ವಿರಾಜಪೇಟೆ: ಶೃಂಗಾರಗೊಂಡ ಗಡಿಯಾರಕಂಬ
ಸಮಗ್ರ ನ್ಯೂಸ್: ಜ.18,ಅಯೋಧ್ಯೆಯಲ್ಲಿ ಜ. 22ರಂದು ಉದ್ಘಾಟನೆಗೊಳ್ಳಲಿರುವ ರಾಮ ಮಂದಿರ ನಿಮಿತ್ತ ಜಿಲ್ಲಾದ್ಯಂತ ವಿವಿಧ ದೇವಾಲಯಗಳಲ್ಲಿ ಅಲಂಕಾರ ಹಾಗೂ ಅಂದಿನ ದಿನ ವಿಶೇಷ ಪೂಜೆಗೆ ಸಿದ್ಧತೆ ನಡೆಯುತ್ತಿದೆ. ವಿರಾಜಪೇಟೆಯ ಗಡಿಯಾರ ಕಂಬದ ಸುತ್ತ ಕೇಸರಿ ಧ್ವಜದ ಮೂಲಕ ನಿನ್ನೆ ಮಧ್ಯರಾತ್ರಿ ಶೃಂಗಾರಗೊಳಿಸಲಾಗಿದೆ. ಇಂದು ಬೆಳಿಗ್ಗೆ ಈ ಭಾಗದಲ್ಲಿ ಸಂಚರಿಸುವರು ಒಂದು ಸೆಕೆಂಡ್ ನಿಂತು ಶೃಂಗಾರವನ್ನು ಕಣ್ತುಂಬಿಸಿಕೊಂಡು ಹೋಗುತ್ತಿದ್ದಾರೆ.
ವಿರಾಜಪೇಟೆ: ಶೃಂಗಾರಗೊಂಡ ಗಡಿಯಾರಕಂಬ Read More »










