ದೇಶ-ವಿದೇಶ

“ಓ ಮೈ ಗಾಡ್” ನಿಮ್ಮನ್ನು ಒಳಬಿಟ್ಟಿಲ್ವೇ? ಡೆನ್ಮಾರ್ಕ್ ನಲ್ಲಿ ಪತ್ರಕರ್ತರನ್ನು ಕಂಡು ತಬ್ಬಿಬ್ಬಾದ ಮೋದಿ

ಸಮಗ್ರ ನ್ಯೂಸ್: ಐವತ್ತಾರಿಂಚಿನ ಎದೆ ಎಂಬ ಪ್ರಚಾರದೊಂದಿಗೆ ಅಧಿಕಾರಕ್ಕೆ ಬಂದ ಪ್ರಧಾನಿ ಮೋದಿಗೆ ಪತ್ರಿಕಾಗೋಷ್ಟಿ ಕರೆಯುವಷ್ಟು ಎದೆಗಾರಿಕೆ ಇಲ್ಲ ಎನ್ನುವುದು ಆದಿಯಿಂದಲೂ ಪ್ರಧಾನಿ ಮೋದಿ ವಿಮರ್ಶಕರ ಆರೋಪ. ಅದಕ್ಕೆ ತಕ್ಕಂತೆ, ಇದುವರೆಗೂ ಒಂದು ಸಮರ್ಥ ಪತ್ರಕರ್ತರನ್ನೋ ಅಥವಾ ಪತ್ರಿಕಾಗೋಷ್ಟಿಯನ್ನೋ ಪ್ರಧಾನಿ ಮೋದಿ ಎದುರಿಸಿಲ್ಲ. ಬಹುಷ, ಹಿರಿಯ ಪತ್ರಕರ್ತ ಕರನ್‌ ಥಾಪರ್‌ ಜೊತೆಗಿನ ಸಂದರ್ಶನದಲ್ಲಿ ಅರ್ಧಕ್ಕೆ ಎದ್ದು ಹೋದ ಮೋದಿಯನ್ನು ಆ ಸಂದರ್ಶನದಲ್ಲೇ ಥಾಪರ್‌ ನೀರು ಕುಡಿಯುವಂತೆ ಮಾಡಿದ್ದರು. ಇದೀಗ, ಡೆನ್ಮಾರ್ಕ್‌ನಲ್ಲಿ ಒಂದಿಷ್ಟು ಪತ್ರಕರ್ತರು ಮೋದಿಯನ್ನು ಸುತ್ತುವರೆದು ಅಚಾನಕ್‌ […]

“ಓ ಮೈ ಗಾಡ್” ನಿಮ್ಮನ್ನು ಒಳಬಿಟ್ಟಿಲ್ವೇ? ಡೆನ್ಮಾರ್ಕ್ ನಲ್ಲಿ ಪತ್ರಕರ್ತರನ್ನು ಕಂಡು ತಬ್ಬಿಬ್ಬಾದ ಮೋದಿ Read More »

ವಾಹನ, ಗೃಹ ಮತ್ತು ಇತರ ಸಾಲಗಳ ಬಡ್ಡಿ ಹೆಚ್ಚಳ….!

ಸಮಗ್ರ ನ್ಯೂಸ್: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಾಲ್ಕು ವರ್ಷದ ನಂತರ ಸಾಲದ ಮೇಲಿನ ಬಡ್ಡಿಯ ದರವನ್ನು ಏರಿಕೆ ಮಾಡುವ ದಿಢೀರ್ ನಿರ್ಧಾರವನ್ನು ಕೈಗೊಂಡಿದೆ. ರೆಪೋ ದರ ಶೇಕಡ 0.4 ರಷ್ಟು, ಸಿ.ಆರ್.ಆರ್. ದರ ಶೇಕಡ 0.5 ರಷ್ಟು ಹೆಚ್ಚಳವಾಗಿದ್ದು, ಇದರಿಂದ ಇಎಂಐ ತುಟ್ಟಿಯಾಗಲಿದೆ. ಆರ್ ಬಿಐ ಕೈಗೊಂಡ ಈ ಬಡ್ಡಿ ಏರಿಕೆಯ ಕ್ರಮದಿಂದ ವಾಹನ, ಗೃಹ ಮತ್ತು ಇತರೆ ಸಾಲಗಳ ಮೇಲಿನ ಬಡ್ಡಿ ದರಗಳು ಕೂಡ ಮತ್ತಷ್ಟು ಏರಿಕೆಯಾಗಲಿದೆ. ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ

ವಾಹನ, ಗೃಹ ಮತ್ತು ಇತರ ಸಾಲಗಳ ಬಡ್ಡಿ ಹೆಚ್ಚಳ….! Read More »

ಕಲ್ಲಿದ್ದಲು ಕೊರತೆ; ದೇಶದಲ್ಲಿ ಪ್ಯಾಸೆಂಜರ್ ರೈಲು ಸಂಚಾರಕ್ಕೆ ಬ್ರೇಕ್…..!

ಸಮಗ್ರ ನ್ಯೂಸ್: ದೇಶದಲ್ಲಿ ಬಹುತೇಕ ರೈಲುಗಳ ಸಂಚಾರವನ್ನು ಕಲ್ಲಿದ್ದಲು ಕೊರತೆಯಿಂದಾಗಿ ರದ್ದುಗೊಳಿಸಲು ಇದೀಗ ರೈಲ್ವೆ ಇಲಾಖೆ ನಿರ್ಧರಿಸಿದೆ. ಕಲ್ಲಿದ್ದಲು ಸಾಗಣೆ ವೇಗವನ್ನು ಹೆಚ್ಚಿಸಲು ರೈಲ್ವೆ ಮೇ 24 ರವರೆಗೆ 1100 ರೈಲುಗಳನ್ನು ರದ್ದು ಮಾಡಿದೆ. ಇದೀಗ ವಿದ್ಯುತ್ ಶಕ್ತಿಯ ಬೇಡಿಕೆಯು ತ್ವರಿತವಾಗಿ ಏರಿಕೆಯಾಗಿದೆ. ಜೊತೆಗೆ ಏಪ್ರಿಲ್‌ನಿಂದ ಕಲ್ಲಿದ್ದಲು ಕೊರತೆ ತೀವ್ರಗೊಂಡಿದೆ. ಕೆಲವೇ ದಿನಗಳಲ್ಲಿ ರಾಷ್ಟ್ರದೊಳಗೆ ಕೇವಲ 2-ಮೂರು ದಿನಗಳ ಕಲ್ಲಿದ್ದಲು ಮಾತ್ರ ಉಳಿದಿದೆ. ಹೀಗಾಗಿ ರೈಲ್ವೇಯು ಪ್ಯಾಸೆಂಜರ್ ರೈಲುಗಳನ್ನು ರದ್ದುಗೊಳಿಸಿದೆ ಮತ್ತು ಕಲ್ಲಿದ್ದಲು ರೈಲುಗಳ ಚಲನೆಯನ್ನು ಹೆಚ್ಚಿಸಿದೆ.

ಕಲ್ಲಿದ್ದಲು ಕೊರತೆ; ದೇಶದಲ್ಲಿ ಪ್ಯಾಸೆಂಜರ್ ರೈಲು ಸಂಚಾರಕ್ಕೆ ಬ್ರೇಕ್…..! Read More »

ಸೈನಿಕರ ಕೈ ಸೇರಲಿದೆ ಬುಲೆಟ್ ಪ್ರೂಫ್ ಜಾಕೆಟ್….!

ಸಮಗ್ರ ನ್ಯೂಸ್: ಭಾರತೀಯ ಸೈನಿಕರಿಗೆ ಗಡಿಯಲ್ಲಿ ಶತ್ರುಗಳ ಜೊತೆಗೆ ಹೋರಾಡಲು ಸೈನಿಕರಿಗೆ ತಿಂಗಳಲ್ಲಿ ಬುಲೆಟ್ ಫ್ರೂಫ್ ಜಾಕೆಟ್ ಗಳು ಸಿಗಲಿದೆ. ಸತತ 9 ವರ್ಷಗಳ ಬಳಿಕ ಇದೀಗ ಸೈನಿಕರ ಕೈ ಗೆ ತಲುಪುವ ದಿನ ಹತ್ತಿರ ಬರಲಿದೆ.ಬರೋಬ್ಬರಿ 639 ಕೋಟಿ ರೂ.ವೆಚ್ಚದಲ್ಲಿ ತಯಾರಾಗಿರುವ 1.86 ಲಕ್ಷ ಬುಲೆಟ್ ಪ್ರೂಫ್ ಜಾಕೆಟ್‍ಗಳು ಇನ್ನು ಕೆಲವೇ ದಿನದಲ್ಲಿ ಲಕ್ಷ ಸೈನಿಕರ ಕೈ ಸೇರಲಿದೆ. 2009 ಅಕ್ಟೋಬರ್ 16 ರಂದು ಬುಲೆಟ್ ಪ್ರೂಫ್ ಜಾಕೆಟ್ ಪ್ರಸ್ತಾವನೆಯನ್ನು ಅಂದಿನ ಸರ್ಕಾರ ಪುರಸ್ಕರಿಸಿತ್ತು. ಆದರೆ

ಸೈನಿಕರ ಕೈ ಸೇರಲಿದೆ ಬುಲೆಟ್ ಪ್ರೂಫ್ ಜಾಕೆಟ್….! Read More »

ಆರ್‌ಬಿಐನಿಂದ ರೆಪೋ ದರ ಹೆಚ್ಚಳ| ಸಾಲ ಮತ್ತಷ್ಟು ತುಟ್ಟಿ ಸಾಧ್ಯತೆ

ಸಮಗ್ರ ನ್ಯೂಸ್: ಹೆಚ್ಚುತ್ತಿರುವ ಹಣದುಬ್ಬರ ನಿಯಂತ್ರಿಸುವ ನಿಟ್ಟಿನಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರೆಪೋ ದರದಲ್ಲಿ ತಕ್ಷಣಕ್ಕೆ ಜಾರಿಗೆ ಬರುವಂತೆ 40 ಬೇಸಿಸ್ ಪಾಯಿಂಟ್ಸ್ ಗಳಷ್ಟು ಹೆಚ್ಚಳದೊಂದಿಗೆ ಶೇ.4.40ಕ್ಕೆ ಏರಿಕೆ ಮಾಡಿದೆ. 2020ರ ನಂತರ ಇದೇ ಮೊದಲ ಬಾರಿಗೆ ಆರ್‌ಬಿಐ ರೆಪೋ ದರ ಹೆಚ್ಚಳ ಮಾಡಿದ್ದು ಈ ಮೂಲಕ ಸಾಲದ ಮೇಲಿನ ಬಡ್ಡಿದರ ಹೆಚ್ಚಳವಾಗುವ ಸಾಧ್ಯತೆ ಬಹುತೇಕ‌ ಅಧಿಕವಾಗಿದೆ. ಹೆಚ್ಚುತ್ತಿರುವ ಹಣದುಬ್ಬರ ನಿಯಂತ್ರಿಸುವ ಉದ್ದೇಶದಿಂದ ರೆಪೊ ದರದಲ್ಲಿ 40 ಮೂಲಾಂಶ ಹೆಚ್ಚಳ ಮಾಡಲಾಗಿದ್ದು, ಶೇ 4.40ಕ್ಕೆ ನಿಗದಿಪಡಿಸಲಾಗಿದೆ.

ಆರ್‌ಬಿಐನಿಂದ ರೆಪೋ ದರ ಹೆಚ್ಚಳ| ಸಾಲ ಮತ್ತಷ್ಟು ತುಟ್ಟಿ ಸಾಧ್ಯತೆ Read More »

ಹನುಮಾನ್ ಚಾಲೀಸಾ ಪಠಣ ಪ್ರಕರಣ| ರಾಣಾ ದಂಪತಿಗೆ ಜಾಮೀನು ನೀಡಿದ ವಿಶೇಷ ನ್ಯಾಯಾಲಯ

ಸಮಗ್ರ ನ್ಯೂಸ್: ಠಾಕ್ರೆ ನಿವಾಸ ಮಾತೋಶ್ರಿ ಎದುರಲ್ಲಿ ಹನುಮಾನ್‌ ಚಾಲೀಸಾ ಪಠಿಸುತ್ತೇವೆಂದು ಹೇಳಿದ ಕಾರಣಕ್ಕೆ ದೇಶದ್ರೋಹ ಸೇರಿದಂತೆ ವಿವಿಧ ಅರೋಪದ ಅಡಿಯಲ್ಲಿ ಬಂಧಿತ ರಾಗಿದ್ದ ಪಕ್ಷೇತರ ಶಾಸಕ ರವಿ ರಾಣಾ ಮತ್ತು ಸಂಸದೆಯಾಗಿರುವ ಅವರ ಪತ್ನಿ ನವನೀತ್‌ ರಾಣಾ ಅವರಿಗೆ ಮುಂಬೈ ವಿಶೇಷ ನ್ಯಾಯಾಲಯವು ಜಾಮೀನು ನೀಡಿದೆ. ಏಪ್ರಿಲ್‌ 23 ರಂದು ರಾಣಾ ದಂಪತಿಗಳನ್ನು ಬಂಧಿಸಿ ದೇಶದ್ರೋಹ, ಶಾಂತಿ ಸುವ್ಯವಸ್ಥೆಗೆ ಭಂಗ ತರುವುದು ಮುಂತಾದ ಆರೋಪಗಳನ್ನು ಹೊರಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯವು ಅವರನ್ನು ಮೇ

ಹನುಮಾನ್ ಚಾಲೀಸಾ ಪಠಣ ಪ್ರಕರಣ| ರಾಣಾ ದಂಪತಿಗೆ ಜಾಮೀನು ನೀಡಿದ ವಿಶೇಷ ನ್ಯಾಯಾಲಯ Read More »

ಟ್ವಿಟರ್ ಇನ್ಮುಂದೆ ಉಚಿತವಲ್ಲ-ಎಲಾನ್ ಮಸ್ಕ್

ಸಮಗ್ರ ನ್ಯೂಸ್: ಪ್ರಪಂಚದ ಅತಿ ದೊಡ್ಡ ಮೈಕ್ರೋ ಬ್ಲಾಗಿಂಗ್ ಸೈಟ್ Twitter ಸದ್ಯ ಉಚಿತವಾಗಿದೆ. ಆದರೆ ಶೀಘ್ರದಲ್ಲೇ ಅದರಲ್ಲಿ ದೊಡ್ಡ ಬದಲಾವಣೆ ಬರಲಿದೆ. ಅಂದರೆ, ಕೆಲವರು ಟ್ವಿಟರ್ ಬಳಕೆಗೆ ಶುಲ್ಕ ಪಾವತಿಸಬೇಕಾಗಬಹುದು. ಟೆಸ್ಲಾ ಸಿಇಒ ಮತ್ತು ಟ್ವಿಟರ್‌ನ ಹೊಸ ಮಾಲೀಕ ಎಲೋನ್ ಮಸ್ಕ್ ಈ ಬಗ್ಗೆ ಸುಳಿವು ನೀಡಿದ್ದಾರೆ. Twitter ಯಾವಾಗಲೂ “ಅನೌಪಚಾರಿಕ ಬಳಕೆದಾರರಿಗೆ” ಅಂದರೆ ಕ್ಯಾಶುಯಲ್ ಬಳಕೆದಾರರಿಗೆ ಉಚಿತವಾಗಿರುತ್ತದೆ ಎಂದು ಸ್ಪಷ್ಟಪಡಿಸಿದರು, ಆದರೆ ವಾಣಿಜ್ಯ ಮತ್ತು ಸರ್ಕಾರಿ ಬಳಕೆದಾರರು ಶುಲ್ಕವನ್ನು ಪಾವತಿಸಬೇಕಾಗಬಹುದು. ಎಲೋನ್ ಮಸ್ಕ್ ಟ್ವೀಟ್

ಟ್ವಿಟರ್ ಇನ್ಮುಂದೆ ಉಚಿತವಲ್ಲ-ಎಲಾನ್ ಮಸ್ಕ್ Read More »

ಬಂಗಾಳಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ| ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಮಳೆಯಬ್ಬರ

ಸಮಗ್ರ ನ್ಯೂಸ್: ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ವರುಣನ ಅಬ್ಬರ ದಿನೇದಿನೇ ಹೆಚ್ಚಾಗುತ್ತಿದೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿಯ ಪರಿಣಾಮ ಕರ್ನಾಟಕದ ಹಲವೆಡೆ ಉತ್ತಮ ಮಳೆಯಾಗುತ್ತಿದೆ. ಇಂದು ಕೂಡ ರಾಜ್ಯಾದ್ಯಂತ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಕರ್ನಾಟಕದಾದ್ಯಂತ ಹಲವು ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರಿನಲ್ಲಿ ಇಂದು ಸಂಜೆಯ ಬಳಿಕ ಹಗುರ ಮಳೆಯಾಗಲಿದೆ. ಮೇ 5ರ ನಂತರ ಕರ್ನಾಟಕದ ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ಮಳೆ ಹೆಚ್ಚಾಗಲಿದೆ. ಬೆಂಗಳೂರು,

ಬಂಗಾಳಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ| ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಮಳೆಯಬ್ಬರ Read More »

ಲಸಿಕೆ ಪಡೆಯುವುದು ಕಡ್ದಾಯವಲ್ಲ – ಮಹತ್ವದ ತೀರ್ಪು ನೀಡಿದ ಸರ್ವೋಚ್ಚ ನ್ಯಾಯಾಲಯ

ಸಮಗ್ರ ನ್ಯೂಸ್: ಕೇಂದ್ರ ಸರಕಾರವಾಗಲೀ‌ ರಾಜ್ಯ ಸರಕಾರವಾಗಲೀ ಲಸಿಕೆ ಪಡೆಯುವಿಕೆಯನ್ನು ಕಡ್ಡಾಯ ಮಾಡುವಂತಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ತೀರ್ಪು ನೀಡಿದ್ದು, ಲಸಿಕೆ ಪಡೆಯದ ನಾಗರಿಕರ ಮೇಲೆ ಪ್ರತಿಬಂಧ ಹೇರುವಂತಿಲ್ಲ ಎಂದು ತಿಳಿಸಿದೆ. ಲಸಿಕೆಯ ಅಡ್ಡ ಪರಿಣಾಮಗಳ ಬಗೆಗಿನ ವರದಿಯನ್ನು ಬಹಿರಂಗ ಪಡಿಸಲೂ ಈ ಸಂದರ್ಭದಲ್ಲಿ ನ್ಯಾಯಾಲಯ ಸೂಚಿಸಿದೆ.

ಲಸಿಕೆ ಪಡೆಯುವುದು ಕಡ್ದಾಯವಲ್ಲ – ಮಹತ್ವದ ತೀರ್ಪು ನೀಡಿದ ಸರ್ವೋಚ್ಚ ನ್ಯಾಯಾಲಯ Read More »

ಅಂಚೆ ಇಲಾಖೆಯಲ್ಲಿ ಡಾಕ್ ಸೇವಕ್ ಹುದ್ದೆಗೆ ಅರ್ಜಿ ಆಹ್ವಾನ

ಸಮಗ್ರ ನ್ಯೂಸ್: ಎಸ್​ಎಸ್​ಎಲ್​ಸಿಯಾದವರಿಗೆ ಅಂಚೆ ಇಲಾಖೆಯಿಂದ 2410 ಡಾಕ್​ ಸೇವಕ್​ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳು: 2410ವಿದ್ಯಾರ್ಹತೆ: ಎಸ್​ಎಸ್​ಎಲ್​ಸಿಕೊನೆಯ ದಿನ: ಜೂನ್​ 5, 2022ಅರ್ಜಿ ಸಲ್ಲಿಸುವ ವಿಧಾನ: ಆನ್ಲೈನ್ ಮೂಲಕhttps://indiapostgdsonline.gov.in ಆಯ್ಕೆ ವಿಧಾನ: SSLC ಪರ್ಸಂಟೇಜ್ ಆಧಾರದ ಮೇಲೆಕೆಲಸದ ಅವಧಿ: 4/5 ಗಂಟೆಗಳು ಪ್ರತಿದಿನಕೆಲಸದ ಸ್ವರೂಪ: BPM (ಶಾಖಾ ಅಂಚೆ ಕಚೇರಿಗಳಲ್ಲಿ ಪೋಸ್ಟಮಾಸ್ಟರ್)ABPM (ಶಾಖಾ ಅಂಚೆ ಕಚೇರಿಗಳಲ್ಲಿ ಪೋಸ್ಟಮನ್, ಮೇಲ್ ಕ್ಯಾರಿಯರ್)Daksevak (ಉಪ/ಪ್ರಧಾನ ಅಂಚೆ ಕಚೇರಿಗಳಲ್ಲಿ ಪೋಸ್ಟಮನ್, ಮೇಲ್ ಕ್ಯಾರಿಯರ್, ಪ್ಯಾಕರ್ )ವೇತನ:BPM : 12000+DA (16

ಅಂಚೆ ಇಲಾಖೆಯಲ್ಲಿ ಡಾಕ್ ಸೇವಕ್ ಹುದ್ದೆಗೆ ಅರ್ಜಿ ಆಹ್ವಾನ Read More »