ದೇಶ-ವಿದೇಶ

ಅಪ್ಘಾನ್ ಇನ್ನೂ ನಮ್ಮ ಕೈಯಲ್ಲಿದೆ| ತಾಲಿಬಾನ್ ಗೆ ಮಣಿಯಲ್ಲ – ಉಪಾಧ್ಯಕ್ಷ ಸಾಲೆಹ್

ಕಾಬೂಲ್: ತಾಲಿಬಾಲಿಗಳು ರಾಜಧಾನಿ ಕಾಬೂಲ್ ಸೇರಿದಂತೆ ಬಹುತೇಕ ಅಫ್ಘಾನಿಸ್ತಾನವನ್ನೇ ವಶಕ್ಕೆ ಪಡೆದುಕೊಂಡಿದೆ. ಕಾಬೂಲ್​ನಿಂದ ಅಲ್ಲಿನ ಅಧ್ಯಕ್ಷ ಅಶ್ರಫ್ ಘನಿ ಸೇರಿದಂತೆ ಬಹುತೇಕ ನಾಯಕರು ಪಲಾಯನಗೈದಿದ್ದಾರೆ. ಅಶ್ರಫ್ ಘನಿ ದೇಶವನ್ನೇ ತೊರೆದಿದ್ದಾರೆ. ಇದೆಲ್ಲದರ ಬೆನ್ನಲ್ಲೇ ತಾಲಿಬಾನಿಗಳು ಸರ್ಕಾರ ರಚಿಸಲು ಮುಂದಾಗಿದ್ದಾರೆ. ಹೀಗಿರುವಾಗಲೂ ಅಫ್ಘಾನಿಸ್ತಾನದ ಉಪಾಧ್ಯಕ್ಷ ಅಮ್ರುಲ್ಲಾಹ್ ಸಾಲೆಹ್​ ಈಗಲೂ ಸರ್ಕಾರ ನಮ್ಮ ಕೈನಲ್ಲಿದೆ ಎಂಬಂತೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದನ್ನು ಮಾಡಿದ್ದಾರೆ. ಅಫ್ಘಾನಿಸ್ತಾನದ ಸಂವಿಧಾನದ ಪ್ರಕಾರ ಅಧ್ಯಕ್ಷರ ಗೈರು, ಪಲಾಯನ, ರಾಜೀನಾಮೆ ಅಥವಾ ಸಾವಿನ ನಂತರ ಉಪಾಧ್ಯಕ್ಷರು ಅಧ್ಯಕ್ಷರಾಗಿ […]

ಅಪ್ಘಾನ್ ಇನ್ನೂ ನಮ್ಮ ಕೈಯಲ್ಲಿದೆ| ತಾಲಿಬಾನ್ ಗೆ ಮಣಿಯಲ್ಲ – ಉಪಾಧ್ಯಕ್ಷ ಸಾಲೆಹ್ Read More »

‘ನನ್ನ ಕೊಂದರೆ ದೇವರ ಸೇವೆ ಎಂದು ಪರಿಗಣಿಸುತ್ತೇನೆ’- ಅಪ್ಘಾನ್ ಬಿಡಲೊಪ್ಪದ ಹಿಂದೂ ಪೂಜಾರಿ ಮಾತು.

ಕಾಬೂಲ್ : ಅಶ್ರಫ್ ಘನಿ ಅವರ ಆಫ್ಘಾನಿಸ್ತಾನ ಸರ್ಕಾರ ಭಾನುವಾರ ತಾಲಿಬಾನ್ ಗೆ ಶರಣಾಗುತ್ತಿದ್ದಂತೆ, ಅಘಾನಿಸ್ತಾನದಿಂದ ಜನರು ಪರಾರಿಯಾಗುತ್ತಿದ್ದಾರೆ. ಆದರೆ ರತ್ತನ್ ನಾಥ್ ದೇವಾಲಯದ ಉಸ್ತುವಾರಿವಹಿಸಿರುವ ಹಿಂದೂ ಪೂಜಾರಿಯೊಬ್ಬರು ಕಾಬೂಲ್ ನಿಂದ ಸ್ಥಳಾಂತರಗೊಳ್ಳಲು ನಿರಾಕರಿಸಿದ್ದಾರೆ. ಕಾಬೂಲ್ ನ ರತ್ತನ್ ನಾಥ್ ದೇವಾಲಯದ ಪುರೋಹಿತ ಪಂಡಿತ್ ರಾಜೇಶ್ ಕುಮಾರ್ ಅವರು, ‘ಕೆಲವು ಹಿಂದೂಗಳು ನನ್ನನ್ನು ಕಾಬೂಲ್ ನಿಂದ ಹೊರಹೋಗುವಂತೆ ಒತ್ತಾಯಿಸಿದ್ದಾರೆ ಮತ್ತು ನನ್ನ ಪ್ರಯಾಣ ಮತ್ತು ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲು ಮುಂದೆ ಬಂದಿದ್ದಾರೆ’ ಎಂದು ಹೇಳಿದರು. ಆದರೆ ನನ್ನ

‘ನನ್ನ ಕೊಂದರೆ ದೇವರ ಸೇವೆ ಎಂದು ಪರಿಗಣಿಸುತ್ತೇನೆ’- ಅಪ್ಘಾನ್ ಬಿಡಲೊಪ್ಪದ ಹಿಂದೂ ಪೂಜಾರಿ ಮಾತು. Read More »

ಅಫ್ಘಾನಿಸ್ತಾನದಲ್ಲಿ ಪ್ರಬಲ ಭೂಕಂಪ| ತಾಲಿಬಾನ್ ಗೆ ಆಘಾತ|

ಕಾಬೂಲ್: ತಾಲಿಬಾನ್ ಉಗ್ರರ ಹಿಡಿತಕ್ಕೆ ಸಿಲುಕಿದ ಆಫ್ಘಾನಿಸ್ತಾನಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಉಗ್ರರ ಹಿಡಿತಕ್ಕೆ ಸಿಲುಕಿದಾಗಲೇ ನಿನ್ನೆ ಆಫ್ಘಾನಿಸ್ತಾನದ ಸೇನಾ ವಿಮಾನ ಪತನವಾಗಿತ್ತು. ಇಂದು ಬೆಳಗಿನ ಜಾವ ಆಫ್ಘಾನಿಸ್ತಾನದ ಫೈಜಾಬಾದ್ ಆಗ್ನೇಯ ಪ್ರದೇಶದಲ್ಲಿ 5.5 ತೀವ್ರತೆಯ ಭೂಕಂಪ ಸಂಭವಿಸಿದೆ. ಫೈಜಾಬಾದ್ ಆಗ್ನೇಯಕ್ಕೆ 83 ಕಿಲೋಮೀಟರ್ ದೂರದ ಪ್ರದೇಶದಲ್ಲಿ ಭೂಕಂಪ ಸಂಭವಿಸಿರುವುದಾಗಿ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ. ಆಗಸ್ಟ್ 15 ರಂದು ಆಫ್ಘಾನಿಸ್ತಾನ ಮತ್ತು ಕಜಕಿಸ್ತಾನ ಭಾಗದಲ್ಲಿ 5.1 ತೀವ್ರತೆಯ ಭೂಕಂಪ ಸಂಭವಿಸಿತ್ತು. ಇಂದು ಬೆಳಗ್ಗೆ 6 ಗಂಟೆಯ

ಅಫ್ಘಾನಿಸ್ತಾನದಲ್ಲಿ ಪ್ರಬಲ ಭೂಕಂಪ| ತಾಲಿಬಾನ್ ಗೆ ಆಘಾತ| Read More »

ಮಾತು ಕೊಟ್ಟಂತೆ ನಡೆದುಕೊಂಡ ಪ್ರಧಾನಿ ಸಿಂಧು ಜೊತೆ ಐಸ್‍ಕ್ರೀಂ ಸವಿದ ಮೋದಿ

ನವದೆಹಲಿ: ಟೋಕಿಯೋ ಒಲಿಂಪಿಕ್ಸ್‍ನಲ್ಲಿ ಭಾಗವಹಿಸಿ ಬಂದ ನಂತರ ನಿಮ್ಮೊಂದಿಗೆ ಐಸ್‍ಕ್ರೀಂ ಸೇವಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ ಸಿಂಧು ಅವರಿಗೆ ಮಾತುಕೊಟ್ಟಿದ್ದರು. ಇದೀಗ ಆ ಮಾತನ್ನು ಪ್ರಧಾನಿ ಮೋದಿ ಉಳಿಸಿಕೊಂಡಿದ್ದಾರೆ. ಟೋಕಿಯೋ ಒಲಿಂಪಿಕ್ಸ್‍ನಲ್ಲಿ ಭಾಗವಹಿಸಿದ ಭಾರತೀಯ ಕ್ರೀಡಾಪಟುಗಳಿಗೆ ಔತಣಕೂಟವನ್ನು ಮೋದಿ ತಮ್ಮ ನಿವಾಸದಲ್ಲಿ ಆಯೋಜಿಸಿದ್ದರು. ಇದೇ ವೇಳೆ ಒಲಿಂಪಿಕ್ಸ್‍ನಲ್ಲಿ ಕಂಚಿನ ಪದಕ ಗೆದ್ದ ಸಿಂಧು ಜೊತೆ ಕೂತು ಐಸ್‍ಕ್ರೀಂ ಸೇವಿಸುತ್ತ ಕೆಲಹೊತ್ತು ಮಾತುಕತೆ ನಡೆಸಿದ್ದಾರೆ. ಔತಣಕೂಟದಲ್ಲಿ ಟೋಕಿಯೋ ಒಲಿಂಪಿಕ್ಸ್‍ನಲ್ಲಿ ಭಾಗವಹಿಸಿದ ಕ್ರೀಡಾಪಟುಗಳೆಲ್ಲರೂ ಭಾಗವಹಿಸಿದ್ದರು. ಅವರೆಲ್ಲರೊಂದಿಗೆ

ಮಾತು ಕೊಟ್ಟಂತೆ ನಡೆದುಕೊಂಡ ಪ್ರಧಾನಿ ಸಿಂಧು ಜೊತೆ ಐಸ್‍ಕ್ರೀಂ ಸವಿದ ಮೋದಿ Read More »

ಜೀವ ರಕ್ಷಣೆಗೆ ತಾಯ್ನಾಡು ತೊರೆಯುತ್ತಿರುವ ಅಪ್ಘನ್ನರು| ಬಸ್ ಏರಿದಂತೆ ವಿಮಾನ ಏರುತ್ತಿರುವ ಜನ| ಟಯರ್ ಹಿಡಿದು ಪ್ರಯಾಣ ಮಾಡಿದ ಮೂರು ಜನ ಸಾವು

ಕಾಬೂಲ್: ತಾಲಿಬಾನ್ ಉಗ್ರರು ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ಬೆನ್ನಲ್ಲೇ ನೂರಾರು ನಿವಾಸಿಗಳ ತಾಯ್ನಾಡಾದ ಅಫ್ಘಾನಿಸ್ತಾನವನ್ನು ತೊರೆಯಲು ಆರಂಭಿಸಿದ್ದಾರೆ, ಇದೇ ವೇಳೆ ವಿಮಾನಕ್ಕೆ ಏರುತ್ತಿದ್ದಂತೆ ಮೂರು ಜನ ಪ್ರಯಾಣಿಕರು ಪ್ರಾಣ ಕಳೆದುಕೊಂಡಿದ್ದಾರೆ. ವಿಮಾನ ನಿಲ್ದಾಣಗಳಲ್ಲಿ ವಿಮಾನ ಹತ್ತಲು ನಿಯಮಗಳು ಇರುತ್ತದೆ. ದಾಖಲೆಗಳನ್ನು ಪರಿಶೀಲಿಸಿದ ಬಳಿಕ ವಿಮಾನ ಹತ್ತಲು ಅನುಮತಿ ನೀಡಲಾಗುತ್ತದೆ. ಆದರೆ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಬಸ್ ಹತ್ತಲು ಪ್ರಯಾಣಿಕರು ಹೇಗೆ ಮುಗಿಬೀಳುತ್ತಾರೋ ಆ ರೀತಿಯಾಗಿ ಒಂದು ಏಣಿ ಮೂಲಕ ವಿಮಾನ ಹತ್ತಲು ಪ್ರಯತ್ನಿಸಿದ್ದಾರೆ. ಸುರಕ್ಷಿತ ಸ್ಥಳ ತಲುಪಲು ವಿಮಾನ

ಜೀವ ರಕ್ಷಣೆಗೆ ತಾಯ್ನಾಡು ತೊರೆಯುತ್ತಿರುವ ಅಪ್ಘನ್ನರು| ಬಸ್ ಏರಿದಂತೆ ವಿಮಾನ ಏರುತ್ತಿರುವ ಜನ| ಟಯರ್ ಹಿಡಿದು ಪ್ರಯಾಣ ಮಾಡಿದ ಮೂರು ಜನ ಸಾವು Read More »

ಪ್ರಬಲ ಭೂಕಂಪಕ್ಕೆ ಹೈಟಿ ತತ್ತರ| ತುರ್ತು ಪರಿಸ್ಥಿತಿ ಘೋಷಿಸಿದ ಸರ್ಕಾರ|

ಹೈಟಿ : ದ್ವೀಪ ರಾಷ್ಟ್ರ ಹೈಟಿಯ ಕರಾವಳಿ ಪ್ರದೇಶದಲ್ಲಿ ಶನಿವಾರ ಸುನಾಮಿ ಭೀತಿಯ ನಡುವೆಯೇ 7.2 ರಷ್ಟು ತೀವ್ರತೆಯಷ್ಟು ಭೂಕಂಪ ಸಂಭವಿಸಿದ್ದು, ಮೃತಪಟ್ಟವರ ಸಂಖ್ಯೆ 724 ಕ್ಕೇರಿದೆ ಎಂಬ ಆತಂಕಕಾರಿ ಮಾಹಿತಿ ಹೊರಬಿದ್ದಿದೆ. ಕೆರಿಬಿಯನ್ ರಾಷ್ಟ್ರ ಹೈಟಿಯಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ಸುಮಾರು 724 ಜನರು ಮೃತಪಟ್ಟಿದ್ದು, ಸಾವಿರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ 724 ಕ್ಕೇರಿದ್ದು, ಅವಶೇಷಗಳಡಿ ಸಿಲುಕಿರುವರಿಗಾಗಿ ಕಾರ್ಯಾಚರಣೆ ಮುಂದುವರೆದಿದೆ. ಹೈಟಿಯಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಅಲ್ಲಿನ ಪ್ರಧಾನಿ ಹೆನ್ರಿ ಹೈಟಿಯಲ್ಲಿ ಒಂದು

ಪ್ರಬಲ ಭೂಕಂಪಕ್ಕೆ ಹೈಟಿ ತತ್ತರ| ತುರ್ತು ಪರಿಸ್ಥಿತಿ ಘೋಷಿಸಿದ ಸರ್ಕಾರ| Read More »

ತಾಲಿಬಾನ್‍ಗೆ ಸಂಪೂರ್ಣ ಶರಣಾದ ಅಫ್ಘನ್ ಸರ್ಕಾರ| ಕಾಬೂಲ್ ವಶಗೈದ ತಾಲಿಬಾನಿಗಳು

ಕಾಬೂಲ್: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಟ್ಟಹಾಸ ಮುಂದುವರೆದಿದ್ದು, ರಾಜಧಾನಿ ಕಾಬೂಲ್‍ಗೆ ತಾಲಿಬಾನಿಗಳು ಪ್ರವೇಶ ಪಡೆದು ಸಂಪೂರ್ಣ ನಗರವನ್ನು ಇಂದು ವಶಪಡಿಸಿಕೊಂಡಿದ್ದಾರೆ. ಈ ಮೂಲಕ ಅಫ್ಘನ್ ಸರ್ಕಾರ ತಾಲಿಬಾನ್ ಶರಣಾಗಿದೆ. ಹಲವು ದಿನಗಳಿಂದ ತಾಲಿಬಾನ್ ಹಾಗೂ ಅಫ್ಘನ್ ಸರ್ಕಾರಗಳ ನಡುವೆ ಕಾದಾಟ ನಡೆಯುತ್ತಿತ್ತು. ಇದಲ್ಲದೆ ಅಘ್ಫಾನಿಸ್ತಾನದ ಎರಡನೇ ಅತ್ಯಂತ ದೊಡ್ಡ ನಗರ ಕಂದಹಾರ್ ಹಾಗೂ ಲಷ್ಕರ್ ಗಹ್‍ನ್ನು ತಾಲಿಬಾನಿಗಳು ವಶಪಡಿಸಿಕೊಂಡಿದ್ದರು. ಇದೀಗ ತಾಲಿಬಾನಿಗಳು ರಾಜಧಾನಿ ಕಾಬೂಲ್‍ಗೆ ಪ್ರವೇಶಪಡೆದು ಆಫ್ಘನ್ ಸರ್ಕಾರದಿಂದ ಅಧಿಕಾರ ಹಸ್ತಾಂತರ ಮಾಡಿಕೊಂಡಿದೆ. ಶಾಂತಿಯುತವಾಗಿ ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್

ತಾಲಿಬಾನ್‍ಗೆ ಸಂಪೂರ್ಣ ಶರಣಾದ ಅಫ್ಘನ್ ಸರ್ಕಾರ| ಕಾಬೂಲ್ ವಶಗೈದ ತಾಲಿಬಾನಿಗಳು Read More »

ಎತ್ತಣ ಮಾಮರ, ಎತ್ತಣ ಕೋಗಿಲೆ – ವಿದೇಶಿ ಪ್ರೀತಿಗೆ ಸಾಕ್ಷಿಯಾಯಿತು ಭಾರತ – ಇದೊಂದು ಸ್ಪೆಷಲ್ ಲವ್ ಸ್ಟೋರಿ…

ನವದೆಹಲಿ: ಅಫ್ಘಾನಿಸ್ತಾನದ ಯುವಕ ಹಾಗೂ ಫ್ರಾನ್ಸ್​ನ ಯುವತಿ ನಡುವೆ ಭಾರತದಲ್ಲಿ ಪ್ರೀತಿ ಚಿಗುರಿ ಕೊನೆಗೆ ಇಲ್ಲಿಯೇ ಹೈಕೋರ್ಟ್​ನಿಂದ ಇವರ ಲವ್​ ಸ್ಟೋರಿ ಸುಖಾಂತ್ಯಗೊಂಡಿರುವ ಘಟನೆ ನಡೆದಿದೆ. ಇವರಿಬ್ಬರೂ ವೈದ್ಯಕೀಯ ಚಿಕಿತ್ಸೆಗಾಗಿ ಭಾರತಕ್ಕೆ ಬಂದ ಇಬ್ಬರು ಆಸ್ಪತ್ರೆಯಲ್ಲಿ ಭೇಟಿಯಾಗಿದ್ದಾರೆ. ಮಾತಿಗೆ ಮಾತು ಬೆಳೆದು, ಸಲುಗೆಯಾಗಿ, ಅದು ಪ್ರೀತಿಗೆ ತಿರುಗಿ ಮದುವೆಯವರೆಗೂ ಬಂದಿದ್ದಾರೆ. ನಂತರ ದೆಹಲಿಯ ಮಸೀದಿಯೊಂದರಲ್ಲಿ ವಿವಾಹವಾಗಿದ್ದರು. ಆದರ ದುರದೃಷ್ಟವಶಾತ್​ ಇವರು ವಾಪಸ್​ ಹೋಗಲು ಆಗಲಿಲ್ಲ. ಇದಕ್ಕೆ ಕಾನೂನು ಅಡಚಣೆ ಉಂಟಾಯಿತು. ಏಕೆಂದರೆ ಈ ವೇಳೆಗಾಗಲೇ ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ

ಎತ್ತಣ ಮಾಮರ, ಎತ್ತಣ ಕೋಗಿಲೆ – ವಿದೇಶಿ ಪ್ರೀತಿಗೆ ಸಾಕ್ಷಿಯಾಯಿತು ಭಾರತ – ಇದೊಂದು ಸ್ಪೆಷಲ್ ಲವ್ ಸ್ಟೋರಿ… Read More »

ದೇಶಾದ್ಯಂತ 75 ನೇ ಸ್ವಾತಂತ್ರ್ಯದಿನ ಸಂಭ್ರಮ| ಕೆಂಪುಕೋಟೆಯಲ್ಲಿ ಮೇಳೈಸಿದ ತ್ರಿವರ್ಣ ರಂಗು|

ನವದೆಹಲಿ : ದೇಶಾದ್ಯಂತ 75ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ ಮನೆ ಮಾಡಿದೆ. ಎಲ್ಲೆಡೆ ತ್ರಿವರ್ಣ ರಂಗು ಕಂಗೊಳಿಸುತ್ತಿದೆ. ದೇಶದ ಶಕ್ತಿಕೇಂದ್ರ ಕೆಂಪುಕೋಟೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಬೆಳಗ್ಗೆ 7.30ಕ್ಕೆ ತ್ರಿವರ್ಣ ಧ್ವಜ ಹಾರಿಸುವ ಮೂಲಕ 75 ನೇ ಸ್ವಾತಂತ್ರ್ಯೋತ್ಸವ ಆಚರಿಸಿದ್ದಾರೆ. ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿ ಸತತ 8ನೇ ಬಾರಿ ಕೆಂಪು ಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿದ್ದಾರೆ. ಈ ಮೂಲಕ ಐತಿಹಾಸಿಕ ಸ್ಮಾರಕ ರೆಡ್ ಫೋರ್ಟ್ನಲ್ಲಿ 8 ಬಾರಿ ತ್ರಿವರ್ಣ ಧ್ವಜ ಹಾರಿಸಿದ ಮೊದಲ ಕಾಂಗ್ರೆಸ್ಸೇತರ

ದೇಶಾದ್ಯಂತ 75 ನೇ ಸ್ವಾತಂತ್ರ್ಯದಿನ ಸಂಭ್ರಮ| ಕೆಂಪುಕೋಟೆಯಲ್ಲಿ ಮೇಳೈಸಿದ ತ್ರಿವರ್ಣ ರಂಗು| Read More »

ಸುವರ್ಣ ಸ್ವಾತಂತ್ರ್ಯವಿದು, ನಾವು ನಿಜವಾಗಿಯೂ ಅನುಭವಿಸಿದ್ದೇವಾ? ಇದೇನಾ ಸ್ವಾತಂತ್ರ್ಯ?

ನಮ್ಮೆಲ್ಲಾ ಸಮಸ್ತ ಓದುಗರಿಗೆ ಸುವರ್ಣ ಸ್ವಾತಂತ್ರ್ಯ ದಿನದ ಶುಭಾಶಯಗಳು ಪ್ರೀತಿಯ ಭಾರತೀಯ ಬಂಧುಗಳೇ…. ಸ್ವಾತಂತ್ರ್ಯ ನಮಗೆಲ್ಲರಿಗೂ ಹೆಮ್ಮೆಯ ದಿನ. ಬ್ರಿಟೀಷರ ಸೊಕ್ಕನ್ನು ಮುರಿಯಲು ಮತ್ತು ನಮ್ಮ ದೇಶದ ಸಲುವಾಗಿ ಪ್ರಾಣ ತ್ಯಾಗ ಮಾಡಿದ ನಿಜವಾದ ಹೀರೋಗಳನ್ನು ನೆನೆದು ಭಾವುಕರಾಗುವ ಕ್ಷಣ ಈ ದಿನ. ಪ್ರತೀ ವರ್ಷ ನಾವು ಇದನ್ನೇ ಮಾಡುತ್ತಿದ್ದೇವೆಯೇ ಹೊರತು ಮುಂದಿನದ್ದನ್ನು ಯೋಚಿಸಲು ಹೋಗಲಾರೆವು. ಯಾಕೆಂದರೆ ನಮಗೆ ಗೊತ್ತಿರುವುದೇ ಇಷ್ಟು. ಅವರು ಅಷ್ಟೆಲ್ಲ ಕಷ್ಟಪಟ್ಟು ನಮಗೆ ಸ್ವಾತಂತ್ರ್ಯ ತಂದು ಕೊಟ್ಟರೆ ನಾವು, ನೀವು ಮಾಡುತ್ತಿರುವುದು ಏನು?

ಸುವರ್ಣ ಸ್ವಾತಂತ್ರ್ಯವಿದು, ನಾವು ನಿಜವಾಗಿಯೂ ಅನುಭವಿಸಿದ್ದೇವಾ? ಇದೇನಾ ಸ್ವಾತಂತ್ರ್ಯ? Read More »