ಕೇರಳದಲ್ಲಿ ಆನೆ ತುಳಿತಕ್ಕೆ ಮಾವುತ ಸಾವು

ಸಮಗ್ರ ನ್ಯೂಸ್ : ಆನೆ ತುಳಿತದಿಂದ ಮಾವುತನೋರ್ವ ಸಾವನ್ನಪ್ಪಿದ ಘಟನೆ ಕೇರಳದ ವೈಕೋಮ್ನಲ್ಲಿ ನಡೆದಿದೆ.

Ad Widget ... ..

ಪುತ್ತುಪ್ಪಲ್ಲಿ ಮೂಲದ 26 ವರ್ಷದ ಅರವಿಂದ್ ಎಂಬಾತ ಸಾವನ್ನಪ್ಪಿದ್ದಾರೆ. ಟಿವಿ ಪುರಂನ ಶ್ರೀರಾಮ ಸ್ವಾಮಿ ದೇವಸ್ಥಾನದಲ್ಲಿ ಬುಧವಾರ ರಾತ್ರಿ 9 ಗಂಟೆಗೆ ಆನೆ ಮಾವುತನ ಮೇಲೆ ದಾಳಿ ಮಾಡಿದೆ. ಕುಂಜುಲಕ್ಷ್ಮೀ ಎಂಬ ಆನೆಯು ಅರವಿಂದ್ನನ್ನು ಸೊಂಡಿಲಿನಲ್ಲಿ ಬಿಸಿ ಬಳಿಕ ಕಾಲಿನಲ್ಲಿ ತುಳಿದು ಹಾಕಿದೆ.

Ad Widget

ದೃಶ್ಯದಲ್ಲಿ ಕಂಡುಬಂದಂತೆ ಅರವಿಂದ್ ಆನೆಯ ಕಾಲಿನ ಬಳಿ ಹೋದಾಗ ಕೋಪಗೊಂಡು ದಾಳಿ ಮಾಡಿ, ಸೊಂಡಿನಲ್ಲಿ ಬೀಸಿ ನೆಲಕ್ಕೆ ಬಡಿದಿದೆ. ಈ ವೇಳೆ ಅಲ್ಲೇ ಇದ್ದ ಮತ್ತೋರ್ವ ಮಾವುತ ಅರವಿಂದ್ನನ್ನು ರಕ್ಷಿಸಲು ಮುಂದಾಗಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಿದ್ದರು ಅರವಿಂದ್ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.

Leave a Comment

Your email address will not be published. Required fields are marked *