಜೆಯಿಂದ ಗುಡುಗು ಮಿಂಚಿನ ಸಹಿತ ಸಾಧಾರಣ ಮಳೆಯಾಗಿದೆ. ಬಂಗಾಳ ಕೊಲ್ಲಿಯಲ್ಲಿ ತೀವ್ರ ವಾಯುಭಾರ‌ ಕುಸಿತ ಆಗಿರುವ ಕಾರಣ ಮುಂದಿನ ಒಂದೆರಡು ದಿನಗಳಲ್ಲಿ ವಿವಿಧೆಡೆ ಮಳೆಯಾಗುವ ಸಾದ್ಯತೆ ಇದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಅದರಂತೆ ನಿನ್ನೆ ಸಂಜೆಯಿಂದಲೇ ಜಿಲ್ಲೆಯ ವಿವಿಧೆಡೆ ಮಳೆ ಸುರಿದಿತ್ತು. ಇಂದು ಮಂಗಳೂರು ನಗರ ಸೇರಿದಂತೆ ಹಲವೆಡೆ ಬೆಳಗ್ಗೆ 6 ಗಂಟೆಯಿಂದಲೇ ಮತ್ತೆ ಗುಡುಗು ಮಿಂಚಿನ ಸಹಿತ

ಮಂಗಳೂರು : ಜಿಲ್ಲೆಯಲ್ಲಿ ತಂಪೆರೆದ ಬೇಸಿಗೆ ಮಳೆ| ಮುಂದಿನ 5 ದಿನ ಮಳೆ ಮುಂದುವರೆಯುವ ಸಾಧ್ಯತೆ| Read More »

ದ್ವಿತೀಯ ಪಿಯುಸಿ ಅಂತಿಮ ವೇಳಾಪಟ್ಟಿ ಪ್ರಕಟ| ಇದೇ ಫೈನಲ್ ಅಂತಿದೆ ಪಿಯು ಬೋರ್ಡ್|

ಸಮಗ್ರ ನ್ಯೂಸ್: ಜೆಇಇ ಪರೀಕ್ಷೆಯಂದೇ ರಾಜ್ಯದಲ್ಲಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ದಿನಾಂಕ ಘೋಷಣೆಯಿಂದಾಗಿ, ಮತ್ತೆ ಪಿಯು ಬೋರ್ಡ್ ನಿಂದ ವಾರ್ಷಿಕ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಿ, ತಾತ್ಕಾಲಿಕ ವಾರ್ಷಿಕ ವೇಳಾಪಟ್ಟಿ ಪ್ರಕಟಿಸಲಾಗಿತ್ತು. ಈ ಕುರಿತಂತೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, 2021-22ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ದಿನಾಂಕ 22-04-2022ರಿಂದ 11-05-2022ರವರೆಗೆ ನಿಗದಿಪಡಿಸಲಾಗಿದ್ದು, ಆಕ್ಷೇಪಣೆಗಳನ್ನು ಸಲ್ಲಿಸಲು ದಿನಾಂಕ 05-03-2022ರ ಸಂಜೆ 5 ಗಂಟೆಯವರೆಗೆ ಸಮಯ ನೀಡಲಾಗಿತ್ತು.

ದ್ವಿತೀಯ ಪಿಯುಸಿ ಅಂತಿಮ ವೇಳಾಪಟ್ಟಿ ಪ್ರಕಟ| ಇದೇ ಫೈನಲ್ ಅಂತಿದೆ ಪಿಯು ಬೋರ್ಡ್| Read More »

ವಾಯುಭಾರ ಕುಸಿತ; ಎರಡು ದಿನ ರಾಜ್ಯದಲ್ಲಿ ಮಳೆ ಸಾಧ್ಯತೆ

ಸಮಗ್ರ ನ್ಯೂಸ್: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ನಾಳೆಯಿಂದ ಎರಡು ದಿನಗಳ ಕಾಲ ವರುಣ ಅಬ್ಬರಿಸಲಿದ್ದಾನೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಬಂಗಾಳ ಕೊಲ್ಲಿಯಲ್ಲಿ ತೀವ್ರ ವಾಯುಭಾರ ಕುಸಿತದ ಪರಿಣಾಮದಿಂದಾಗಿ, ಮಾರ್ಚ್ 7 ಹಾಗೂ 8 ರಂದು ರಾಜ್ಯದಲ್ಲಿ ಮಳೆ ಆಗಲಿದೆ. ಕಳೆದೆರಡು ತಿಂಗಳಿನಿಂದ ಇದ್ದ ಒಣ ಹವೆ ಕೊನೆಗೊಳ್ಳುತ್ತಿದ್ದು, ಮಾರ್ಚ್ 7ರಂದು ರಾಜ್ಯದ ವಿವಿಧ ಭಾಗಗಳಲ್ಲಿ ಮುಂಗಾರು ಪೂರ್ವ ಮಳೆಯಾಗಲಿದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ತುಮಕೂರು ಕೊಡಗು, ಹಾಸನದಲ್ಲಿ ಗುಡುಗು ಸಹಿತ ಮಳೆಯಾಗುವ

ವಾಯುಭಾರ ಕುಸಿತ; ಎರಡು ದಿನ ರಾಜ್ಯದಲ್ಲಿ ಮಳೆ ಸಾಧ್ಯತೆ Read More »