ದೇಶ-ವಿದೇಶ

ಭಾರತದ ‌ನಾಲ್ವರು ಪತ್ರಕರ್ತರಿಗೆ ಪ್ರತಿಷ್ಠಿತ ”ಪುಲಿಟ್ಜರ್ ಪ್ರಶಸ್ತಿ”

ಸಮಗ್ರ ನ್ಯೂಸ್: ಅಮೆರಿಕದ ಮಾಧ್ಯಮ, ಸಾಹಿತ್ಯ ಮತ್ತು ಸಂಗೀತ ಕ್ಷೇತ್ರದಲ್ಲಿ ನೀಡಲಾಗುವ ಪುಲಿಟ್ಜರ್ ಪ್ರಶಸ್ತಿ ಪ್ರಕಟಗೊಂಡಿದೆ. 2022ನೇ ಸಾಲಿನ ಪುಲಿಟ್ಜರ್ ಪ್ರಶಸ್ತಿ ನಾಲ್ವರು ಭಾರತೀಯರಿಗೆ ಸಿಕ್ಕಿರುವುದು ವಿಶೇಷ. ಕಳೆದ ವರ್ಷ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಮತ್ತು ಸರಕಾರಿ ವಿಶೇಷ ಪಡೆಗಳ ಮಧ್ಯೆ ನಡೆದ ಸಂಘರ್ಷ ಘಟನೆ ವೇಳೆ ಬಲಿಯಾಗಿದ್ದ ದಾನಿಶ್ ಸಿದ್ದಿಕಿಗೆ ಮರಣೋತ್ತರ ಪ್ರಶಸ್ತಿ ಗೌರವ ಲಭಿಸಿದೆ. ಭಾರತದಲ್ಲಿ ಕೋವಿಡ್-19ನ ಚಿತ್ರಣವನ್ನು ಮನಮುಟ್ಟುವಂತೆ ಕ್ಯಾಮೆರಾದಲ್ಲಿ ಸೆರೆಹಿಡಿದದ್ದಾಗಿ ರಾಯ್ಟರ್ಸ್ ಸುದ್ದಿ ಸಂಸ್ಥೆಯ ವಿಡಿಯೋ ಜರ್ನಲಿಸ್ಟ್‌ಗಳಿಗೆ ಈ ಸಾಲಿನ ಪ್ರಶಸ್ತಿ ಸಿಕ್ಕಿದೆ. […]

ಭಾರತದ ‌ನಾಲ್ವರು ಪತ್ರಕರ್ತರಿಗೆ ಪ್ರತಿಷ್ಠಿತ ”ಪುಲಿಟ್ಜರ್ ಪ್ರಶಸ್ತಿ” Read More »

“ಲಂಕಾ ದಹನ”: ಆರ್ಥಿಕ ದಳ್ಳುರಿಗೆ ಹೊತ್ತಿ ಉರಿಯುತ್ತಿರುವ ಸಿಂಹಳ| ಜನಪ್ರತಿನಿಧಿಗಳೇ ಜನರ ಟಾರ್ಗೆಟ್

ಸಮಗ್ರ ನ್ಯೂಸ್: ಆರ್ಥಿಕ ದುಸ್ಥಿತಿಯಿಂದ ಕಂಗಾಲಾಗಿರುವ ಶ್ರೀಲಂಕಾದಲ್ಲಿ ಜನರ ಪ್ರತಿಭಟನೆ ಎಡಬಿಡದೆ ನಡೆಯುತ್ತಿದ್ದು ನಿನ್ನೆ ಹಲವೆಡೆ ಹಿಂಸಾಚಾರ ಘಟನೆಗಳು ನಡೆದಿವೆ. ಈ ದುರಂತದಲ್ಲಿ ಒಬ್ಬ ಸಂಸದ ಸೇರಿ ಮೂವರು ಸಾವನ್ನಪ್ಪಿದ್ದಾರೆ. 150ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವುದು ತಿಳಿದುಬಂದಿದೆ. ಕೆಲ ಗಂಟೆಗಳ ಮೊದಲು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಮಹಿಂದ ರಾಜಪಕ್ಸೆಗೆ ಸೇರಿದ ಮನೆಯೊಂದನ್ನೂ ದುಷ್ಕರ್ಮಿಗಳು ಸುಟ್ಟುಹಾಕಿರುವ ಘಟನೆ ನಡೆದಿದೆ. ರಾಜಪಕ್ಸೆ ಮಾತ್ರವಲ್ಲ ಇನ್ನೂ ಹಲವು ರಾಜಕಾರಣಿಗಳ ಮನೆಗಳನ್ನ ಪ್ರತಿಭಟನಾಕಾರರು ಬೆಂಕಿ ಇಟ್ಟ ಘಟನೆ ನಿನ್ನೆ ರಾತ್ರಿ ನಡೆದಿರುವುದು

“ಲಂಕಾ ದಹನ”: ಆರ್ಥಿಕ ದಳ್ಳುರಿಗೆ ಹೊತ್ತಿ ಉರಿಯುತ್ತಿರುವ ಸಿಂಹಳ| ಜನಪ್ರತಿನಿಧಿಗಳೇ ಜನರ ಟಾರ್ಗೆಟ್ Read More »

ಅಂತರ್ಯುದ್ಧಕ್ಕೆ ಹೊತ್ತಿ‌ ಉರಿಯುತ್ತಿರುವ ಶ್ರೀಲಂಕಾ| ಪ್ರತಿಭಟನಾಕಾರರ ಗುಂಡಿಗೆ ಸಂಸದ ಬಲಿ|

ಸಮಗ್ರ ನ್ಯೂಸ್: ನೆರೆಯ ಶ್ರೀಲಂಕಾದಲ್ಲಿ ನಡೆಯುತ್ತಿರುವ ಆರ್ಥಿಕ ಬಿಕ್ಕಟ್ಟಿನ ಪ್ರತಿಭಟನೆ ಹಿಂಸಾತ್ಮಕ ರೂಪಕ್ಕೆ ತಿರುಗಿದ್ದು ಆಡಳಿತ ಪಕ್ಷದ ಸಂಸದರೊಬ್ಬರು ಬಲಿಯಾಗಿದ್ದಾರೆ. ಕಳೆದ ಕೆಲ ವಾರಗಳಿಂದ ಶ್ರೀಲಂಕಾದಾದ್ಯಂತ ನಡೆಯುತ್ತಿರುವ ಈ ಪ್ರತಿಭಟನೆ ಹತ್ತಿಕ್ಕಲು ಅಲ್ಲಿನ ಪೊಲೀಸ್‌ ಹಾಗೂ ಭದ್ರತಾ ಪಡೆಗಳು ಹರಸಾಹಸ ಪಡುತ್ತಿವೆ. ಈ ನಡುವೆಯೇ ಉದ್ರಿಕ್ತರ ಗುಂಪೊಂದು ರೂಲಿಂಗ್‌ ಪಾರ್ಟಿ ಸಂಸದ ಅಮರ ಕೀರ್ತಿ ಅತುಕೋರಲ ಕಾರನ್ನ ಅಡ್ಡಗಟ್ಟಿದ್ದು ಗುಂಡು ಹಾರಿಸಿ ಹತ್ಯೆ ಮಾಡಿದೆ. ನಿತ್ತಂಬುವ ಅನ್ನೋ ಪಟ್ಟಣದಲ್ಲಿ ಈ ದುರಂತ ಸಂಭವಿಸಿದೆ. ಘರ್ಷಣೆ ವೇಳೆ ಇನ್ನಿಬ್ಬರೂ

ಅಂತರ್ಯುದ್ಧಕ್ಕೆ ಹೊತ್ತಿ‌ ಉರಿಯುತ್ತಿರುವ ಶ್ರೀಲಂಕಾ| ಪ್ರತಿಭಟನಾಕಾರರ ಗುಂಡಿಗೆ ಸಂಸದ ಬಲಿ| Read More »

ಶ್ರೀಲಂಕಾದಲ್ಲಿ ಆರ್ಥಿಕ ಅಧಃಪತನದ ಜೊತೆಗೆ ರಾಜಕೀಯ ಬಿಕ್ಕಟ್ಟು| ಪ್ರಧಾನಿ‌ ಸ್ಥಾನಕ್ಕೆ ರಾಜಪಕ್ಸೆ ರಾಜೀನಾಮೆ

ಸಮಗ್ರ ನ್ಯೂಸ್: ನೆರೆಯ ಶ್ರೀಲಂಕಾ ದೇಶದಲ್ಲಿ ತಲೆದೋರಿರುವ ಆರ್ಥಿಕ ಸಂಕಷ್ಟ ನೀಗಿಸುವಲ್ಲಿ ವಿಫಲವಾದ ಕಾರಣ ಪ್ರಧಾನಿ ಹುದ್ದೆಗೆ ಮಹಿಂದಾ ರಾಜಪಕ್ಸೆ ರಾಜೀನಾಮೆ ನೀಡಿದ್ದಾರೆ. ಇದರ ಬೆನ್ನಲ್ಲೇ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ.ಕಳೆದ ಕೆಲ ದಿನಗಳ ಹಿಂದೆ ನಡೆದ ವಿಶೇಷ ಸಂಪುಟ ಸಭೆಯಲ್ಲಿ ಅಧ್ಯಕ್ಷ ಗೋಟಬಯ ರಾಜಪಕ್ಸ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಲು ಮಹಿಂದಾ ರಾಜಪಕ್ಸೆ ಅವರ ಬಳಿ ಮನವಿ ಮಾಡಿದ್ದರು. ಇದಕ್ಕೆ ಮಹಿಂದಾ ರಾಜಪಕ್ಸೆ ಸಮ್ಮತಿ ಸೂಚಿಸಿದ್ದರು. ಇದರ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ಶ್ರೀಲಂಕಾದಲ್ಲಿ ಆರ್ಥಿಕ ಅಧಃಪತನದ ಜೊತೆಗೆ ರಾಜಕೀಯ ಬಿಕ್ಕಟ್ಟು| ಪ್ರಧಾನಿ‌ ಸ್ಥಾನಕ್ಕೆ ರಾಜಪಕ್ಸೆ ರಾಜೀನಾಮೆ Read More »

ಪತ್ನಿಯ ಶವದೊಂದಿಗೆ 21 ವರ್ಷ ಕಳೆದ ನಿವೃತ್ತ ಸೇನಾಧಿಕಾರಿ| ಎರಡು ದಶಕದ ಬಳಿಕ ಪಾರ್ಥಿವ ಶರೀರಕ್ಕೆ ನಡೆಯಿತು‌ ಅಂತ್ಯಕ್ರಿಯೆ!!

ಸಮಗ್ರ ನ್ಯೂಸ್: ನಿವೃತ್ತ ಮಿಲಿಟರಿ ಅಧಿಕಾರಿಯೊಬ್ಬರು ತಮ್ಮ ಮೃತ ಹೆಂಡತಿಯ ಶವಕ್ಕೆ 21 ವರ್ಷಗಳ ನಂತರ ಅಂತ್ಯಸಂಸ್ಕಾರ ಮಾಡಿದ ಘಟನೆ ಥಾಯ್ಲೆಂಡ್ ನಲ್ಲಿ ಬೆಳಕಿಗೆ ಬಂದಿದೆ. ನಿವೃತ್ತ ಸೇನಾಧಿಕಾರಿ ಚಾನ್ ವಚರಕರ್ಣ್ ಅವರು 2001ರಲ್ಲಿ ಮೃತಪಟ್ಟಿದ್ದ ತಮ್ಮ ಹೆಂಡತಿಯ ಶವವನ್ನು ಆಗಿನಿಂದಲೂ ಶವಪೆಟ್ಟಿಗೆಯೊಳಗಿಟ್ಟು ತಮ್ಮ ಮನೆಯಲ್ಲೇ ಇಟ್ಟುಕೊಂಡಿದ್ದರು. ಆದರೆ, ಇಷ್ಟು ವರ್ಷದವರೆಗೂ ಯಾಕೆ ಹೆಂಡತಿಯ ಶವಸಂಸ್ಕಾರ ಮಾಡಲಿಲ್ಲ ಎಂಬ ಕಾರಣ ಮಾತ್ರ ಗೊತ್ತಾಗಿಲ್ಲ. ”ಇತ್ತೀಚಿಗೆ ಇವರಿಗೆ ತಮ್ಮ ಹೆಂಡತಿಯ ಶವ ಸಂಸ್ಕಾರ ಮಾಡದೆಯೇ ತಾನು ಸತ್ತು ಹೋಗಿ

ಪತ್ನಿಯ ಶವದೊಂದಿಗೆ 21 ವರ್ಷ ಕಳೆದ ನಿವೃತ್ತ ಸೇನಾಧಿಕಾರಿ| ಎರಡು ದಶಕದ ಬಳಿಕ ಪಾರ್ಥಿವ ಶರೀರಕ್ಕೆ ನಡೆಯಿತು‌ ಅಂತ್ಯಕ್ರಿಯೆ!! Read More »

ಅಸಾನಿ ಚಂಡಮಾರುತ| ಕರಾವಳಿ ರಾಜ್ಯಗಳಲ್ಲಿ ತೀವ್ರ ಕಟ್ಟೆಚ್ಚರ| ಕರ್ನಾಟಕದಲ್ಲೂ ಅಲರ್ಟ್ ಘೋಷಣೆ

ಸಮಗ್ರ ನ್ಯೂಸ್: ಆಗ್ನೇಯ ಬಂಗಾಳಕೊಲ್ಲಿಯಲ್ಲಿನ ಅಸಾನಿ ಚಂಡಮಾರುತವು ಮುಂದಿನ 12 ಗಂಟೆಗಳಲ್ಲಿ ‘ತೀವ್ರ ಚಂಡಮಾರುತ’ವಾಗಿ ಬದಲಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅಸಾನಿ ಚಂಡಮಾರುತದ ತೀವ್ರತೆಯಿಂದ ಸೋಮವಾರ ಮತ್ತು ಮಂಗಳವಾರ ವಿವಿಧ ರಾಜ್ಯಗಳಲ್ಲಿ ಮಳೆಯಾಗಲಿದೆ. ಬುಧವಾರದ ನಂತರದಲ್ಲಿ ಪ್ರಭಾವ ಸ್ವಲ್ಪ ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಚಂಡಮಾರುತ ಹಿನ್ನಲೆ ಕರ್ನಾಟಕದ 27 ಜಿಲ್ಲೆಗಳಲ್ಲಿ ಅಲರ್ಟ್ ಘೋಷಿಸಿದ್ದು, ರಾಯಚೂರು, ಯಾದಗಿರಿ, ವಿಜಯಪುರ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ. ಮೈಸೂರು, ಹಾಸನ, ಚಾಮರಾಜನಗರ, ಮಂಡ್ಯ,

ಅಸಾನಿ ಚಂಡಮಾರುತ| ಕರಾವಳಿ ರಾಜ್ಯಗಳಲ್ಲಿ ತೀವ್ರ ಕಟ್ಟೆಚ್ಚರ| ಕರ್ನಾಟಕದಲ್ಲೂ ಅಲರ್ಟ್ ಘೋಷಣೆ Read More »

ಮತ್ತೊಂದು ಖಗೋಳ ವಿಸ್ಮಯ| ಈ ಪೌರ್ಣಮಿಯಂದು ಸಂಭವಿಸಲಿದೆ ರಕ್ತ ಚಂದ್ರಗ್ರಹಣ

ಸಮಗ್ರ ನ್ಯೂಸ್: 2022ನೇ ವರ್ಷದ ಮೊದಲ ಚಂದ್ರಗ್ರಹಣವು ಸಂಭವಿಸಲಿದ್ದು, ಈ ಗ್ರಹಣವು ಮೇ 15 ರ ಸಂಜೆಯಿಂದ ಮೇ 16 ರ ಮುಂಜಾನೆಯ ನಡುವೆ ಸಂಭವಿಸುತ್ತದೆ. ಮೇ 15-16 ರಂದು ಸಂಭವಿಸುವ ಸಂಪೂರ್ಣ ಚಂದ್ರಗ್ರಹಣವು ಚಂದ್ರನಿಗೆ ಕೆಂಪು ಬಣ್ಣವನ್ನು ನೀಡುತ್ತದೆ. ಇದನ್ನು “ಬ್ಲಡ್ ಮೂನ್” ಎಂದು ಕರೆಯಲಾಗುತ್ತದೆ .ಚಂದ್ರ ಗ್ರಹಣವು ಸೂರ್ಯ, ಭೂಮಿ ಮತ್ತು ಚಂದ್ರರು ಒಟ್ಟುಗೂಡಿದಾಗ ಗ್ರಹಣ ಸಂಭವಿಸುತ್ತದೆ. ಆದ್ದರಿಂದ ಚಂದ್ರನು ಭೂಮಿಯ ನೆರಳಿನಲ್ಲಿ ಹಾದು ಹೋಗುತ್ತಾನೆ. ಸಂಪೂರ್ಣ ಚಂದ್ರಗ್ರಹಣದಲ್ಲಿ, ಸಂಪೂರ್ಣ ಚಂದ್ರನು ಭೂಮಿಯ ನೆರಳಿನ

ಮತ್ತೊಂದು ಖಗೋಳ ವಿಸ್ಮಯ| ಈ ಪೌರ್ಣಮಿಯಂದು ಸಂಭವಿಸಲಿದೆ ರಕ್ತ ಚಂದ್ರಗ್ರಹಣ Read More »

ಮೇ.8ರಿಂದ ಚಂಡಮಾರುತ ಅಬ್ಬರ; ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ

ಸಮಗ್ರ ನ್ಯೂಸ್ : ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ಭಾನುವಾರ (ಮೇ 8) ಮಧ್ಯಾಹ್ನ ವೇಳೆಗೆ ಚಂಡಮಾರುತವಾಗಿ ಪರಿವರ್ತನೆಯಾಗಲಿದೆ. ಇದರ ಪರಿಣಾಮದಿಂದ ರಾಜ್ಯದ ಹಲವೆಡೆ ಸುರಿಯುತ್ತಿರುವ ಮಳೆ ಮುಂದಿನ ನಾಲ್ಕೈದು ದಿನ ಇನ್ನಷ್ಟು ಚುರುಕಾಗಲಿದೆ. ಆಂಧ್ರಪ್ರದೇಶ, ಪಶ್ಚಿಮ ಬಂಗಾಳ ಹಾಗೂ ಓರಿಸ್ಸಾದತ್ತ ಮಾರುತಗಳು ಚಲಿಸಲಿದ್ದು, ಆ ಭಾಗಗಳಲ್ಲಿ ಹೆಚ್ಚು ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ನೀಡಿದೆ. ಬೆಂಗಳೂರು, ಬೆಂ. ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಾಮರಾಜನಗರ, ಹಾಸನ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಮಂಡ್ಯ,

ಮೇ.8ರಿಂದ ಚಂಡಮಾರುತ ಅಬ್ಬರ; ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ Read More »

ಷೇರುಪೇಟೆಯಲ್ಲಿ ಕರಡಿ ಕುಣಿತ| 5.10 ಲಕ್ಷ ಕೋಟಿ ಕಳೆದುಕೊಂಡ ಹೂಡಿಕೆದಾರರು

ಸಮಗ್ರ ನ್ಯೂಸ್: ವಾರದ ಕೊನೆಯ ದಿನದ ವಹಿವಾಟಿನಲ್ಲಿ ಷೇರುಪೇಟೆ ಹೂಡಿಕೆದಾರರು ₹5.10 ಲಕ್ಷ ಕೋಟಿ ಕಳೆದುಕೊಂಡಿದ್ದಾರೆ. ಇಂದು ವಹಿವಾಟು ಆರಂಭದಿಂದಲೂ ಷೇರುಪೇಟೆ ಸೂಚ್ಯಂಕಗಳು ಕುಸಿತ ದಾಖಲಿಸಿದವು. ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್‌ 1000ಕ್ಕೂ ಹೆಚ್ಚು ಅಂಶ (ಶೇ 1.95) ಇಳಿಕೆಯಾಗಿ 54,614.61 ಅಂಶ ತಲುಪಿತ್ತು. ಅದರಿಂದಾಗಿ ಸೆನ್ಸೆಕ್ಸ್‌ ಸಾಲಿನ ಕಂಪನಿಗಳು ₹5,10,150.97 ಕೋಟಿ ನಷ್ಟಕ್ಕೆ ಒಳಗಾದವು. ಲೋಹ, ಐಟಿ, ಬ್ಯಾಂಕ್‌, ಆಟೊಮೊಬೈಲ್‌ ಹಾಗೂ ಹಣಕಾಸು ವಲಯದ ಕಂಪನಿಗಳ ಷೇರುಗಳು ಶೇಕಡ 2ರಿಂದ 3ರಷ್ಟು ಕುಸಿತ ಕಂಡಿವೆ. ಗುರುವಾರ

ಷೇರುಪೇಟೆಯಲ್ಲಿ ಕರಡಿ ಕುಣಿತ| 5.10 ಲಕ್ಷ ಕೋಟಿ ಕಳೆದುಕೊಂಡ ಹೂಡಿಕೆದಾರರು Read More »

ಮಸೀದಿಗಳಲ್ಲಿ ‌ಧ್ವನಿವರ್ಧಕ ಅಳವಡಿಕೆ ಕುರಿತಂತೆ ಅಲಹಾಬಾದ್ ಹೈಕೋರ್ಟ್ ಮಹತ್ವದ ಹೇಳಿಕೆ|

ಸಮಗ್ರ ನ್ಯೂಸ್: ‘ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನು ಅಳವಡಿಸುವುದು ಮೂಲಭೂತ ಹಕ್ಕಲ್ಲ’ ಎಂದು ಅಲಹಾಬಾದ್‌ ಹೈಕೋರ್ಟ್ ಹೇಳಿದೆ. ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನು ಅಳವಡಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ವಜಾಗೊಳಿಸಿದೆ. ಧ್ವನಿವರ್ಧಕಗಳನ್ನು ತೆರವು ಗೊಳಿಸುವಂತೆ ಬದೌನ್ ಜಿಲ್ಲೆಯ ಬಿಸೌಲಿ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಹೊರಡಿಸಿದ ಆದೇಶವನ್ನು ಪ್ರಶ್ನಿಸಿ ಇರ್ಫಾನ್ ಎಂಬ ವ್ಯಕ್ತಿ ಹೈಕೋರ್ಟ್‌ ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯಲ್ಲಿ ಎಸ್‌ಡಿಎಂ ಆದೇಶವು “ಕಾನೂನುಬಾಹಿರ” ಮತ್ತು ಇದು “ಮೂಲಭೂತ ಹಕ್ಕುಗಳು ಮತ್ತು ಕಾನೂನು ಹಕ್ಕುಗಳನ್ನು ಉಲ್ಲಂಘಿಸುತ್ತದೆ” ಎಂದು ಆರೋಪಿಸಿದ್ದರು. ಅರ್ಜಿಯನ್ನು ವಿಚಾರಣೆ ಮಾಡಿದ

ಮಸೀದಿಗಳಲ್ಲಿ ‌ಧ್ವನಿವರ್ಧಕ ಅಳವಡಿಕೆ ಕುರಿತಂತೆ ಅಲಹಾಬಾದ್ ಹೈಕೋರ್ಟ್ ಮಹತ್ವದ ಹೇಳಿಕೆ| Read More »