ಮೈಸೂರು ರಾಜವಂಶಸ್ಥರ ಕುಟುಂಬದಲ್ಲಿ ತೊಟ್ಟಿಲು ಶಾಸ್ತ್ರದ ಸಂಭ್ರಮ, ಚಾಮುಂಡಿಬೆಟ್ಟದಲ್ಲಿ ಕಂಡ ಯದುವೀರ್ ಒಡೆಯರ್ 2ನೇ ಪುತ್ರ ಹೇಗಿದ್ದಾನೆ
ಸಮಗ್ರ ನ್ಯೂಸ್ : ಮೈಸೂರಿನ ರಾಜವಂಶಸ್ಥರ ಕುಟುಂಬದಲ್ಲಿ ಬುಧವಾರ ಸಂಭ್ರಮದ ದಿನ. ಎರಡು ತಿಂಗಳ ಹಿಂದೆ ದಸರಾದ ಸಂದರ್ಭದಲ್ಲಿಯೇ ರಾಜವಂಶಸ್ಥ ಹಾಗೂ ಸಂಸದ ಯದುವೀರ್ ಒಡೆಯರ್ ಅವರಿಗೆ ಎರಡನೇ ಪುತ್ರ ಜನಿಸಿದ್ದ. ಈಗ ಮನೆಯಲ್ಲಿ ತೊಟ್ಟಿಲು ಶಾಸ್ತ್ರದ ಸಡಗರ. ಮೈಸೂರಿನ ಚಾಮುಂಡಿಬೆಟ್ಟದಲ್ಲಿರುವ ಚಾಮುಂಡೇಶ್ವರಿ ದೇಗುಲದ ಆವರಣದಲ್ಲಿ ತೊಟ್ಟಿಲು ಶಾಸ್ತ್ರ ಹಾಗೂ ನಾನಾ ಪೂಜೆಗಳು ನೆರವೇರಿದವು. ಯದುವೀರ್ ಒಡೆಯರ್, ತ್ರಿಷಿಕಾದೇವಿ ಒಡೆಯರ್, ಪ್ರಮೋದಾದೇವಿ ಒಡೆಯರ್, ಆದ್ಯವೀರ್ ಒಡೆಯರ್ ಚಾಮುಂಡಿಬೆಟ್ಟಕ್ಕೆ ಪುಟ್ಟ ಮಗುವಿನೊಂದಿಗೆ ಆಗಮಿಸಿ ಬೆಟ್ಟದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. […]









