ರಾಜ್ಯ

ಚಾರ್ಮಾಡಿ ಘಾಟ್: ಶೌಚಾಲಯ ದುರಸ್ತಿ ಪಡಿಸಲು ಸಾರ್ವಜನಿಕರ ಆಗ್ರಹ

ಸಮಗ್ರ ನ್ಯೂಸ್: ಚಾರ್ಮಾಡಿ ಘಾಟಿಯ ಅಣ್ಣಪ್ಪಸ್ವಾಮಿ ಗುಡಿಯ ಬಳಿ ಮರ ಬಿದ್ದು ಶೌಚಾಲಯದ ಮೇಲ್ಛಾವಣಿಯ ಜಖಂಗೊಂಡಿದ್ದು, ಇದರಿಂದ ಸಾರ್ವಜನಿಕ ಪ್ರವಾಸಿಗರಿಗೆ ತುಂಬಾ ತೊಂದರೆಯಾಗಿದೆ. ಕಳೆದ ಬಾರಿ ಪಾದಯಾತ್ರಿಕರ ಅನುಕೂಲಕ್ಕಾಗಿ ಹಾಗೂ ಅಣ್ಣಪ್ಪ ಸ್ವಾಮಿ ದೇವಸ್ಥಾನಕ್ಕೆ ಭೇಟಿ ಕೊಡುವ ಪ್ರವಾಸಿಗರಿಗಾಗಿ ಶೌಚಾಲಯಕ್ಕೆ ಸರಿಯಾದ ಮೇಲ್ಛಾವಣಿಯನ್ನು ನೂತನವಾಗಿ ನಿರ್ಮಿಸಿ ಸರ್ಕಾರದ ವತಿಯಿಂದ ದುರಸ್ತಿ ಪಡಿಸಲಾಗಿತ್ತು. ಕಳೆದ ಕೆಲವು ತಿಂಗಳ ಹಿಂದೆ ಪಕ್ಕದಲ್ಲಿದ್ದ ಮರವು ಮೇಲ್ಛಾವಣಿ ಮೇಲೆ ಉರುಳಿ ಮೇಲ್ಛಾವಣಿ ಜಖಂಗೊಂಡಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕಾರಿಗಳು ತಲೆಕೆಡಿಸಿಕೊಂಡಿಲ್ಲ. ಸಾರ್ವಜನಿಕ

ಚಾರ್ಮಾಡಿ ಘಾಟ್: ಶೌಚಾಲಯ ದುರಸ್ತಿ ಪಡಿಸಲು ಸಾರ್ವಜನಿಕರ ಆಗ್ರಹ Read More »

ಚೈತ್ರಾ ಕುಂದಾಪುರ ಪ್ರಕರಣದಲ್ಲಿ ಮಾಜಿ ಸಚಿವ ಸುನಿಲ್ ಕುಮಾರ್ ಹೆಸರು!? ಈ ದೊಡ್ಡವರೆಲ್ಲ ಜಾರಿಕೊಳ್ಳುವುದೇಕೆ? – ಕಾಂಗ್ರೆಸ್ ಪ್ರಶ್ನೆ

ಸಮಗ್ರ ನ್ಯೂಸ್: ಹಿಂದುತ್ವ ಕಾರ್ಯಕರ್ತೆ ಚೈತ್ರಾ ಕುಂದಾಪುರ ವಂಚನೆ ಪ್ರಕರಣ ಭಾರೀ ಸದ್ದು ಮಾಡುತ್ತಿದೆ. ಈ ಪ್ರಕರಣಕ್ಕೆ ಮೂರನೇ ಆರೋಪಿ ಸ್ವಾಮೀಜಿ ಬಂಧನವಾದರೆ ದೊಡ್ಡವರ ಹೆಸರುಗಳು ಬಯಲಿಗೆ ಬರಲಿವೆ ಎಂದು ಚೈತ್ರಾ ಕುಂದಾಪುರ ಹೇಳಿದ್ದಾರೆ. ಇದು ಬಿಜೆಪಿ ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಈ ವಿಚಾರವಾಗಿ ಟ್ವೀಟ್‌ ಮಾಡಿರುವ ಕರ್ನಾಟಕ ಕಾಂಗ್ರೆಸ್‌, ‘ಬಿಜೆಪಿಯ ಟಿಕೆಟ್ ಹಗರಣದಲ್ಲಿ ದಿನಕ್ಕೊಂದೊಂದು ಹೆಸರು ಹೊರಬರುತ್ತಿವೆ. ಚೈನ್ ಚೈತ್ರಳ ಆಡಿಯೋದಲ್ಲಿ ಮಾಜಿ ಸಚಿವ ಸುನಿಲ್ ಕುಮಾರ್ ಅವರ ಹೆಸರು ಪ್ರಸ್ತಾಪವಾಗಿದೆ’ ಎಂದು ಕೆಪಿಸಿಸಿ ಆರೋಪಿಸಿದೆ.

ಚೈತ್ರಾ ಕುಂದಾಪುರ ಪ್ರಕರಣದಲ್ಲಿ ಮಾಜಿ ಸಚಿವ ಸುನಿಲ್ ಕುಮಾರ್ ಹೆಸರು!? ಈ ದೊಡ್ಡವರೆಲ್ಲ ಜಾರಿಕೊಳ್ಳುವುದೇಕೆ? – ಕಾಂಗ್ರೆಸ್ ಪ್ರಶ್ನೆ Read More »

ನಡುಕ ಹುಟ್ಟಿಸುತ್ತಿರುವ ನಿಫಾ ವೈರಾಣು ಜ್ವರ

ಸಮಗ್ರ ನ್ಯೂಸ್:ನಿಫಾ ವೈರಸ್, ಆರ್.ಯನ್.ಎ(RNA) ಗುಂಪಿಗೆ ಸೇರಿದ ಪಾರಾಮಿಕ್ಸೊ ವೈರಾಣು ಪ್ರಭೇಧಕ್ಕೆ ಸೇರಿದ ವೈರಾಣು ಆಗಿರುತ್ತದೆ. 1999ರಲ್ಲಿ ಮಲೇಷಿಯಾದ ಒಂದು ಸಣ್ಣ ಹಳ್ಳಿಯಾದ ಸಂಗೈ ನಿಫಾ ಎಂಬ ಜಾಗದಲ್ಲಿ ಮೊದಲು ಕಾಣಿಸಿಕೊಂಡ ಕಾರಣದಿಂದ “ನಿಫಾ ವೈರಸ್” ಎಂದು ಕರೆಯಲ್ಪಡುತ್ತದೆ. ಈ ಹಳ್ಳಿಯ ಹಂದಿ ಸಾಕುವ ರೈತರಲ್ಲಿ ಮೊದಲು ಈ ಜ್ವರ ಕಾಣಿಸಿಕೊಂಡು ಮೆದುಳಿನ ಊರಿಯೂತ ಮತ್ತು ಉಸಿರಾಟದ ತೊಂದರೆ ಉಂಟುಮಾಡಿ, ನೂರಾರು ಮಂದಿ ಅಸುನೀಗಿದ್ದರು. 300 ಮಂದಿಗೆ ರೋಗ ತಗುಲಿ 100 ಮಂದಿ ಅಸುನೀಗಿದ್ದರು. ರೋಗ ಪೀಡಿತ

ನಡುಕ ಹುಟ್ಟಿಸುತ್ತಿರುವ ನಿಫಾ ವೈರಾಣು ಜ್ವರ Read More »

ಪಾದರಕ್ಷೆಯಲ್ಲಿ ಪತ್ತೆಯಾದ ನಾಗರ ಹಾವನ್ನು ರಕ್ಷಣೆ ಮಾಡಿದ ಸ್ನೇಕ್ ಸುರೇಶ್ ಪೂಜಾರಿ ‌.

ಸಮಗ್ರ ನ್ಯೂಸ್: ಸಿದ್ದಾಪುರ ಸಮೀಪದ ನೆಲ್ಯಾಹುದಿಕೇರಿ ಗ್ರಾಮದ ಶಾಲಿವರ ಮನೆಯಲ್ಲಿ ಪಾದರಕ್ಷೆ(ಶೂ)ಒಳಗೆ ಅಡಗಿದ್ದ ನಾಗರ ಹಾವನ್ನು ಸ್ನೇಕ್ ಸುರೇಶ್ ಪೂಜಾರಿ ಸುರಕ್ಷಿತವಾಗಿ ಸೆರೆಹಿಡಿದು ಸೆ.16 ರಂದು ಅರಣ್ಯಕ್ಕೆ ಬಿಡಲಾಯಿತು. ಇಂದು ಮುಂಜಾನೆ ಕೆಲಸಕ್ಕೆ ತೆರಳಲು ಶೂ ಹಾಕಲು ತೆಗೆದಾಗ ಅದರಲ್ಲಿ ಉರಗ ಪತ್ತೆಯಾಗಿದೆ ತಕ್ಷಣವೇ ಉರಗ ರಕ್ಷಕ ಸ್ನೆಕ್ ಸುರೇಶ್ ಗೆ ಮಾಹಿತಿ ನೀಡಲಾಯಿತು. ತಕ್ಷಣ ಕಾರ್ಯಪ್ರವೃತ್ತರಾದ ಸುರೇಶ್ ಹಾವನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾದರು. ಹಾಗೆಯೇ ಶಾಲೆ, ಕಛೇರಿ,ಕೆಲಸಕ್ಕೆಂದು ತರಾತುರಿಯಲ್ಲಿ ಶೂ ಹಾಕುವಾಗ ಎಚ್ಚರ ವಹಿಸಬೇಕು ಹಾಗೂ ಹಾವು

ಪಾದರಕ್ಷೆಯಲ್ಲಿ ಪತ್ತೆಯಾದ ನಾಗರ ಹಾವನ್ನು ರಕ್ಷಣೆ ಮಾಡಿದ ಸ್ನೇಕ್ ಸುರೇಶ್ ಪೂಜಾರಿ ‌. Read More »

ಸಮಗ್ರ ಸಮಾಚಾರ ಮುದ್ದು ಕೃಷ್ಣ ಫೋಟೋ ಸ್ಪರ್ಧೆ| ಲೈಕ್ಸ್ ಪಡೆಯಲು ಇಂದು (ಸೆ.16) ಕೊನೆಯ ದಿನ

ಸಮಗ್ರ ನ್ಯೂಸ್: ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಸಮಗ್ರ ಸಮಾಚಾರ ಹಮ್ಮಿಕೊಂಡಿದ್ದ ‘ಮುದ್ದು ಕೃಷ್ಣ ಫೋಟೋ ಸ್ಪರ್ಧೆ-2023ಯ ಲೈಕ್ಸ್ ಪಡೆಯಲು ಇಂದು (ಸೆ.16) ಕೊನೆಯ ದಿನವಾಗಿದೆ. ನೀವು ಕಳುಹಿಸಿದ ಮುದ್ದು ಕೃಷ್ಣ ಫೋಟೋವನ್ನು ಸಮಗ್ರ ಸಮಾಚಾರ ಇನ್ಸ್ಟಾ ಗ್ರಾಮ್ ಪೇಜ್ ನಲ್ಲಿ ಹಾಕಲಾಗಿತ್ತು. ಹಾಗೆಯೇ ಇಂದು ಸಂಜೆ 7 ಗಂಟೆಯ ವರೆಗೆ ಲೈಕ್ಸ್ ಪಡೆಯಲು ಅವಕಾಶವಿರುತ್ತದೆ. ನಂತರ ಬಂದ ಲೈಕ್ಸ್ ಗಳನ್ನು ಪರಿಗಣಿಸಲಾಗುವುದಿಲ್ಲ. ನಿರ್ಣಾಯಕರ ತೀರ್ಮಾನವೇ ಅಂತಿಮ ಆಗಿರುತ್ತದೆ. ಇದರಲ್ಲಿ ಅತೀ ಹೆಚ್ಚು ಲೈಕ್ ಬಂದ 3 ಮುದ್ದು

ಸಮಗ್ರ ಸಮಾಚಾರ ಮುದ್ದು ಕೃಷ್ಣ ಫೋಟೋ ಸ್ಪರ್ಧೆ| ಲೈಕ್ಸ್ ಪಡೆಯಲು ಇಂದು (ಸೆ.16) ಕೊನೆಯ ದಿನ Read More »

ಪ್ರತಿಭಟನೆಗಾರರು ಟೆರರಿಸ್ಟ್ ಗಳಂತೆ!! ಪವರ್ ಟಿ.ವಿ ಎಂಡಿ ರಾಕೇಶ ಶೆಟ್ಟಿಯಿಂದ ಸೌಜನ್ಯಪರ ಹೋರಾಟಗಾರರಿಗೆ ಅವಮಾನ| ಮಾಧ್ಯಮ ಸಂಯಮವನ್ನೇ ಮೀರಿದ ರಾಕೇಶ್ ಶೆಟ್ಟಿ

ಸಮಗ್ರ ನ್ಯೂಸ್: ನಿನ್ನೆ(ಸೆ.15) ಪ್ರಸಾರ ಆದ ಪವರ್ ಟಿವಿಯ ‘ಕ್ಷಮಿಸು ಸೌಜನ್ಯ -3’ ಸಂದರ್ಭವನ್ನು ಕೇವಲ ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಹೋರಾಟಗಾರರನ್ನು ರಾಕೇಶ್ ಶೆಟ್ಟಿ ಟೀಕಿಸಲು ಬಳಸಿಕೊಂಡಿದ್ದಾರೆ. ಸೆಟಲೈಟ್ ಟಿವಿಯೊಂದು ಇತಿಹಾಸದಲ್ಲಿಯೇ, ಅದೂ ಟಿವಿಯೊಂದರ ಮಾಲೀಕರು ವೈಯಕ್ತಿಕ ನಿಂದನೆಗೆ ಇಳಿದದ್ದು ಇದೇ ಮೊದಲು. ಸೌಜನ್ಯ -3 ಮೊದಲು ಪ್ರತಿಭಟನೆಗಾರರನ್ನು ಟೆರರಿಸ್ಟ್ ಅಂದಿದೆ. ಮೊದಲಿಗೆ, ಶಾಂತಿಯುತವಾಗಿ ಪ್ರಜಾಪ್ರಭುತ್ವದ ಹಕ್ಕನ್ನು ಬಳಸುವ ಪ್ರತಿಭಟನೆ ಮಾಡುವವರನ್ನು ಟೆರರಿಸ್ಟ್ ಟೆರರಿಸ್ಟ್ ಗಳಿಗೆ ಹೋಲಿಸಿತ್ತು ಟಿವಿ ಚಾನೆಲ್. ಏಕ ಮುಖ ಅಭಿಪ್ರಾಯಗಳಿಂದ ಬಂದಿದ್ದ

ಪ್ರತಿಭಟನೆಗಾರರು ಟೆರರಿಸ್ಟ್ ಗಳಂತೆ!! ಪವರ್ ಟಿ.ವಿ ಎಂಡಿ ರಾಕೇಶ ಶೆಟ್ಟಿಯಿಂದ ಸೌಜನ್ಯಪರ ಹೋರಾಟಗಾರರಿಗೆ ಅವಮಾನ| ಮಾಧ್ಯಮ ಸಂಯಮವನ್ನೇ ಮೀರಿದ ರಾಕೇಶ್ ಶೆಟ್ಟಿ Read More »

ವಿಷವೆಂದು ಜ್ಯೂಸ್ ಕುಡಿದು ಆತಂಕ ಸೃಷ್ಟಿಸಿದ್ದ ಚೈತ್ರಾ ಕುಂದಾಪುರ| ಸಿಸಿ ಟಿವಿಯಲ್ಲಿ ಬಯಲಾಯ್ತು ಡೀಲ್ ರಾಣಿ ನಾಟಕ

ಸಮಗ್ರ ನ್ಯೂಸ್: ಉದ್ಯಮಿಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹೇಳಿ ಉದ್ಯಮಿಯಿಂದ ಕೋಟಿ ಕೋಟಿ ಹಣ ಪಡೆದು ವಂಚಿಸಿರುವ ಪ್ರಕರಣದಲ್ಲಿ ಹೀಗಾಗಲೇ ಸಿಸಿಬಿ ವಿಚಾರಣೆ ಎದುರಿಸುತ್ತಿರುವ ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರ ಅವರ ಬಣ್ಣ ಬಗೆದಷ್ಟು ಬಯಲಾಗುತ್ತಿದೆ. ಕಳೆದ ಎಪ್ರಿಲ್ 24 ರಂದು ಚೈತ್ರಾ ಎಂಡ್ ಗ್ಯಾಂಗ್ ಉದ್ಯಮಿ ಮಂಗಮ್ಮನಪಾಳ್ಯದಲ್ಲಿರುವ ಗೋವಿಂದ ಪೂಜಾರಿ ಕಚೇರಿಗೆ ಭೇಟಿ ನೀಡ್ತಾರೆ. ಈ ವೇಳೆ ಹಣ ವಾಪಸ್‌ ಕೊಡೋ ಬಗ್ಗೆ ಮಾತುಕಥೆ ನಡೆದಿದೆ. ಆ ಮಾತು ಕಥೆಯ ಸಿಸಿಟಿವಿ ವಿಡಿಯೋ ಲಭ್ಯವಾಗಿದೆ. ಈ

ವಿಷವೆಂದು ಜ್ಯೂಸ್ ಕುಡಿದು ಆತಂಕ ಸೃಷ್ಟಿಸಿದ್ದ ಚೈತ್ರಾ ಕುಂದಾಪುರ| ಸಿಸಿ ಟಿವಿಯಲ್ಲಿ ಬಯಲಾಯ್ತು ಡೀಲ್ ರಾಣಿ ನಾಟಕ Read More »

ಚಾರ್ಮಾಡಿ ಘಾಟ್ ನಲ್ಲಿ ವಿಪರೀತ ಮಂಜು| ದಾರಿ ಕಾಣದೆ ಪ್ರಪಾತಕ್ಕೆ ಉರುಳಿದ ಲಾರಿ

ಸಮಗ್ರ ನ್ಯೂಸ್: ಕೊಟ್ಟಿಗೆಹಾರ ಚಾರ್ಮಾಡಿ ಘಾಟ್ ಸುತ್ತಮುತ್ತ ಎರಡು ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು ನದಿ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿದೆ. ಮಳೆಯ‌ ಪರಿಣಾಮ ಚಾರ್ಮಾಡಿ ಘಾಟ್ ನಲ್ಲಿ ಮಂಜು ಮುಸುಕಿದ ವಾತಾವರಣವಿದ್ದು ವಾಹನ ಸವಾರರು ಪರದಾಡುವಂತಾಗಿದೆ. ಶುಕ್ರವಾರ ರಾತ್ರಿ ನೀರಿನ ಬಾಟಲ್ ತುಂಬಿದ ಲಾರಿ ಒಂದು ಮಂಜಿನಿಂದ ದಾರಿ ಕಾಣದೆ 100 ಅಡಿ ಪ್ರಪಾತಕ್ಕೆ ಬಿದ್ದಿದೆ ಅದೃಷ್ಟವಶಾತ್ ಲಾರಿ ಚಾಲಕ ಹಾಗೂ ಕ್ಲೀನರ್ ಗೆ ಯಾವುದೇ ಪ್ರಾಣಪಾಯವಾಗಿಲ್ಲ. ಪ್ರಾಣ ಉಳಿಸಿದ ಮರ:ಲಾರಿ ಬಿದ್ದ ಜಾಗದಲ್ಲಿ ಬೃಹತಾಕಾರದ ಮರವಿದ್ದು

ಚಾರ್ಮಾಡಿ ಘಾಟ್ ನಲ್ಲಿ ವಿಪರೀತ ಮಂಜು| ದಾರಿ ಕಾಣದೆ ಪ್ರಪಾತಕ್ಕೆ ಉರುಳಿದ ಲಾರಿ Read More »

ರಾಜ್ಯದಲ್ಲಿ HSRP ನಂಬರ್ ಪ್ಲೇಟ್ ಅಳವಡಿಕೆ ಕಡ್ಡಾಯ | ನ.17 ಪ್ರಕ್ರಿಯೆಗೆ ಕೊನೆ ದಿನ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಎಲ್ಲಾ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕ -HSRP ನಂಬರ್ ಪ್ಲೇಟ್ ಅಳವಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ವಾಹನಗಳ ಮಾಲೀಕರು ಸಾರಿಗೆ ಇಲಾಖೆಯ ವೆಬ್ಸೈಟ್ನಲ್ಲಿ ನೋಂದಣಿ ಮಾಡಿಕೊಂಡು ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. 2019ರ ಏಪ್ರಿಲ್ 1ಕ್ಕಿಂತ ಮೊದಲು ನೋಂದಣಿಯಾದ ವಾಹನಗಳಿಗೆ HSRP ಅಳವಡಿಕೆ ಕಡ್ಡಾಯ ಮಾಡಲಾಗಿದೆ. ನವೆಂಬರ್ 17 ಈ ಪ್ರಕ್ರಿಯೆಗೆ ಕೊನೆಯ ದಿನವಾಗಿದೆ. ಕೆಲವು ಕಡೆ ನಕಲಿಯಾಗಿ HSRP ಅಳವಡಿಸುತ್ತಿದ್ದು, ಇದನ್ನು ತಡೆಯುವ ಉದ್ದೇಶದಿಂದ ಅಧಿಕೃತ HSRP ನಂಬರ್

ರಾಜ್ಯದಲ್ಲಿ HSRP ನಂಬರ್ ಪ್ಲೇಟ್ ಅಳವಡಿಕೆ ಕಡ್ಡಾಯ | ನ.17 ಪ್ರಕ್ರಿಯೆಗೆ ಕೊನೆ ದಿನ Read More »

ಹವಾಮಾನ ವರದಿ| ಸೆ.18ರವರೆಗೆ ಭಾರೀ ಮಳೆ ಮುನ್ಸೂಚನೆ

ಸಮಗ್ರ ನ್ಯೂಸ್: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚನೆ ನೀಡಲಾಗಿದೆ. ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಇನ್ನೂ ಮೂರು ದಿನ ಅಂದರೆ ಸೇ.18 ರವರೆಗೆ ಮಳೆಯ ಎಚ್ಚರಿಕೆ ನೀಡಲಾಗಿದೆ. ಬೆಳಗಾವಿ, ಬಾಗಲಕೋಟೆ, ಬೀದರ್, ಧಾರವಾಡ, ಕಲಬುರಗಿ, ಕೊಪ್ಪಳ, ಯಾದಗಿರಿ, ಬೆಂಗಳೂರು, ಚಾಮರಾಜನಗರ, ದಾವಣಗೆರೆ, ಹಾಸನ ಜಿಲ್ಲೆಗಳ ಹಲವೆಡೆ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ. ಭಾರತೀಯ ಹವಾಮಾನ ಇಲಾಖೆ (IMD) ದೇಶದ ಹಲವು ರಾಜ್ಯಗಳಲ್ಲಿ ಸೆಪ್ಟೆಂಬರ್ 17 ರವರೆಗೆ ಭಾರೀ ಮಳೆಯಾಗುವ ಎಚ್ಚರಿಕೆಯನ್ನು ನೀಡಿದೆ.

ಹವಾಮಾನ ವರದಿ| ಸೆ.18ರವರೆಗೆ ಭಾರೀ ಮಳೆ ಮುನ್ಸೂಚನೆ Read More »