ದೇಶ-ವಿದೇಶ

ಕೇಂದ್ರ ಬಜೆಟ್, ಗರಿಗೆದರಿದ ನಿರೀಕ್ಷೆ| ಮಧ್ಯಮ ವರ್ಗದ ಕೈಹಿಡಿಯುತ್ತಾರಾ ಮೋದಿ?

ಸಮಗ್ರ ನ್ಯೂಸ್ ಡೆಸ್ಕ್: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಫೆ.1ರ ಬೆಳಿಗ್ಗೆ 11 ಗಂಟೆಗೆ 2022-23ನೇ ಸಾಲಿನ ಬಜೆಟ್ ಮಂಡಿಸಲಿದ್ದಾರೆ. ಕೋವಿಡ್ ಸಾಂಕ್ರಾಮಿಕದಿಂದ ನಲುಗಿದ್ದ ದೇಶದ ಆರ್ಥಿಕತೆ, ಕೃಷಿ ವಲಯ, ಉದ್ಯೋಗ ವಲಯ ಸೇರಿದಂತೆ ನಾನಾ ವರ್ಗಗಳಿಗೆ ಬಜೆಟ್ ಮೇಲೆ ಸಾಕಷ್ಟುನಿರೀಕ್ಷೆಯಿದೆ. ಇನ್ನು ಬಜೆಟ್ ಮಂಡನೆ ಹಿನ್ನೆಲೆಯಲ್ಲಿ ಜ.31 ರಂದು ಸಂಸತ್ತಿನಲ್ಲಿ ಆರ್ಥಿಕ ಸಮೀಕ್ಷಾ ವರದಿಯನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಿದ್ದಾರೆ. ಕೇಂದ್ರ ಬಜೆಟ್ ನೇರಪ್ರಸಾರ ಇಲ್ಲಿ ವೀಕ್ಷಿಸಿ… ಕೃಪೆ: ಸಂಸತ್ […]

ಕೇಂದ್ರ ಬಜೆಟ್, ಗರಿಗೆದರಿದ ನಿರೀಕ್ಷೆ| ಮಧ್ಯಮ ವರ್ಗದ ಕೈಹಿಡಿಯುತ್ತಾರಾ ಮೋದಿ? Read More »

ಇಂದು ಕೇಂದ್ರ ಬಜೆಟ್| ಆರ್ಥಿಕತೆಗೆ ಬೂಸ್ಟರ್ ಡೋಸ್ ನೀಡ್ತಾರಾ ನಿರ್ಮಲಾ ಮೇಡಂ?

ಸಮಗ್ರ ನ್ಯೂಸ್ ಡೆಸ್ಕ್: ಕೊರೊನಾ ಮೂರನೇ ಅಲೆಯ ಮಧ್ಯೆ ಇಂದು ಕೇಂದ್ರ ಬಜೆಟ್ ಮಂಡನೆಯಾಗುತ್ತಿದೆ. ಕೊರೊನಾದಿಂದ ತಗ್ಗಿರುವ ಆರ್ಥಿಕತೆಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಲಿರುವ ಬಜೆಟ್ ಉತ್ತೇಜನ ನೀಡುತ್ತದೇಯೇ ಎಂಬ ಕುತೂಹಲ ಮೂಡಿದೆ. ನಿರ್ಮಲಾ ಸೀತಾರಾಮನ್ ಇಂದು 4ನೇ ಬಾರಿ ಬಜೆಟ್ ಮಂಡಿಸುತ್ತಿದ್ದು, ಎಲ್ಲರ ಚಿತ್ತ ಅವರತ್ತ ನೆಟ್ಟಿದೆ. ಕಳೆದ ವರ್ಷ ಮೊದಲ ಬಾರಿಗೆ ಕಾಗದ ರಹಿತವಾಗಿ ಬಜೆಟ್ ಮಂಡಿಸಿದ್ದರು. ಈ ಬಾರಿಯೂ ಅದೇ ಹೊಸ ಸಂಪ್ರದಾಯವನ್ನು ಮುಂದುವರಿಸಲಿದ್ದಾರೆ. ಇಂದು ಬೆಳಗ್ಗೆ 11ರಿಂದ ಸಂಸತ್ತಿನ ಅಧಿವೇಶನದಲ್ಲಿ

ಇಂದು ಕೇಂದ್ರ ಬಜೆಟ್| ಆರ್ಥಿಕತೆಗೆ ಬೂಸ್ಟರ್ ಡೋಸ್ ನೀಡ್ತಾರಾ ನಿರ್ಮಲಾ ಮೇಡಂ? Read More »

ಪ್ರಧಾನಿಗೆ ಮಹಾ ಮೃತ್ಯುಂಜಯ ಹೋಮದ ಪ್ರಸಾದ ನೀಡಿದ ಶಾಸಕ ಪೂಂಜಾ

ಬೆಳ್ತಂಗಡಿ: ಪ್ರಧಾನಿ ಮೋದಿ ಅವರ ಆಯುಷ್ಯ ವೃದ್ಧಿ ಮತ್ತು ಉತ್ತಮ ಆರೋಗ್ಯ ಪ್ರಾಪ್ತಿಗಾಗಿ ಜ. 17ರಂದು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಸಲಾದ ಮಹಾಮೃತ್ಯುಂಜಯ ಹೋಮದ ಪ್ರಸಾದವನ್ನು ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜ ಅವರು ಹೊಸದಿಲ್ಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಿದರು. ಶಾಸಕರು ನವ ಬೆಳ್ತಂಗಡಿ ತಾಲೂಕಿನ ಅಭಿವೃದ್ಧಿ ಕಾರ್ಯಗಳ ಮಾಹಿತಿ ಇರುವ ಕಿರು ಪುಸ್ತಕವನ್ನೂ ಪ್ರಧಾನಿಗೆ ನೀಡಿದರು. ಹೋಮ ನಡೆಸಿದ ಸುರತ್ಕಲ್‌ನ ವೇ|ಮೂ| ನಾಗೇಂದ್ರ ಭಾರದ್ವಾಜ್‌ ಮತ್ತು ಋತ್ವಿಜರು ಈ ಸಂದರ್ಭ ಉಪಸ್ಥಿತರಿದ್ದರು.

ಪ್ರಧಾನಿಗೆ ಮಹಾ ಮೃತ್ಯುಂಜಯ ಹೋಮದ ಪ್ರಸಾದ ನೀಡಿದ ಶಾಸಕ ಪೂಂಜಾ Read More »

ಕೆಂಪೇಗೌಡರಿಗೆ ಒಲಿದ ಆನಂದ್ ಮಹೀಂದ್ರಾ| ಕುಟುಂಬಕ್ಕೆ ಸ್ವಾಗತ ಕೋರಿದ ಆನಂದ್

ಸಮಗ್ರ ನ್ಯೂಸ್ ಡೆಸ್ಕ್: ತುಮಕೂರಿನ ಯುವ ರೈತ ಕೆಂಪೇಗೌಡನನ್ನು ಮಹೀಂದ್ರ ಕಂಪನಿ ಅಧ್ಯಕ್ಷ ಆನಂದ್ ಮಹೀಂದ್ರ ಮಹೀಂದ್ರ ಕುಟುಂಬಕ್ಕೆ ಸ್ವಾಗತಿಸಿದ್ದಾರೆ. ಕೆಂಪೇಗೌಡರ ಬೇಡಿಕೆಯಂತೆ ಬೋಲೆರೋ ವಾಹನ ಅವರ ಕೈ ಸೇರಿದೆ. ಸಾಮಾಜಿಕ ತಾಲತಾಣದಲ್ಲಿ ಸಕ್ರಿಯರಾಗಿರುವ ಆನಂದ್ ಮಹೀಂದ್ರ ಶುಕ್ರವಾರ ರಾತ್ರಿ ಕೆಂಪೇಗೌಡರನ್ನು ಕುಟುಂಬಕ್ಕೆ ಬರಮಾಡಿಕೊಂಡು ಟ್ವೀಟ್ ಮಾಡಿದ್ದಾರೆ. ತುಮಕೂರಿನ ಕಾರು ಶೋ ರೂಂ ಸೇಲ್ಸ್ ಏಜೆಂಟ್‌ಗಳು ರೈತ ಕೆಂಪೇಗೌಡನಿಗೆ ಮಾಡಿದ ಅವಮಾನ ಭಾರೀ ಸುದ್ದಿಯಾಗಿತ್ತು. ರಾಮನಪಾಳ್ಯ ಶೋ ರೂಂನಲ್ಲಿ ನಡೆದ ಘಟನೆ ಬಗ್ಗೆ ಜನವರಿ 25ರಂದು ಮಹೀಂದ್ರ

ಕೆಂಪೇಗೌಡರಿಗೆ ಒಲಿದ ಆನಂದ್ ಮಹೀಂದ್ರಾ| ಕುಟುಂಬಕ್ಕೆ ಸ್ವಾಗತ ಕೋರಿದ ಆನಂದ್ Read More »

ಕೇಂದ್ರ ಮುಖ್ಯ ಆರ್ಥಿಕ ಸಲಹೆಗಾರರಾಗಿ ಡಾ| ವಿ.‌ಅನಂತ ನಾಗೇಶ್ವರನ್

ನವದೆಹಲಿ : ಕೇಂದ್ರ ಸರ್ಕಾರ ಡಾ. ವಿ. ಅನಂತ ನಾಗೇಶ್ವರನ್ ಅವರನ್ನ ಮುಖ್ಯ ಆರ್ಥಿಕ ಸಲಹೆಗಾರರನ್ನಾಗಿ ನೇಮಿಸಿದೆ. ಈ ಕುರಿತು ಹಣಕಾಸು ಸಚಿವಾಲಯ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು, ‘ವಿ ಅನಂತ ನಾಗೇಶ್ವರನ್ ಅವರನ್ನು ಮುಖ್ಯ ಆರ್ಥಿಕ ಸಲಹೆಗಾರರನ್ನಾಗಿ ನೇಮಿಸುತ್ತದೆ’ ಎಂದು ತಿಳಿಸಿದೆ. ಈ ಮೊದಲು ಡಾ. ನಾಗೇಶ್ವರನ್ ಅವರು ಬರಹಗಾರ, ಲೇಖಕ, ಶಿಕ್ಷಕ ಮತ್ತು ಸಲಹೆಗಾರರಾಗಿ ಕೆಲಸ ಮಾಡಿದ್ದಾರೆ. ಅವರು ಭಾರತ ಮತ್ತು ಸಿಂಗಾಪುರದಲ್ಲಿ ಹಲವಾರು ವ್ಯವಹಾರ ಶಾಲೆಗಳು ಮತ್ತು ನಿರ್ವಹಣಾ ಸಂಸ್ಥೆಗಳಲ್ಲಿ ಕಲಿಸಿದ್ದಾರೆ ಮತ್ತು

ಕೇಂದ್ರ ಮುಖ್ಯ ಆರ್ಥಿಕ ಸಲಹೆಗಾರರಾಗಿ ಡಾ| ವಿ.‌ಅನಂತ ನಾಗೇಶ್ವರನ್ Read More »

ಬಾಗ್ದಾದ್ ಏರ್ ಪೋರ್ಟ್ ಮೇಲೆ ರಾಕೆಟ್ ದಾಳಿ

ಬಾಗ್ದಾದ್ (ಇರಾಕ್): ಬಾಗ್ದಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಶುಕ್ರವಾರ ರಾಕೆಟ್‌ಗಳ ದಾಳಿ ನಡೆಸಲಾಗಿದೆ ಎಂದು ಇರಾಕಿನ ಭದ್ರತಾ ಮೂಲವು ತಿಳಿಸಿದೆ. ರನ್‌ವೇ ಬಳಿ ಕನಿಷ್ಠ ಆರು ರಾಕೆಟ್‌ಗಳನ್ನ ಹಾರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಸ್ಥಳೀಯ ಸಮಯ 4:30ಕ್ಕೆ ಈ ದಾಳಿ ನಡೆದಿದೆ ಎನ್ನಲಾಗಿದ್ದು, ಇದು ಪ್ರಬಲ ದಾಳಿಯಾಗಿತ್ತು. ವಿಮಾನ ನಿಲ್ದಾಣದಲ್ಲಿ ನಿಲ್ಲಿಸಿದ್ದ ವಿಮಾನಕ್ಕೆ ಹಾನಿಯಾಗಿದ್ದು, ದಾಳಿಯ ಹಿಂದಿನ ಉದ್ದೇಶ ಮತ್ತು‌ ಇದರ ಹಿಂದೆ ಯಾರಿದ್ದಾರೆ ಅನ್ನುವ ಮಾಹಿತಿ ಕಲೆಹಾಕಲಾಗುತ್ತಿದೆ ಎಂದು‌ ತಿಳಿದುಬಂದಿದೆ.

ಬಾಗ್ದಾದ್ ಏರ್ ಪೋರ್ಟ್ ಮೇಲೆ ರಾಕೆಟ್ ದಾಳಿ Read More »

67 ವರ್ಷಗಳ ಬಳಿಕ ಮತ್ತೆ ಟಾಟಾ ಕಂಪೆನಿ ಕೈ ಸೇರಿದ ಏರ್ ಇಂಡಿಯಾ!

ನವದೆಹಲಿ: 67 ವರ್ಷಗಳ ಬಳಿಕ ಮತ್ತೆ ಏರ್ ಇಂಡಿಯಾವನ್ನು ಟಾಟಾ ಸಂಸ್ಥೆ ಪಡೆದುಕೊಂದಿದೆ. ಇಂದು ವಿಮಾನ ಹೊರಡುವ ಮುನ್ನ ವಿಶೇಷ ಪ್ರಕಟನೆಯನ್ನು ಪೈಲಟ್ ಹೊರಡಿಸುವ ಮೂಲಕ ಪ್ರಯಾಣಿಕರನ್ನು ಆತ್ಮೀಯವಾಗಿ ಸ್ವಾಗತಿಸಿದ್ದಾರೆ. ಭಾರತ ಸರ್ಕಾರದ ಕೈಯಲ್ಲಿದ್ದ ಏರ್ ಇಂಡಿಯಾದ ನಿಯಂತ್ರಣವನ್ನು ನಿನ್ನೆ ಅಧಿಕೃತವಾಗಿ ಟಾಟಾ ಗ್ರೂಪ್ ಪಡೆದುಕೊಂಡಿತ್ತು. ಇಂದು ವಿಮಾನ ಹೊರಡುವ ಮುನ್ನ ಪ್ರಯಾಣಿಕರಲ್ಲಿ, ಆತ್ಮೀಯ ಅತಿಥಿಗಳೇ, ನಾನು ನಿಮ್ಮ ಕ್ಯಾಪ್ಟನ್…, ಎಲ್ಲರಿಗೂ ಇತಿಹಾಸ ಪ್ರಸಿದ್ಧ ವಿಮಾನಕ್ಕೆ ಆದರದ ಸ್ವಾಗತ. ಇದು ತುಂಬಾ ವಿಶೇಷವಾದ ಪ್ರಯಾಣ. ಇದೀಗ ಏರ್

67 ವರ್ಷಗಳ ಬಳಿಕ ಮತ್ತೆ ಟಾಟಾ ಕಂಪೆನಿ ಕೈ ಸೇರಿದ ಏರ್ ಇಂಡಿಯಾ! Read More »

ಯೂಟ್ಯೂಬ್ ನಲ್ಲಿ ಹೊಸ ಫೀಚರ್|ಶಾರ್ಟ್ಸ್ ವಿಡಿಯೋದಲ್ಲಿ ಟಿಕ್ ಟಾಕ್ ಗೆ ಅವಕಾಶ

ಸಮಗ್ರ ಡಿಜಿಟಲ್ ಡೆಸ್ಕ್: ಚೈನಾ ಮೂಲದ ಜನಪ್ರಿಯ ಅಪ್ಲಿಕೇಶನ್‌ ಟಿಕ್‌ ಟಾಕ್ ಭಾರತದಲ್ಲಿ ಬ್ಯಾನ್‌ ಆಗಿದ್ದೇ ತಡ ಟಿಕ್‌ ಟಾಕ್‌ಗೆ ಪ್ರತಿಯಾಗಿ ಹಲವು ಆ್ಯಪ್‌ಗಳನ್ನು ಪರಿಚಯಿಸುವ ಪ್ರಯತ್ನವನ್ನು ಅನೇಕ ಸಂಸ್ಥೆಗಳು ಇನ್ನೂ ಮಾಡುತ್ತಿವೆ. ಈಗಾಗಲೇ ಟಿಕ್‌ ಟಾಕ್‌ಗೆ ಪ್ರತಿರೂಪವಾಗಿ ಚಿಂಗಾರಿ, ಟ್ರೆಲ್, ಇನ್ಸ್ಟಾಗ್ರಾಂ ರೀಲ್ಸ್‌ ಆ್ಯಪ್‌ಗಳನ್ನ ಪರಿಚಯಿಸಲಾಗಿದೆ. ಯೂಟ್ಯೂಬ್‌ ಕೂಡ ಟಿಕ್‌ ಟಾಕ್‌ ಮಾದರಿಯ ಶಾರ್ಟ್‌ ವಿಡಿಯೋ ಸ್ಟ್ರೀಮಿಂಗ್‌ ಫೀಚರ್ಸ್‌ ಅನ್ನು 2020 ರಲ್ಲಿ ಪರಿಚಯಿಸಿತ್ತು. ಇದು ದೊಡ್ಡ ಮಟ್ಟದ ಯಶಸ್ಸು ಕೂಡ ಸಾಧಿಸಿದೆ. ಆದರೆ, ಕೆಲವು

ಯೂಟ್ಯೂಬ್ ನಲ್ಲಿ ಹೊಸ ಫೀಚರ್|ಶಾರ್ಟ್ಸ್ ವಿಡಿಯೋದಲ್ಲಿ ಟಿಕ್ ಟಾಕ್ ಗೆ ಅವಕಾಶ Read More »

ಮಲಿನಗೊಂಡಿದೆ ಮಂಗಳೂರು, ಬೆಂಗಳೂರು| ದ.ಬಾರತದ 10 ನಗರಗಳಲ್ಲಿ ಹೆಚ್ಚಾಗಿದೆ ಮಾಲಿನ್ಯ

ಬೆಂಗಳೂರು: ಕೊರೊನಾ ನಡುವೆಯೂ ದಕ್ಷಿಣ ಭಾರತದ ಬೆಂಗಳೂರು, ಮಂಗಳೂರು ಮತ್ತು ಮೈಸೂರು ಸಹಿತ 10 ನಗರಗಳಲ್ಲಿ ವಾಯುಮಾಲಿನ್ಯ ಹೆಚ್ಚಾಗಿರುವ ಕುರಿತ‌ ಆತಂಕಕಾರಿ ವರದಿಯೊಂದು ಹೊರಬಿದ್ದಿದೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ನಿಗದಿಪಡಿಸಿರುವ ಗುಣಮಟ್ಟಕ್ಕಿಂತಲೂ ಈ ನಗರಗಳಲ್ಲಿ ಹೆಚ್ಚಿನ ಮಾಲಿನ್ಯವಿದೆ ಎಂದು ಗ್ರೀನ್‌ಪೀಸ್‌ ಇಂಡಿಯಾ ಹೇಳಿದೆ. ಕೊಯಮತ್ತೂರು, ಬೆಂಗಳೂರು, ಮಂಗಳೂರು ಮತ್ತು ಅಮರಾವತಿಯ ಪಿಎಂ 2.5 ಮಟ್ಟ ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಯಲ್ಲಿ ತಿಳಿಸಿರುವ ಮಟ್ಟಕ್ಕಿಂತ 6ರಿಂದ 7 ಪಟ್ಟು ಹೆಚ್ಚಾಗಿದೆ. ಮೈಸೂರು, ಕೊಚ್ಚಿ, ಚೆನ್ನೈ ಮತ್ತು ಪುದುಚೇರಿಯ

ಮಲಿನಗೊಂಡಿದೆ ಮಂಗಳೂರು, ಬೆಂಗಳೂರು| ದ.ಬಾರತದ 10 ನಗರಗಳಲ್ಲಿ ಹೆಚ್ಚಾಗಿದೆ ಮಾಲಿನ್ಯ Read More »

ಆಂಧ್ರಪ್ರದೇಶದಲ್ಲಿ 13 ಹೊಸ ಜಿಲ್ಲೆ ರಚನೆ

ಅಮರಾವತಿ: ಆಂಧ್ರಪ್ರದೇಶದಲ್ಲಿ ಪ್ರಮುಖ ಆಡಳಿತ ಸುಧಾರಣೆ ತರಲು ಜಗನ್ ಮೋಹನ್ ರೆಡ್ಡಿ ಸರ್ಕಾರ ಇಂದು ಬೆಳಿಗ್ಗೆ 13 ಹೊಸ ಜಿಲ್ಲೆಗಳ ರಚನೆಗೆ ಅಧಿಸೂಚನೆಯನ್ನು ಹೊರಡಿಸಿದೆ. ಆಡಳಿತವನ್ನು ಸರಾಗಗೊಳಿಸಲು ಮತ್ತು ಅಧಿಕಾರಿಗಳ ಪ್ರವೇಶವನ್ನು ಸುಧಾರಿಸುವ ನಿಟ್ಟಿನಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗಿದೆ. ಪ್ರಸ್ತುತ ಇರುವ 13 ಜಿಲ್ಲೆಗಳ ಸಂಖ್ಯೆಯನ್ನು ದ್ವಿಗುಣಗೊಳಿಸಿದೆ. 25 ಲೋಕಸಭಾ ಕ್ಷೇತ್ರಗಳನ್ನು ಪ್ರತಿಯೊಂದನ್ನು ಜಿಲ್ಲೆಯಾಗಿ ಪುನಾರಚಿಸಲಾಗಿದೆ. ಅರಕು ಕ್ಷೇತ್ರವನ್ನು ನಾಲ್ಕು ಕ್ಷೇತ್ರಗಳಾಗಿ ರಚಿಸಲಾಗಿದೆ. ಆಂಧ್ರಪ್ರದೇಶ ಜಿಲ್ಲೆಗಳ ರಚನೆ ಕಾಯ್ದೆಯ ಸೆಕ್ಷನ್ 3(5) ಅಡಿ ಜಿಲ್ಲೆಗಳನ್ನು ರಚನೆ ಮಾಡಲಾಗಿದ್ದು,

ಆಂಧ್ರಪ್ರದೇಶದಲ್ಲಿ 13 ಹೊಸ ಜಿಲ್ಲೆ ರಚನೆ Read More »