ದೇಶ-ವಿದೇಶ

ಕೋಲ್ಕತ್ತಾ: ಲೋಕಸಭಾ ಚುನಾವಣೆ ಕನಿಷ್ಠ 200 ಸ್ಥಾನಗಳನ್ನು ಗೆಲ್ಲಿ; ಮಮತಾ ಬ್ಯಾನರ್ಜಿ

ಸಮಗ್ರ ನ್ಯೂಸ್‌ : ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ 200 ಸ್ಥಾನಗಳನ್ನು ಗೆಲ್ಲಿ ಎಂದು ಎನ್‌ಡಿಎ ಒಕ್ಕೂಟಕ್ಕೆ ಮಮತಾ ಬ್ಯಾನರ್ಜಿ ಸವಾಲು ಎಸೆದಿದ್ದಾರೆ. ಕೃಷ್ಣನಗರ ಲೋಕಸಭಾ ಕ್ಷೇತ್ರದಲ್ಲಿ ಇಂದು ಮಮತಾ ಬ್ಯಾನರ್ಜಿ ಸಂಸದೆ ಮಹುವಾ ಮೊಯಿತ್ರಾ ಪರ ಪ್ರಚಾರ ಮಾಡಿ ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು. ಈ ಬಾರಿ 400 ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ಹಾಕಿರುವ ಎನ್‌ಡಿಎ ಒಕ್ಕೂಟಕ್ಕೆ ನಾನು ಸವಾಲು ಎಸೆಯುತ್ತೇನೆ. ಬಿಜೆಪಿಯವರು 400 ಪಾರ್ ಎಂದು ಹೇಳುತ್ತಿದ್ದಾರೆ. ನಾನು ಮೊದಲು 200 ಸೀಟುಗಳ ಮಾನದಂಡವನ್ನು ದಾಟಿ […]

ಕೋಲ್ಕತ್ತಾ: ಲೋಕಸಭಾ ಚುನಾವಣೆ ಕನಿಷ್ಠ 200 ಸ್ಥಾನಗಳನ್ನು ಗೆಲ್ಲಿ; ಮಮತಾ ಬ್ಯಾನರ್ಜಿ Read More »

ಅರವಿಂದ್ ಕೇಜ್ರಿವಾಲ್ ದೇಶಕ್ಕಾಗಿ ಹೋರಾಡುತ್ತಿದ್ದಾರೆ;ಸುನಿತಾ ಕೇಜ್ರಿವಾಲ್

ಸಮಗ್ರ ನ್ಯೂಸ್ : ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರವರು ದೇಶಕ್ಕಾಗಿ ಹೋರಾಡುತ್ತಿದ್ದಾರೆ ಎಂದು ಪತ್ನಿ ಸುನಿತಾ ಕೇಜ್ರಿವಾಲ್ ಹೇಳಿದ್ದಾರೆ. ದೆಹಲಿಯಲ್ಲಿ ನಡೆದ ಇಂಡಿಯಾ ಒಕ್ಕೂಟದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.ಕೇಜ್ರಿವಾಲ್ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಹೇಳುತ್ತಿದೆ. ಕೇಜ್ರಿವಾಲ್ ರಾಜೀನಾಮೆ ನೀಡಬೇಕಾ? ದೇಶಕ್ಕಾಗಿ ಕೇಜ್ರಿವಾಲ್ ಹೋರಾಡುತ್ತಿದ್ದಾರೆ. ಬಹುಶ: ಕೇಜ್ರಿವಾಲ್ ಹಿಂದೆ ಸ್ವಾತಂತ್ರ್ಯ ಹೋರಾಟಗಾರರು ಆಗಿದ್ದರು ಅನಿಸುತ್ತದೆ. ಹೋರಾಟದಲ್ಲಿ ಹುತಾತ್ಮರಾಗಿದ್ದ ಅವರು ಈಗಲೂ ಮತ್ತೆ ಹೋರಾಟ ಮಾಡುತ್ತಿದ್ದಾರೆ ಎಂದು ಹೇಳಿದರು. ಕೇಜ್ರಿವಾಲ್ ಬರೆದ ಪತ್ರವನ್ನು ಓದಿದ ಅವರು,

ಅರವಿಂದ್ ಕೇಜ್ರಿವಾಲ್ ದೇಶಕ್ಕಾಗಿ ಹೋರಾಡುತ್ತಿದ್ದಾರೆ;ಸುನಿತಾ ಕೇಜ್ರಿವಾಲ್ Read More »

ಕಸದ ಬುಟ್ಟಿ ಸೇರುತ್ತಿದೆ 100 ಕೋಟಿ ಮಂದಿಯ ಆಹಾರ/ ಗಾಬರಿ ಹುಟ್ಟಿಸಿದ ವಿಶ್ವಸಂಸ್ಥೆಯ ಪರಿಸರ ಏಜೆನ್ಸಿ ವರದಿ

ಸಮಗ್ರ ನ್ಯೂಸ್: 100 ಕೋಟಿ ಮಂದಿಯ ಹೊಟ್ಟೆ ತಣಿಸಬಲ್ಲಷ್ಟು ಆಹಾರ, ಪ್ರತಿನಿತ್ಯ ಜಗತ್ತಿನಲ್ಲಿ ವ್ಯರ್ಥವಾಗಿ ಕಸದ ಬುಟ್ಟಿ ಸೇರುತ್ತಿದೆ ಎಂದು ವಿಶ್ವಸಂಸ್ಥೆಯ ಪರಿಸರ ಏಜೆನ್ಸಿ (ಯುನ್‍ಇಪಿ)ಯ 2024ನೇ ಸಾಲಿನ ಆಹಾರ ವ್ಯರ್ಥ ಸೂಚ್ಯಂಕ ವರದಿ ಬಹಿರಂಗಪಡಿಸಿದೆ. ಈ ಪೈಕಿ ಅತ್ಯಧಿಕ ಪ್ರಮಾಣದಲ್ಲಿ ಆಹಾರ ಮನೆಗಳಲ್ಲಿಯೇ ವ್ಯರ್ಥವಾಗುತ್ತಿದೆ. ಜಾಗತಿಕ ಮಟ್ಟದಲ್ಲಿ ಇವುಗಳ ಪ್ರಮಾಣ 631 ದಶಲಕ್ಷ ಟನ್‍ಗಳಾಗಿವೆ ಎಂದು ಸೂಚ್ಯಂಕ ಹೇಳಿದೆ. ಆಹಾರ ವ್ಯರ್ಥವು ಕೇವಲ ಶ್ರೀಮಂತ ರಾಷ್ಟ್ರಗಳಿಗಷ್ಟೇ ಸೀಮಿತವಾಗಿಲ್ಲ. ಅಧಿಕ, ಮೇಲ್ಮಧ್ಯಮ, ಕಳಮಧ್ಯಮ ಆದಾಯದ ದೇಶಗಳ ಮನೆಗಳಲ್ಲಿ

ಕಸದ ಬುಟ್ಟಿ ಸೇರುತ್ತಿದೆ 100 ಕೋಟಿ ಮಂದಿಯ ಆಹಾರ/ ಗಾಬರಿ ಹುಟ್ಟಿಸಿದ ವಿಶ್ವಸಂಸ್ಥೆಯ ಪರಿಸರ ಏಜೆನ್ಸಿ ವರದಿ Read More »

‘ವಾಯ್ಸ್ ಕ್ಲೋನ್’/ ಧ್ವನಿ ಪಡಿಯುಚ್ಚು ತಂತ್ರಜ್ಞಾನ ಸಿದ್ಧಗೊಳಿಸಿದ Open AI

ಸಮಗ್ರ ನ್ಯೂಸ್: ಚಾಟ್ ಜಿಪಿಟಿ ತಂತ್ರಜ್ಞಾನದ (ಎಐ) ಮೂಲಕ ಇಡೀ ಜಗತ್ತನ್ನೇ ತಲ್ಲಣಗೊಳಿಸಿದ್ದ Open AI, ಈಗ ಧ್ವನಿ ಪಡಿಯಚ್ಚು (ವಾಯ್ಸ್ ಕ್ಲೋನ್) ಮಾಡುವ ತಂತ್ರಜ್ಞಾನವನ್ನು ತಯಾರಿಸಿದೆ ಎಂದು ಹೇಳಿಕೊಂಡಿದೆ. ಈ ನೂತನ ತಂತ್ರಜ್ಞಾನದ ಮೂಲಕ ಕ್ಲೋನ್ ಮಾಡಬೇಕಾದ ಧ್ವನಿಯ ಮಾಲೀಕರು ಧ್ವನಿಯನ್ನು 15 ಸೆಕೆಂಡುಗಳ ಕಾಲ ರೆಕಾರ್ಡ್ ಮಾಡಿದರೆ ಸಾಕು, ಅವರ ಪಡಿಯಚ್ಚನಂತಾ ಧ್ವನಿ ಸಿದ್ಧವಾಗುತ್ತದೆ. ಆದರೆ ತಂತ್ರಜ್ಞಾನದ ದುರುಪಯೋಗದ ಸಾಧ್ಯತೆಯ ಕಾರಣ ಈ ಧ್ವನಿ ಕ್ಲೋನ್ ತಂತ್ರಜ್ಞಾನವನ್ನು ಸದ್ಯ ಸಾರ್ವಜನಿಕವಾಗಿಸುತ್ತಿಲ್ಲ. ಮಾಲಿಕರಿಗೆ ಅರಿವಿಲ್ಲದೆ ಅವರ

‘ವಾಯ್ಸ್ ಕ್ಲೋನ್’/ ಧ್ವನಿ ಪಡಿಯುಚ್ಚು ತಂತ್ರಜ್ಞಾನ ಸಿದ್ಧಗೊಳಿಸಿದ Open AI Read More »

ಬಿಜೆಪಿ ಪ್ರಣಾಳಿಕೆ ಸಮಿತಿ/ ಮುಖ್ಯಸ್ಥರಾಗಿ ರಾಜನಾಥ್ ಸಿಂಗ್

ಸಮಗ್ರ ನ್ಯೂಸ್: ಲೋಕಸಭೆ ಚುನಾವಣೆಗೆ ಬಿಜೆಪಿಯ ಪ್ರಣಾಳಿಕೆ ಸಮಿತಿಯ ಮುಖ್ಯಸ್ಥರಾಗಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ನೇಮಕ ಮಾಡಲಾಗಿದೆ. ಸಮಿತಿಯ ಸಂಚಾಲಕರಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಹಾಗೂ ಸಹ ಸಂಚಾಲಕರಾಗಿ ಕೇಂದ್ರ ಸಚಿವ ಪಿಯೂಷ್ ಗೋಯಲ್ ನೇಮಕ ಮಾಡಲಾಗಿದೆ. ಇವರಲ್ಲದೆ 24 ಮಂದಿಯನ್ನು ಈ ಸಮಿತಿಗೆ ಸದಸ್ಯರನ್ನಾಗಿ ಸೇರಿಸಿಕೊಳ್ಳಲಾಗಿದೆ. ಅರ್ಜುನ್ ಮುಂಡಾ, ಭೂಪೇಂದ್ರ ಯಾದವ್, ಅರ್ಜುನ್‍ರಾಮ್ ಮೇಘವಾಲ್, ಕಿರಣ್ ರಿಜಿಜು, ಅಶ್ವಿನಿ ವೈಷ್ಣವ್, ಧಮೇರ್ಂದ್ರ ಪ್ರಧಾನ್, ಭೂಪೇಂದ್ರ ಪಟೇಲ್, ಹಿಮಂತ

ಬಿಜೆಪಿ ಪ್ರಣಾಳಿಕೆ ಸಮಿತಿ/ ಮುಖ್ಯಸ್ಥರಾಗಿ ರಾಜನಾಥ್ ಸಿಂಗ್ Read More »

ಚುನಾವಣಾ ವೆಚ್ಚ ನಿಯಂತ್ರಣ/ ಪ್ರಚಾರಕ್ಕೆ ಬಳಸುವ ಸರಕು-ಸೇವೆಗಳಿಗೆ ದರ ನಿಗದಿಪಡಿಸಿದ ಆಯೋಗ

ಸಮಗ್ರ ನ್ಯೂಸ್: ಅಭ್ಯರ್ಥಿಗಳು ಲೋಕಸಭಾ ಚುನಾವಣೆಯಲ್ಲಿ ಪ್ರಚಾರಕ್ಕೆ ಬಳಸುವ ಸರಕು-ಸೇವೆಗಳಿಗೆ ದರಗಳನ್ನು ಜಿಲ್ಲಾ ಚುನಾವಣಾ ಸಮಿತಿಗಳು ನಿಗದಿಗೊಳಿಸಿದ್ದು ಬಹುತೇಕ ಕಡೆ ದರಗಳನ್ನು ಕಳೆದ ಬಾರಿಗಿಂತ ಕಡಿಮೆ ಮಾಡಿರುವುದು ಕಂಡಿಬಂದಿದೆ. ಕಾಫಿ-ಟೀ ದರಗಳನ್ನು ದೇಶದ ಬಹುತೇಕ ಕಡೆ ಇಳಿಕೆ ಮಾಡಲ್ಪಟ್ಟಿದ್ದರೆ ಅಚ್ಚರಿ ಎಂಬಂತೆ ಚೆನ್ನೈನಲ್ಲಿ ಏರಿಕೆ ಮಾಡಿ ಒಂದು ಕಪ್ ಕಾಫಿಗೆ 15 ರು. ಹಾಗೂ ಒಂದು ಸಮೋಸಾಗೆ 20 ರು. ನಿಗದಿ ಮಾಡಲಾಗಿದೆ. ಮಾಂಸಾಹಾರದ ದರಗಳೂ ಬಹುತೇಕ ಅದೇ ದರದಲ್ಲಿ ಮುಂದುವರೆದಿದ್ದು, ವ್ಯತಿರಿಕ್ತವೆಂಬಂತೆ ಚೆನ್ನೈನಲ್ಲಿ ಚಿಕನ್ ಬಿರಿಯಾನಿ

ಚುನಾವಣಾ ವೆಚ್ಚ ನಿಯಂತ್ರಣ/ ಪ್ರಚಾರಕ್ಕೆ ಬಳಸುವ ಸರಕು-ಸೇವೆಗಳಿಗೆ ದರ ನಿಗದಿಪಡಿಸಿದ ಆಯೋಗ Read More »

ಒಂದೇ ಕಾಲಲ್ಲಿ ಸಿಕ್ಕಿಂನ ಮೌಂಟ್ ರೆನಾಕ್ ಶಿಖರ ಏರಿ ಉದಯ್ ಕುಮಾರ್

ಸಮಗ್ರ ನ್ಯೂಸ್: 16,500 ಅಡಿ ಎತ್ತರದ ಸಿಕ್ಕಿಂನ ಮೌಂಟ್ ರೆನಾಕ್ ಶಿಖರವನ್ನು, ಕೋಲ್ಕತಾದ ಬೆಲ್ಫಾರಿಯಾ ನಿವಾಸಿಯಾದ ಉದಯ್ ಕುಮಾರ್ ಒಂದೇ ಕಾಲಲ್ಲಿ ಏರಿ ಸಾಧನೆ ಮಾಡಿದ್ದಾರೆ. ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗ ಮಾಡುತ್ತಿರುವ ಉದಯ್ ಕುಮಾರ್, 2015ರ ರೈಲು ಅಪಘಾತದಲ್ಲಿ ತಮ್ಮ ಎಡಗಾಲು ಮೊಣಕಾಲಿನವರೆಗೂ ಹಾಗೂ ಬಲಗಾಲಿನ ನಾಲ್ಕು ಬೆರಳಗಳನ್ನು ಕಳೆದುಕೊಂಡಿದ್ದರು. ಇದರಿಂದ ಕುಮಾರ್ ಶೇ.91 ರಷ್ಟು ಅಂಗವಿಕಲತೆಯನ್ನು ಎದುರಿಸುತ್ತಿದ್ದರು. ಇದರ ಹೊರತಾಗಿಯೂ ಒಂದೇ ಕಾಲಿನಲ್ಲಿ ಶಿಖರವನ್ನು ಏರಿ ಸಾಧನೆ ಮಾಡಿದ್ದಾರೆ. ಪ್ರಸ್ತುತ ವಿಶ್ವದ ಅತಿ ಎತ್ತರದ ಶಿಖರವಾದ

ಒಂದೇ ಕಾಲಲ್ಲಿ ಸಿಕ್ಕಿಂನ ಮೌಂಟ್ ರೆನಾಕ್ ಶಿಖರ ಏರಿ ಉದಯ್ ಕುಮಾರ್ Read More »

ಹಣಕಾಸಿನ ವರ್ಷ ಅಂತ್ಯ ಹಿನ್ನೆಲೆ/ ನಾಳೆಯು ಬಾಗಿಲು ತೆರೆಯಲಿದೆ ಜೀವ ವಿಮಾ ನಿಗಮ (ಎಲ್‍ಐಸಿ)

ಸಮಗ್ರ ನ್ಯೂಸ್: ದೇಶದಾದ್ಯಂತ ವಾರಾಂತ್ಯದ ದಿನಗಳಾದ ಮಾ.31 ಭಾನುವಾರ ಗ್ರಾಹಕರಿಗೆ ಸೇವೆಗಾಗಿ ತನ್ನ ಕಚೇರಿಗಳನ್ನು ತೆರೆಯಲು ಜೀವ ವಿಮಾ ನಿಗಮ (ಎಲ್‍ಐಸಿ) ಸಂಸ್ಥೆಯು ತೀರ್ಮಾನಿಸಿದೆ. ಪ್ರಸಕ್ತ ಹಣಕಾಸಿನ ವರ್ಷ ಅಂತ್ಯ ಹಿನ್ನೆಲೆ ತೆರಿಗೆ ಉಳಿಕೆ ಚಟುವಟಿಕೆಗಳನ್ನು ಪೂರ್ಣಗೊಳಿಸಿಕೊಳ್ಳಲು ತೆರಿಗೆದಾರರಿಗೆ ಅನುಕೂಲ ಕಲ್ಪಿಸಲು ಎಲ್‍ಐಸಿ ಸಂಸ್ಥೆ ಈ ನಿರ್ಧಾರ ಕೈಗೊಂಡಿದೆ. ಯಾವುದೇ ಆರ್ಥಿಕ ವಹಿವಾಟಿನ ತೊಂದರೆಯಾಗದಂತೆ, ಹಣಕಾಸಿನ ವಷಾರ್ಂತ್ಯದಲ್ಲಿ ವಿಮಾದಾರರಿಗೆ ತನ್ನ ವಲಯ ಮತ್ತು ವ್ಯಾಪ್ತಿಯ ಎಲ್ಲ ಕಚೇರಿಗಳು ಮಾ. 31 ರಂದು ಸಾಮಾನ್ಯ ಔದ್ಯೋಗಿಕ ಕೆಲಸದ ಅವಧಿಯಂತೆ

ಹಣಕಾಸಿನ ವರ್ಷ ಅಂತ್ಯ ಹಿನ್ನೆಲೆ/ ನಾಳೆಯು ಬಾಗಿಲು ತೆರೆಯಲಿದೆ ಜೀವ ವಿಮಾ ನಿಗಮ (ಎಲ್‍ಐಸಿ) Read More »

ನಾಗಾಲ್ಯಾಂಡ್‍ನಲ್ಲಿ ಪ್ರತ್ಯೇಕ ರಾಜ್ಯದ ಬೇಡಿಕೆ/ ಈಸ್ಟರ್ನ್ ನಾಗಾಲ್ಯಾಂಡ್ ಪೀಪಲ್ಸ್ ಆರ್ಗನೈಸೇಷನ್ ಗುಪ್ತ ಸಭೆ

ಸಮಗ್ರ ನ್ಯೂಸ್: ನಾಗಾಲ್ಯಾಂಡ್‍ನಲ್ಲಿ ಚುನಾವಣೆ ಹೊಸ್ತಿಲಿನಲ್ಲಿಯೇ ಈಸ್ಟರ್ನ್ ನಾಗಾಲ್ಯಾಂಡ್ ಪೀಪಲ್ಸ್ ಆರ್ಗನೈಸೇಷನ್ (ಇಎನ್‍ಪಿಒ) ತುಯೆನ್ಸಾಂಗ್‍ನಲ್ಲಿ ತಮ್ಮ ಪ್ರಾಂತ್ಯದ 20 ಶಾಸಕರು ಹಾಗೂ ಏಕೈಕ ಸಂಸದರ ಜೊತೆ ಇಎನ್‍ಪಿಒ ಗುಪ್ತ ಸಭೆ ನಡೆಸಿದ್ದು, ನಮ್ಮ ಪ್ರತ್ಯೇಕ ರಾಜ್ಯ ಬೇಡಿಕೆ ಈಡೇರುವ ತನಕ ಚುನಾವಣೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂಬ ನಿರ್ಧಾರಕ್ಕೆ ತಾವು ಬದ್ಧವಾಗಿದ್ದೇವೆ ಎಂದು ಸ್ಪಷ್ಟಪಡಿಸಿದೆ. ಇಎನ್‍ಪಿಒ ಉಪಾಧ್ಯಕ್ಷ ಡಬ್ಲ್ಯು. ಬೆಂಡಾಂಗ್ ಚಾಂಗ್, ಕೇಂದ್ರ ಸರ್ಕಾರವು ನಮ್ಮ ಬೇಡಿಕೆ ಈಡೇರಿಸುವ ತನಕ ಲೋಕಸಭಾ ಚುನಾವಣೆಯಿಂದ ದೂರ ಉಳಿಯಲಿದ್ದೇವೆ, ಅಲ್ಲದೆ ಚುನಾವಣಾ ಪ್ರಚಾರ

ನಾಗಾಲ್ಯಾಂಡ್‍ನಲ್ಲಿ ಪ್ರತ್ಯೇಕ ರಾಜ್ಯದ ಬೇಡಿಕೆ/ ಈಸ್ಟರ್ನ್ ನಾಗಾಲ್ಯಾಂಡ್ ಪೀಪಲ್ಸ್ ಆರ್ಗನೈಸೇಷನ್ ಗುಪ್ತ ಸಭೆ Read More »

ಎಲ್. ಕೆ ಅಡ್ವಾಣಿ ಸೇರಿ ಐವರಿಗೆ ‘ಭಾರತ ರತ್ನ’ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ

ಸಮಗ್ರ ನ್ಯೂಸ್: ಬಿಜೆಪಿಯ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಸೇರಿದಂತೆ ಐವರಿಗೆ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪ್ರತಿಷ್ಠಿತ ‘ಭಾರತ ರತ್ನ’ವನ್ನು ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರದಾನ ಮಾಡಿದರು. ಚೌಧರಿ ಚರಣ್ ಸಿಂಗ್, ಪಿ.ವಿ.ನರಸಿಂಹ ರಾವ್, ಕರ್ಪೂರಿ ಠಾಕೂರ್ ಮತ್ತು ಎಂ.ಎಸ್.ಸ್ವಾಮಿನಾಥನ್ ಅವರಿಗೆ ಮರಣೋತ್ತರವಾಗಿ ಪ್ರಶಸ್ತಿ ನೀಡಲಾಯಿತು. ನರಸಿಂಹರಾವ್ ಅವರ ಪುತ್ರ ಪಿ.ವಿ.ಪ್ರಭಾಕರ್ ರಾವ್ ಅವರು ತಮ್ಮ ತಂದೆಗೆ ಪ್ರದಾನ ಮಾಡಿದ ಪ್ರಶಸ್ತಿಯನ್ನು ರಾಷ್ಟ್ರಪತಿಗಳಿಂದ ಸ್ವೀಕರಿಸಿದರು. ಚೌಧರಿ ಚರಣ್ ಸಿಂಗ್ ಅವರ ಮೊಮ್ಮಗ ಜಯಂತ್

ಎಲ್. ಕೆ ಅಡ್ವಾಣಿ ಸೇರಿ ಐವರಿಗೆ ‘ಭಾರತ ರತ್ನ’ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ Read More »