ಮಹಿಳೆ ಜತೆ ಬಸ್ ಏರಿದ ಶ್ವಾನ…!
ಸಮಗ್ರ ನ್ಯೂಸ್: ನಿತ್ಯ ಪ್ರೀತಿಯಿಂದ ಆರೈಕೆ ಮಾಡುವ ಮನೆ ಕೆಲಸದ ಮಹಿಳೆಯೊಂದಿಗೆ ಶ್ವಾನವು ಬಸ್ ಏರಿದ ಘಟನೆ ಬ್ರಹ್ಮಾವರದ ಉಳ್ಳೂರು ಅಮ್ಮುಂಜೆ ಬಳಿ ನಡೆದಿದೆ. ನಿತ್ಯ ಅನ್ನ ಹಾಕುವ ಮಹಿಳೆಯ ಮೇಲಿನ ಪ್ರೀತಿ ಹಾಗೂ ನಿಷ್ಠೆಯಿಂದ ಮನೆಯಿಂದ ತೆರಳುವಾಗ ಶ್ವಾನವೂ ಬಸ್ ನಿಲ್ದಾಣಕ್ಕೆ ಬಂದಿದೆ. ಮಹಿಳೆ ಬಸ್ ಏರಿದಾಗ ತಾನೂ ಹತ್ತಿದ್ದು ನಿರ್ವಾಹಕರು, ಪ್ರಯಾಣಿಕರು ಗದರಿಸಿದರೂ ಬಗ್ಗಲಿಲ್ಲ. ಜೋರು ಮಾಡಿದಾಗ ವಿರೋಧಿಸಿ ಬೊಗಳಿತು ಏನಃ ಇಳಿಯಲು ಒಪ್ಪಲಿಲ್ಲ. ಕೊನೆಗೆ ಮಹಿಳೆಯೇ ಇಳಿದಾಗ ಆಕೆಯೊಂದಿಗೆ ಶ್ವಾನ ಖುಷಿಯಿಂದ ಕೆಳಗಿಳಿದ
ಮಹಿಳೆ ಜತೆ ಬಸ್ ಏರಿದ ಶ್ವಾನ…! Read More »










