ಬದುಕಿರುವ ವ್ಯಕ್ತಿಗೆ ಡೆತ್ ಸರ್ಟಿಫಿಕೇಟ್ ವಿರಾಜಪೇಟೆ ಪುರಸಭೆಯಲ್ಲಿ ಅವಾಂತರ ಶಂಕೆ..!! ಕ್ರಮಕ್ಕೆ ಜೆಡಿಎಸ್ ಒತ್ತಾಯ
ಸಮಗ್ರ ನ್ಯೂಸ್: ವಿರಾಜಪೇಟೆ ಪುರಸಭೆಯ ಕಚೇರಿಯಲ್ಲಿ ವ್ಯಕ್ತಿಗಳು ಬದುಕಿದ್ದರು ಮರಣ ದೃಢೀಕರಣ ಪತ್ರ ನೀಡಿರೋ ಬಗೆ ಶಂಖೆ ಇದ್ದು ಕೂಡಲೇ ಜಿಲ್ಲಾಧಿಕಾರಿಗಳು ಸಮಗ್ರ ತನಿಖೆ ನಡೆಸಬೇಕೆಂದು ಜೆ.ಡಿ ಎಸ್.ನ ವಿರಾಜಪೇಟೆ ತಾಲೂಕು ಅಧ್ಯಕ್ಷ ಮಂಜುನಾಥ್ ಪಿ. ಎ ಅವರು ಆಗ್ರಹಿಸಿದ್ದಾರೆ. ವಿರಾಜಪೇಟೆ ಪುರಸಭೆಯಲ್ಲಿ ಹಲವಾರು ವರ್ಷಗಳಿಂದ ಈ ರೀತಿಯ ದಂಧೆ ನಡೆಯುತ್ತಿರುವ ಶಂಖೆ ಇದೆ. ಕಳೆದ ಒಂದು ತಿಂಗಳಿನಿಂದ ಇದುವರೆಗಿನ ದಾಖಲಾತಿಗಳನ್ನು ಪರಿಶೀಲನೆ ಮಾಡಿದರೆ ಪ್ರಕರಣ ಬಯಲಾಗಬಹುದಾಗಿದೆ. ಈ ಕೂಡಲೇ ಜಿಲ್ಲಾಧಿಕಾರಿಗಳು ವಿರಾಜಪೇಟೆ ಶಾಸಕರು ಅಧಿಕಾರಿಗಳನ್ನು ತನಿಖೆಗೊಳಪಡಿಸಬೇಕು.










